Friday, May 3, 2024
Homeರಾಜ್ಯಸಚಿವರು ಗೈರು, ಸಭಾಪತಿ ಗರಂ

ಸಚಿವರು ಗೈರು, ಸಭಾಪತಿ ಗರಂ

ಬೆಳಗಾವಿ, ಡಿ.5- ಬೆಳಗಾವಿಯ ಚಳಿಗಾಲದ ಅಧಿವೇಶನ ಎರಡನೇ ದಿನವಾದ ಇಂದೂ ಸಹ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವರು ಗೈರಾಗಿದ್ದಕ್ಕೆ ಮುಖ್ಯ ಸಚೇತಕ ಸಲೀಂ ಅಹ್ಮದ್ ಮೇಲೆ ಗರಂ ಆದರು.

ಪ್ರಶ್ನೋತ್ತರ ಕಲಾಪದ ವೇಳೆ ಇಲಾಖೆಗೆ ಸಂಬಂಧಿಸಿದ ಸಚಿವರು ಕಾಣದ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಭಾಪತಿ ಹೊರಟ್ಟಿ, ಯಾರು, ಯಾವ ಇಲಾಖೆ ಸಚಿವರು ಗೈರಾಗುತ್ತಾರೆ ಎಂದು ಸರ್ಕಾರದ ಪರವಾಗಿ ಮುಖ್ಯ ಸಚೇತಕರು ಮಾಹಿತಿ ನೀಡಬೇಕು ಅಲ್ಲವೇ ಎಂದು ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದರು.

ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಸರ್ಕಾರ ಕಾಲಾಹರಣ : ಬಿಜೆಪಿ ಆಕ್ರೋಶ

ಈ ವೇಳೆ ಮುಖ್ಯ ಸಚೇತಕ ಸಲೀಂ ಅಹ್ಮದ್ ಉತ್ತರ ನೀಡದೇ ಮೌನಕ್ಕೆ ಜಾರಿದರು. ಆಗ ವಿಪಕ್ಷ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಮುಖ್ಯ ಸಚೇತಕರಿಗೆ ಅವರ ಕೆಲಸವೇ ಗೊತ್ತಿಲ್ಲ ಎಂದು ಕಾಲೆಳೆದರು. ಬಳಿಕ ಸಭಾಪತಿ, ಆಯಾ ಸಚಿವರು ಅವರ ಇಲಾಖೆ ಕುರಿತು ಉತ್ತರಿಸಿದರೆ, ಒಳಿತು. ಒಂದು ವೇಳೆ ಗೈರಾದರೆ ಮಾಹಿತಿ ಮುಟ್ಟಿಸಿ. ನೀವೇ ಇಲಾಖೆ ಬದಲಾಯಿಸಿ ಉತ್ತರಿಸುವುದು ಸೂಕ್ತವೇ ಎಂದು ಪ್ರಶ್ನೆ ಮಾಡಿದರು.

RELATED ARTICLES

Latest News