ಈಶ್ವರಪ್ಪ ಈಗ ಒಂಟಿ, ಕಟ್ಟರ್ ಹಿಂದುತ್ವವಾದಿಯ ರೋಚಕ ಪೊಲಿಟಿಕಲ್ ಜರ್ನಿ

ಬೆಂಗಳೂರು,ಏ.5- ಕೆ.ಎಸ್.ಈಶ್ವರಪ್ಪ ! ಕಟ್ಟರ್ ಹಿಂದುತ್ವವಾದಿ. ಸಂಘ ಪರಿವಾರದಿಂದ ಎದ್ದು ಬಂದ ನಾಯಕ. ಬಿಜೆಪಿಯ ನಿಷ್ಠಾವಂತ. ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡು ಬೆಳೆದುಬಂದವರು.ಇಂತಹ ಈಶ್ವರಪ್ಪ ಈಗ ಸ್ವಪಕ್ಷದವರ ವಿರುದ್ಧವೇ ಸಿಡಿದೆದ್ದು ತಮಗೆ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಎಲ್ಲವನ್ನೂ ನೀಡಿದ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ವಿರುದ್ಧವೇ ಶಿವಮೊಗ್ಗ ಕಣದಲ್ಲಿ ಅಖಾಡಕ್ಕಿಳಿದಿದ್ದಾರೆ. ಶಿವಮೊಗ್ಗದಲ್ಲಿ ಗೆಲ್ಲಲು ಯಡಿಯೂರಪ್ಪನವರ ಶಕ್ತಿ ಬೆಳೆಸಿಕೊಂಡಿದ್ದ ಈಶ್ವರಪ್ಪ, ಬಹುತೇಕ ಅನಂತಕುಮಾರ್‍ಗೆ ನಿಷ್ಠೆಯಾಗಿದ್ದರು. ಅವರ ನಿಧನದ ನಂತರ ಬಿ.ಎಲ್.ಸಂತೋಷ್ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. … Continue reading ಈಶ್ವರಪ್ಪ ಈಗ ಒಂಟಿ, ಕಟ್ಟರ್ ಹಿಂದುತ್ವವಾದಿಯ ರೋಚಕ ಪೊಲಿಟಿಕಲ್ ಜರ್ನಿ