ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಪಲ್ಟಿಯಾಗಿ 3 ಮಂದಿ ಸ್ಥಳದಲ್ಲೇ ಸಾವು

ಗೌರಿಬಿದನೂರು, ಜೂ.7- ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿ ಅದರಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ನಗರಗೆರೆ ಹೋಬಳಿಯ ವಾಟದ ಹೊಸಹಳ್ಳಿ ಗ್ರಾಮದ ಬಳಿಯ ತಿರುವಿನಲ್ಲಿ ತಡರಾತ್ರಿ ನಡೆದಿದೆ. ತಾಲೂಕಿನ ಬಿ.ತಾಂಡ ವಾಸಿ ಶ್ರೀಧರ್‌ ನಾಯಕ್‌ (28), ಚಿಕ್ಕಬಳ್ಳಾಪುರದ ಪೆರೆಸಂದ್ರದ ವೇಣುಗೋಪಾಲ್‌(38), ಬೆಲ್ಲಾಳಹಳ್ಳಿಯ ಮಂಜುನಾಥ್‌ (37) ಮೃತಪಟ್ಟವರು. ದಾವಣಗೆರೆ ನಿವಾಸಿ ಶಿವಕುಮಾರ್‌ (38) ಗಾಯಗೊಂಡಿದ್ದಾರೆ. ಇವರೆಲ್ಲರೂ ಬೆಸ್ಕಾಂ ನೌಕರರು ಎಂದು ಪೊಲೀಸರು ತಿಳಿಸಿದ್ದಾರೆ. ಕರ್ತವ್ಯ ನಿಮಿತ್ತ ವೇಣುಗೋಪಾಲ್‌ ಅವರ ಬ್ರಿಜಾ ಕಾರಿನಲ್ಲಿ ನಗರಗೆರೆಗೆ ತೆರಳಿದ್ದು, ಗೌರಿಬಿದನೂರಿಗೆ … Continue reading ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಪಲ್ಟಿಯಾಗಿ 3 ಮಂದಿ ಸ್ಥಳದಲ್ಲೇ ಸಾವು