Home Blog Page 106

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-09-2025)

ನಿತ್ಯ ನೀತಿ : ಗಿಣಿಶಾಸ್ತ್ರ ಕೇಳಿ ಮರ ಏರಿದರೆ ಕೈಜಾರಿ ಕೆಳಗೆ ಬಿದ್ದರೂ ಬೀಳಬಹುದು. ಆದರೆ… ಆತವಿಶ್ವಾಸದಿಂದ ಮರ ಏರಿದರೆ ತುತ್ತತುದಿಯ ಹಣ್ಣು ನಿನ್ನ ಪಾಲಾಗಬಹುದು.

ಪಂಚಾಂಗ : ಮಂಗಳವಾರ, 16-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ದಶಮಿ / ನಕ್ಷತ್ರ: ಅರ್ದ್ರಾ / ಯೋಗ: ವರೀಯಾ / ಕರಣ: ವಣಿಜ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.20
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ: ಮಾಡಬೇಕೆಂದುಕೊಂಡಿರುವ ಒಳ್ಳೆಯ ಕೆಲಸ ವನ್ನು ಇಂದಿನಿಂದಲೇ ಆರಂಭಿಸಿ.
ವೃಷಭ: ಹೊಸ ಪ್ರದೇಶಕ್ಕೆ ಭೇಟಿ ನೀಡಿ ಒಳ್ಳೆಯ ಅನುಭವ ಪಡೆದುಕೊಳ್ಳಲು ಅವಕಾಶ ಸಿಗಲಿದೆ.
ಮಿಥುನ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾ ಸುವಿರಿ.

ಕಟಕ: ಸ್ನೇಹಿತರಿಂದಲೇ ಕೆಟ್ಟ ಮಾತು ಕೇಳಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ.
ಸಿಂಹ: ಗುರು-ಹಿರಿಯ ರೊಂದಿಗೆ ಸಮಾಲೋಚನೆ ನಡೆಸುವಿರಿ. ಬಂಧುಗಳಿಂದ ಸಮಸ್ಯೆ ಬಗೆಹರಿಯಲಿದೆ.
ಕನ್ಯಾ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪ ಮಟ್ಟಿನ ಲಾಭ ಸಿಗಲಿದೆ.

ತುಲಾ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.
ವೃಶ್ಚಿಕ: ಯಾವುದೋ ವಿಚಾರ ಮನಸ್ಸಿನಲ್ಲಿಟ್ಟು ಕೊಂಡು ಕೊರಗುವುದು ಸರಿಯಲ್ಲ.
ಧನುಸ್ಸು: ಲೇವಾದೇವಿ ವ್ಯವಹಾರದಲ್ಲಿ ಧನಲಾಭವಿದೆ. ಸಮಾಧಾನದಿಂದ ವ್ಯವಹರಿಸಿ.

ಮಕರ: ನೌಕರರಿಗೆ ಸ್ಥಾನ ಬದಲಾವಣೆ ಅಥವಾ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಕುಂಭ: ಆಸ್ತಿ ಸಂಬಂ ತ ತಗಾದೆಗಳಿಗೆ ನ್ಯಾಯವಾದಿಗಳ ಸಲಹೆ ಪಡೆಯಿರಿ.
ಮೀನ: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ : ಬಳ್ಳಾರಿ ಕಾರ್ಪೋರೇಟರ್‌ ಮನೆ ಮೇಲೆ ಸಿಬಿಐ ದಾಳಿ

ಬೆಂಗಳೂರು,ಸೆ.15– ಮಾಜಿ ಸಚಿವ ಬಿ.ನಾಗೇಂದ್ರ ತಲೆದಂಡಕ್ಕೆ ಕಾರಣೀಭೂತವಾಗಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಳ್ಳಾರಿಯ ಮಹಾನಗರ ಪಾಲಿಕೆ ಸದಸ್ಯನ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ.

ಬಳ್ಳಾರಿಯ ಗಾಂಧಿನಗರದಲ್ಲಿರುವ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದ್‌ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಏಕಾಏಕಿ ದಾಳಿ ನಡೆಸಿ ಖಾತೆಗಳು, ಬ್ಯಾಂಕ್‌ ದಾಖಲೆಗಳು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮೊಟ್ಟೆ ವ್ಯಾಪಾರಿಯಾಗಿದ್ದ ಗೋವಿಂದ್‌ ಹಗರಣದ ಮತ್ತೋರ್ವ ಆರೋಪಿ ನೆಕ್ಕುಂಟೆ ನಾಗರಾಜ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆಂಬ ಆರೋಪವಿದೆ. ಈ ಹಣವನ್ನು ವ್ಯಾಪಾರ ಸೇರಿದಂತೆ ಬೇರೆ ಬೇರೆ ಕಡೆ ಹೂಡಿಕೆ ಮಾಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.

ಹಗರಣದಲ್ಲಿ ಹೆಸರು ಕೇಳಿಬಂದಿರುವ ಕುಮಾರಸ್ವಾಮಿ ಜೊತೆ ಗೋವಿಂದ್‌ ಆತ್ಮೀಯತೆ ಇಟ್ಟುಕೊಂಡಿದ್ದರು. ನಿಗಮದಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಚುನಾವಣೆಯಲ್ಲಿ ಬಳಕೆ ಮಾಡಿದ್ದರ ಆರೋಪವಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ನೆಕ್ಕುಂಟೆ ನಾಗರಾಜ್‌ ಮತ್ತು ಗೋವಿಂದ್‌ ಅವರ ಖಾತೆಗಳನ್ನು ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿತ್ತು. ಮೂಲಗಳ ಪ್ರಕಾರ ಇದೇ ಹಣವನ್ನು ನಾಗೇಂದ್ರ ತೆಲಂಗಾಣ ವಿಧಾನಸಭೆ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ದುರುಪಯೋಗಪಡಿಸಿಕೊಂಡಿದ್ದಾರೆಂಬ ಆರೋಪವಿದೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಬಿ.ನಾಗೇಂದ್ರ ಅಧಿಕಾರ ದುರುಪಯೋಗಪಡಿಸಿಕೊಂಡು 88 ಕೋಟಿ ಹಣವನ್ನು ಕಾನೂನು ಬಾಹಿರವಾಗಿ ಉಲ್ಲಂಘನೆ ಮಾಡಿದ್ದಾರೆಂದು ಜಾರಿನಿರ್ದೇಶನಾಲಯ(ಇಡಿ) ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು.

ಹೀಗಾಗಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವವಾಗಿತ್ತು. ಇನ್ನೂ ಈ ಹಗರಣದಲ್ಲಿ ಮಾಜಿ ಸಚಿವೆ ಬಿ. ನಾಗೇಂದ್ರ ಅವರು ಮಾಸ್ಟರ್‌ ಮೈಂಡ್‌ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಹೈಕೋರ್ಟ್‌ 2025ರ ಜುಲೈನಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದೆ. ಇ.ಡಿಯು 2024ರ ಜುಲೈನಲ್ಲಿ ನಾಗೇಂದ್ರ ಅವರ ಮನೆಯ ಮೇಲೆ ದಾಳಿ ನಡೆಸಿ, 2025ರ ಜೂನ್ನಲ್ಲಿ ಬಳ್ಳಾರಿ ಸಂಸದ ಇ. ತುಕಾರಾಂ ಹಾಗೂ ಶಾಸಕರ ಮನೆಗಳ ಮೇಲೆ ದಾಳಿ ನಡೆಸಿತ್ತು. ಬಿಜೆಪಿ ನಾಯಕರು ಈ ದಾಳಿಯನ್ನು ರಾಜಕೀಯ ಪ್ರತೀಕಾರ ಎಂದು ಕರೆದು, ಸರ್ಕಾರದ ವಿರುದ್ಧ ಟೀಕಿಸಿದ್ದು, ಕಾಂಗ್ರೆಸ್‌ ನಾಯಕರು ತನಿಖೆಯಲ್ಲಿ ಸಹಾಯ ಮಾಡಿ ಎಂದು ಹೇಳಿದ್ದಾರೆ.

ಹಗರಣದ ಹಿನ್ನೆಲೆಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ 20.19 ಕೋಟಿ ರೂ.ಗಳನ್ನು ಹಣವಾಗಿ ವಿತರಿಸಲಾಗಿದೆ ಎಂದು ಇಡಿ ಆರೋಪಿಸಿದೆ.ನಾಗೇಂದ್ರ ಅವರ ಸಹಾಯಕ ವಿಜಯ್‌ಕುಮಾರ್‌ ಗೌಡಾ ಅವರ ಮೊಬೈಲ್‌ನಲ್ಲಿ ಚುನಾವಣೆ ವೆಚ್ಚದ ನೋಟ್‌ ಸಿಕ್ಕಿದ್ದು, ಇದು ಹಗರಣದೊಂದಿಗೆ ಸಂಬಂಧ ಹೊಂದಿದೆ. ಯೂನಿಯನ್‌ ಬ್ಯಾಂಕ್‌ ಇಂಡಿಯಾ ಆಧಾರದಲ್ಲಿ ತನಿಖೆ ನಡೆಸುತ್ತಿದ್ದು, ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶನೀಡಿದೆ.

ದೇಶದಲ್ಲಿ ಅಸಹನೆ, ಧರ್ಮಾಂಧತೆ ಹೆಚ್ಚಾಗಿದೆ : ಸಚಿವ ಎಚ್‌.ಸಿ.ಮಹದೇವಪ್ಪ ಬೇಸರ

ಬೆಂಗಳೂರು, ಸೆ.15- ಶಾಂತಿ ಸಹಬಾಳ್ವೆಯ ಬುದ್ಧನ ದೇಶದಲ್ಲಿ ಇಂದು ಅಸಹನೆ, ಧರ್ಮಾಂಧತೆ, ವ್ಯಕ್ತಿಪೂಜೆ, ಸರ್ವಾಧಿಕಾರಿ ಧೋರಣೆ ಆ ಮೂಲಕ ಪ್ರಜಾಪ್ರಭುತ್ವದ ಅಳಿವು ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ತನ್ನ ಭಾವ ವ್ಯಕ್ತಪಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. 2007ರಲ್ಲಿ ವಿಶ್ವಸಂಸ್ಥೆ ಧರ್ಮಾಂಧತೆ, ಸರ್ವಾಧಿಕಾರಿ ಆಡಳಿತ, ಸಮಾಜಕ್ಕೆ ಮಾರಕ. ಪ್ರಜಾಪ್ರಭುತ್ವ ಸೂಕ್ತ ಎಂಬ ನಿಲುವಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಘೋಷಣೆ ಮಾಡಿದೆ ಎಂದು ಹೇಳಿದರು.

ಬ್ರಿಟನ್‌, ಫ್ರಾನ್‌್ಸ, ಆಮೆರಿಕಾದಂತಹ ರಾಷ್ಟ್ರಗಳು ಕ್ರಾಂತಿಯ ಮೂಲಕ ಪ್ರಜಾಪ್ರಭುತ್ವ ದೇಶಗಳಾಗಿ ಬದಲಾಗಿವೆ. ಪ್ರಜಾಪ್ರಭುತ್ವ ಸಮಸ್ತ ಜನರ ಧ್ವನಿಯನ್ನು ಜಾರಿ ಮಾಡಲು ಇರುವ ಬಲವಾದ ವ್ಯವಸ್ಥೆ ಎಂದು ಹೇಳಿದರು.ಪ್ರಸ್ತುತ ಪ್ರಜಾ ಪ್ರಭುತ್ವ ಕ್ಕಿರುವ ಸವಾಲನ್ನು ಮೆಟ್ಟಿನಿಲ್ಲಲು ಜನ ಜಾಗೃತರಾಗಬೇಕು. ಯಥಾಃರಾಜ, ತಥಾಃಪ್ರಜಾ ಎಂದು ಸಹಿಸಿಕೊಳ್ಳಬಾರದು. ಅಸಹನೆ, ಧರ್ಮಾಂಧತೆ, ಸರ್ವಾಧಿಕಾರ, ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಅಶಾಂತಿ, ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಎಚ್ಚರಿಸಿದರು.

ಕಷ್ಟಪಟ್ಟು ಬೆಳೆಸಿದ ಪ್ರಜಾಪ್ರಭುತ್ವವನ್ನು ಕಳೆದುಕೊಂಡರೆ ಮತ್ತೆ ನಾವು ಪ್ರಜಾಪ್ರಭುತ್ವಗಳಿಸುವುದು ಕಷ್ಟಸಾಧ್ಯತೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ದೇಶದ ಪ್ರತಿಯೊಬ್ಬರೂ ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಬದ್ಧವಾಗಿರಬೇಕು ಎಂದರು.ರಾಜಕೀಯ ಸ್ವಾತಂತ್ರ್ಯದಿಂದ ಸಾರ್ಥಕತೆ ಸಿಗುವುದಿಲ್ಲ. ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಅಗತ್ಯವಿದೆ. ಕಾಂಗ್ರೆಸ್‌‍ ಪಕ್ಷ ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾಧಿಸುತ್ತದೆ. ಪ್ರತಿಯೊಬ್ಬರಿಗೂ ತಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಐಚ್ಛಿಕ ಅಧಿಕಾರವನ್ನು ಸಂವಿಧಾನ ನೀಡಿದೆ. ಅದನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಸಮಾನತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಕಟ್ಟಕಡೆಯ ಪ್ರಜೆಗೂ ಪ್ರಜಾಪ್ರಭುತ್ವದ ಆಶಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಕಲೆ, ಛಾಯಾಚಿತ್ರ ಹಾಗೂ ಚರ್ಚಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌, ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌‍, ಶಾಸಕ ಎಸ್‌‍.ಎ. ನಾರಾಯಣಸ್ವಾಮಿ, ವಿವಿಧ ನಿಗಮಗಳ ಅಧ್ಯಕ್ಷರಾದ ಸಂಪತ್‌ರಾಜ್‌, ಮಂಜುನಾಥ್‌, ಪಲ್ಲವಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭವಿಷ್ಯವಾಣಿಗಳನ್ನು ಮೀರಿಸಿ ಭಾರತ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ : ಭಾಗವತ್‌

