Home Blog Page 64

BREAKING : ಬಿಹಾರ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್, 2 ಹಂತದಲ್ಲಿ ಮತದಾನ

ನವದೆಹಲಿ,ಅ.06 : ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ಚುನಾವಣಾ ಆಯೋಗವು ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. 6 ನವೆಂಬರ್‌ ರಿಂದ 11 ನವೆಂಬರ್‌ವರೆಗೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ನವೆಂಬರ್‌ 14ರಂದು ಫಲಿತಾಂಶ ಘೋಷಣೆಯಾಗಲಿದೆ. ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ಮೊದಲು ಫಲಿತಾಂಶಗಳನ್ನು ಘೋಷಿಸಲಾಗುತ್ತದೆ. ಪ್ರಸ್ತುತ ಬಿಹಾರ ವಿಧಾನಸಭೆಯ ಅಧಿಕಾರಾವಧಿಯು ನವೆಂಬರ್ 22, 2025 ರಂದು ಕೊನೆಗೊಳ್ಳುತ್ತದೆ, ಇದು ವರ್ಷ ಮುಗಿಯುವ ಮೊದಲು ಕೊನೆಯ ಪ್ರಮುಖ ರಾಜ್ಯ ಚುನಾವಣೆಯಾಗಿದೆ.

ಈ ಕುರಿತು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯಕ್ತ ಜ್ಞಾನೇಶ್‌ ಕುಮಾರ್‌, ಬಿಹಾರ ವಿಧಾನಸಭೆ ಚುನಾವಣೆಗೆ ಆಯೋಗ ಸಂಪೂರ್ಣ ಸಜ್ಜಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ SIR ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ಚಿಇಸಿ ಜ್ಞಾನೇಶ್‌ ಕುಮಾರ್‌, ಇದಕ್ಕಾಗಿ ಪ್ರತಿಪಕ್ಷಗಳ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ನ ಆರೋಪಗಳ ವಿರುದ್ಧ ತೊಡೆತಟ್ಟಿದ್ದಾರೆ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ಬಾಹ್ಯ ಒತ್ತಡವಿಲ್ಲದೇ ಕಾರ್ಯನಿರ್ವಹಿಸುತ್ತಿರುವುದಾಗಿ ಮುಖ್ಯ ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಮತದಾನ ವೇಳಾಪಟ್ಟಿ
ಹಂತ 1: ನವೆಂಬರ್ 6, 2025
ಹಂತ 2: ನವೆಂಬರ್ 11, 2025

ಮತ ಎಣಿಕೆ
ನವೆಂಬರ್ 14, 2025


ಜವಳಿ ಮತ್ತು ಕೈಮಗ್ಗ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಚೇತನ ಗೌಡ ಅಧಿಕಾರ ಸ್ವೀಕಾರ

ಬೆಂಗಳೂರು : ಕರ್ನಾಟಕ ಜವಳಿ ಮತ್ತು ಕೈಮಗ್ಗ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಚೇತನ ಗೌಡರವರಿಗೆ ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರರು ಹಾಗು ಕೆಪಿಸಿಸಿ ನೀತಿ, ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಆದರ್ಶ ಹುಂಚದಕಟ್ಟೆ ಅವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ಸಿನ ಮಾಜಿ ರಾಷ್ಟ್ರಾಧ್ಯಕ್ಷರಾದ ಶ್ರೀನಿವಾಸ್ ಬಿ.ವಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಧುಸೂಧನ್ ಸಿ,ಜಿ ತೀರ್ಥಹಳ್ಳಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪೂರ್ಣೇಶ್ ಕೆಳಕೆರೆ, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ ದಂಡಿನಮಕ್ಕಿ ಹಾಗು ಶ್ರಂಗೇರಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ದುರ್ಗಾ ಚರಣ್ ಗೌಡ ಜೊತೆಗಿದ್ದರು.

