Home Blog Page 56

ಬೆಂಗಳೂರು ವಾರ್ಡ್‌ ವಿಭಜನೆ ಬಗ್ಗೆ ನಾಳೆ ಜೆಡಿಎಸ್‌‍ ಸಭೆ

ಬೆಂಗಳೂರು, ಅ.10- ಗ್ರೇಟರ್‌ ಬೆಂಗಳೂರು ಅಥಾರಿಟಿಯು ಮಾಡಿರುವ ವಾರ್ಡ್‌ಗಳ ವಿಭಜನೆ ಬಗ್ಗೆ ಜೆಡಿಎಸ್‌‍ ಪಕ್ಷದ ಮುಖಂಡರ ಸಭೆ ನಾಳೆ ನಡೆಯಲಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಜೆಪಿ ಭವನದಲ್ಲಿ ಲೋಕ ನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ ಜನದಿನಾಚರಣೆ ಹಮಿಕೊಂಡಿದ್ದು, ಈ ಕಾರ್ಯಕ್ರಮ ಮುಗಿದ ನಂತರ ಸಭೆ ನಡೆಯಲಿದೆ.

ಗ್ರೇಟರ್‌ ಬೆಂಗಳೂರು ಅಥಾರಿಟಿಯು ಮಾಡಿರುವ ವಾರ್ಡ್‌ಗಳ ವಿಭಜನೆ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅ.15 ಕಡೆಯ ದಿನವಾಗಿದೆ. ಹೀಗಾಗಿ ವಾರ್ಡುಗಳಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ನಿರ್ಧರಿಸಲಾಗಿದೆ.

ಬೆಂಗಳೂರು ನಗರದ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ಮೇಲುಸ್ತುವಾರಿಗಳು, ಉಸ್ತುವಾರಿಗಳು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಬಿಬಿಎಂಪಿ ಮಾಜಿ ಸದಸ್ಯರು, ನಗರ ಪದಾಧಿಕಾರಿಗಳು, ವಾರ್ಡ್‌ ಅಧ್ಯಕ್ಷರು ಹಾಗೂ ಮುಖಂಡರುಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಜೆಡಿಎಸ್‌‍ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧನ್‌ಧಾನ್ಯ ಕೃಷಿ ಯೋಜನೆಗೆ ಗದಗ, ಹಾವೇರಿ ಜಿಲ್ಲೆಗಳ ಸೇರ್ಪಡೆ : ಬೊಮ್ಮಾಯಿ ಅಭಿನಂದನೆ

ಹಾವೇರಿ,ಅ.10-ಸಮಗ್ರ ಕೃಷಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಧನ್‌ಧಾನ್ಯ ಕೃಷಿ ಯೋಜನೆ (ಪಿಎಂಡಿಡಿಕೆವೈ) ರೂಪಿಸಿದ್ದು ರಾಷ್ಟ್ರದ 100 ಜಿಲ್ಲೆಯಲ್ಲಿ ಇದು ಅನುಷ್ಠಾನವಾಗುತ್ತಿದೆ. ಅದರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಗದಗ, ಹಾವೇರಿ ಜಿಲ್ಲೆ ಎರಡನ್ನೂ ಸೇರಿಸಿರುವುದಕ್ಕೆ ಮೋದಿ ಹಾಗೂ ಕೇಂದ್ರ ಕೃಷಿಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಯೋಜನೆಯಡಿ ಕೃಷಿ ಉತ್ಪನ್ನ ಹೆಚ್ಚಿಸುವುದು ವಿವಿಧ ದವಸ ಧಾನ್ಯಗಳನ್ನು ಬೆಳೆಯುವುದು ಮತ್ತು ಸಮಗ್ರ ಕೃಷಿ ಅಭಿವೃದ್ಧಿ, ನೀರಾವರಿ ಸೌಲಭ್ಯ, ರೈತರಿಗೆ ಅಲ್ಪಾವಧಿ, ದೀರ್ಘಾವಧಿ ಹಣಕಾಸು ನೆರವು ಮತ್ತು ಸುಗ್ಗಿ ಬಳಿಕ ಪಂಚಾಯತ್‌ ಮತ್ತು ಬ್ಲಾಕ್‌ ಹಂತದಲ್ಲಿ ದವಸಧಾನ್ಯಗಳ ದಾಸ್ತಾನು ನಿರ್ಮಾಣ, ಕೇಂದ್ರ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳನ್ನು ಸಂಯೋಜನೆಗೊಳಿಸಿ ಸಮಗ್ರವಾಗಿ ಕಾರ್ಯಕ್ರಮಗಳ ಅನುಷ್ಠಾನ ಸೇರಿ ಸಮಗ್ರ ಕೃಷಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಮೆರಡು ದೊಡ್ಡ ಸಹಾಯ ಜಿಲ್ಲೆಗೆ ಮಾಡುತ್ತದೆ ಎಂದು ಹೇಳಿದ್ದಾರೆ.

