Home Blog Page 22

ಛಾತ್‌ ಪೂಜೆ ಕೊನೆ ದಿನ : ಸೂರ್ಯನಿಗೆ ಆರ್ಘ್ಯ ಅರ್ಪಿಸಿದ ಲಕ್ಷಾಂತರ ಮಂದಿ

ಪಾಟ್ನಾ, ಅ.28– ಛಾತ್‌ ಪೂಜೆಯ ಕೊನೆಯ ದಿನವಾದ ಇಂದು ಬಿಹಾರದಾದ್ಯಂತ ಇರುವ ಘಾಟ್‌ಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿ ಪುನಿತರಾದರು. ನಾಲ್ಕು ದಿನಗಳ ಛಾತ್‌ ಪೂಜಾ ಉತ್ಸವದ ಪರಾಕಾಷ್ಠೆಯನ್ನು ಗುರುತಿಸುವ ಸಲುವಾಗಿ ಬಿಹಾರದಾದ್ಯಂತ ಲಕ್ಷಾಂತರ ಭಕ್ತರು ಇಂದು ಉದಯಿಸುತ್ತಿರುವ ಸೂರ್ಯನಿಗೆ ಬೆಳಗಿನ ಪ್ರಾರ್ಥನೆ ಸಲ್ಲಿಸಿದರು.

ಉದಯಿಸುತ್ತಿರುವ ಸೂರ್ಯನಿಗೆ ಉಷಾ ಅರ್ಘ್ಯ ಅರ್ಪಿಸಲು ಭಕ್ತರು ಬೆಳಗಿನ ಜಾವದಿಂದಲೇ ಗಂಗಾ ಮತ್ತು ಇತರ ಜಲಮೂಲಗಳ ದಡದಲ್ಲಿ ಜಮಾಯಿಸಿದರು.ಬಿಹಾರದ ಅತಿದೊಡ್ಡ ಹಬ್ಬವಾದ ಈ ಪೂಜೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಾಟ್ನಾ ಜಿಲ್ಲಾಡಳಿತವು ನದಿಯ ಉದ್ದಕ್ಕೂ 100 ಕ್ಕೂ ಹೆಚ್ಚು ಘಾಟ್‌ಗಳಲ್ಲಿ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಟ್ನಾದ ವಿವಿಧ ಘಾಟ್‌ಗಳಲ್ಲಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಂದು ಬೆಳಿಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಛಾತ್‌ ಪೂಜಾ ಉತ್ಸವದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದರು.

ರಾಜ್ಯ ರಾಜಧಾನಿಯಲ್ಲಿ ಹಲವಾರು ರಾಜಕಾರಣಿಗಳ ನಿವಾಸಗಳಲ್ಲಿ ಛಠ್‌ ಪೂಜೆಯನ್ನು ಆಚರಿಸಲಾಯಿತು.ನಾಲ್ಕು ದಿನಗಳ ಹಬ್ಬಗಳು ಅಕ್ಟೋಬರ್‌ 25 ರಂದು ೞನಹೈ ಖೈೞ ಆಚರಣೆಯೊಂದಿಗೆ ಪ್ರಾರಂಭವಾದವು. ಇದನ್ನು ಕಾರ್ತಿಕ ಶುಕ್ಲದ ಆರನೇ ದಿನ ಮತ್ತು ದೀಪಾವಳಿಯ ಆರು ದಿನಗಳ ನಂತರ ಆಚರಿಸಲಾಗುತ್ತದೆ.ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ ಮತ್ತಿತರರು ಛಾತ್‌ ಪೂಜೆಯ ಶುಭಾಷಯಗಳನ್ನು ಕೋರಿದ್ದಾರೆ.

