ಮಲಗಿದಲ್ಲೇ ಮರಣವನ್ನಪ್ಪಿದ ಒಂದೇ ಕುಟುಂಬದ ನಾಲ್ವರು, ಸಿಲಿಂಡರ್‌ ಸೋರಿಕೆ ಶಂಕೆ

ಮೈಸೂರು, ಮೇ 22- ಮನೆಯೊಂದರಲ್ಲಿ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಲನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯರಗನಹಳ್ಳಿಯ ಕಾವೇರಿ ಆಸ್ಪತ್ರೆ ಸಮೀಪದ ನಿವಾಸಿ, ಬಟ್ಟೆ ಐರನ್‌ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿ(45) ಇವರ ಪತ್ನಿ ಮಂಗಳ(39) ಮತ್ತು ಮಕ್ಕಳಾದ ಅರ್ಚನಾ(19), ಸ್ವಾತಿ(17) ಮೃತಪಟ್ಟವರು. ಈ ಕುಟುಂಬದವರು ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಕುಟುಂಬದವರೆಲ್ಲರೂ ಊಟ ಮಾಡಿ ನಿದ್ರೆಗೆ ಜಾರಿದ್ದಾರೆ. ಆ ಸಂದರ್ಭದಲ್ಲಿ ಸಿಲಿಂಡರ್‌ನಿಂದ … Continue reading ಮಲಗಿದಲ್ಲೇ ಮರಣವನ್ನಪ್ಪಿದ ಒಂದೇ ಕುಟುಂಬದ ನಾಲ್ವರು, ಸಿಲಿಂಡರ್‌ ಸೋರಿಕೆ ಶಂಕೆ