ಮಾಗಡಿ ತಾಲ್ಲೂಕು ಪುರಸಭೆ ಮುಂಭಾಗದಲ್ಲಿ 400ಮರಗಳ ಮಾರಣಹೋಮಕ್ಕೆ ಖಂಡನೆ

ಬೆಂಗಳೂರು, ಅ. 6– ಮಾಗಡಿ ತಾಲ್ಲೂಕು ಪುರಸಭೆ ಮುಂಭಾಗದಲ್ಲಿ ಇರುವ ಪೂಜ್ಯ ಕೆಂಪೇಗೌಡರ ಪ್ರತಿಮೆ ಉಳಿವಿಗಾಗಿ ಮತ್ತು ಪ್ರತಿಮೆ ಸುತ್ತ ಮುತ್ತಲು ಇರುವ 400ಕ್ಕೂ ಹೆಚ್ಚು ಮರಗಳ ಮರಣಹೋಮ ಮಾಡುಲು ಹೊರಟಿರುವ ಪುರಸಭೆ ಮತ್ತು ಸ್ಥಳೀಯ ಶಾಸಕರ ನಡವಳಿಕೆಗೆ ಶ್ರೀ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್‌.ಎಂ.ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಾಡು ಕಟ್ಟಿದ ಕೆಂಪೇಗೌಡರಿಗೆ ಅವರ ಪ್ರತಿಮೆ ಸ್ಥಳವಾಕಾಶ ಇಲ್ಲದಂತೆ ಆಗಿದೆ ಎಂಬುದು ಶೋಚನೀಯ ಸಂಗತಿ. ಕೆಂಪೇಗೌಡರು ಪ್ರತಿಮೆ ಕಳೆದ 22ವರ್ಷಗಳ ಹಿಂದೆ ಪುರಸಭೆ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರತಿವರ್ಷ ಕೆಂಪೇಗೌಡ ಜನದಿನಾಚರಣೆ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.

ಅಭಿವೃದ್ಧಿಯ ಹೆಸರಿನಲ್ಲಿ ಪೂಜ್ಯ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮತ್ತು ಅದರ ಸುತ್ತಮುತ್ತಲ 400 ಮರ ಗಿಡಗಳಗಳನ್ನು ಕಡಿಯಲಾಗುತ್ತಿದೆ. ಮಾಗಡಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರು, ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಆಡಳಿತ ಮಾಗಡಿ ಕೆಂಪೇಗೌಡರರ ಕುರಿತು ಅಭಿಮಾನವಿಲ್ಲದ ಶೂನ್ಯರು ಇವರು ಎಂದು ಕಿಡಿಕಾರಿದರು.

ಕೋಟೆ ಕಂದಕ ಮುಚ್ಚುವ ಕಾರ್ಯ ಮಾಡುವ ಪ್ರಯತ್ನ ಮಾಡಿದರು ಇದೀಗ ಕೆಂಪೇಗೌಡರ ಪ್ರತಿಮೆ ತೆಗೆಯುವ ಪ್ರಯತ್ನ, 400ಮರಗಳ ತೆರವು ಕಾರ್ಯಕ್ಕೆ ತಡೆ ನೀಡಬೇಕು ಕೋರ್ಟ್‌ ನಲ್ಲಿ ಕೇಸ್‌‍ ದಾಖಲಿಸಲಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಜನರ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡಬಾರದು ಹಾಗೂ ಮರಗಳನ್ನು ಉಳಿಸಬೇಕು ಎಂದು ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಹೇಳಿದರು. ದಲಿತ ಸಮುದಾಯದ ಮುಖಂಡರಾದ ಜಯರಾಮಯ್ಯ, ಹಿರಿಯ ಪತ್ರಕರ್ತರಾದ ಕುಮಾರ್‌ ರವರು ಭಾಗವಹಿಸಿದ್ದರು.

ನಿವೃತ್ತ ಶಾಲಾ ಶಿಕ್ಷಕಿಗೆ 2.3 ಕೋಟಿ ವಂಚಿಸಿದ ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಿತನಾದ ವ್ಯಕ್ತಿ

ಬೆಂಗಳೂರು,ಅ.6- ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಿತನಾದ ವ್ಯಕ್ತಿಯಿಂದ 2.3 ಕೋಟಿ ವಂಚನೆಗೊಳಗಾಗಿರುವ ಘಟನೆ ನಡೆದಿದೆ. ಸುಮಾರು 59 ವರ್ಷದ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಆನ್‌ಲೈನ್‌ ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ವಾಸಿಸುತ್ತಿದ್ದ ಈ ಮಹಿಳೆ, 2019 ರಲ್ಲಿ ವೈವಾಹಿಕ ವೆಬ್‌ಸೈಟ್‌ನಲ್ಲಿ ಒಡನಾಟ ಪಡೆಯುವ ನಿಟ್ಟಿನಲ್ಲಿ ನೋಂದಾಯಿಸಿಕೊಂಡರು.