ನಾಳೆ ಪ್ರಧಾನಿ ನರೇಂದ್ರಮೋದಿ ಅವರು ಹಾವೇರಿ ಜಿಲ್ಲೆಯ ಹನುಮನಮಟ್ಟಿಯ ಕೃಷಿ ವಿದ್ಯಾಲಯ ಕೇಂದ್ರದಲ್ಲಿ ಈ ಯೋಜನೆಯನ್ನು ವರ್ಚ್ಯುವಲ್‌ ಮೂಲಕ ಉದ್ಘಾಟಿಸಲಿದ್ದಾರೆ.ಎಲ್ಲ ರೈತ ಬಾಂಧವರು ಪಾಲ್ಗೊಳ್ಳಬೇಕೆಂದು ಬೊಮಾಯಿ ವಿನಂತಿಸಿಕೊಂಡಿದ್ದಾರೆ.

ಯಾವುದೇ ಕ್ಷಣದಲ್ಲಾದರೂ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರ ಹೆಸರು ಘೋಷಣೆ ಸಾಧ್ಯತೆ

ಬೆಂಗಳೂರು,ಅ.10- ಹಲವಾರು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಅಂತಿಮಘಟ್ಟ ತಲುಪಿದ್ದು, ಆಯ್ಕೆ ನಿರೀಕ್ಷೆಯಲ್ಲಿರುವ ಬಿ.ವೈ.ವಿಜಯೇಂದ್ರ ಅವರ ಹೆಸರು ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆಗಳಿವೆ.

ರಾಜ್ಯ ಬಿಜೆಪಿ ಘಟಕಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡುವಂತೆ ಪಕ್ಷನಿಷ್ಠರು ಮನವಿ ಮಾಡಿಕೊಂಡಿದ್ದರು. ಆದರೆ ಪಕ್ಷದೊಳಗಿನ ಭಿನ್ನಮತದಿಂದ ಇಂದು, ನಾಳೆ ಎನ್ನುತ್ತಲೇ ಮುಂದೂಡತ್ತಲೇ ಬಂದಿದ್ದರು. ಅಂತಿಮವಾಗಿ ವರಿಷ್ಠರು ಗಟ್ಟಿ ನಿರ್ಧಾರಕ್ಕೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.

ನೇಮಕ ವಿಳಂಬವಾಗುತ್ತಿರುವುದು ಸ್ಥಳೀಯ ಸಂಸ್ಥೆ ಚುನಾವಣೆಗಳಾದ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ . ಅದಲ್ಲದೇ ನೇಮಕಾತಿ ವಿಳಂಬವೂ ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿಯ ದೆಹಲಿ ನಾಯಕರು ಸದ್ಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರಗಳತ್ತ ಜನವರಿವರೆಗೂ ಹೈಕಮಾಂಡ್‌ ನಾಯಕರು ಗಮನಹರಿಸದಿರುವ ಸೂಚನೆ ರಾಜ್ಯ ನಾಯಕರಿಗೆ ಸಿಕ್ಕಿದ್ದು, ರಾಜ್ಯ ಬಿಜೆಪಿಯ ಉನ್ನತ ಹುದ್ದೆಗಳಿಗೆ ನೇಮಕವಾಗದೇ ಜನರ ಮುಂದೆ ಹೋಗುವುದು ಹೇಗೆ? ಆಡಳಿತ ಪಕ್ಷವನ್ನು ಎದರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಇದರ ನುಡವೆ ಕೆಲ ತಿಂಗಳ ಹಿಂದೆ ವಿಜಯೇಂದ್ರ ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರು ಅಖೈರುಗೊಂಡಿದ್ದು, ಪ್ರಧಾನಿ ನರೇಂದ್ರಮೋದಿ ಅವರ ಅನುಮೋದನೆಯಷ್ಟೇ ಬಾಕಿಯಿದೆ ಎಂದು ಹೇಳಲಾಗಿದೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ಮಾಜಿ ಶಾಸಕ ಸಿ.ಟಿ.ರವಿ ಅವರ ಹೆಸರು ಒಕ್ಕಲಿಗ ಸಮುದಾಯದಿಂದ ಕೇಳಿಬರುತ್ತಿದ್ದು, ಒಬಿಸಿಯಿಂದ ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್‌ ಹೆಸರು ಕೇಳಿಬರುತ್ತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸಲು ಕೈಕಮಾಂಡ್‌ಗೆ ಒಲುವಿದ್ದರೂ ಪಕ್ಷದಲ್ಲಿನ ಅತೃಪ್ತರ ಅಸಮಾಧಾನ ಮತ್ತು ಬಿಜೆಪಿ ತಟಸ್ಥ ಗುಂಪಿನ ವಿರೋಧ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ಪೂರ್ಣ ಪ್ರಮಾಣದ ಅವಧಿಗೆ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಮೂರು ಗುಂಪುಗಳಾಗಿವೆ. ವಿಜಯೇಂದ್ರ ನೇಮಕದ ಪರವಾಗಿರುವ ಯಡಿಯೂರಪ್ಪ ಬಣ ಮತ್ತು ಪಕ್ಷವನ್ನು ಬಿಎಸ್‌‍ವೈ ಹಿಡಿತದಿಂದ ಹೊರತರಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿ ಅಸಮಾಧಾನಿತರ ಗುಂಪು. ಈ ಗುಂಪಿನಲ್ಲಿ ಪ್ರಮುಖವಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ರಮೇಶ್‌ ಜಾರಕಿಹೊಳಿ, ಶಾಸಕ ಬಿ.ಪಿ.ಹರೀಶ್‌, ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಇತರ ನಾಯಕರಿದ್ದಾರೆ.

