ಪರಪ್ಪನ ಅಗ್ರಹಾರ ಜೈಲಿಂದ ವಿಲ್ಸನ್ ಗಾರ್ಡನ್ ನಾಗನ ಸ್ಥಳಾಂತರಕ್ಕೆ ಪತ್ರ : ದಯಾನಂದ

ಬೆಂಗಳೂರು,ಆ.26- ರೌಡಿ ವಿಲ್ಸನ್ಗಾರ್ಡನ್ ನಾಗನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಈಗಾಗಲೇ ಕಾರಾಗೃಹಗಳ ಡಿಜಿಪಿಯವರಿಗೆ ಪತ್ರ ಬರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ವಿಲ್ಸನ್ಗಾರ್ಡನ್ ನಾಗ ಹಾಗೂ ಆತನ ಸಹಚರರ ಚಲನವಲನಗಳ ಬಗ್ಗೆ ನಾವು ನಿಗಾ ವಹಿಸುತ್ತಿದ್ದೇವೆ. ದರ್ಶನ್ ಜೊತೆ ವಿಲ್ಸನ್ಗಾರ್ಡನ್ ನಾಗನ ಸ್ನೇಹ ಹೇಗೆ ಬೆಳೆಯಿತು? ಈ ರೀತಿ ರಾಜಾತಿಥ್ಯ ನೀಡಿದವರ್ಯಾರು? ಎಂಬುದನ್ನು ಕಾರಾಗೃಹ ಗಳ ಇಲಾಖೆ ಈಗಾಗಲೇ ತನಿಖೆ ಆರಂಭಿಸಿದೆ ಎಂದರು. … Continue reading ಪರಪ್ಪನ ಅಗ್ರಹಾರ ಜೈಲಿಂದ ವಿಲ್ಸನ್ ಗಾರ್ಡನ್ ನಾಗನ ಸ್ಥಳಾಂತರಕ್ಕೆ ಪತ್ರ : ದಯಾನಂದ