ನೇಪಾಳದಲ್ಲಿ ಬಸ್‌‍ ನದಿಗೆ ಉರುಳಿ ಕನಿಷ್ಠ 14 ಭಾರತೀಯರ ಸಾವು

ಕಠ್ಮಂಡು,ಆ.23- ಪ್ರಯಾಣಿಕರ ಬಸ್‌‍ ನದಿಗೆ ಉರುಳಿದ ಪರಿಣಾಮ ಕನಿಷ್ಠ 14 ಭಾರತೀಯರು ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ನೇಪಾಳದ ಚಿತ್ವಾನ್‌ ಜಿಲ್ಲೆಯ ನಾರಾಯಣಘಾಟ್‌‍-ಮುಗ್ಲಿಂಗ್‌ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ-ನೋಂದಾಯಿತ ಬಸ್‌‍ ಪೋಖರಾದಿಂದ ರಾಜಧಾನಿ ಕಠ್ಮಂಡುಗೆ ತೆರಳುವಾಗ ತನಾಹುನ್‌ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಬಿದ್ದಿದೆ ಎಂದು ಅಧಿಕಾರಿಳು ತಿಳಿಸಿದ್ದಾರೆ. 17 ಜನರು ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಉತ್ತರ ಪ್ರದೇಶ ನಂಬರ್‌ ಪ್ಲೇಟ್‌ ಹೊಂದಿರುವ ಬಸ್‌‍ ನದಿಗೆ ಧುಮುಕಿದೆ ಮತ್ತು ನದಿಯ ದಡದಲ್ಲಿ … Continue reading ನೇಪಾಳದಲ್ಲಿ ಬಸ್‌‍ ನದಿಗೆ ಉರುಳಿ ಕನಿಷ್ಠ 14 ಭಾರತೀಯರ ಸಾವು