ಕುಸಿದ ಸೇವಂತಿ ಹೂವಿನ ಬೆಲೆ, ಸಂಕಷ್ಟದಲ್ಲಿ ಬೆಳೆಗಾರರು

ಬೆಂಗಳೂರು, ಅ.28- ಹಬ್ಬಗಳ ಸರಣಿ ಮುಗಿಯುತ್ತಿದ್ದಂತೆ ಹೂವಿನ ಬೆಲೆ ಕುಸಿತವಾಗಿದ್ದು, ಪುಷ್ಪ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ದಸರಾ, ದೀಪಾವಳಿಗೆ ಉತ್ತಮ ಬೆಲೆ ದೊರೆಯಲಿದೆ ಎಂದು ಭಾರೀ ನೀರಿಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ದೊಡ್ಡ ಆಘಾತ ತಂದಿದೆ. ಹಬ್ಬಗಳ ಸಂದರ್ಭದಲ್ಲಿ ಹೂಗಳ ಬೇಲೆ ಗಗನಕ್ಕೇರುವುದು ಸಾಮಾನ್ಯ. ಆದರೆ, ಈ ಬಾರಿಯ ದಸರಾ, ದೀಪಾವಳಿಯಲ್ಲೂ ಸಹ ಮಾರುಕಟ್ಟೆಯಲ್ಲಿ ಅಷ್ಟೇನು ಬೇಡಿಕೆ ಕಂಡುಬರಲಿಲ್ಲ.

ಹೆಚ್ಚಾಗಿ ಹೂ ಬೆಳೆಯುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ರೈತರು ಹೂ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ನಷ್ಟ ಅನುಭಸುವಂತಾಗಿದೆ. ಗುಣಮಟ್ಟದ ಸೇವಂತಿಗೆ ಮಾರುಕಟ್ಟೆಯಲ್ಲಿ ಕನಿಷ್ಟ ಅಂದ್ರೂ ಕೆಜಿಗೆ 80 ರಿಂದ 100 ರೂ.ಗೆ ಮಾರಾಟವಾದರೆ ದುರ್ಲಭ. ಹೀಗಿರುವಾಗ ಹೂ ಕಟಾವು ಮಾಡಿ, ಮಾರುಕಟ್ಟೆಗೆ ತಂದರೆ ಕೇಳವವವರಿಲ್ಲ. ಇದರಿಂದ ಕೂಲಿ ಸಾಗಾಣಿಕಾ ವೆಚ್ಚ ಕೂಡ ಹುಟ್ಟುತ್ತಿಲ್ಲ ಎಂದು ಬಹುತೇಕ ರೈತರು ಕಟಾವು ಮಾಡದೆ ಗಿಡದಲ್ಲೆ ಬಿಟ್ಟಿದ್ದಾರೆ.

ಹಬ್ಬಕ್ಕೆ ಉತ್ತಮ ಬೆಲೆ ಬರುತ್ತದೆ ಎಂದು ರೈತರು ಹೆಚ್ಚಾಗಿ ಹೂ ಬೆಳೆದಿದ್ದಾರೆ. ಆದರೆ ಅಪಾರ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂ ಬರುತ್ತಿದ್ದು, ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿದೆ.ಸಾಮಾನ್ಯವಾಗಿ ಸೇವಂತಿಗೆ ಹೂ ಗಿಡವನ್ನು ನಾಟಿ ಮಾಡಿ ಹೂ ಬಿಡಲು ಎರಡೂವರೆಯಿಂದ ಮೂರು ತಿಂಗಳು ಬೇಕು. ಈ ನಡುವೆ ಗೊಬ್ಬರ, ಔಷಧಿ ಸೇರಿ ಒಂದು ಎಕರೆಯಲ್ಲಿ ಸೇವಂತಿಗೆ ಹೂ ಬೆಳೆಯಲು 30 ರಿಂದ 40 ಸಾವಿರ ರೂ. ಖರ್ಚಾಗುತ್ತದೆ. ಆದರೆ ಬೆಲೆ ಕುಸಿತದಿಂದ ಲಾಭವಿರಲಿ, ಹಾಕಿದ ಬಂಡವಾಳ ಬಂದರೆ ಸಾಕು ಎಂದು ಹೂ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಬರೀ ಸೇವಂತಿಗೆ ಹೂವಿನ ಬೆಲೆ ಕುಸಿತವಾಗಿಲ್ಲ. ಚೆಂಡು ಹೂ, ಸುನಾಮಿ ರೋಸ್‌‍, ಮಾರಿಗೋಲ್ಡ್, ಸುಗಂಧರಾಜ, ಕಾಕಡ ಹೂವಿನ ಬೆಲೆಯೂ ಕೂಡ ಇಳಿಮುಖವಾಗಿದೆ. ಕಳೆದ ವರ್ಷ ಆಯುಧ ಪೂಜೆ, ದೀಪಾವಳಿ ಹಬ್ಬದಲ್ಲಿ ಉತ್ತಮ ಬೆಲೆಯಿಂದ ತುಸು ಲಾಭಗಳಿಸಿದ್ದ ಬೆಳೆಗಾರರಿಗೆ ಈ ಬಾರಿ ಬೆಲೆ ಕುಸಿತ ನಷ್ಟ ತಂದೊಡ್ಡಿದೆ.

