Home ಇದೀಗ ಬಂದ ಸುದ್ದಿ ಡಾ.ರಾಜ್ ನೆನಪಿಸಿದ ಕಾವೇರಿ ಹೋರಾಟ

ಡಾ.ರಾಜ್ ನೆನಪಿಸಿದ ಕಾವೇರಿ ಹೋರಾಟ

0
ಡಾ.ರಾಜ್ ನೆನಪಿಸಿದ ಕಾವೇರಿ ಹೋರಾಟ
Dr. Rajkumar in Cauvery Protest

ಬೆಂಗಳೂರು,ಸೆ.26- ನೆಲ,ಜಲ ಭಾಷೆಗೆ ದಕ್ಕೆ ಬಂದಾಗಲೆಲ್ಲ ಡಾ. ರಾಜ್ ಕುಮಾರ್ ಸಿಡಿದೇಳುತ್ತಿದ್ದರು. ಅವರು ಒಂದು ಕರೆ ನೀಡಿದ್ದರೆ ಇಡೀ ಕನ್ನಡಿಗರು ಜೊತೆಗೂಡುತ್ತಿದ್ದರು. ಈ ಹಿಂದೆ ಕಾವೇರಿ ಘಟನೆಗಳು ನಡೆದಾಗಲೆಲ್ಲಾ ಡಾ.ರಾಜ್ ಅವರ ಹೋರಾಟ ಈಗಲೂ ನೆನಪಿಗೆ ಬರುತ್ತದೆ.

ಅದು ಗೋಕಾಕ್ ಚಳುವಳಿ ಆಗಲಿ ಕನ್ನಡ ಚಿತ್ರರಂಗರದ ಸಮಸ್ಯೆಯಾಗಲಿ ಯಾವಾಗಲೂ ಅವರು ನೇತೃತ್ವ ವಹಿಸುತ್ತಿದ್ದರು. ಭಾಷಾ ಪ್ರೇಮ ಮತ್ತು ಕನ್ನಡ ನಾಡಿನ ಮೇಲೆ ಅವರಿಗಿದ್ದ ಅಪಾರ ಪ್ರೇಮವನ್ನು ಕೊನೆಯ ಉಸಿರಿರುವರೆಗೂ ಉಳಿಸಿಕೊಂಡಿದ್ದರು.

ಸೆ.29 ರಂದು ಕರ್ನಾಟಕ ಬಂದ್ ಫಿಕ್ಸ್

ಇಂದು ಬೆಂಗಳೂರು ಬಂದ್ ಸಂದರ್ಭದಲ್ಲಿ ಕೆಲವೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದರೆ, ಪ್ರತಿಭಟನೆಗಳು ಸೀಮಿತವಾಗಿದೆ. ನಮ್ಮ ಜೀವಜವ ಕಾವೇರಿಗಾಗಿ ಬೆಂಗಳೂರಿನ ಜನರು ಸ್ಪಂದಿಸಿದ್ದಾರೆ. ಆದರೆ ಇದರ ಬಿಸಿ ದೆಹಲಿಗೆ ತಟ್ಟುವಂತಹ ಗಟ್ಟಿ ದ್ವನಿ ಯಾರ ಬಳಿ ಇದೆ ಎಂದು ಈಗ ದೊಡ್ಡ ಪ್ರಶ್ನೆಯಾಗಿದೆ.

ಅಣ್ಣ ಅವರು ಯಾವಾಗಲೂ ಇಂತಹ ಸಂದರ್ಭದಲ್ಲಿ ನೆನಪಿಗೆ ಬರುತ್ತಾರೆ. ಅವರು ಒಂದು ಕರೆ ನೀಡಿದರೆ ಕೆಂಪೇಗೌಡ ರಸ್ತೆ ತುಂಬಿ ತುಳುಕುತ್ತಿತ್ತು. ಆಳುವವರಿಗೆ ಬಿಸಿ ಮುಟ್ಟುತ್ತಿತ್ತು,