ತಟಸ್ಥ ಗುಂಪಿನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಸುನೀಲ್‌ಕುಮಾರ್‌, ಸಿ.ಟಿ.ರವಿ ಸೇರಿದಂತೆ ಬಹುತೇಕ ಸಂಸದರಿದ್ದಾರೆ.ರಾಜ್ಯ ಬಿಜೆಪಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವುದಕ್ಕೆ ಅಪಸ್ವರವೆತ್ತಿರುವ ಪಕ್ಷದ ತಟಸ್ಥ ಬಣ ಮತ್ತು ಅಸಮಾಧಾನಿತ ಬಣದವರನ್ನು ವಿಶ್ವಾಸಕ್ಕೆ ತಗೆದುಕೊಂಡೇ ಹೊಸ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಬೇಕೆನ್ನುವ ಧೋರಣೆಯನ್ನ ಪಕ್ಷದ ಹೈಕಮಾಂಡ್‌ ಹೊಂದಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ವಿಜಯೇಂದ್ರ ನೇಮಕವನ್ನು ಪ್ರಬಲವಾಗಿ ವಿರೋಧಿಸಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪ್ರತ್ಯೇಕ ಸಭೆಗಳನ್ನು ನಡೆಸಿ ಮುಜುಗರ ಮಾಡುತ್ತಿದ್ದ ಹಾಗೂ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಅತೃಪ್ತ ಬಣದ ಶಾಸಕ ಬಿ.ಪಿ. ಹರೀಶ್‌ ಅವರಿಗೆ ಶಿಸ್ತುಕ್ರಮದ ನೋಟಿಸ್‌‍ ನೀಡಿ ಬಿಜೆಪಿ ಹೈಕಮಾಂಡ್‌ ಬಿಸಿ ಮುಟ್ಟಿಸಿತ್ತು. ಹೈಕಮಾಂಡ್‌ನ ಈ ಹೆಜ್ಜೆಗಳೆಲ್ಲಾ ವಿಜಯೇಂದ್ರ ಆಯ್ಕೆಗೆ ದಾರಿ ಸುಗಮಗೊಳಿಸುವುದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ನೀಡುವುದಾದರೆ ಕೇಂದ್ರ ಸಚಿವ ಸ್ಥಾನ ಬಿಟ್ಟು ಬರಲು ಸಿದ್ಧ ಎಂಬ ಸಂದೇಶವನ್ನೂ ಸಹ ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಪಕ್ಷದ ಹಿರಿಯ ಮುಖಂಡರಾದ ಸಿ.ಟಿ. ರವಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ, ಮಾಜಿ ಸಚಿವ ಸುನೀಲ್‌ ಕುಮಾರ್‌, ಮಾಜಿ ಸಿಎಂ ಬಸವರಾಜ ಬೊಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪಕ್ಷ ಅವಕಾಶ ನೀಡಿದರೆ ರಾಜ್ಯ ಬಿಜೆಪಿ ಅಧ್ಯಕ್ಷ ಗಾದಿಗೇರಲು ಒಲವನ್ನು ಹೊಂದಿದ್ದಾರೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್‌ ಈ ಎಲ್ಲಾ ಹೆಸರುಗಳನ್ನು ಪರಿಶೀಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮತ್ತು ಯಡಿಯೂರಪ್ಪನವರ ಆಶೀರ್ವಾದ ಇರುವ ವಿಜಯೇಂದ್ರ ಆಯ್ಕೆಯೇ ಸಮಯೋಚಿತ ಎಂಬ ನಿಲುವವನ್ನು ದೆಹಲಿ ವರಿಷ್ಠರು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ವಿರುದ್ಧ ಬಿಜೆಪಿ ಸಂಘಟನೆಯನ್ನು ಪ್ರಬಲವಾಗಿ ಕಟ್ಟಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ವಿಜಯೇಂದ್ರಗೆ ಇಲ್ಲ. ಬಿವೈವಿ ಹೊರತುಪಡಿಸಿ ಬೇರೆ ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಅವಶ್ಯಕತೆ ಇದೆ ಎಂದು ಅತೃಪ್ತ ಬಣ ದೆಹಲಿ ಹೈಕಮಾಂಡ್‌ಗೆ ಸ್ಪಷ್ಟಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 75 ವರ್ಷದ ಅರ್ಚಕ ಅರೆಸ್ಟ್‌