ಮರಾಠಿ ನಟ ಸಚಿನ್‌ ಚಂದ್ವಾಡೆ ಆತ್ಮಹತ್ಯೆ

ಮುಂಬೈ, ಅ.28– ಮರಾಠಿ ಚಿತ್ರರಂಗದ ಯುವ ನಟ ಸಚಿನ್‌ ಚಂದ್ವಾಡೆ ಆತಹತ್ಯೆ ಮಾಡಿಕೊಂಡಿದ್ದಾರೆ. ಜನಪ್ರಿಯ ಹಿಂದಿಯ ಜಮ್ತಾರಾ 2 ನಲ್ಲಿ ಕಾಣಿಸಿಕೊಂಡಿದ್ದ ಅವರು ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಪರೋಲಾ ಪ್ರದೇಶದಲ್ಲಿರುವ ಉಂಡಿರ್ಖೇಡಾ ಗ್ರಾಮದಲ್ಲಿರುವ ತಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್‌‍ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಟುಂಬ ಸದಸ್ಯರು ಅವರನ್ನು ಧುಲೆ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ವೇಳೆ ನಿಧನರಾದರು. ಆತಹತ್ಯೆಮುನ್ನ ಚಂದ್ವಾಡೆ ಅವರು ಮುಂಬರುವ ಮರಾಠಿ ಚಿತ್ರ ಅಸುರ್ವಾನ್‌‍ ನ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಜಲ್ಗಾಂವ್‌ನ ಪರೋಲಾ ಪೊಲೀಸರು ಆಕಸಿಕ ಸಾವಿನ ಪ್ರಕರಣವನ್ನು ದಾಖಲಿಸಿದರು ಹೆಚ್ಚಿನ ತನಿಖೆಗಾಗಿ ಧುಲೆ ಪೊಲೀಸರಿಗೆ ವರ್ಗಾಯಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.ಕೇವಲ 25 ವರ್ಷದ ಚಂದ್ವಾಡೆ ನಟನೆಯ ಜೊತೆಗೆ, ಚಂದ್ವಾಡೆ ಪುಣೆಯ ಕಂಪನಿಯೊಂದರಲ್ಲಿ ಐಟಿ ವೃತ್ತಿಪರರಾಗಿದ್ದರು ಎಂದು ಹೇಳಿದರು.

ಮೊಂತಾ ಚಂಡಮಾರುತದ ಎಫೆಕ್ಟ್‌, ತಮಿಳುನಾಡಿನಲ್ಲಿ ಭಾರಿ ಮಳೆ

ಚೆನ್ನೈ, ಅ. 28 (ಪಿಟಿಐ) ಮೊಂತ ಚಂಡಮಾರುತದ ಎಫೆಕ್ಟ್‌ನಿಂದ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದೆ.ಚಂಡ ಮಾರುತ ತಮಿಳುನಾಡಿನಿಂದ ಆಂಧ್ರಪ್ರದೇಶದತ್ತ ಚಲಿಸುತ್ತಿರುವುದರಿಂದ, ಇಲ್ಲಿ ಭಾರೀ ಮಳೆಯಾಗುತ್ತಿದೆ.

ತಿರುವಳ್ಳೂರು ಜಿಲ್ಲಾ ವಿಪತ್ತು ನಿರ್ವಹಣೆಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ಇಂದು ಬೆಳಿಗ್ಗೆ 6 ಗಂಟೆಯವರೆಗೆ, ತಿರುವಲ್ಲೂರಿನ ಪೊನ್ನೇರಿ ಮತ್ತು ಅವಡಿಯಲ್ಲಿ ಕ್ರಮವಾಗಿ 72 ಮಿ.ಮೀ ಮತ್ತು 62 ಮಿ.ಮೀ ಮಳೆಯಾಗಿದೆ.

