ಚಂದನವನದಲ್ಲೂ ತಾರತಮ್ಯ, ಕಿರುಕುಳದ ‘ಫೈರ್‌’ : ತನಿಖೆ ನಡೆಸುವಂತೆ ಸಿಎಂಗೆ ಪತ್ರ

ಬೆಂಗಳೂರು,ಸೆ.5- ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗಾಗುತ್ತಿರುವ ತಾರತಮ್ಯ ಹಾಗೂ ಕಿರುಕುಳದ ತನಿಖೆಗಾಗಿ ನ್ಯಾಯಾಂಗ ಆಯೋಗ ರಚಿಸಬೇಕು ಎಂದು ಪತ್ರ ಬರೆದಿದ್ದ ಚಿತ್ರರಂಗದಲ್ಲಿನ ಹಕ್ಕುಗಳು ಹಾಗೂ ಸಮಾನತೆಗಾಗಿ ಶ್ರಮಿಸುತ್ತಿರುವ ಫೈರ್‌ ಸಂಘಟನೆ ಮುಖಂಡರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ ಒತ್ತಾಸೆಯನ್ನು ಮಂಡಿಸಿದ್ದಾರೆ. ಫೈರ್‌ ಸಂಘಟನೆಯ ಕಾರ್ಯದರ್ಶಿರಾದ ನಟ ಚೇತನ್‌, ನಟಿ ಶೃತಿ ಹರಿಹರನ್‌ ಸೇರಿದಂತೆ ನಾಲ್ವರ ನಿಯೋಗ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿನ್ನೆ ಬರೆಯಲಾಗಿದ್ದ ಪತ್ರದ ಗಮನ ಸೆಳೆದಿದ್ದಾರೆ. … Continue reading ಚಂದನವನದಲ್ಲೂ ತಾರತಮ್ಯ, ಕಿರುಕುಳದ ‘ಫೈರ್‌’ : ತನಿಖೆ ನಡೆಸುವಂತೆ ಸಿಎಂಗೆ ಪತ್ರ