ಚೆನ್ನೈ,ಅ.10- ತಮಿಳುನಾಡಿನ ಕುಂಭಕೋಣಂ ಬಳಿಯ ದೇವಾಲಯವೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ 75 ವರ್ಷದ ಅರ್ಚಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ಆರೋಪದ ಮೇಲೆ 75 ವರ್ಷದ ದೇವಾಲಯದ ಅರ್ಚಕರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ ಇಲಾಖೆಯ ನಿಯಂತ್ರಣದಲ್ಲಿರುವ ತಿರುವಲಂಚುಳಿಯಲ್ಲಿರುವ ದೇವಾಲಯದಲ್ಲಿ ಕಳೆದ ತಿಂಗಳು ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ದೇವಾಲಯದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಆರೋಪಿ ವಿಶ್ವನಾಥ ಅಯ್ಯರ್‌ ಅವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್‌ 8 ರಂದು, 13 ವರ್ಷದ ಬಾಲಕಿ ತನ್ನ ಕುಟುಂಬದೊಂದಿಗೆ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದಳು. ಹುಂಡಿ (ಕಾಣಿಕೆ ಪೆಟ್ಟಿಗೆ) ಪ್ರದೇಶಕ್ಕೆ ಒಬ್ಬಂಟಿಯಾಗಿ ಕಾಣಿಕೆ ನೀಡಲು ಹೋದಾಗ, ವೃದ್ಧ ಅರ್ಚಕ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿವರವಾದ ವಿಚಾರಣೆಯ ನಂತರ, ಆರೋಪಗಳು ನಿಜವೆಂದು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅರ್ಚಕರನ್ನು ಬಂಧಿಸಿದ್ದಾರೆ.

ಘಟನೆಯನ್ನು ದೃಢಪಡಿಸುತ್ತಾ, ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಇದು ಇತ್ತೀಚೆಗೆ ದೇವಸ್ಥಾನದಲ್ಲಿ ಸಂಭವಿಸಿದೆ. ವಿಚಾರಣೆಯ ನಂತರ, ಆರೋಪಗಳು ನಿಜವೆಂದು ನಾವು ಕಂಡುಕೊಂಡಿದ್ದೇವೆ ಮತ್ತು ಅವನನ್ನು ಬಂಧಿಸಿದ್ದೇವೆ ಎಂದು ಹೇಳಿದರು.

ಕೇರಳದ ಖ್ಯಾತ ನಟರ ವಿರುದ್ಧ ತನಿಖೆ ; ಕೇಂದ್ರ ಸಚಿವ ಸುರೇಶ್‌ ಗೋಪಿ

ಪಾಲಕ್ಕಾಡ್‌, ಅ. 10 (ಪಿಟಿಐ) ಶಬರಿಮಲೆ ಚಿನ್ನದ ಲೇಪನ ವಿವಾದದ ಗಮನ ಬೇರೆಡೆ ಸೆಳೆಯಲು ಯತ್ನಿಸಿದ ಕೇರಳದ ಖ್ಯಾತ ನಟರ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಸುರೇಶ್‌ ಗೋಪಿ ಹೇಳಿದ್ದಾರೆ.

ಪಾಲಕ್ಕಾಡ್‌ನ ಅಕಥೇಥರದಲ್ಲಿ ಸಾರ್ವಜನಿಕ ಸಂವಾದದ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಗೋಪಿ, ಶಬರಿಮಲೆ ಚಿನ್ನದ ಸಮಸ್ಯೆಯನ್ನು ತಗ್ಗಿಸಲು ಇಬ್ಬರು ಚಲನಚಿತ್ರ ನಟರನ್ನು ಕೇರಳದ ಸಾರ್ವಜನಿಕರ ಮುಂದೆ ತೀರ್ಪುಗಾಗಿ ಇಡಲಾಗಿದೆ ಎಂದು ಹೇಳಿದರು. ಆದಾಗ್ಯೂ, ಅವರು ನಟರ ಅಥವಾ ಪ್ರಕರಣದ ಹೆಸರನ್ನು ನಿರ್ದಿಷ್ಟಪಡಿಸಲಿಲ್ಲ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತಮ್ಮ ತನಿಖೆಯನ್ನು ತೀವ್ರಗೊಳಿಸುತ್ತಿವೆ. ಕೇಂದ್ರ ಸಚಿವರಾಗಿ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಬಾರದು ಎಂದು ಅವರು ಹೇಳಿದರು.

ಇಂತಹ ಪ್ರಕರಣಗಳು ಅಸಾಮಾನ್ಯವಲ್ಲ ಎಂದು ಗೋಪಿ ಹೇಳಿದರು. ಸರ್ಕಾರವನ್ನು ವಿಚಾರಣೆಗೆ ಒಳಪಡಿಸುವ ಘಟನೆ ನಡೆದಾಗಲೆಲ್ಲಾ, ಪೊಲೀಸ್‌‍ ಕ್ರಮದ ಮೂಲಕ ಹೊಳೆಯುವ ವ್ಯಕ್ತಿಗಳನ್ನು ಕಳಂಕಗೊಳಿಸುವ ಪ್ರವೃತ್ತಿ ಇರುತ್ತದೆ. ಅಂತಹ ಕಥೆಗಳು ಇನ್ನಷ್ಟು ಬರುತ್ತವೆ ಎಂದು ಅವರು ಟೀಕಿಸಿದರು.