ತಿರುವಳ್ಳೂರು ಜಿಲ್ಲಾಧಿಕಾರಿ ಎಂ. ಪ್ರತಾಪ್‌ ಅವರು ಇಂದು ಶಾಲೆಗಳಿಗೆ ರಜೆ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ.ಚೆಂಗಲಪಟ್ಟು, ಚೆನ್ನೈ, ಕಾಂಚಿಪುರಂ, ರಾಣಿಪೇಟೆ, ತಿರುವಲ್ಲೂರು, ತಿರುವಣ್ಣಾಮಲೈ, ವೆಲ್ಲೂರು, ತಿರುಪತ್ತೂರು, ವಿಲ್ಲುಪುರಂ, ತೆಂಕಾಸಿ, ತಿರುನಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್‌ 29 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಆರ್‌ಎಂಸಿ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಮೊಂತಾ ಚಂಡಮಾರುತದಿಂದಾಗಿ, ಮೇಲ್ಮೈ ಗಾಳಿಯು ಗಂಟೆಗೆ 90 ರಿಂದ 100 ಕಿ.ಮೀ ವೇಗವನ್ನು ತಲುಪುವ ನಿರೀಕ್ಷೆಯಿದೆ ಮತ್ತು ಗಂಟೆಗೆ 110 ಕಿ.ಮೀ ವೇಗವನ್ನು ತಲುಪುವ ನಿರೀಕ್ಷೆಯಿದೆ ಎಂದು ಬುಲೆಟಿನ್‌ ತಿಳಿಸಿದೆ.

ಮೊಂತಾ ಎಂದರೆ ಥಾಯ್‌ ಭಾಷೆಯಲ್ಲಿ ಪರಿಮಳಯುಕ್ತ ಹೂವು.ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಆರ್‌ಎಂಸಿ ನಿರೀಕ್ಷಿಸಿದಂತೆ, ಉಪಮುಖ್ಯಮಂತ್ರಿ ಉದ್ಯನಿಧಿ ಸ್ಟಾಲಿನ್‌ ಅವರು ಇಂದು ಮುಂಜಾನೆ ಚೆನ್ನೈ ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿದರು.

ನಗರದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಸಂಚಾರ ದಟ್ಟಣೆಗೆ ಒಳಗಾಗುವ ಪ್ರದೇಶಗಳಲ್ಲಿ ಸಂಚಾರವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಅವರು ಪರಿಶೀಲಿಸಿದರು.ಚೆನ್ನೈನಲ್ಲಿ, ಮಳೆಯಿಂದಾಗಿ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನ.4 ರಿಂದ ಭಾರತದ ಬಳಕೆದಾರರಿಗೆ ಒಂದು ವರ್ಷ ChatGPT Go ಉಚಿತ

ನವದೆಹಲಿ, ಅ. 28 – ಇದೇ ನವೆಂಬರ್‌ 4 ರಿಂದ ಪ್ರಾರಂಭವಾಗುವ ಸೀಮಿತ ಸಮಯದ ಪ್ರಚಾರ ಅವಧಿಯಲ್ಲಿ ಸೈನ್‌ ಅಪ್‌ ಮಾಡುವ ಭಾರತದ ಬಳಕೆದಾರರಿಗೆ ಒಂದು ವರ್ಷದವರೆಗೆ ಉಚಿತವಾಗಿ ಚಾಟ್‌ಜಿಪಿಟಿ ಗೋ ಅನ್ನು ನೀಡುವುದಾಗಿ ಓಪನ್‌ಎಐ ಸಂಸ್ಥೆ ತಿಳಿಸಿದೆ.

