ಮಗನ ನಿಗೂಢ ಸಾವು : ಪಂಜಾಬ್‌ನ ಮಾಜಿ ಡಿಜಿಪಿ ವಿರುದ್ಧ ಸಿಬಿಐ ಪ್ರಕರಣ ದಾಖಲು

0
195

ನವದೆಹಲಿ, ನ.7-ಹರಿಯಾಣದ ಪಂಚಕುಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಅವರ ಅಕ್ವಿಲ್‌ ಅಖ್ತರ್‌ (35) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಮಾಜಿ ಡಿಜಿಪಿ ಮೊಹಮದ್‌ ಮುಸ್ತಫಾ, ಅವರ ಪತ್ನಿ ರಜಿಯಾ ಸುಲ್ತಾನಾ ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಎಫ್‌ಐಆರ್‌ ಪ್ರಕಾರ ಮೃತರು ಮತ್ತು ಅವರ ಕುಟುಂಬದ ನಡುವೆ ಅಸಮಾಧಾದಿಮದ ಈ ಕೊಲೆ ನಡೆದಿರು ಶಂಕೆ ವ್ಯಕ್ತವಾಗಿದೆ.

ಕೇಂದ್ರ ತನಿಖಾ ದಳ (ಸಿಬಿಐ) ನವೆಂಬರ್‌ 6 ರಂದು ಅಖಿಲ್‌ ಅಖ್ತರ್‌ ಕೊಲೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿದೆ. ಪಂಚಕುಲದ ಮಾನ್ಸಾ ದೇವಿ ಮಂದಿರ ಬಳಿಯ ಸೆಕ್ಟರ್‌ 4 ರಲ್ಲಿ ಪ್ರಸ್ತುತ ವಾಸಿಸುತ್ತಿರುವ ಪಂಜಾಬ್‌ನ ಮಾಜಿ ಡಿಜಿಪಿ ಮೊಹಮದ್‌ ಮುಸ್ತಫಾ ಮತ್ತು ಪಂಜಾಬ್‌ನ ಮಾಜಿ ಪಿಡಬ್ಲ್ಯೂಡಿ ಸಚಿವೆ ರಜಿಯಾ ಸುಲ್ತಾನಾ ಅವರ ಪುತ್ರ ಅಕ್ವಿಲ್‌ ಅಖ್ತರ್‌ ಅಕ್ಟೋಬರ್‌ 16 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಡರಾತ್ರಿ ತಿಳಿಸಿದ್ದಾರೆ.

ಅಖ್ತರ್‌ ಅವರ ಪತ್ನಿ, ಸಹೋದರಿ ಸುಲ್ತಾನ ಆರೋಪಿಗಳೆಂದು ತಿಳಿಸಲಾಗಿದೆ. ಅಖ್ತರ್‌ ಆಗಸ್ಟ್‌ 27 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್‌ ಮಾಡಿ, ತನ್ನ ಪತ್ನಿ ಮತ್ತು ತಂದೆಯ ನಡುವೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದರು ಮತ್ತು ಅವರ ತಾಯಿ ಮತ್ತು ಸಹೋದರಿ ಸೇರಿದಂತೆ ಅವರ ಇಡೀ ಕುಟುಂಬವು ಅವರನ್ನು ಕೊಲ್ಲಲು ಅಥವಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಿದೆ ಎಂದು ಉಲ್ಲೇಖಿಸಿದ್ದರು ಎಂದು ಸಂಸ್ಥೆ ತಿಳಿಸಿದೆ. ಪಂಚಕುಲ ಪೊಲೀಸರು ಆರಂಭದಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹರಿಯಾಣ ಸರ್ಕಾರ ಸಿಬಿಐಗೆ ಹಸ್ತಾಂತರಿಸಿತ್ತು.