ನಟ-ರಾಜಕಾರಣಿ ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಇದೇ ರೀತಿಯ ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಲಪ್ಪುಳದಲ್ಲಿ ಆರಂಭವಾಗಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಕುರಿತು ಅವರ ಹಿಂದಿನ ಕೆಲವು ಹೇಳಿಕೆಗಳು ತೀವ್ರ ರಾಜಕೀಯ ಟೀಕೆಗೆ ಗುರಿಯಾಗಿದ್ದವು.

ಭೂತಾನ್‌ನಿಂದ ಐಷಾರಾಮಿ ಕಾರುಗಳ ಕಳ್ಳಸಾಗಣೆ ಆರೋಪದ ಮೇಲೆ ನಟರಾದ ದುಲ್ಕರ್‌ ಸಲಾನ್‌, ಪೃಥ್ವಿರಾಜ್‌ ಸುಕುಮಾರನ್‌ ಮತ್ತು ಅಮಿತ್‌ ಚಕಲಕ್ಕಲ್‌ ಅವರು ಕಸ್ಟಮ್ಸೌ ಮತ್ತು ಇಡಿ ತನಿಖೆಗೆ ಒಳಗಾಗಿದ್ದಾರೆ.

ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ದೇವೇಗೌಡರು

ಬೆಂಗಳೂರು, ಅ.10-ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಆರೋಗ್ಯವಾಗಿದ್ದು, ಇನ್ನೆರಡು ದಿನಗಳಲ್ಲಿ ಡಿಸ್‌‍ಚಾರ್ಜ್‌ ಆಗಲಿದ್ದಾರೆ.

ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡರನ್ನು ನಿನ್ನೆ ತೀವ್ರ ನಿಗಾಘಟಕದಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಗೌಡರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ತಮ ತಂದೆಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಆತಂಕಪಡುವ ಅಗತ್ಯವಿಲ್ಲ. ತಂದೆಯವರಿಗೆ ಆರೋಗ್ಯದ ಸಮಸ್ಯೆ ಇಲ್ಲ. ಕಳೆದ ಮೂರು ದಿನಗಳಿಂದ ವೈದ್ಯರು ಚಿಕಿತ್ಸೆನೀಡಿದ್ದಾರೆ. ದೇವರ ಮತ್ತು ಜನತೆಯ ಆಶೀರ್ವಾದದಿಂದ ಆರೋಗ್ಯವಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಫಿಲಿಪೈನ್ಸ್ ಸಮುದ್ರದಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ

ಮನಿಲಾ, ಅ.10 – ದ್ವೀಪರಾಷ್ಟ್ರ ಫಿಲಿಪೈನ್‌ನ ದಕ್ಷಿಣ ಪ್ರಾಂತ್ಯದಲ್ಲಿ ಬೆಳಿಗ್ಗೆ ರಿಕ್ಟರ್‌ ಮಾಪನದಲ್ಲಿ 7.6 ತೀವ್ರತೆಯ ಭೂಕಂಪನ ಸಂಭವಿಸಿದ್ದು ,ಅಪಾಯಕಾರಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ದಾವೊ ಓರಿಯೆಂಟಲ್‌ ಪ್ರಾಂತ್ಯದ ಮನಾಯ್‌ ಪಟ್ಟಣದ ಆಗ್ನೇಯಕ್ಕೆ ಸುಮಾರು 62 ಕಿಲೋಮೀಟರ್‌ ದೂರದ ಸಮುದ್ರದಲ್ಲಿ ಕೇಂದ್ರೀಕೃತವಾಗಿರುವ ಮತ್ತು 10 ಕಿಲೋಮೀಟರ್‌ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ಹೊನೊಲುಲುವಿನಲ್ಲಿರುವ ಪೆಸಿಫಿಕ್‌ ಕಡಲ ತೀರದ ಪ್ರದೇಶಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.ಅಪಾಯಕಾರಿ ಅಲೆಗಳು ಅಪದಪಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತುರ್ತು ಕಾರ್ಯಕರ್ತರು ಕರಾವಳಿ ಪ್ರದೇಶಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುತ್ತಿದ್ದಾರೆ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ.

