ಸಿಎಂ ಸಿದ್ದರಾಮಯ್ಯನವರಿಗೆ ‘ಬಂಡೆ’ಯಿಂದಲೇ ಡೇಂಜರ್ : ಹೆಚ್ಡಿಕೆ ಮಾರ್ಮಿಕ ಹೇಳಿಕೆ

ಬೆಂಗಳೂರು, ಆ.18- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಹೇಳುವುದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತಾರೆಂಬ ನಂಬಿಕೆಯೂ ಇಲ್ಲ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಡೇಂಜರ್. ಇತ್ತೀಚೆಗೆ ಮಳೆ ಬಂದು ಭೂ ಕುಸಿತವಾದಾಗಲ್ಲೂ ಬಂಡೆಗಳಿಂದಲ್ಲೇ ಡೇಂಜರ್ ಆಗಿದ್ದು ಎಂದು ಮಾರ್ಮಿಕವಾಗಿ ನುಡಿದರು. ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ … Continue reading ಸಿಎಂ ಸಿದ್ದರಾಮಯ್ಯನವರಿಗೆ ‘ಬಂಡೆ’ಯಿಂದಲೇ ಡೇಂಜರ್ : ಹೆಚ್ಡಿಕೆ ಮಾರ್ಮಿಕ ಹೇಳಿಕೆ