ಕೃಷ್ಣಗಿರಿಯಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವ ಮಾಹಿತಿಯಿದ್ದರೂ ಕೇಂದ್ರ ಸುಮ್ಮನಿರೋದೇಕೆ..? : ಡಿ.ಕೆ.ಸುರೇಶ್ ಪ್ರಶ್ನೆ

ಬೆಂಗಳೂರು,ಮಾ.20- ಭಯೋತ್ಪಾದಕರಿಗೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ತರಬೇತಿ ನೀಡಲಾಗುತ್ತಿದೆ, ಅವರು ಬೆಂಗಳೂರು ಸೇರಿದಂತೆ ವಿವಿಧ ಕಡೆ ಬಾಂಬ್ ಸ್ಪೋಟಿಸುತ್ತಿದ್ದಾರೆ ಎಂಬ ಮಾಹಿತಿ ಗೊತ್ತಿದ್ದರೂ ಕ್ರಮ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ಮುಚ್ಚಿಟ್ಟಿರುವುದು ಯಾವ ಕಾರಣಕ್ಕೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದಲೂ ಕೇಂದ್ರದ ತನಿಖಾ ಸಂಸ್ಥೆಗಳು ಬಿಜೆಪಿಯವರ ಅಧೀನದಲ್ಲಿವೆ. ಬೇಹುಗಾರಿಕೆಯನ್ನು ಕಾಂಗ್ರೆಸ್‍ನವರ ವಿರುದ್ಧ ಛೂ ಬಿಡುವ ಬದಲಾಗಿ ಭಯೋತ್ಪಾದಕರ ವಿರುದ್ಧ ಬಳಸಿದ್ದರೆ ಬಾಂಬ್ ಸ್ಪೋಟದಂತಹ ಅನಾಹುತಗಳು ನಡೆಯುತ್ತಿರಲಿಲ್ಲ ಎಂದರು. ಕೇಂದ್ರ ಸಚಿವೆ … Continue reading ಕೃಷ್ಣಗಿರಿಯಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವ ಮಾಹಿತಿಯಿದ್ದರೂ ಕೇಂದ್ರ ಸುಮ್ಮನಿರೋದೇಕೆ..? : ಡಿ.ಕೆ.ಸುರೇಶ್ ಪ್ರಶ್ನೆ