ಕಳೆದ 2019 ಡಿಸೆಂಬರ್‌ನಲ್ಲಿ ಆಹಾನ್‌ ಕುಮಾರ್‌ಎಂಬ ಹೆಸರಿನ ವ್ಯಕ್ತಿಯೊಬ್ಬರು ಆಕೆಯನ್ನುಸಂಪರ್ಕಿಸಿದ್ದ. ನಾನು ಅಟ್ಲಾಂಟಾದಲ್ಲಿ ವಾಸವಿದ್ದು,ಇಸ್ರೇಲಿ ತೈಲ ಕಂಪನಿಯೊಂದರಲ್ಲಿ ಡ್ರಿಲ್ಲಿಂಗ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದು,ಭಾರತೀಯ ಮೂಲದ ಅಮೆರಿಕ ಪ್ರಜೆ ಎಂದು ಹೇಳಿಕೊಂಡು, ಕಪ್ಪು ಸಮುದ್ರದಲ್ಲಿ ನೆಲೆಸಿರುವುದಾಗಿ ತಿಳಿಸಿ ಫೋಟೋ ಇಲ್ಲದ ಗುರುತಿನ ಚೀಟಿಯನ್ನು ಹಂಚಿಕೊಂಡಿದ್ದ. ಕಾಲಾನಂತರದಲ್ಲಿ, ಅವರ ವರ್ಚುವಲ್‌ ಸ್ನೇಹವು ನಿಜವಾದ ಭಾವನಾತ್ಮಕ ಬಂಧವೆಂದು ಮದುವೆಯಾಗುವುದಾಗಿ ಆತ ನಂಬಿಸಿದ್ದಾನೆ. ಆಗಾಗ್ಗೆ ಅವಳನ್ನು ತನ್ನ ಹೆಂಡತಿ ಎಂದು ಕರೆಯುತ್ತಿದ್ದನು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ನಿಯಮಿತ ಸಂಭಾಷಣೆಗಳು ಅಮೆರಿಕದ ಸಂಖ್ಯೆಯಿಂದ ವಾಟ್ಸಾಪ್‌ ಕರೆಗಳ ಮೂಲಕ ನಡೆಯುತ್ತಿದ್ದವು ಮತ್ತು ತನ್ನ ಯೋಜನೆಯನ್ನು ಮುಗಿಸಿದ ನಂತರ ಶೀಘ್ರದಲ್ಲೇ ಭಾರತಕ್ಕೆ ಹಿಂತಿರುಗುವುದಾಗಿ ಪದೇ ಪದೇ ಹೇಳಿಕೊಂಡನು.

2020 ರ ಆರಂಭದಲ್ಲಿ, ಆಹಾನ್‌ಕುಮಾರ್‌ ತನ್ನ ಒಪ್ಪಂದದ ಪಾವತಿಗಾಗಿ ಕಾಯುತ್ತಿದ್ದು ಸಂಕಷ್ಟದಲ್ಲಿರುವುದಾಗಿ ಹೇಳಿದ್ದ. ನಂತರ ಆರ್ಥಿಕ ಸಹಾಯವನ್ನು ಕೋರಿದಾಗ ಅವನ ಕಥೆಯನ್ನು ನಂಬಿದ ಮಹಿಳೆ ಮೊದಲು ಮಾಧವಿ ಎಂಬ ಹೆಸರಿನ ಖಾತೆಗೆ ಹಣವನ್ನು ವರ್ಗಾಯಿಸಲಾಗಿತ್ತು ಕಳೆದ ನಾಲ್ಕು ವರ್ಷಗಳಲ್ಲಿ ವೈದ್ಯಕೀಯ ಸಮಸ್ಯೆಗಳು ಮತ್ತು ಕೆಲಸದ ವೇಳೆ ದಂಡದಂತಹ ನೆಪ ಹೇಳಿ ಹಣ ಪಡೆದಿದ್ದಾನೆ .

ನವೆಂಬರ್‌ 2024 ರ ಹೊತ್ತಿಗೆ, ಮಹಿಳೆ ತನ್ನ ಉಳಿತಾಯದ ಹಣ ಖಾಲಿ ಮಾಡಿ ಅವನಿಗೆ ಸಹಾಯ ಮಾಡುವುದನ್ನು ಮುಂದುವರಿಸಲು ಇತರರಿಂದ ಹಣವನ್ನು ಸಾಲ ಪಡೆದಿದ್ದರು .
ನಂತರ ಮಹಿಳೆ ಇನ್ನು ಹೆಚ್ಚಿನ ಹಣವನ್ನು ಪಾವತಿಸಲು ನಿರಾಕರಿಸಿದಾಗ, ಆಹಾನ್‌ ಸಂಪರ್ಕವನ್ನು ಕಡಿತಗೊಳಿಸಲು ಪ್ರಾರಂಭಿಸಿದ್ದಾನೆ. ಇದರಿಂದ ತಾನು ಮೋಸ ಹೋಗಿರುವುದು ಅರಿತು ಕೊನೆಗೆ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪೂರ್ವ ವಿಭಾಗ ಸಿಇಎನ್‌ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕುಡಿಯಲು ನೀರು ಕೊಡದ ಪತ್ನಿಯನ್ನು ಲಟ್ಟಣಿಗೆಯಿಂದ ಹೊಡೆದು ಕೊಂದ ಪತಿ