ಫಿಲಿಪೈನ್‌್ಸಅಧ್ಯಕ್ಷ ಫರ್ಡಿನಾಂಡ್‌ ಮಾರ್ಕೋಸ್‌‍ ಅವರು ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್ ನ ಕೆಲವು ಕರಾವಳಿ ಪ್ರದೇಶಗಳಲ್ಲಿ ಜನರ ಸ್ಥಳಾಂತರಿಸುವಿಕೆಗೆ ಕರೆ ನೀಡಿದ್ದಾರೆ. ಶೋಧ ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಸುರಕ್ಷಿತವಾದ ತಕ್ಷಣ ನಿಯೋಜಿಸಲಾಗುವುದು ಎಂದು ಅವರು ಫೇಸ್‌‍ಬುಕ್‌ನಲ್ಲಿ ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಸಮುದ್ರದ ಸುನಾಮಿ ಅಲೆ ಅಪ್ಪಳಿಸಿದೆ ಎಂದು ಭೂಕಂಪ ಮತ್ತು ಸುನಾಮಿ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.ನಾವು ಇದನ್ನು ಸಣ್ಣ ಸುನಾಮಿ ಎಂದು ಕರೆಯುತ್ತೇವೆ ಇದು ವಿನಾಶದ ದೊಡ್ಡ ಅಲೆಗಳಲ್ಲ ಹೇಳಿದರು.ಇಂಡೋನೇಷ್ಯಾದ ಭೂಕಂಪಶಾಸ್ತ್ರ ಸಂಸ್ಥೆಯ ದತ್ತಾಂಶದ ಆಧಾರದ ಮೇಲೆ, ಉತ್ತರ ಸುಲವೇಸಿಯ ತಲಾಡ್‌ ದ್ವೀಪಗಳಲ್ಲಿಸುನಾಮಿ ಅಲೆಗಳು ದಾಖಲಾಗಿವೆ.

ಬಿಹಾರ ಚುನಾವಣೆ : ಬುರ್ಖಾಧಾರಿ ಮತದಾರರ ಪರಿಶೀಲನೆಗೆ ಅಂಗನವಾಡಿ ಕಾರ್ಯಕರ್ತೆಯರ ನಮಕ

ನವದೆಹಲಿ, ಅ.10 (ಪಿಟಿಐ) ಬುರ್ಖಾ ಅಥವಾ ಪರ್ದಾ ಧರಿಸಿದ ಮಹಿಳಾ ಮತದಾರರ ಗೌರವಯುತ ಗುರುತಿಸುವಿಕೆಗಾಗಿ ಬಿಹಾರದ ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಪುರ್ದಾನಶೀನ್‌ (ಬುರ್ಖಾ ಅಥವಾ ಪರ್ದಾ ಧರಿಸಿದ) ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಮಹಿಳಾ ಮತಗಟ್ಟೆ ಅಧಿಕಾರಿಗಳು ಅಥವಾ ಸಹಾಯಕರ ಸಮ್ಮುಖದಲ್ಲಿ ಅವರ ಗೌರವಯುತ ಗುರುತಿನ ಚೀಟಿಗಾಗಿ ಮತದಾನ ಕೇಂದ್ರಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಮತ್ತು ಅವರ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಚುನಾವಣಾ ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು, ಬುರ್ಖಾ ಧರಿಸಿದ ಮತದಾರರ ಗುರುತನ್ನು ಪರಿಶೀಲಿಸಲು ಸಹಾಯ ಮಾಡಲು ಬಿಹಾರದ ಎಲ್ಲಾ ಮತಗಟ್ಟೆಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಜರಿರುತ್ತಾರೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯ ಸಂದರ್ಭದಲ್ಲಿ ಘುಂಗತ್‌ ಮತ್ತು ಬುರ್ಖಾ ಧರಿಸಿದ ಮಹಿಳೆಯರ ಕುರಿತ ಪ್ರಶ್ನೆಗೆ ಉತ್ತರಿಸಿದ ಕುಮಾರ್‌ ಅವರು, ಮತಗಟ್ಟೆಗಳ ಒಳಗೆ ಗುರುತಿನ ಪರಿಶೀಲನೆಯ ಕುರಿತು ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಗಳಿವೆ ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಹೇಳಿದರು.

ಬುರ್ಖಾ ಧರಿಸಿದ ಮಹಿಳೆಯರ ಗುರುತನ್ನು ಪರಿಶೀಲಿಸಲು ನಮ್ಮ ಅಂಗನವಾಡಿ ಕಾರ್ಯಕರ್ತೆಯರನ್ನು ಎಲ್ಲಾ ಮತಗಟ್ಟೆಗಳಲ್ಲಿ ನಿಯೋಜಿಸಲಾಗುವುದು. ಆಯೋಗದ ಮಾರ್ಗಸೂಚಿಗಳು ಇದರ ಬಗ್ಗೆ ಬಹಳ ಸ್ಪಷ್ಟವಾಗಿವೆ – ಮತದಾನ ಕೇಂದ್ರದೊಳಗೆ ಗುರುತನ್ನು ಹೇಗೆ ಪರಿಶೀಲಿಸಲಾಗುತ್ತದೆ ಮತ್ತು ಅವರನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಎಂದು ಅವರು ಹೇಳಿದರು.

ಚುನಾವಣಾ ಪ್ರಾಧಿಕಾರವು 90,712 ಅಂಗನವಾಡಿ ಸೇವಾಕರ್ತರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಹೇಳಿತ್ತು.ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್‌ ಜೈಸ್ವಾಲ್‌ ಅವರು, ಆಯೋಗವನ್ನು ಬುರ್ಖಾ ಧರಿಸಿ ಬೂತ್‌ಗಳಿಗೆ ಬರುವ ಮಹಿಳೆಯರ ಮುಖಗಳನ್ನು ಮತದಾರರ ಕಾರ್ಡ್‌ಗಳೊಂದಿಗೆ ತಾಳೆ ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ – ನವೆಂಬರ್‌ 6 ಮತ್ತು 11 – ಆದರೆ ಮತ ಎಣಿಕೆ ನವೆಂಬರ್‌ 14 ರಂದು ನಡೆಯಲಿದೆ.

