ಕೊಚ್ಚಿ ಹೋದ ಟಿಬಿ ಡ್ಯಾಮ್ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕ ಗೇಟ್‌ ಅಳವಡಿಕೆ ಕಾರ್ಯ ಆರಂಭ

ಬೆಂಗಳೂರು,ಆ.13- ತುಂಗಭದ್ರಾ ಅಣೆಕಟ್ಟಿನಲ್ಲಿ ಕೊಚ್ಚಿ ಹೋಗಿರುವ 19ನೇ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕವಾದ ಗೇಟ್‌ ಅಳವಡಿಸಿ ನೀರನ್ನು ಸಂರಕ್ಷಿಸಲು ಪ್ರಯತ್ನಿಸಲಾಗುತ್ತಿದ್ದು, ಇಂದು ಸಂಜೆ ಕೆಲಸ ಆರಂಭಗೊಳ್ಳಲಿದೆ.ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಲಾಶಯದಲ್ಲಿ 105 ಟಿಎಂಸಿಗೂ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಒತ್ತಡ ಹಾಗೂ ನೀರಿನ ರಭಸಕ್ಕೆ 19ನೇ ಕ್ರಸ್ಟ್‌ಗೇಟ್‌ನ ಸಂಪರ್ಕ ಸರಪಳಿ ತುಂಡಾಗಿ ಕ್ರಸ್ಟ್‌ಗೇಟ್‌ ಕೊಚ್ಚಿಹೋಗಿದೆ. ಹೀಗಾಗಿ ನಿರಂತರವಾಗಿ 35 ಸಾವಿರ ಕ್ಯೂಸೆಕ್‌ ನೀರು ಈ ಗೇಟ್‌ನಿಂದ ಹರಿದುಹೋಗುತ್ತಿದೆ. ಇತರ ಕ್ರಸ್ಟ್‌ಗೇಟ್‌ಗಳ ಮೇಲೆ ಒತ್ತಡ ಹೆಚ್ಚಾಗಿ ಅಣೆಕಟ್ಟೆಗೆ ಅಪಾಯವಾಗುವ ಸಾಧ್ಯತೆ ಇದ್ದಿದ್ದರಿಂದಾಗಿ … Continue reading ಕೊಚ್ಚಿ ಹೋದ ಟಿಬಿ ಡ್ಯಾಮ್ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕ ಗೇಟ್‌ ಅಳವಡಿಕೆ ಕಾರ್ಯ ಆರಂಭ