ಬೆಂಗಳೂರು,ಅ.6- ಕುಡಿಯಲು ನೀರು ಕೊಡದ ಪತ್ನಿಗೆ ಲಟ್ಟಣಿಗೆ ಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಚೊಕ್ಕಸಂದ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಪ್ರೀತಿಸಿಂಗ್‌ (26) ಕೊಲೆಯಾದ ಗೃಹಿಣಿ. ಆರೋಪಿ ಪತಿ ಚೋಟಾಲಾಲ್‌ಸಿಂಗ್‌ (28) ನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ಮೂಲದವರಾದ ಪ್ರೀತಿಸಿಂಗ್‌ ಹಾಗೂ ಚೋಟಾಲಾಲ್‌ಸಿಂಗ್‌ ದಂಪತಿ ಚೊಕ್ಕಸಂದ್ರದಲ್ಲಿ ಬಂದು ನೆಲೆಸಿದ್ದರು. ದಂಪತಿಗೆ ಇಬ್ಬರು ಪುಟ್ಟಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಚೋಟಾಲಾಲ್‌ಸಿಂಗ್‌ ಹಾಗೂ ಪತ್ನಿ ಪ್ರೀತಿಸಿಂಗ್‌ ಬೇರೆ ಬೇರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸೆ.24 ರಂದು ಕೆಲಸದಿಂದ ಮನೆಗೆ ಬಂದು ಕುಡಿಯಲು ನೀರು ಕೇಳಿದ್ದಾನೆ. ಆ ಸಂದರ್ಭದಲ್ಲಿ ಪತ್ನಿ ಪ್ರೀತಿಸಿಂಗ್‌ ನೀನೇ ತೆಗೆದುಕೊಂಡು ಕುಡಿ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಪತಿ ಕೈಗೆ ಸಿಕ್ಕಿದ ಲಟ್ಟಣಿಗೆ ಯಿಂದ ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 1 ವಾರದ ನಂತರ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಪೀಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಚೋಟಾಲಾಲ್‌ಸಿಂಗ್‌ ನನ್ನು ಬಂಧಿಸಿದ್ದಾರೆ. ಅಪ್ಪ-ಅಮನ ಜಗಳದಲ್ಲಿ ಇಬ್ಬರು ಕಂದಮಗಳು ಅನಾಥವಾಗಿವೆ.ಅಮ ಕೊಲೆಯಾದರೆ ಅಪ್ಪ ಜೈಲಿಗೆ ಹೋಗಿದ್ದಾನೆ. ಹಾಗಾಗಿ ಪ್ರೀತಿಸಿಂಗ್‌ ಅವರ ತಂದೆ ಈ ಇಬ್ಬರು ಮಕ್ಕಳನ್ನು ಮಧ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

ನಂದಿನಿ ಪಾರ್ಲರ್‌ಗೆ ನುಗ್ಗಿದ ಬಿಎಂಟಿಸಿ ಬಸ್, ತಪ್ಪಿದ ಅನಾಹುತ

ಬೆಂಗಳೂರು,ಅ.6- ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್‌‍ವೊಂದು ನಿಲ್ದಾಣದಲ್ಲಿನ ನಂದಿನಿ ಪಾರ್ಲರ್‌ಗೆ ನುಗ್ಗಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಮಲಾನಗರದ ಶಂಕರ್‌ನಾಗ್‌ ಬಸ್‌‍ ನಿಲ್ದಾಣದಲ್ಲಿ ಇಂದು ಬೆಳಗ್ಗೆ 7.30 ಸುಮಾರಿನಲ್ಲಿ ಚಾಲಕ ಬಿಎಂಟಿಸಿ ನಿಲ್ದಾಣದಿಂದ ಮೆಜೆಸ್ಟಿಕ್‌ ಕಡೆಗೆ ಹೋಗಲು ಬಸ್‌‍ನ್ನು ಹೊರಗೆ ತೆಗೆಯುತ್ತಿದ್ದರು.

ಆ ಸಂದರ್ಭದಲ್ಲಿ ಬಸ್‌‍ನ ಬ್ರೇಕ್‌ ಫೇಲ್‌ ಆಗಿ ನಿಯಂತ್ರಣಕ್ಕೆ ಸಿಗದಿದ್ದಾಗ ಗಾಬರಿಗೊಂಡ ಚಾಲಕ ರಸ್ತೆಯಲ್ಲಿ ಜನರು ಇರುವುದು ಗಮನಿಸಿ ತಕ್ಷಣ ಹ್ಯಾಂಡ್‌ ಬ್ರೇಕ್‌ ಹಿಡಿದು ತಿರುಗಿಸಿದ್ದಾರೆೆ. ಆದರೆ ಅದೂ ಸಹ ಕೆಲಸ ಮಾಡದೆ ನಂದಿನಿ ಪಾರ್ಲರ್‌ ಐಸ್‌‍ಕ್ರೀಮ್‌ ಅಂಗಡಿಗೆ ನುಗ್ಗಿದೆ.

ಇದರಿಂದಾಗಿ ಬಸ್‌‍ನಲ್ಲಿದ್ದ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದವರು ಆತಂಕಗೊಂಡರು. ಅದೃಷ್ಟವಶಾತ್‌ ಯಾವುದೇ ಸಾವುನೋವುಗಳಾಗಿಲ್ಲ. ಬಸ್‌‍ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಬಗ್ಗೆ ವಿಜಯನಗರ ಸಂಚಾರಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದು ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ತನಿಖೆ ಆರಂಭಿಸಿದ್ದಾರೆ.

