ನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು, ಬೆಂಗಳೂರು ಗ್ರಾಮಾಂತರದಲ್ಲಿ ಜಾತಿಯ ಗೆಲುವಾಗಿದೆ : ಡಿ.ಕೆ.ಸುರೇಶ್‌

ರಾಮನಗರ,ಜೂ.10- ನನಗೆ ಯಾರೂ ಹಿತಶತ್ರುಗಳಿಲ್ಲ. ನನಗೆ ನಾನೇ ಶತ್ರು. ಬೆಂಗಳೂರು ಗ್ರಾಮಾಂತರದಲ್ಲಿ ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು ಹಾಗೂ ಅಸೂಯೆಗೆ ಗೆಲುವಾಗಿದೆ ಎಂದು ಹಾಲಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ನನ್ನನ್ನು ಹಾಗೂ ನನ್ನ ಕೆಲಸವನ್ನು ತಿರಸ್ಕರಿಸಿ ವಿರಾಮ ನೀಡಿದ್ದಾರೆ. ನಾನು ಇದರ ನಿರೀಕ್ಷೆಯಲ್ಲಿದ್ದೆ. ಎಲ್ಲದಕ್ಕೂ ಪೂರ್ಣವಿರಾಮ ಬೇಕು. ಜನರ ತೀರ್ಪಿನಂತೆ ವಿರಾಮ ತೆಗೆದುಕೊಳ್ಳುತ್ತೇನೆ ಎಂದರು. ಬೆಂಗಳೂರು ಗ್ರಾಮಾಂತರದ ಗೆಲುವು ಬಿಜೆಪಿ ಅಥವಾ ಜೆಡಿಎಸ್‌‍ನ ಗೆಲುವಲ್ಲ. ಜಾತಿಯ ಗೆಲುವು. ಗ್ಯಾರಂಟಿಗಳ ಮಧ್ಯೆ ಜಾತಿ, … Continue reading ನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು, ಬೆಂಗಳೂರು ಗ್ರಾಮಾಂತರದಲ್ಲಿ ಜಾತಿಯ ಗೆಲುವಾಗಿದೆ : ಡಿ.ಕೆ.ಸುರೇಶ್‌