ಇಂದೋರ್‌, ಸೆ.15- ಭಾರತವು ಎಲ್ಲರ ಭವಿಷ್ಯವಾಣಿಗಳನ್ನು ತಪ್ಪಾಗಿ ಸಾಬೀತುಪಡಿಸುವ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ, ಏಕೆಂದರೆ ಇದು ಜ್ಞಾನ, ಕ್ರಿಯೆ ಮತ್ತು ಭಕ್ತಿಯ ಸಾಂಪ್ರದಾಯಿಕ ತತ್ವಶಾಸ್ತ್ರದಲ್ಲಿ ನಂಬಿಕೆಯಿಂದ ನಡೆಸಲ್ಪಡುತ್ತದೆ ಎಂದಿದ್ದಾರೆ.

ಭಾರತದ ಆರ್ಥಿಕತೆಯು ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್‌‍-ಜೂನ್‌ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮವಾದ ಶೇ. 7.80 ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ, ಇದು ಅಮೆರಿಕ ಸುಂಕಗಳನ್ನು ವಿಧಿಸುವ ಮೊದಲು ಕಳೆದ ಐದು ತ್ರೈಮಾಸಿಕಗಳಲ್ಲಿ ಅತ್ಯಧಿಕವಾಗಿದೆ. ಮಧ್ಯಪ್ರದೇಶದ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅವರ ಪರಿಕ್ರಮ ಕೃಪಾ ಸಾರ್‌ ಪುಸ್ತಕವನ್ನು ಇಂದೋರ್‌ನಲ್ಲಿ ಬಿಡುಗಡೆ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್‌‍, ಭಾರತವು 3,000 ವರ್ಷಗಳ ಕಾಲ ವಿಶ್ವ ನಾಯಕನಾಗಿದ್ದಾಗ ಯಾವುದೇ ಜಾಗತಿಕ ಕಲಹ ಇರಲಿಲ್ಲ ಎಂದು ಹೇಳಿದರು.

ಆ ಸಮಯದಲ್ಲಿ, ಪರಿಸರ ಎಂದಿಗೂ ಹದಗೆಟ್ಟಿರಲಿಲ್ಲ, ತಾಂತ್ರಿಕ ಪ್ರಗತಿ ಉನ್ನತ ಮಟ್ಟದಲ್ಲಿತ್ತು ಮತ್ತು ಮಾನವ ಜೀವನವು ಸಂತೋಷ ಮತ್ತು ಸುಸಂಸ್ಕೃತವಾಗಿತ್ತು ಎಂದು ಅವರು ಹೇಳಿದರು.ಆ ಯುಗದಲ್ಲಿ, ನಾವು ಜಗತ್ತನ್ನು ಮುನ್ನಡೆಸಿದೆವು, ಆದರೆ ಯಾವುದೇ ದೇಶವನ್ನು (ದಾಳಿ ಮಾಡುವ ಮೂಲಕ) ವಶಪಡಿಸಿಕೊಳ್ಳಲಿಲ್ಲ ಮತ್ತು ಯಾವುದೇ ದೇಶದ ವ್ಯಾಪಾರವನ್ನು ನಿಗ್ರಹಿಸಲಿಲ್ಲ.

ನಾವು ಯಾರ ಧರ್ಮವನ್ನೂ ಪರಿವರ್ತಿಸಲಿಲ್ಲ. ನಾವು ಎಲ್ಲಿಗೆ ಹೋದರೂ, ನಾವು ನಮ್ಮ ನಾಗರಿಕತೆಯನ್ನು ಹರಡಿದೆವು ಮತ್ತು ಜ್ಞಾನ ಮತ್ತು ಧರ್ಮಗ್ರಂಥಗಳನ್ನು ನೀಡುವ ಮೂಲಕ ಜನರ ಜೀವನವನ್ನು ಸುಧಾರಿಸಿದೆವು. ನಂತರ ಎಲ್ಲಾ ದೇಶಗಳು ತಮ್ಮದೇ ಆದ ಗುರುತನ್ನು ಹೊಂದಿದ್ದವು, ಆದರೆ ಅವುಗಳ ನಡುವೆ ಉತ್ತಮ ಸಂಭಾಷಣೆ ಇತ್ತು. ಈ (ಸಂವಾದ) ಇಂದು ಇಲ್ಲ, ಅವರು ಹೇಳಿದರು.

ವೈಯಕ್ತಿಕ ಹಿತಾಸಕ್ತಿಗಳು ಜಗತ್ತಿನಲ್ಲಿ ಘರ್ಷಣೆಗಳಿಗೆ ಕಾರಣವಾಗಿವೆ, ಅದು ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿದೆ.ಭಾರತೀಯ ಜನರ ಪೂರ್ವಜರು ವಿವಿಧ ಪಂಥಗಳು ಮತ್ತು ಸಂಪ್ರದಾಯಗಳ ಮೂಲಕ ಹಲವಾರು ಮಾರ್ಗಗಳನ್ನು ತೋರಿಸಿದ್ದಾರೆ, ಜೀವನದಲ್ಲಿ ಜ್ಞಾನ, ಕ್ರಿಯೆ ಮತ್ತು ಭಕ್ತಿಯ ಸಮತೋಲಿತ ಹರಿವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಕಲಿಸಿದ್ದಾರೆ ಎಂದು ಭಾಗವತ್‌ ಹೇಳಿದರು.

ಜ್ಞಾನ, ಕ್ರಿಯೆ ಮತ್ತು ಭಕ್ತಿಯ ಸಮತೋಲಿತ ತ್ರಿಮೂರ್ತಿಗಳ ಸಾಂಪ್ರದಾಯಿಕ ತತ್ವಶಾಸ್ತ್ರದಲ್ಲಿ ನಂಬಿಕೆ ಇರುವುದರಿಂದ, ಭಾರತವು ಎಲ್ಲರ ಭವಿಷ್ಯವಾಣಿಗಳನ್ನು ತಪ್ಪೆಂದು ಸಾಬೀತುಪಡಿಸುವ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.ಮಾಜಿ ಬ್ರಿಟಿಷ್‌ ಪ್ರಧಾನಿ ವಿನ್ಸಿಟಿನ್‌ ಚರ್ಚಿಲ್‌ ಅವರನ್ನು ಉಲ್ಲೇಖಿಸಿ, ಬ್ರಿಟಿಷ್‌ ಆಳ್ವಿಕೆ ಕೊನೆಗೊಂಡ ನಂತರವೂ ಒಗ್ಗಟ್ಟಿನಿಂದ ಉಳಿಯುವ ಮೂಲಕ ಭಾರತವು ತನ್ನನ್ನು ತಪ್ಪು ಎಂದು ಸಾಬೀತುಪಡಿಸಿದೆ ಎಂದು ಭಾಗವತ್‌ ಸೂಚಿಸಿದರು.