ತವರು ಮನೆ ಸೇರಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ

ಸುರಪುರ,ಅ.6-ತನ್ನಿಂದ ದೂರವಾಗಿ ತವರು ಮನೆ ಸೇರಿದ್ದ ಪತ್ನಿಯನ್ನು ಕೊಡಲಿಯಿಂದ ಹೊಡೆದು ಪತಿಯೇ ಕೊಲೆ ಮಾಡಿರುವ ಘಟನೆ ರಾತ್ರಿ ನಡೆದಿದೆ. ಪಟ್ಟಣದ ಬಿಎಸ್‌‍ಎನ್‌ಎಲ್‌ ಕಚೇರಿ ಬಳಿಯ ಡೊಣ್ಣೆಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತಿ ಸಂಗಪ್ಪ ಕಕ್ಕೇರಾ ಕೋಪಕ್ಕೆ ಪತ್ನಿ ಮರಿಯಮ ಕೊಲೆಯಾದ ದುರ್ದೈವಿ.

ಕಕ್ಕೇರಾ ಪಟ್ಟಣದ ಬಳಿಯ ದೊಡ್ಡಿಯೊಂದರಲ್ಲಿ ದಂಪತಿ ವಾಸವಾಗಿದ್ದು, ಮದ್ಯವೆಸನಿ ಪತಿಯ ವರ್ತನೆಯಿಂದ ಬೆಸತ್ತು ಮರಿಯಮ ಕಳೆದ ಒಂದು ವರ್ಷದಿಂದ ಸುರಪುರದ ಡೊಣ್ಣಿಗೇರಾದಲ್ಲಿನ ತನ್ನ ತವರು ಮನೆ ಸೇರಿದ್ದರು.

ಆಗಾಗ್ಗೆ ಪತಿ ಸಂಗಪ್ಪ ಅಲ್ಲಿಗೂ ಹೋಗಿ ಬರುತ್ತಿದ್ದನು. ನಿನ್ನೆ ತಡರಾತ್ರಿ ಪತ್ನಿ ಮಾತನಾಡಿಸಲು ಹೋಗಿದ್ದಾನೆ. ಆ ವೇಳೆ ತನಗೆ ಗೌರವ ಕೊಡುತ್ತಿಲ್ಲ ಹಾಗೂ ಸ್ಪಂದಿಸುತ್ತಿಲ್ಲವೆಂದು ಪತ್ನಿ ಜೊತೆ ಜಗಳವಾಡಿದ್ದಾನೆ. ಆ ಸಂದರ್ಭದಲ್ಲಿ ಕೈಗೆ ಸಿಕ್ಕಿದ ಕೊಡಲಿಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ.

ನಂತರ ಪತ್ನಿಯ ಅಣ್ಣಂದಿರು ಮಲಗಿದ್ದ ಕೋಣಿಗಳ ಚಿಲಕವನ್ನು ಹಾಕಿಕೊಂಡು ಮನೆ ಬಾಗಿಲು ಲಾಕ್‌ ಮಾಡಿ ಕೊಡಲಿ ಸಮೇತ ಪೊಲೀಸ್‌‍ ಠಾಣೆಗೆ ಹೋಗಿ ಶರಣಾಗಿದ್ದಾನೆ.ಇನ್ಸ್ ಪೆಕ್ಟರ್‌ ಉಮೇಶ್‌ನಾಯಕ್‌ ಸೇರಿದಂತೆ ಪೊಲೀಸ್‌‍ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಠಡಿಯ ಚಿಲಕ ತೆಗೆದಿದ್ದಾರೆ.ಈ ಬಗ್ಗೆ ಮೃತ ಮಹಿಳೆಯ ಅಣ್ಣ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ನೀರಿಗಿಳಿಯಲು ಸಿದ್ಧವಾಗಿದೆ ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆ ಆಂಡ್ರೋತ್‌

ವಿಶಾಖಪಟ್ಟಣಂ, ಅ. 6 (ಪಿಟಿಐ)- ಶೇ. 80 ಕ್ಕಿಂತ ಹೆಚ್ಚು ಸ್ಥಳೀಯ ಸಾಮಗ್ರಿಗಳೊಂದಿಗೆ ಮತ್ತು ದೇಶದ ಆಳವಿಲ್ಲದ ಕರಾವಳಿ ವಲಯಗಳಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳನ್ನು ಹೆಚ್ಚಿಸುವ ವಿನ್ಯಾಸದೊಂದಿಗೆ ನಿರ್ಮಿಸಲಾದ ಎರಡನೇ ಜಲಾಂತರ್ಗಾಮಿ ವಿರೋಧಿ ಯುದ್ಧ ಆಳವಿಲ್ಲದ ನೀರಿನ ನೌಕೆ ಆಂಡ್ರೋತ್‌ ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ಸೇರ್ಪಡೆಗೊಳ್ಳಲಿದೆ.