ಭಾರತೀಯರಿಗೆ ಸೇರಿದ ಹಡಗುಗಳ ಮೇಲೆ ನಿರ್ಬಂಧ ವಿಧಿಸಿದ ಅಮೆರಿಕ

ವಾಷಿಂಗ್ಟನ್‌,ಅ. 10 (ಪಿಟಿಐ) ಇರಾನ್‌ ಇಂಧನ ಮಾರಾಟವನ್ನು ಸುಗಮಗೊಳಿಸಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರು ಭಾರತೀಯ ಪ್ರಜೆಗಳು ಸೇರಿದಂತೆ 50 ಕ್ಕೂ ಹೆಚ್ಚು ಸಂಸ್ಥೆಗಳು, ಜನರು ಮತ್ತು ಹಡಗುಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ಈ ನಿರ್ಬಂಧಗಳನ್ನು ಘೋಷಿಸಿದೆ. ಭಾರತೀಯ ಪ್ರಜೆಗಳು ಒಟ್ಟಾಗಿ ಶತಕೋಟಿ ಡಾಲರ್‌ ಮೌಲ್ಯದ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿಗೆ ಅನುವು ಮಾಡಿಕೊಟ್ಟಿದ್ದಾರೆ, ಇರಾನ್‌ ಆಡಳಿತಕ್ಕೆ ನಿರ್ಣಾಯಕ ಆದಾಯವನ್ನು ಒದಗಿಸಿದ್ದಾರೆ ಮತ್ತು ಅಮೆರಿಕಕ್ಕೆ ಬೆದರಿಕೆ ಹಾಕುವ ಭಯೋತ್ಪಾದಕ ಗುಂಪುಗಳಿಗೆ ಅದರ ಬೆಂಬಲವನ್ನು ಒದಗಿಸಿದ್ದಾರೆ ಎಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇರಾನ್‌ನ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್‌ ರಫ್ತುಗಳನ್ನು ನಿಗ್ರಹಿಸಲು ಇಲಾಖೆಯ ಪ್ರಯತ್ನಗಳ ಭಾಗವಾಗಿ ಈ ನಿರ್ಬಂಧಗಳು ಇವೆ.ಖಜಾನೆ ಇಲಾಖೆಯು ಇರಾನ್‌ನ ಇಂಧನ ರಫ್ತು ಯಂತ್ರದ ಪ್ರಮುಖ ಅಂಶಗಳನ್ನು ಕಿತ್ತುಹಾಕುವ ಮೂಲಕ ಇರಾನ್‌ನ ನಗದು ಹರಿವನ್ನು ಕುಗ್ಗಿಸುತ್ತಿದೆ ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಅವರನ್ನು ಉಲ್ಲೇಖಿಸಿ ಅದು ಹೇಳಿದೆ.

ನಿಷೇಧಿತ ಭಾರತೀಯ ಪ್ರಜೆಗಳಲ್ಲಿ ಮಾರ್ಷಲ್‌ ದ್ವೀಪಗಳಲ್ಲಿರುವ ಬರ್ತಾ ಶಿಪ್ಪಿಂಗ್‌ ಇಂಕ್‌ ಮಾಲೀಕ ವರುಣ್‌ ಪುಲಾ ಸೇರಿದ್ದಾರೆ, ಅವರು ಕೊಮೊರೊಸ್‌‍ ಧ್ವಜ ಹೊಂದಿರುವ ಹಡಗಿನ ಮಾಲಿಕತ್ವ ಹೊಂದಿದ್ದಾರೆ ಮತ್ತು ನಿರ್ವಹಿಸುತ್ತಿದ್ದಾರೆ.ಈ ಹಡಗು ಜುಲೈ 2024 ರಿಂದ ಚೀನಾಕ್ಕೆ ಸುಮಾರು ನಾಲ್ಕು ಮಿಲಿಯನ್‌ ಬ್ಯಾರೆಲ್‌ ಇರಾನಿನ ಎಲ್‌ಪಿಜಿಯನ್ನು ಸಾಗಿಸಿದೆ ಎಂದು ಅಮೆರಿಕದ ಹೇಳಿಕೆ ತಿಳಿಸಿದೆ.

ಅನುಮೋದಿತ ಮತ್ತೊಬ್ಬ ಭಾರತೀಯ ಪ್ರಜೆ ವೆಗಾ ಸ್ಟಾರ್‌ ಶಿಪ್‌ ಮ್ಯಾನೇಜ್ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಅನ್ನು ಹೊಂದಿದ್ದಾರೆ. ಕಂಪನಿಯು ಕೊಮೊರೊಸ್‌‍ ಧ್ವಜ ಹೊಂದಿರುವ ಮತ್ತೊಂದು ಹಡಗಿನ ಪಿಎಂಐಆರ್‌ಅನ್ನು ಹೊಂದಿದೆ ಮತ್ತು ನಿರ್ವಹಿಸುತ್ತಿದೆ, ಇದು ಜನವರಿ 2025 ರಿಂದ ಪಾಕಿಸ್ತಾನಕ್ಕೆ ಇರಾನಿನ ಮೂಲದ ಎಲ್‌ಪಿಜಿಯನ್ನು ಸಾಗಿಸುತ್ತಿದೆ.