ಚಾಟ್‌ಜಿಪಿಟಿ ಗೋ ಅನ್ನುವುದನ್ನು ಓಪನ್‌ ಎಐ ಇತ್ತಿಚೆಗೆ ಬಿಡುಗಡೆ ಮಾಡಿದ ಚಂದಾದಾರಿಕೆ ಶ್ರೇಣಿಯಾಗಿದ್ದು, ಇದು ಭಾರತದಲ್ಲಿ ಬಳಕೆದಾರರಿಗೆ ಹೆಚ್ಚಿದ ಸಂದೇಶ ಮಿತಿಗಳು, ಇಮೇಜ್‌ ಉತ್ಪಾದನೆ ಮತ್ತು ಫೈಲ್‌ ಅಪ್‌ಲೋಡ್‌ಗಳನ್ನು ನೀಡುತ್ತದೆ, ಈ ಮಾರುಕಟ್ಟೆ ಚಾಟ್‌ಜಿಪಿಟಿಯನ್ನು ಅದರ ಎರಡನೇ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ನವೆಂಬರ್‌ 4 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಓಪನ್‌ ಎಐನ ಡೇವ್‌ ಡೇ ಎಕ್‌್ಸಚೆಂಜ್‌ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಭಾರತದಲ್ಲಿ ಇದು ಮೊದಲನೆಯದು.ಚಾಟ್‌ಜಿಪಿಟಿ ನವೆಂಬರ್‌ 4 ರಿಂದ ಪ್ರಾರಂಭವಾಗುವ ಸೀಮಿತ ಸಮಯದ ಪ್ರಚಾರ ಅವಧಿಯಲ್ಲಿ ಸೈನ್‌ ಅಪ್‌ ಮಾಡುವ ಭಾರತದ ಎಲ್ಲಾ ಬಳಕೆದಾರರಿಗೆ ಚಾಟ್‌ಜಿಪಿಟಿ ಗೋ ಅನ್ನು ಒಂದು ಪೂರ್ಣ ವರ್ಷ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಕಂಪನಿ ತಿಳಿಸಿದೆ.

ಚಾಟ್‌ಜಿಪಿಟಿ ಗೋ ಅನ್ನು ಆಗಸ್ಟ್‌ನಲ್ಲಿ ಭಾರತದಲ್ಲಿ ಪ್ರಾರಂಭಿಸಲಾಯಿತು, ಇದು ಅತ್ಯಂತ ಸುಧಾರಿತ ವೈಶಿಷ್ಟ್ಯಗಳಿಗೆ ಹೆಚ್ಚು ಕೈಗೆಟುಕುವ ಪ್ರವೇಶವನ್ನು ಕೋರುವ ಬಳಕೆದಾರರ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ ವಿನ್ಯಾಸಗೊಳಿಸಲಾಗಿದೆ.ಪ್ರಾರಂಭವಾದ ಮೊದಲ ತಿಂಗಳಲ್ಲಿ, ಭಾರತದಲ್ಲಿ ಪಾವತಿಸಿದ ಚಂದಾದಾರರ ಸಂಖ್ಯೆ ದ್ವಿಗುಣಗೊಂಡಿದೆ.

ಈ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ, ಓಪನ್‌ಎಐ ಅಂದಿನಿಂದ ಚಾಟ್‌ಜಿಪಿಟಿ ಗೋವನ್ನು ವಿಶ್ವಾದ್ಯಂತ ಸುಮಾರು 90 ಮಾರುಕಟ್ಟೆಗಳಿಗೆ ವಿಸ್ತರಿಸಿದೆ.ಭಾರತದಲ್ಲಿ ಲಕ್ಷಾಂತರ ಜನರು ಪ್ರತಿದಿನ ಚಾಟ್‌ಜಿಪಿಟಿಯನ್ನು ಬಳಸುತ್ತಾರೆ, ಇದರಲ್ಲಿ ಓಪನ್‌ಎಐನ ಸುಧಾರಿತ ಪರಿಕರಗಳನ್ನು ಬಳಸಿಕೊಳ್ಳುತ್ತಿರುವ ಡೆವಲಪರ್‌ಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರರ ವೇಗವಾಗಿ ಬೆಳೆಯುತ್ತಿರುವ ಸಮುದಾಯವೂ ಸೇರಿದೆ.