ಹಡಗಿನ ಸೇರ್ಪಡೆಯು ನೌಕಾಪಡೆಯ ಸಾಮರ್ಥ್ಯ ಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ, ವಿಶೇಷವಾಗಿ ಕರಾವಳಿ ನೀರಿನಲ್ಲಿ ಬೆದರಿಕೆಗಳನ್ನು ಎದುರಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಪೂರ್ವ ನೌಕಾ ಕಮಾಂಡ್‌ನ ಅಧಿಕೃತ ಪ್ರಕಟಣೆ ತಿಳಿಸಿದೆ. ಭಾರತೀಯ ನೌಕಾಪಡೆಯು ವಿಶಾಖಪಟ್ಟಣಂನಲ್ಲಿರುವ ನೌಕಾ ಡಾಕ್‌ಯಾರ್ಡ್‌ನಲ್ಲಿ ಎರಡನೇ ಜಲಾಂತರ್ಗಾಮಿ ವಿರೋಧಿ ಯುದ್ಧ ಆಳವಿಲ್ಲದ ನೀರಿನ ನೌಕೆ ಆಂಡ್ರೋತ್‌‍ ಅನ್ನು ನಿಯೋಜಿಸಲು ಸಜ್ಜಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆಂಡ್ರೋತ್‌ನ ಕಾರ್ಯಾರಂಭವು ಸಾಮರ್ಥ್ಯ ವರ್ಧನೆ ಮತ್ತು ದೇಶೀಕರಣದ ಕಡೆಗೆ ನೌಕಾಪಡೆಯ ಸ್ಥಿರ ಹೆಜ್ಜೆಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೂಚಿಸುತ್ತದೆ. ಕೋಲ್ಕತ್ತಾ ಮೂಲದ ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಮತ್ತು ಎಂಜಿನಿಯರ್ಸ್‌ ಸಂಸ್ಥೆ ನಿರ್ಮಿಸಿದ ಆಂಡ್ರೋತ್‌ ಭಾರತದ ಬೆಳೆಯುತ್ತಿರುವ ಕಡಲ ಸ್ವಾವಲಂಬನೆ ಮತ್ತು ನವೀನ ಸ್ವದೇಶಿ ತಂತ್ರಜ್ಞಾನಗಳಿಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಅರ್ನಾಲಾ, ನಿಸ್ತಾರ್‌, ಉದಯಗಿರಿ, ನೀಲಗಿರಿ ಮತ್ತು ಈಗ ಆಂಡ್ರೋತ್‌ – ಇತ್ತೀಚಿನ ಸೇರ್ಪಡೆಗಳೊಂದಿಗೆ – ನೌಕಾಪಡೆಯು ಸ್ಥಳೀಯ ವಿನ್ಯಾಸ ಮತ್ತು ನಿರ್ಮಾಣದ ಮೂಲಕ ಆತ್ಮನಿರ್ಭರ ಭಾರತದ (ಸ್ವಾವಲಂಬನೆ) ದ ಮನೋಭಾವವನ್ನು ಸಾಕಾರಗೊಳಿಸುವಾಗ ತನ್ನ ಕಾರ್ಯಾಚರಣೆಯ ವರ್ಣಪಟಲವನ್ನು ಬಲಪಡಿಸುವುದನ್ನು ಮುಂದುವರೆಸಿದೆ ಎಂದು ಪ್ರಕಟಣೆ ತಿಳಿಸಿದೆ.

ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರ ನಡೆದಿದೆ : ವಿಜಯೇಂದ್ರ ಕಿಡಿ

ಬೆಂಗಳೂರು,ಅ.6- ಕೆಲವರು ಹಿಂದೂ ಧರ್ಮ ಮತ್ತು ವೀರಶೈವ ಲಿಂಗಾಯತರನ್ನು ಒಡೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಕೆಲವರು ಪ್ರತ್ಯೇಕ ವೀರಶೈವ ಲಿಂಗಾಯಿತ ಧರ್ಮ ಮಾಡುವ ಮೂಲಕ ನಮ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಇದರಲ್ಲಿ ಅವರು ಯಶಸ್ವಿಯಾಗಲಿಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರ ಹೆಸರು ಹೇಳದೆ ಕಿಡಿಕಾರಿರು.