ಯುಎಸ್‌‍ನಲ್ಲಿರುವ ಅಥವಾ ಯುಎಸ್‌‍ ವ್ಯಕ್ತಿಗಳ ಸ್ವಾಧೀನ ಅಥವಾ ನಿಯಂತ್ರಣದಲ್ಲಿರುವ ಎಲ್ಲಾ ನಿಯೋಜಿತ ಅಥವಾ ನಿರ್ಬಂಧಿಸಲಾದ ವ್ಯಕ್ತಿಗಳ ಆಸ್ತಿಯಲ್ಲಿನ ಆಸ್ತಿ ಮತ್ತು ಹಿತಾಸಕ್ತಿಗಳನ್ನು ನಿರ್ಬಂಧಿಸಲಾಗಿದೆಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.ಒಂದು ಅಥವಾ ಹೆಚ್ಚಿನ ನಿರ್ಬಂಧಿತ ವ್ಯಕ್ತಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ, ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ, ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಿನ ಒಡೆತನದ ಯಾವುದೇ ಘಟಕಗಳನ್ನು ಸಹ ನಿರ್ಬಂಧಿಸಲಾಗಿದೆ.

ಸಮವಸ್ತ್ರದಲ್ಲಿ ತಿರುಗಾಡುತ್ತಿದ್ದ ನಕಲಿ ಸೇನಾಧಿಕಾರಿ ಬಂಧನ

ಹರಿದ್ವಾರ, ಅ. 9 (ಪಿಟಿಐ) ಉತ್ತರಾಖಂಡದ ಹರಿದ್ವಾರದ ರೂರ್ಕಿ ಮಿಲಿಟರಿ ಕಂಟೋನ್ಮೆಂಟ್‌ನಲ್ಲಿ ಮಿಲಿಟರಿ ಸಮವಸ್ತ್ರದಲ್ಲಿ ತಿರುಗಾಡುತ್ತಿದ್ದ ನಕಲಿ ಸೇನಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೇನಾ ಗುಪ್ತಚರ, ಸ್ಥಳೀಯ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ನಕಲಿ ಸೇನಾ ಸಿಬ್ಬಂದಿಯಿಂದ 18 ಬ್ಯಾಂಕ್‌ ಡೆಬಿಟ್‌ ಕಾರ್ಡ್‌ಗಳು, ಸೇನಾ ಸಮವಸ್ತ್ರ, ನಾಮಫಲಕ, ನಕಲಿ ಸೇನಾ ಗುರುತಿನ ಚೀಟಿ ಮತ್ತು ನಕಲಿ ಸೇರ್ಪಡೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇನಾ ಸಂಕೀರ್ಣಕ್ಕೆ ಅವರ ಭೇಟಿಯ ಹಿಂದಿನ ಉದ್ದೇಶವನ್ನು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.ರೂರ್ಕಿ ಮಿಲಿಟರಿ ಕಂಟೋನ್ಮೆಂಟ್‌ ಸಂಕೀರ್ಣದಲ್ಲಿ ಆರೋಪಿಗಳ ಚಟುವಟಿಕೆಗಳು ಅನುಮಾನಾಸ್ಪದವಾಗಿ ಕಂಡುಬಂದ ನಂತರ, ಸೇನಾ ಗುಪ್ತಚರ ಇಲಾಖೆ ರೂರ್ಕಿ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಹರಿದ್ವಾರ ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಎಸ್‌‍ಪಿ) ಪ್ರಮೋದ್‌ ದೋಭಾಲ್‌ ತಿಳಿಸಿದ್ದಾರೆ.

ಸೇನಾ ಗುಪ್ತಚರ, ರೂರ್ಕಿ ಪೊಲೀಸರು, ರೂರ್ಕಿ ಕ್ರಿಮಿನಲ್‌ ಗುಪ್ತಚರ ಘಟಕ ಮತ್ತು ರೂರ್ಕಿ ಸ್ಥಳೀಯ ಗುಪ್ತಚರ ಘಟಕದ ಜಂಟಿ ತಂಡವು ಸೇನಾ ಕಂಟೋನ್ಮೆಂಟ್‌ನ ಎಂಇಎಸ್‌‍ ಗೇಟ್‌ ಬಳಿ ಅವರನ್ನು ಬಂಧಿಸಿದೆ ಎಂದು ಅವರು ಹೇಳಿದರು.ಆತನನ್ನು ರಾಜಸ್ಥಾನದ ಜುನ್ಜುನು ಜಿಲ್ಲೆಯ ನವಲ್‌ಗಢ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕೊಲ್ಸಿಯಾ ಗ್ರಾಮದ ನಿವಾಸಿ ಸುರೇಂದ್ರ ಕುಮಾರ್‌ ಎಂದು ಗುರುತಿಸಲಾಗಿದೆ.