ಈ ಪ್ರಚಾರವು ಓಪನ್‌ಎಐನ ಇಂಡಿಯಾಫಸ್ಟ್‌‍ ಬದ್ಧತೆಯ ಮುಂದುವರಿಕೆಯಾಗಿದೆ ಮತ್ತು ಇಂಡಿಯಾಎಐ ಮಿಷನ್‌ ಅನ್ನು ಬೆಂಬಲಿಸುತ್ತದೆ, ಮುಂದಿನ ವರ್ಷ ದೇಶವು ಇಂಪ್ಯಾಕ್ಟ್‌ ಶೃಂಗಸಭೆಯನ್ನು ಆಯೋಜಿಸಲು ತಯಾರಿ ನಡೆಸುತ್ತಿರುವಾಗ ಭಾರತದಲ್ಲಿ ಸುತ್ತ ಬೆಳೆಯುತ್ತಿರುವ ಆವೇಗವನ್ನು ಬಲಪಡಿಸುತ್ತದೆ ಎಂದು ಓಪನ್‌ಎಐ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಅಸ್ತಿತ್ವದಲ್ಲಿರುವ ಚಾಟ್‌ಜಿಪಿಟಿ ಗೋ ಚಂದಾದಾರರು 12 ತಿಂಗಳ ಉಚಿತ ಪ್ರಚಾರಕ್ಕೆ ಅರ್ಹರಾಗಿರುತ್ತಾರೆ.ಕೆಲವು ತಿಂಗಳ ಹಿಂದೆ ಭಾರತದಲ್ಲಿ ಚಾಟ್‌ಜಿಪಿಟಿ ಗೋವನ್ನು ಪ್ರಾರಂಭಿಸಿದಾಗಿನಿಂದ, ನಮ್ಮ ಬಳಕೆದಾರರಿಂದ ನಾವು ನೋಡಿದ ಅಳವಡಿಕೆ ಮತ್ತು ಸೃಜನಶೀಲತೆ ಸ್ಪೂರ್ತಿದಾಯಕವಾಗಿದೆ ಎಂದು ಚಾಟ್‌ಜಿಪಿಟಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ನಿಕ್‌ ಟರ್ಲಿ ಹೇಳಿದರು.

ಭಾರತದಲ್ಲಿ ನಮ್ಮ ಮೊದಲ ಡೆವ್‌ಡೇ ಎಕ್‌್ಸಚೇಂಜ್‌‍ ಈವೆಂಟ್‌ಗೆ ಮುಂಚಿತವಾಗಿ, ಭಾರತದಾದ್ಯಂತ ಹೆಚ್ಚಿನ ಜನರು ಸುಧಾರಿತ ಅನ್ನು ಸುಲಭವಾಗಿ ಪ್ರವೇಶಿಸಲು ಮತ್ತು ಪ್ರಯೋಜನ ಪಡೆಯಲು ಸಹಾಯ ಮಾಡಲು ನಾವು ಒಂದು ವರ್ಷದವರೆಗೆ ಚಾಟ್‌ಜಿಪಿಟಿ ಗೋವನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರೆದುರೇ ಯುವಕನ ಭೀಕರ ಹತ್ಯೆ

ಬೇಲೂರು,ಅ.28-ಕ್ಷುಲ್ಲಕ ವಿಚಾರಕ್ಕೆ ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರ ಸಮುಖದಲ್ಲೆ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಗುರಪ್ಪಗೌಡರ ಬೀದಿಯ ನಿವಾಸಿ ಗಿರೀಶ್‌ (28) ಕೊಲೆಯಾದ ಯುವಕ.

ಬಲ್ಲ ಮೂಲಗಳ ಪ್ರಕಾರ ಕೆಲವರ ನಡುವೆ ಯುವತಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.ಈ ಸಂದರ್ಭದಲ್ಲಿ ಎಸ್‌‍.ಸೂರಾಪುರ ಗ್ರಾಮದ ಶ್ರೀನಿವಾಸನನ್ನುಅವಾಚ್ಯ ಶಬ್ದಗಳಿಂದ ಗಿರೀಶ ನಿಂದಿಸಿ ಹೊಡೆದಿದ್ದನೆಂಬ ಮಾತು ಕೇಳಿ ಬಂದಿದೆ.

ನಿನ್ನೆ ಬೆಳಗ್ಗೆ ಶ್ರೀನಿವಾಸ ಬೇಲೂರಿಗೆ ಬಂದ ಸಂದರ್ಭದಲ್ಲೂ ಗಿರೀಶ್‌ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ರೊಚ್ಚಿಗೆದ್ದ ಶ್ರೀನಿವಾಸ್‌‍ಅಲಿಯಾಸ್‌‍ ಕೋಳಿ ಸೀನ ಬಸ್‌‍ ನಿಲ್ದಾಣದ ಶೌಚಗೃಹಕ್ಕೆ ಗಿರೀಶ್‌ ಹೋಗಿರುವುದನ್ನು ಗಮನಿಸಿ ಆತ ಬರುವುದನ್ನೇ ಕಾದು ನಿಂತು ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರ ಸಮುಖದಲ್ಲೆ ಮಚ್ಚಿನಿಂದಕೊಚ್ಚಿ ಬರ್ಬರವಾಗಿ ಆತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದಗಿರೀಶ್‌ನನ್ನುಸ್ಥಳೀಯರು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಮಹಮದ್‌ ಸುಜೀತಾ ಹಾಗೂ ಇನ್‌್ಸಪೆಕ್ಟರ್‌ ರೇವಣ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಲೂರು ಪೊಲೀಸ್‌‍ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಆರೋಪಿಯ ಜಾಡುಹಿಡಿದು ಬಂಧಿಸಿ ಕ್ರಮಕೈಗೊಂಡಿದ್ದಾರೆ.