ಮತ್ತೆ ರಾಜ್ಯದಲ್ಲಿ ಪ್ರತ್ಯೇಕ ವೀರಶೈವ ಲಿಂಗಾಯಿತ ಧರ್ಮ ರಚನೆಯಾಗಬೇಕೆಂಬ ಕೂಗು ಕೇಳಿಬರುತ್ತಿದೆ. ಇದ್ದಕ್ಕಿದ್ದಂತೆ ಇದು ಮುನ್ನಲೆಗೆ ಬಂದಿದ್ದು, ಯಾವ ಕಾರಣಕ್ಕಾಗಿ ಎಂಬುದು ಯಾರಿಗೂ ಗೊತ್ತಿಲ್ಲ. ತೆರೆಯ ಹಿಂದೆ ಕುಳಿತವರೇ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೆಯೂ ವೀರಶೈವ ಲಿಂಗಾಯಿತ ಸಮುದಾಯವನ್ನು ಒಡೆದು ಧರ್ಮ ಮಾಡಲು ಹೊರಟ್ಟಿದ್ದರು. ಪರಿಣಾಮ ಏನಾಯಿತು ಎಂಬುದು ಗೊತ್ತು. ಯಾವುದೇ ಕಾರಣಕ್ಕೂ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಮುಂದೆಯೂ ಆಗುವುದಿಲ್ಲ ಎಂದು ಎಚ್ಚರಿಸಿದ ಅವರು, ಇದಕ್ಕಾಗಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಮುಖ್ಯವಾಗಿ ಆರ್ಥಿಕ, ಸಾಮಾಜಿಕ ಸಮೀಕ್ಷೆ ವಿಚಾರದಲ್ಲಿ ಸರ್ಕಾರಕ್ಕೆ ಯಾಕಿಷ್ಟು ಆತುರ? ಒಕ್ಕಲಿಗ ಸಮುದಾಯ, ವೀರಶೈವ ಲಿಂಗಾಯತ ಸಮುದಾಯ ಎಲ್ಲದರಲ್ಲೂ ಬಡವರಿದ್ದಾರೆ. ಮುಖ್ಯಮಂತ್ರಿಗಳು ಯಾಕೆ 15 ದಿನದಲ್ಲೇ ಸಮೀಕ್ಷೆ ಮುಗಿಸಬೇಕೆಂಬ ತರಾತರಿಯಲ್ಲಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು. ನಮ ಮೆಟ್ರೋಗೆ ಬಸವ ಮೆಟ್ರೋ ಎಂಬ ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ಬಹಿರಂಗವಾಗಿ ಹೇಳುವುದು ಬೇರೆ.

ಆದರೆ ಅಂತರಂಗದಲ್ಲಿ ಏನು ಇದೆ ಅದನ್ನು ಮಾಡುವುದು ಬೇರೆ. ಹಿಂದೆ ಸಿಎಂ ಆಗಿದ್ದಾಗ ಬಸವೇಶ್ವರರ ಫೋಟೋ ಇಡಬೇಕೆಂದು ಹೇಳಿ ಆದೇಶ ಮಾಡಿಸಿದ್ದರು. ಬಳಿಕ ಪ್ರತ್ಯೇಕ ಧರ್ಮಮಾಡಲು ಹೊರಟರು ಎಂದು ಟೀಕಿಸಿದರು. ನಮ ಮೆಟ್ರೋಗೆ ಬಸವೇಶ್ವರರ ಹೆಸರಿಡುವುದಕ್ಕೆ ಸ್ವಾಗತವಿದೆ. ಆದರೆ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವುದು ಎಷ್ಟು ಸರಿ? ಎಂದು ವಿಜಯೇಂದ್ರ ಪ್ರಶ್ನಿಸಿದರು.

ಕಾಂಗ್ರೆಸ್‌ನೊಳಗೆ ಕಿತ್ತಾಟ : ಸಿಡಿದೆದ್ದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ

ಬೆಂಗಳೂರು, ಅ.6- ಕಾಂಗ್ರೆಸ್‌‍ನ ಒಳ ರಾಜ ಕೀಯದ ಬಗ್ಗೆ ಮತ್ತೊಬ್ಬ ಮಸ್ಲಿಂ ಮುಖಂಡ ಸಿಡಿದೆದ್ದು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದ ಮುಖಂಡರ ವಿರುದ್ಧ ಕೆಂಡ ಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದು, ಸುಮಾರು 2 ಸಾವಿರ ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜನರನ್ನು ಸೇರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಗೊಂದಲ ನಿರ್ಮಾಣವಾಗಿದೆ. ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ರೊಚ್ಚಿಗೆದ್ದಿದ್ದು, ನಾನು ಮುಸ್ಲಿಂ ಎಂಬ ಕಾರಣಕ್ಕಾಗಿ ನನ್ನನ್ನು ರಾಜಕೀಯವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನಾನು ಗೆದ್ದರೆ, ಸಚಿವನಾಗುತ್ತೇನೆ ಎಂಬ ಕಾರಣಕ್ಕಾಗಿ ಹುನ್ನಾರ ನಡೆಸಿ ಎಲ್ಲರೂ ಸೇರಿ ಗಣಿ ಮಾಲೀಕ ಜನಾರ್ದನರೆಡ್ಡಿ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. ನನ್ನನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಇಂದು ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಮಾಜಿ ಸಚಿವನಾಗಿದ್ದರೂ, ಮುಸ್ಲಿಂ ಎಂಬ ಕಾರಣಕ್ಕಾಗಿ ನನ್ನನ್ನು ದೂರ ಇಟ್ಟಿದ್ದಾರೆ. ಪಕ್ಷದ ನಾಯಕರೂ ಕೂಡ ಕಡೆಗಣಿಸಿದ್ದಾರೆ ಎಂದು ಆಡಿಯೋ ಸಂದೇಶದಲ್ಲಿ ಇಕ್ಬಾಲ್‌ ಅನ್ಸಾರಿ ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿಯವರ ಪರಮಾಪ್ತ ಬಳಗದಲ್ಲಿರುವ ಹಿಂದುಳಿದ ವರ್ಗಗಳ ಸಚಿವ ಶಿವರಾಜತಂಗಡಗಿ, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಜಶೇಖರ ಇಟ್ನಾಳ್‌, ಶಾಸಕ ರಾಘವೇಂದ್ರ ಇಟ್ನಾಳ್‌ ಸೇರಿದಂತೆ ಜಲ್ಲೆಯ ಕಾಂಗ್ರೆಸ್‌‍ ನಾಯಕರು ಹಾಗೂ ಮುಖಂಡರ ವಿರುದ್ಧ ಇಕ್ಬಾಲ್‌ ಅನ್ಸಾರಿ ಕಿಡಿಕಾರಿದ್ದಾರೆ.