(ಬ್ರಿಟಿಷ್‌ ಆಳ್ವಿಕೆಯಿಂದ) ಸ್ವಾತಂತ್ರ್ಯದ ನಂತರ, ನೀವು (ಭಾರತ) ಬದುಕಲು ಸಾಧ್ಯವಾಗುವುದಿಲ್ಲ ಮತ್ತು ವಿಭಜನೆಯಾಗುತ್ತೀರಿ ಎಂದು ವಿನ್ಸ್ಟನ್‌ ಚರ್ಚಿಲ್‌ ಒಮ್ಮೆ ಹೇಳಿದ್ದರು, ಆದರೆ ಇದು ಸಂಭವಿಸಲಿಲ್ಲ.ಈಗ ಇಂಗ್ಲೆಂಡ್‌ ಸ್ವತಃ ವಿಭಜನೆಯ ಹಂತಕ್ಕೆ ಬರುತ್ತಿದೆ, ಆದರೆ ನಾವು ವಿಭಜನೆಯಾಗುವುದಿಲ್ಲ. ನಾವು ಮುಂದುವರಿಯುತ್ತೇವೆ.

ನಾವು ಒಮ್ಮೆ ವಿಭಜನೆಯಾಗಿದ್ದೆವು, ಆದರೆ ನಾವು ಅದನ್ನು ಮತ್ತೆ ಒಂದುಗೂಡಿಸುತ್ತೇವೆ ಎಂದು ಅವರು ಹೇಳಿದರು.ಜಗತ್ತು ನಂಬಿಕೆ ಮತ್ತು ನಂಬಿಕೆಯ ಮೇಲೆ ನಡೆಯುತ್ತಿದ್ದರೆ, ಭಾರತವು ಕ್ರಿಯಾಶೀಲ ಮತ್ತು ತರ್ಕಬದ್ಧ ಪುರುಷರೊಂದಿಗೆ ನಂಬಿಕೆಯ ಭೂಮಿಯಾಗಿದೆ ಎಂದು ಅವರು ಹೇಳಿದರು.ಇಂದು, ಮನುಷ್ಯನು ತುಂಬಾ ಜ್ಞಾನವನ್ನು ಗಳಿಸಿದ್ದಾನೆ, ಅವನು ಅನೇಕ ಕೆಲಸಗಳನ್ನು ನೇರವಾಗಿ ಮಾಡಲು ಪ್ರಾರಂಭಿಸಿದ್ದಾನೆ, ಆದರೆ ಮೊದಲು ನಾವು ಅಂತಹ ಕೆಲಸಗಳನ್ನು ನೇರವಾಗಿ ಮಾಡಲು ಸಾಧ್ಯವಾಗಲಿಲ್ಲ.

ಜ್ಞಾನ ಮತ್ತು ವಿಜ್ಞಾನದೊಂದಿಗೆ, ವಿನಾಶವೂ ಹೆಚ್ಚಾಗಿದೆ.ಅಭಿವೃದ್ಧಿ ಎಂದು ಕರೆಯಲ್ಪಡುವ ವಿಷಯ ನಡೆದಿದೆ, ಆದರೆ ಪರಿಸರವೂ ಹದಗೆಟ್ಟಿದೆ ಮತ್ತು ಕುಟುಂಬಗಳು ಒಡೆಯಲು ಪ್ರಾರಂಭಿಸಿವೆ. ಜನರು ತಮ್ಮ ಹೆತ್ತವರನ್ನು ರಸ್ತೆಯಲ್ಲೇ ತ್ಯಜಿಸುತ್ತಾರೆ (ನಿರ್ಲಕ್ಷಿತ ಸ್ಥಿತಿಯಲ್ಲಿ), ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್ಥ ವಿಷಾದಿಸಿದರು.

ಸಂಸ್ಕಾರ (ಮೌಲ್ಯಗಳು) ಇಲ್ಲದ ಕಾರಣ, ಹೊಸ ಪೀಳಿಗೆಯಲ್ಲಿ ಅಂತಹ ವಿಕೃತಿ ಬಂದಿದೆ, ಒಬ್ಬ ಹುಡುಗನಾಗಿ ಜನಿಸಿದ ವ್ಯಕ್ತಿಯು ತನ್ನನ್ನು ತಾನು ಹುಡುಗಿ ಎಂದು ಪರಿಗಣಿಸಿದರೆ, ಅವನ ಹೇಳಿಕೆಯನ್ನು ತಕ್ಷಣವೇ ಒಪ್ಪಿಕೊಳ್ಳಬೇಕು ಮತ್ತು ಅವನ ಧ್ವನಿಯನ್ನು ನಿಗ್ರಹಿಸಬಾರದು ಎಂಬ ಬೇಡಿಕೆ ಇದೆ ಎಂದು ಅವರು ಹೇಳಿದರು.ಭಾರತವು ಹಸುಗಳು, ನದಿಗಳು ಮತ್ತು ಮರಗಳ ಮೇಲಿನ ಗೌರವದ ಮೂಲಕ ಪ್ರಕೃತಿಯನ್ನು ಪೂಜಿಸುತ್ತದೆ ಎಂದು ಒತ್ತಿ ಹೇಳಿದ ಭಾಗವತ್‌‍, ಪ್ರಕೃತಿಯೊಂದಿಗಿನ ಈ ಸಂಬಂಧವು ಜೀವಂತ ಮತ್ತು ಪ್ರಜ್ಞಾಪೂರ್ವಕ ಅನುಭವವನ್ನು ಆಧರಿಸಿದೆ ಎಂದು ಹೇಳಿದರು.

ಈ ಬಾರಿ ಶಿಕ್ಷಕರಿಗಿಲ್ಲ ದಸರಾ ರಜೆ

ಬೆಂಗಳೂರು, ಸೆ.15- ಇದೇ 22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಶಿಕ್ಷಕರು ದಸರಾ ರಜೆಯಿಂದ ವಂಚಿತರಾಗಲಿದ್ದಾರೆ. ದಸರಾ ರಜೆ ಹೋಗಲಿ ಸಮೀಕ್ಷೆಯಲ್ಲಿ ಭಾಗಿಯಾಗುತ್ತಿರುವ ಶಿಕ್ಷಕರಿಗೆ ಗೌರವಧನವನ್ನು ನೀಡುವುದಿಲ್ವಂತೆ. ಇದರ ಜೊತೆಗೆ ಗಳಿಕೆ ರಜೆಯೂ ಇಲ್ವಂತೆ.ಸರ್ಕಾರದ ಈ ನಡೆಗೆ ಶಿಕ್ಷಕ ವೃಂದ ಭಾರಿ ಅಸಮಧಾನ ವ್ಯಕ್ತಪಡಿಸಿದೆ.