ದೊಡ್ಡಬಳ್ಳಾಪುರ : ಅಪಘಾತದಲ್ಲಿ ಇಬ್ಬರು ಯುವಕರ ಸಾವು

ದೊಡ್ಡಬಳ್ಳಾಪುರ, ಅ.28- ತಾಲೂಕಿನ ರಾಮಯ್ಯನಪಾಳ್ಯದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಮೃತರನ್ನು ಚಿಕ್ಕತಿಮನಹಳ್ಳಿ ಗ್ರಾಮದ ನಂದನ್‌ಕುಮಾರ್‌ (22), ರವಿಕುಮಾರ್‌ (24) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರೂ ಕೆಲಸದ ನಿಮಿತ್ತ ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ವೇಳೆ, ರಾಮಯ್ಯನಪಾಳ್ಯದ ಬಳಿ ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ. ಈ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಆಟೋವೊಂದು ಕೆಳಗೆ ಬಿದ್ದಿದ್ದ ಇವರ ಮೇಲೆ ಹರಿದು ಈ ಘಟನೆ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರೆ, ಮತ್ತೊಬ್ಬ ವ್ಯಕ್ತಿ ಗಜೇಂದ್ರ ಯಾದವ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(28-10-2025)

ನಿತ್ಯ ನೀತಿ : ಒಳ್ಳೆಯ ಸಂಬಂಧಗಳನ್ನು ಪ್ರೀತಿ ಕೊಟ್ಟು ಉಳಿಸಿಕೊಳ್ಳಿ. ಕೆಟ್ಟ ಸಂಬಂಧಗಳನ್ನು ವೌನವಾಗಿದ್ದು ಕಳೆದುಕೊಳ್ಳಿ.-ಸ್ವಾಮಿ ವಿವೇಕಾನಂದ

ಪಂಚಾಂಗ : ಮಂಗಳವಾರ, 28-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಪೂ.ಷಾ. / ಯೋಗ: ಸುಕರ್ಮಾ / ಕರಣ: ಗರಜ
ಸೂರ್ಯೋದಯ – ಬೆ.06.12
ಸೂರ್ಯಾಸ್ತ – 5.55
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ
: ಸ್ನೇಹಿತರು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾ ಸಲು ಸಹಾಯ ಮಾಡುವರು.
ವೃಷಭ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ.
ಮಿಥುನ: ನೆರೆಹೊರೆಯವರೊಂದಿಗಿನ ಸಂಬಂಧ ಸೌಹಾರ್ದಯುತವಾಗಿರುತ್ತದೆ.

ಕಟಕ: ದಿನದ ಆರಂಭ ಉತ್ತಮವಾಗಿರಲಿದೆ. ಕೈಗೊಂಡ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗುತ್ತೀರಿ.
ಸಿಂಹ: ಸಹೋದ್ಯೋಗಿ ಗಳೊಂದಿಗೆ ಮಾತುಕತೆ ನಡೆಸುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಿ.
ಕನ್ಯಾ: ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ.

ತುಲಾ: ಸಂಭಾಷಣೆ ನಡೆಸುವುದರಿಂದ ಉತ್ತಮ ರೀತಿಯ ಸಂಬಂಧಗಳು ರೂಪುಗೊಳ್ಳುತ್ತವೆ.
ವೃಶ್ಚಿಕ: ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ.
ಧನುಸ್ಸು: ಶ್ರಮ ಮತ್ತು ಅದೃಷ್ಟ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.