ಈ ಎಲ್ಲರೂ ಸೇರಿ ತನ್ನ ವಿರುದ್ಧ ಮುಖ್ಯಮಂತ್ರಿಯವರಿಗೆ ನಕಾರಾತಕ ಮಾಹಿತಿಗಳನ್ನು ನೀಡುತ್ತಿದ್ದಾರೆ. ಇಂದಿನ ಕಾರ್ಯಕ್ರಮಕ್ಕೆ ಇಕ್ಬಾಲ್‌ ಅನ್ಸಾರಿ ಜನರನ್ನು ಸೇರಿಸಿಲ್ಲ, ಸಂಸದ ರಾಘವೇಂದ್ರ ಇಟ್ನಾಳ್‌ ಅವರೇ ಗಂಗಾವತಿಗೆ ಹೋಗಿ ಜನರನ್ನು ಸಂಘಟಿಸಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಯವರಿಗೆ ತಲುಪಿಸಿದ್ದಾರೆ.ನಾನು ತಮ ಕ್ಷೇತ್ರದಿಂದ 224 ಬಸ್‌‍ಗಳಲ್ಲಿ ಜನರು ಕಾರ್ಯಕ್ರಮಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿದ್ದೇನೆ. ಈ ಎಲ್ಲಾ ಕೆಲಸಗಳನ್ನು ನಾನೇ ಮಾಡಿದ್ದೇನೆಂದು ಸಂಸದ ಹೇಳಿಕೊಳ್ಳುತ್ತಿದ್ದಾನೆ ಎಂದು ಏಕವಚನದಲ್ಲೇ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ.

ಗಂಗಾವತಿಯಲ್ಲಿ ಜನಾರ್ದನರೆಡ್ಡಿಯವರ ಸಮುದಾಯದ ಮತದಾರರ ಸಂಖ್ಯೆ ಕಡಿಮೆ ಇದೆ. ಆದರೂ ಕಾಂಗ್ರೆಸ್‌‍ ಪಕ್ಷದ ನಾಯಕರು ಪರೋಕ್ಷವಾಗಿ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ಒಳ್ಳೆಯ ಕೆಲಸಗಳನ್ನು ತಾವೇ ಮಾಡಿದ್ದಾಗಿ ಹೇಳಿಕೊಳ್ಳುವ ಅವರು, ಪಕ್ಷಕ್ಕೆ ತೊಂದರೆಯಾದಾಗ ಬಚ್ಚಿಟ್ಟುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ವಿರುದ್ಧ ಗುಂಪು ಕಟ್ಟಿಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆ. ಈ ರೀತಿಯ ಹುನ್ನಾರಗಳ ಬಗ್ಗೆ ನಾನು ರಾಜ್ಯದಾದ್ಯಂತ ಮುಸ್ಲಿಂ ಸಮುದಾಯಕ್ಕೆ ವಿವರಿಸುತ್ತೇನೆ. ಕೊಪ್ಪಳ ಜಿಲ್ಲೆ ಕುರಿತಂಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಆ ಗುಂಪಿನವರ ಮಾತುಗಳನ್ನು ಕೇಳಿ, ಏಕಮುಖ ನಿರ್ಧಾರ ಮಾಡಬೇಡಿ, ನನ್ನ ಅಭಿಪ್ರಾಯಗಳನ್ನೂ ಕೇಳಿ ಎಂದು ಮುಖ್ಯಮಂತ್ರಿ ಅವರಿಗೆ ಅನ್ಸಾರಿ ಮನವಿ ಮಾಡಿಕೊಂಡಿದ್ದಾರೆ.