ಸಮೀಕ್ಷೆಯಲ್ಲಿ ಭಾಗಿಯಾಗಲಿರುವ 1.70 ಲಕ್ಷ ಶಿಕ್ಷಕರಿಗೆ ಸೆ. 19 ರವರೆಗೂ ತರಬೇತಿ ನೀಡಲಾಗುವುದು.ರಜಾ ದಿನಗಳಲ್ಲಿ ಕೆಲಸ ಮಾಡಿದರೆ ಗಳಿಕಾ ರಜೆ ಸೌಲಭ್ಯ ನೀಡಬೇಕೆಂಬ ನಿಯಮವಿದೆ..ಹೀಗಿದ್ದರೂ ಸಮೀಕ್ಷೆಯಲ್ಲಿ ಭಾಗಿಯಾಗುವ ಶಿಕ್ಷಕರಿಗೆ ಗಳಿಕೆ ರಜೆ ನೀಡದಿರಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ 46,757 ಸರ್ಕಾರಿ ಶಾಲೆಗಳಿದ್ದು, 1.77 ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 2025-26 ರಲ್ಲಿ 123 ರಜೆಗಳಿದ್ದು, 242 ಶಾಲಾ ಕರ್ತವ್ಯ ದಿನಗಳಿವೆ. ಹೀಗಿದ್ದರೂ ಸರ್ಕಾರ ನಮ ಮೇಲೆ ಯಾಕೆ ಈ ರೀತಿ ಕೋಪ ತೀರಿಸಿಕೊಳ್ಳುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಶಿಕ್ಷಕರು.ಈಗಲೂ ಕಾಲ ಮಿಂಚಿಲ್ಲ ಶಿಕ್ಷಕರ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಶಿಕ್ಷಕ ಸಮುದಾಯ ಆಗ್ರಹಿಸಿದೆ.

ಅಂಬರೀಷ್‌ಗೂ ‘ಕರ್ನಾಟಕ ರತ್ನ’ ನೀಡುವಂತೆ ನಟಿ ತಾರಾ ಆಗ್ರಹ

ಬೆಂಗಳೂರು,ಸೆ.15- ಸಾಹಸಸಿಂಹ ಡಾ. ವಿಷ್ಣುವರ್ಧನ್‌ರವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಹಿನ್ನೆಲೆಯಲ್ಲೇ ನಟ, ರಾಜಕಾರಣಿ ರೆಬಲ್‌ಸ್ಟಾರ್‌ ಅಂಬರೀಶ್‌ರವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಹಿರಿಯ ನಟಿ ತಾರಾ ಅನುರಾಧ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಿದ್ದಾರೆ.

ಸದಾಶಿವ ನಗರದಲ್ಲಿರುವ ಡಿಸಿಎಂ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದ ಅವರು, ಅಂಬರೀಶ್‌ರವರೂ ಕೂಡ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಮನೋಜ್ಞ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಅಂಬರೀಶ್‌ರವರನ್ನು ನೀವೂ ಸಹ ಹತ್ತಿರದಿಂದ ಬಲ್ಲವರಾಗಿದ್ದು, ಆತೀಯರಾಗಿದ್ದರು.

ಡಾ.ವಿಷ್ಣುವರ್ಧನ್‌ ಹಾಗೂ ಬಿ.ಸರೋಜಾ ದೇವಿಯವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಸಂತಸದ ವಿಷಯ. ಅದೇ ರೀತಿ ಮಂಡ್ಯದ ಗಂಡು ಅಂಬರೀಶ್‌ ಅವರಿಗೂ ಕೂಡ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಅಭಿಮಾನಿಗಳ ಪರವಾಗಿ ಕೋರಿದರು.

ಫ್ಯಾಷನ್‌ ಡಿಸೈನರ್‌ಗೆ ಲೈಂಗಿಕ ಕಿರುಕುಳ ನೀಡಿದ ಎಂಜಿನಿಯರ್‌ ಸೆರೆ

ಬೆಂಗಳೂರು,ಸೆ.15- ಅಪಘಾತದಿಂದ ರಸ್ತೆ ಬದಿ ನರಳುತ್ತಿದ್ದ ಶ್ವಾನ ಗಮನಿಸಿ ಆರೈಕೆ ಮಾಡುತ್ತಿದ್ದ ಫ್ಯಾಷನ್‌ ಡಿಸೈನರ್‌ಗೆ ಲೈಂಗಿಕ ಕಿರುಕುಳ ವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ಮಂಜನಾಥ್‌ (27) ಬಂಧಿತ ಆರೋಪಿ.ಈತ ಡಿಪ್ಲೋಮೋ ಎಂಜಿನಿಯರ್‌ ವ್ಯಾಸಂಗ ಮಾಡಿದ್ದಾನೆ.

ಕಳೆದ ಭಾನುವಾರ ರಾತ್ರಿ 11.50 ರ ಸುಮಾರಿನಲ್ಲಿ ಫ್ಯಾಷನ್‌ ಡಿಸೈನರ್‌ರೊಬ್ಬರು ಕಾರಿನಲ್ಲಿ ಜಕ್ಕೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಪೆಟ್ರೋಲ್‌ ಬಂಕ್‌ ಮುಂದಿನ ರಸ್ತೆಯಲ್ಲಿ ಶ್ವಾನ ನರಳಾಡುತ್ತಿದ್ದುದನ್ನು ಗಮನಿಸಿದ್ದಾರೆ.ತಕ್ಷಣ ತಮ ಕಾರನ್ನು ರಸ್ತೆ ಬದಿ ಪಾರ್ಕ್‌ ಮಾಡಿ ಶ್ವಾನದ ರಕ್ಷಣೆಗೆ ಹೋಗಿದ್ದಾರೆ. ಆ ವೇಳೆ ಕೈಗೆ ರಕ್ತ ಆಗಿದ್ದರಿಂದ ಕೈ ತೊಳೆದುಕೊಳ್ಳುತ್ತಿದ್ದರು.

ಅದೇ ಸಮಯಕ್ಕೆ ಇದೇ ಮಾರ್ಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಆರೋಪಿ ಮಂಜುನಾಥ್‌ ಆ ಯುವತಿ ಸಮೀಪ ಹೋಗಿ ಅಸಭ್ಯವಾಗಿ ವರ್ತಿಸಿ ಅಲ್ಲಿಂದ ತೆರಳಿದ್ದಾನೆ.ಕೆಲ ನಿಮಿಷದ ಬಳಿಕ ಮತ್ತೆ ಈ ಸ್ಥಳಕ್ಕೆ ವಾಪಸ್‌‍ ಬಂದು ಮತ್ತೆ ಖಾಸಗಿ ಅಂಗ ಮುಟ್ಟಿ ಪರಾರಿಯಾಗಿದ್ದನು.

ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಗರದಲ್ಲಿ ಆಗಾಗ್ಗೆ ಅಲ್ಲಲ್ಲಿ ಬ್ಯಾಡ್‌ ಟಚ್‌ ಪ್ರಕರಣಗಳು ನಡೆದಿವೆ. ಅಂತಹ ಬ್ಯಾಡ್‌ ಟಚ್‌ ಮಾಡಿ ಪರಾರಿಯಾಗಿ ಎಲ್ಲೇ ಅಡಗಿದ್ದರೂ ಸಹ ಪೊಲೀಸರು ಬಿಡದೆ ಅವರ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಲ್ಲಿ ಸರಗಳ್ಳರ ಅಟ್ಟಹಾಸ : ಲಾಂಗ್‌ನಿಂದ ಬೆದರಿಸಿ ಸರ ಅಪಹರಣ, ಮಹಿಳೆಯ ಬೆರಳು ಕಟ್‌

ಬೆಂಗಳೂರು,ಸೆ.15- ನಗರದಲ್ಲಿ ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಸುತ್ತಾಡುತ್ತಾ ಇಬ್ಬರು ಮಹಿಳೆಯರಿಗೆ ಲಾಂಗ್‌ನಿಂದ ಬೆದರಿಸಿ ಎರಡು ಸರಗಳನ್ನು ಕಿತ್ತುಕೊಂಡಿದ್ದು, ಆ ವೇಳೆ ಪ್ರತಿರೋಧವೊಡ್ಡಿದ ಮಹಿಳೆಯ ಕೈ ಬೆರಳು ತುಂಡರಿಸಿರುವ ಘಟನೆ ಗಿರಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈಶ್ವರಿ ನಗರದಲ್ಲಿ ಪ್ರತಿಷ್ಠಾಪಿ ಸಿದ್ದ ಗಣೇಶಮೂರ್ತಿ ಸ್ಥಳದಲ್ಲಿ ಮೊನ್ನೆ ರಾತ್ರಿ ಆರ್ಕೆಸ್ಟ್ರಾ ಆಯೋಜಿ ಸಲಾಗಿತ್ತು. ಹಾಗಾಗಿ ಕಾರ್ಯಕ್ರಮ ವೀಕ್ಷಿಸಲು ಸ್ಥಳೀಯ ನಿವಾಸಿಗಳಾದ ಉಷಾ ಮತ್ತು ವರಲಕ್ಷ್ಮೀ ಹೋಗಿದ್ದಾರೆ. ಕಾರ್ಯಕ್ರಮ ವೀಕ್ಷಿಸಿ ಅಂದು ರಾತ್ರಿ ಇವರಿಬ್ಬರು ಮನೆಗೆ ವಾಪಸ್‌‍ ನಡೆದುಕೊಂಡು ಹೋಗುತ್ತಿದ್ದರು.

ಆ ವೇಳೆ ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಒಬ್ಬರ ಕುತ್ತಿಗೆಗೆ ಲಾಂಗ್‌ ಇಟ್ಟು ಸರ ಬಿಚ್ಚಿಕೊಡುವಂತೆ ಬೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ಒಬ್ಬರು ಭಯದಲ್ಲಿ ಚಿನ್ನದ ಸರ ತೆಗೆದುಕೊಟ್ಟಿದ್ದಾರೆ.

ಇವರ ಜೊತೆಯಲ್ಲಿದ್ದ ಮತ್ತೊಬ್ಬರು ಪ್ರತಿರೋಧ ಒಡ್ಡಿದಾಗ ಲಾಂಗ್‌ನಿಂದ ಆಕೆಯ ಬೆರಳು ತುಂಡಾಗಿದೆ. ಆದರೂ ಸಹ ಬಿಡದೆ ದರೋಡೆಕೋರರು ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರ ಕೃತ್ಯಕ್ಕೆ ಮಹಿಳೆಯರು ಆತಂಕಗೊಂಡಿದ್ದಾರೆ. ಉಷಾ ಅವರ 10 ಗ್ರಾಂ ಸರ ಹಾಗೂ ವರಲಕ್ಷಿ ಅವರ 45 ಗ್ರಾಂ ಸರವನ್ನು ದರೋಡೆಕೋರರು ಸುಲಿಗೆ ಮಾಡಿದ್ದು, ಈ ಬಗ್ಗೆ ಗಿರಿನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಇದಲ್ಲದೇ ಈ ಇಬ್ಬರು ದರೋಡೆಕೋರರು ಗಿರಿನಗರ, ಇಂದಿರಾ ನಗರ, ಕೊತ್ತನೂರು, ಕೋಣನಕುಂಟೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲೂ ಲಾಂಗ್‌ನಿಂದ ಬೆದರಿಸಿ ಮೊಬೈಲ್‌‍, ಚಿನ್ನದ ಸರಗಳನ್ನು ಎಗರಿಸಿರುವ ಬಗ್ಗೆ ಪೊಲೀಸ್‌‍ ಠಾಣೆಗಳಲ್ಲಿ ದೂರು ದಾಖಲಾಗಿವೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದರೋಡೆಕೋರರ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಿದ್ದು, ಈ ತಂಡಗಳು ಈಗಾಗಲೇ ದರೋಡೆಕೋರರಿಗಾಗಿ ಕಾರ್ಯಾಚರಣೆ ಕೈಗೊಂಡಿವೆ.

ಸಿದ್ದರಾಮಯ್ಯನವರು ನಿಜವಾದ ಮತಾಂತರ ರಾಯಭಾರಿ : ಆರ್‌.ಅಶೋಕ್‌

ಬೆಂಗಳೂರು,ಸೆ.15- ಈ ದೇಶದಲ್ಲಿ ಯಾರಾದರೂ ನಿಜವಾದ ಮತಾಂತರ ರಾಯಭಾರಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ತಮಗೆ ಮತ್ತು ತಮ ಪಕ್ಷಕ್ಕೆ ಮತಗಳು ಬರುತ್ತವೆ ಎಂದರೆ ವರು ಏನೂ ಬೇಕಾದರು ಮಾಡುತ್ತಾರೆ. ಜಾತಿ ಗಣತಿ ಹೆಸರಿನಲ್ಲಿ ಹಿಂದೂಗಳ ಜೊತೆ ಕ್ರಿಶ್ಚಯಿನ್‌ ಸೇರ್ಪಡೆ ಮಾಡುವ ಕುತಂತ್ರ ಮಾಡಿದ್ದಾರೆ. ಸಿದ್ದರಾಮಯ್ಯ ಮತಾಂತರದ ಬ್ರಾಂಡ್‌ ಅಂಬಾಸಿಡರ್‌ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಏನೇ ಮಾಡಿದರೂ ವೋಟಿಗಾಗಿಯೇ ಮಾಡುತ್ತಾರೆ. ಎಸ್‌‍ಟಿ ಪ್ರವರ್ಗಕ್ಕೆ ಸೇರಲು ಸುಪ್ರೀಂಕೋರ್ಟ್‌ ಆದೇಶಗಳಿವೆ. ಏನೇ ತೀರ್ಮಾನ ಮಾಡಿದರೂ ಸಂವಿಧಾನ ಬದ್ಧವಾಗಿ ಕೈಗೊಳ್ಳಲಿ ಎಂದರು.ಕ್ರಿಸ್ಚಿಯನ್‌ ಜೋಡಿತ ಹಿಂದೂ ಉಪಜಾತಿಗಳಿಗೆ ಪ್ರತ್ಯೇಕ ಕೋಡ್‌ ವಿಚಾರದ ಬಗ್ಗೆ ಮಾತನಾಡಿದ ಅಶೋಕ್‌, ಸಿದ್ದರಾಮಯ್ಯ ಮತಾಂತರದ ರಾಯಭಾರಿ. ಹಿಂದೂಗಳನ್ನು ಮತಾಂತರ ಮಾಡಲು ಏನೆಲ್ಲ ಮಾಡಬೇಕೋ ಅದೆಲ್ಲ ಮಾಡುತ್ತ್ತಿದ್ದಾರೆ ಎಂದು ದೂರಿದರು.