ಮಕರ: ಹಿರಿಯರು ಹಾಗೂ ಸಜ್ಜನರನ್ನು ಗೌರವಿಸುವಿರಿ. ಉತ್ತಮ ಪ್ರಗತಿ ಸಾ ಸುವಿರಿ.
ಕುಂಭ: ಹಿಂದೆ ಎದುರಿಸಿದ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಸ್ಥಗಿತಗೊಂಡ ಕೆಲಸ-ಕಾರ್ಯಗಳು ಸಹ ಪ್ರಗತಿಯಾಗುತ್ತವೆ.
ಮೀನ: ಹೊಸ ಉದ್ಯೋಗಗಳು ಮತ್ತು ಉದ್ಯೋಗ ಬದಲಾವಣೆಗೆ ಇದು ಉತ್ತಮ ದಿನವಾಗಿದೆ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 71 ವೃದ್ಧೆ ಆತ್ಮಹತ್ಯೆ

0

ಬೆಂಗಳೂರು,ಅ.27– ಕಬ್ಬಿಣದ ಮೆಟ್ಟಿಲಿನ ಸರಳುಗಳಿಗೆ ವೃದ್ಧೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಕುಂಬಳಗೋಡು ಪೊಲೀಸ್‌‍ ಠಾಣೆ ವ್ಯಾಪ್ತಿಯ ಚಲ್ಲಘಟ್ಟದಲ್ಲಿ ನಡೆದಿದೆ.
ಲೀಲಾವತಿ(71) ಆತಹತ್ಯೆಗೆ ಶರಣಾದ ವೃದ್ಧೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಲೀಲಾವತಿ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಕಿರಿಯ ಮಗಳು ನೆಲಮಹಡಿಯಲ್ಲಿ ವಾಸವಾಗಿದ್ದಾರೆ.

ನಿನ್ನೆ ಊಟ ಕೊಡಲೆಂದು ಮಗಳು ಹೋದಾಗ ಲೀಲಾವತಿಯವರು ಕಾಣಲಿಲ್ಲ. ನಂತರ ಮಹಡಿಯ ಮೇಲೆ ಹೋಗಿ ನೋಡಿದಾಗ, ವಾಟರ್‌ ಟ್ಯಾಂಕ್‌ಗೆ ಹೋಗಲು ಹಾಕಲಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸರಳಿಗೆ ಲೀಲಾವತಿಯವರು ಸೀರೆ ಬಿಗಿದು ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕುಂಬಳಗೋಡು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಂಡನ ಕಿರುಕುಳದಿಂದ ನೊಂದು ಕಟ್ಟಡದಿಂದ ಹಾರಿ ಪತ್ನಿ ಆತ್ಮಹತ್ಯೆ ಯತ್ನ

ಬೆಂಗಳೂರು, ಅ.27- ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಕಟ್ಟಡವೊಂದರ ಮೂರನೇ ಮಹಡಿಯಿದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಿಯಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಹಿಳೆಯಾಗಿದ್ದು, ಮಹಡಿಯಿಂದ ಬಿದ್ದ ಹಿನ್ನೆಲೆಯಲ್ಲಿ ಆಕೆಯ ಬೆನ್ನುಮೂಳೆ ಹಾಗೂ ಕಾಲಿಗೆ ಗಂಭೀರ ಪೆಟ್ಟು ಆಗಿದ್ದು, ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನಿಕ್ಸನ್‌ ಎಂಬುವವರನ್ನು ಕಳೆದ 7 ವರ್ಷಗಳ ಹಿಂದೆ ಮದುವೆಯಾಗಿದ್ದ ಪ್ರಿಯಾ ಅವರಿಗೆ ಮಕ್ಕಳಿರಲಿಲ್ಲ. ಇತ್ತೀಚೆಗೆ ವೈದ್ಯರ ಚಿಕಿತ್ಸೆಯ ನಂತರ ಅವರಿಗೆ ಹೆಣ್ಣು ಮಗು ಜನಿಸಿತ್ತು. ದಂಪತಿ ಬಾಣಸವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇತ್ತೀಚೆಗೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು.

ಪತಿಯ ಮದ್ಯವ್ಯಸನದಿಂದ ನೊಂದಿದ್ದ ಪ್ರಿಯಾ ಏಕಾಏಕಿ ಕಳೆದ ರಾತ್ರಿ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತಂತೆ ಬಾಣಸವಾಡಿ ಪೊಲೀಸರು ಪತಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.