ಸಂವಿಧಾನಗಳಲ್ಲಿ ಇರುವುದು ಆರು ಧರ್ಮಗಳು. ಸಿದ್ದರಾಮಯ್ಯ ಹೊಸ ಧರ್ಮ ಸೃಷ್ಟಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ವಿಷ ಬೀಜ ಬಿತ್ತುವ ಹುನ್ನಾರ ಇದು ಎಂದು ಹೇಳಿದರು.
ವಕ್‌್ಫ ತಿದ್ದುಪಡಿ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್‌ ಮಧ್ಯಂತರ ಆದೇಶ ವಿಚಾರದ ಕುರಿತು ಮಾತನಾಡಿದ ಅಶೋಕ್‌, ಸುಪ್ರೀಂಕೋರ್ಟ್‌ ವಕ್ಫ್ ಕಾಯ್ದೆ ಎತ್ತಿ ಹಿಡಿದಿದೆ. ಕೆಲವು ಸಣ್ಣಪುಟ್ಟ ಅಂಶಗಳಿಗೆ ಸಲಹೆ, ಸ್ಪಷ್ಟನೆ ಕೊಟ್ಟಿದೆ.

ಒಟ್ಟಾರೆ ಕೇಂದ್ರದ ವಕ್‌್ಫ ಕಾಯ್ದೆಗೆ ಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಹಲವು ಜಮೀನುಗಳು, ಶಾಲೆ, ಮಠ, ದೇವಸ್ಥಾನಗಳ ಆಸ್ತಿಗೆ ನೊಟೀಸ್‌‍ ಕೊಡಲಾಗಿತ್ತು ಎಂದು ಸರಿಸಿದರು.ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತಾ, ವೋಟ್‌ ಬೇಕು ಅಂದರೆ ಒಕ್ಕಲಿಗ, ಕುರುಬ, ಲಿಂಗಾಯತ ಬೇಕು, ಓಟ್‌ ಹಾಕಿಸಿಕೊಂಡು ಈಗ ಹತ್ತಿದ ಏಣಿ ಒದ್ದಿದ್ದಾರೆ ಸಿಎಂ.

ಹಿಂದೂ ಧರ್ಮದಲ್ಲಿ ಅಸಮಾನತೆ ಇದ್ದರೆ ಬೇರೆ ಧರ್ಮಗಳಲ್ಲಿ ಸಮಾನತೆ ಇದೆಯಾ? ಮುಸ್ಲಿಮರಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ, ಮಸೀದಿಗಳಿಗೆ ಪ್ರವೇಶ ಇಲ್ಲ, ಪುರುಷರು ಎಷ್ಟು ಬೇಕಾದರೂ ಮದುವೆ ಆಗಬಹುದು. ಇಸ್ಲಾಂ ಧರ್ಮದ ಅಸಮಾನತೆಗಳ ಬಗ್ಗೆ ಯಾಕೆ ಸಿದ್ದರಾಮಯ್ಯ ಮಾತನಾಡವುದಿಲ್ಲ? ಎಂದು ಪ್ರಶ್ನಿಸಿದರು.

ಕೇವಲ ಹಿಂದೂ ಧರ್ಮದ ಬಗ್ಗೆಯೇ ಯಾಕೆ ಮಾತಾಡುತೀರಿ? ಹಿಂದೂ ಧರ್ಮದ ಸರಿ ಇಲ್ಲ ಅನ್ನುವ ಭಾವನೆ ನಿಮದು. ಎಲ್ಲ ಧರ್ಮಗಳಲ್ಲಿ ಏನೇನು ಅಸಮಾನತೆ ಇದೆ ಎಂದು ಹೇಳಲಿ. ಹಿಂದೂ ಧರ್ಮ ಟಾರ್ಗೆಟ್‌ ಮಾಡಿ ಮಾತಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಹಿಂದೂಗಳು ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌‍ ಸರ್ಕಾರದ ಅವಾಂತರಗಳನ್ನು ನಾವು ಅಧಿಕಾರಕ್ಕೆ ಬಂದು ತಡೆಗಟ್ಟುತ್ತೇವೆ ಎಂದರು.

ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬುದರ ಬಗ್ಗೆ ನಾವು ನಿಯಮ ತರುತ್ತೇವೆ. ದಸರಾ ಪ್ರಾರಂಭ ಮಾಡಿದ್ದು ವಿಜಯನಗರದ ಅರಸರು ಯದು ವಂಶದವರಿಗೆ ದಸರಾ ವೇಳೆ ಆಹ್ವಾನ ಹೋಗುತ್ತದೆ. ಯಾಕೆ ಅವರಿಗೇ ಆಹ್ವಾನ ಕೊಡುವುದು? ಬೇರೆಯವರಿಗೆ ಯಾಕೆ ಕೊಡುವುದಿಲ್ಲ. ಅದು ಸಂಪ್ರದಾಯ, ಹಿಂದೂ ಪಂಚಾಂಗ ಪ್ರಕಾರ ನಡೆಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌‍ ಸರ್ಕಾರ ಮುಲ್ಲಾಗಳ ಸರ್ಕಾರ. ಪಂಚಾಂಗ, ಸಂಪ್ರದಾಯ, ಸಂಸ್ಕೃತಿಗಳಿಗೆ ಮನ್ನಣೆ ಕೊಡುವುದಿಲ್ಲ. ಇದಕ್ಕೆಲ್ಲ ಕಾನೂನು ತರಬೇಕು. ಉರುಸ್‌‍, ಮುಸ್ಲಿಂ ಹಬ್ಬಗಳಿಗೆ ಹೋಗಿ ಇದು ಮುಸ್ಲಿಮರದ್ದಲ್ಲ ಅಂದು ಹೇಳಲಿ, ಹಿಂದೂಗಳನ್ನು ಕರೆದೊಯ್ದು ಉರುಸ್‌‍, ಮುಸ್ಲಿಂ ಹಬ್ಬಗಳನ್ನು ಉದ್ಘಾಟಿಸಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಬಂದ ಮೇಲೆಯೇ ಇದೆಲ್ಲ ನಡೆಯುತ್ತದೆ. ಮಸೀದಿ ಮುಂದೆ ಗಣೇಶೋತ್ಸವ ಮೆರವಣಿಗೆ ಹೋಗಬಾರದು ಎನ್ನುತ್ತಾರೆ. ಹಾಗಾದರೆ ದೇವಸ್ಥಾನ ಮುಂದೆಯೂ ಉರುಸ್‌‍, ಮೀಲಾದ್‌ ಮೆರವಣಿಗೆ ಹೋಗಬಾರದು ಎಂದು ಒತ್ತಾಯ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎಡಬಿಡಂಗಿ ಆಡಳಿತ. ರಾಜ್ಯದಲ್ಲಿ ಇದರಿಂದಲೇ ಅರಾಜಕತೆ ಸೃಷ್ಟಿ ಆಗಿದೆ. ಧರ್ಮ ಧರ್ಮಗಳ ನಡುವೆ ವಿಷ ಬೀಜ, ಬೆಂಕಿ ಹಚ್ಚೋದು, ನಾಡು ಅಶಾಂತಿಯಿಂದಿರಬೇಕೆಂದು ಬಯಸುವವರು ಕಾಂಗ್ರೆಸ್‌‍ನವರು ಎಂದು ಗುಡುಗಿದರು.

ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿವೆ : ಸಿಎಂ

ಬೆಂಗಳೂರು, ಸೆ.15- ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಎಷ್ಟೇ ಕಷ್ಟಗಳು ಎದುರಾಗುತ್ತಿದ್ದರೂ ಇದಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮದು ಬಹು ಸಂಸ್ಕೃತಿಯಲ್ಲಿ ಏಕತೆಯ ರಾಷ್ಟ್ರ. ಬಸವಣ್ಣ ಅವರ ಅನುಭವ ಮಂಟಪದಲ್ಲೂ ಪ್ರಜಾಪ್ರಭುತ್ವಕ್ಕೆ ಒತ್ತು ನೀಡಲಾಗಿತ್ತು ಎಂದರು.

ಇತ್ತೀಚೆಗೆ ಮತಗಳ್ಳತನ ನಡೆಯುತ್ತಿದೆ. ನನ್ನ ಮತ ನನ್ನ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂಬ ಪರಿಸ್ಥಿತಿ ಎದುರಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಅನಿವಾರ್ಯವಾಗಿದೆ ಎಂದರು.

ಸಂವಿಧಾನದಲ್ಲಿ ಯಾವ ಜಾತಿ ಧರ್ಮಕ್ಕೂ ಮೇಲು-ಕೀಳು ಎಂಬ ತಾರತಮ್ಯ ಇಲ್ಲ. ಜಾತಿ, ಧರ್ಮ ಹಾಗೂ ಲಿಂಗ ಬೇಧವಿಲ್ಲದೇ ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶಗಳಿವೆ. ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು. ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ದೊರೆಯಬೇಕು. ಜಾತಿಬೇಧ ಮಾಡಬಾರದು. ಧರ್ಮ ಸಹಿಷ್ಣುತೆ ಇರಬೇಕೆಂದು ಹೇಳಿದರು.

ವಿರೋಧ ಪಕ್ಷಗಳಿಗೆ ರಾಜಕೀಯ ಮಾಡಲು ಬೇರೆ ವಿಷಯಗಳೇ ಇಲ್ಲ. ಧರ್ಮದ ಹೆಸರಿನಲ್ಲೇ ರಾಜಕೀಯ ಮಾಡುತ್ತಿದ್ದಾರೆ. ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗಿದೆ. ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ ಎಂದೇ ಅರ್ಥವಾಗುತ್ತಿಲ್ಲ. ಸಂವಿಧಾನ ಧರ್ಮ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ. ಸ್ವಾತಂತ್ರ್ಯ ಬಂದು ಇಷ್ಟೂ ವರ್ಷಗಳಾದರೂ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಮಾಜಿ ಸಂಸದನೊಬ್ಬ ಸಂವಿಧಾನ ಓದದೆ ಮೂರ್ಖನಂತೆ ನಡೆದುಕೊಳ್ಳುತ್ತಾನೆ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಆದರೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಖಂಡನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳು ಈ ಪ್ರಯತ್ನವನ್ನು ಹೆಚ್ಚು ಮಾಡುತ್ತಿವೆ. ಜನ ಜಾಗೃತರಾಗಬೇಕು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸರ್ವರಿಗೂ ಸಮಾಬಾಳು, ಸಮಪಾಲು ಎಂಬ ಆಶ್ರಯ ನಾಡಿನ ಅನುಭವ ಮಂಟಪದಿಂದ ಕೇಳಿ ಬಂತು. ಇದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಮತದಾನ ಸಾಮಾನ್ಯರನ್ನು ಆಡಳಿತ ವ್ಯವಸ್ಥೆಯಲ್ಲಿ ಕೂರಿಸಿದೆ. ಮಹಾರಾಜರು ಮನೆಯಲ್ಲಿದ್ದಾರೆ. ತಮ ಕಾಲದಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣಾ ವ್ಯವಸ್ಥೆ ಇತ್ತು. ಆನಂತರ ಸರ್ಕಾರ ಅದನ್ನು ರದ್ದು ಮಾಡಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ನಾಯಕತ್ವವನ್ನು ಬೆಳೆಸಬೇಕೆಂದರು.

ತಾವು 7ನೇ ತರಗತಿಯಲ್ಲಿರ ಬೇಕಾದರೆ, ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದೆ. ಆಗ ನನ್ನ ಚಿಹ್ನೆ ಸ್ಟಾರ್‌ ಆಗಿತ್ತು. ನಾನು ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವ ಮತದಾನದಿಂದಾಗಿಯೇ ಇಲ್ಲಿ ಇದ್ದೇವೆ. ಪ್ರತಿಯೊಂದು ಮತಕ್ಕೂ ಅಮೂಲ್ಯವಾದ ಸ್ಥಾನಮಾನವಿದೆ. ಕಾಂಗ್ರೆಸ್‌‍ನ ಧೃವನಾರಾಯಣ್‌ ಒಂದು ಮತ ಅಂತರದಲ್ಲಿ ಗೆಲುವು ಸಾಧಿಸಿ ಶಾಸಕರಾದರು. ಅವರ ಎದುರು ಸ್ಪರ್ಧಿಸಿದ್ದ ಎ.ಆರ್‌.ಕೃಷ್ಣಾಮೂರ್ತಿಯವರ ಚಾಲಕ ತಡವಾಯಿತು ಎಂದು ಮತ ಹಾಕಲಿಲ್ಲ, ಅಂದು ಅವರ ಕುಟುಂಬದ ಮೂವರು ಸದಸ್ಯರು ಬಂದು ಮತ ಹಾಕಿದರೆ, ಫಲಿತಾಂಶ ಬೇರೆಯಾಗುತ್ತಿತ್ತು ಎಂದರು.

ರಾಜಸ್ಥಾನದಲ್ಲಿ ಸಿ.ಪಿ. ಜೋಶಿ ಎರಡು ಮತಗಳ ಅಂತರದಲ್ಲಿ ಸೋಲು ಕಂಡು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿಕೊಂಡರು. ಹೀಗಾಗಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.