Home Blog Page 77

ಶ್ರೀಲಂಕಾದಿಂದ ಬಂದು ಬೆಂಗಳೂರಲ್ಲಿ ಅನಧಿಕೃತವಾಗಿ ನೆಲೆಸಿದ್ದ ಮೂವರು ವಿದೇಶಿ ಪ್ರಜೆಗಳ ವಿರುದ್ಧ ಕ್ರಮ

ಬೆಂಗಳೂರು,ಸೆ.29-ಪಾಸ್‌‍ಪೋರ್ಟ್‌ ಮತ್ತು ವೀಸಾ ಇಲ್ಲದೇ ಹಡಗು ಮೂಲಕ ಅನಧಿಕೃತವಾಗಿ ಬಂದು ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸಿಸಿಬಿ ಕಾನೂನು ಕ್ರಮ ಕೈಗೊಂಡಿದೆ.ಕಳೆದ ವರ್ಷ ಮೂವರು ವಿದೇಶಿ ಪ್ರಜೆಗಳು ಯಾವುದೇ ಪಾಸ್‌‍ಪೋರ್ಟ್‌ ಮತ್ತು ವೀಸಾ ಇಲ್ಲದೇ ಶೀಲಂಕಾದ ಜಾಫ್ನಾದಿಂದ ಹಡಗು ಮೂಲಕ ತಮಿಳುನಾಡಿನ ರಾಮೇಶ್ವರಂ ಅಕ್ರಮವಾಗಿ ಬಂದಿದ್ದಾರೆ.

ನಂತರ ಈ ಮೂವರಿಗೆ ಮತ್ತೊಬ್ಬ ವಿದೇಶಿ ಪ್ರಜೆ ಸಹಾಯ ಮಾಡಿದ್ದು, ಆತನ ನೆರವಿನಿಂದ ದೇವನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದರು.
ಸಿಸಿಬಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿಯನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡು ನಂತರ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿ ಮೂವರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ, ಹಡಗು ಮೂಲಕ ಬಂದಿರುವುದಾಗಿ ತಿಳಿಸಿದ್ದಾರೆ.

ಈ ಮೂವರ ವಿರುದ್ಧ ಫಾರಿನರ್‌ರ‍ಸ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇವರು ಯಾವ ಕಾರಣಕ್ಕಾಗಿ ಬಂದು ನಗರದಲ್ಲಿ ವಾಸವಾಗಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆಸಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಡಿಜಿಟಲ್‌ ಅರೆಸ್ಟ್‌ ಎಂಬುದೇ ಇಲ್ಲ..! ಸೈಬರ್‌ ವಂಚಕರ ಗಾಳಕ್ಕೆ ಸಿಲುಕದಿರಿ

ವಿಶೇಷ ಲೇಖನ : ವಿ.ರಾಮಸ್ವಾಮಿ ಕಣ್ವ
ಅಪರಾಧಗಳಲ್ಲಿ ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌, ಹೋಮ್‌ ಅರೆಸ್ಟ್‌ ಎಂಬ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬರುತ್ತಿವೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ, ಸೈಬರ್‌ ವಂಚಕರು ರಂಗೋಲಿ ಕೆಳಗೆ ನುಸುಳಿ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಪೊಲೀಸ್‌‍ ವ್ಯವಸ್ಥೆಗಳಲ್ಲಿ ಡಿಜಿಟಲ್‌ ಅರೆಸ್ಟ್‌ ಅಥವಾ ಹೋಮ್‌ ಅರೆಸ್ಟ್‌ ಎಂಬುವುದೇ ಇಲ್ಲ. ಈಗ ಸೈಬರ್‌ ಖದೀಮರು ಸೃಷ್ಟಿಸಿರುವ ಒಂದು ವಂಚನೆ ಅಷ್ಟೇ.ವ್ಯಕ್ತಿಯ ಜೀವನದ ಮಟ್ಟ ಸುಧಾರಿಸಿದಂತೆ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್‌ ವಂಚನೆಗಳು ಹೆಚ್ಚಾಗುತ್ತಿವೆ. ಈಗ ಶ್ರೀಸಾಮಾನ್ಯರ ಕೈಗಳಲ್ಲೂ ಮೊಬೈಲ್‌ಗಳಿವೆ.

ಬಹುತೇಕ ಮಂದಿ ಕುಳಿತಲ್ಲಿ, ನಿಂತಲ್ಲಿ ಸಾವಿರಾರೂ ರೂ.ಗಳ ಆನ್‌ಲೈನ್‌ ವ್ಯವಹಾರ ನಡೆಸುತ್ತಿದ್ದಾರೆ. ನಮಗೆ ಆನ್‌ಲೈನ್‌ ವ್ಯವಹಾರದಿಂದ ಎಷ್ಟು ಸುಲಭ ಆಗಿದೆಯೋ ಅಷ್ಟೇ ಸಲೀಸಾಗಿ ಸೈಬರ್‌ ವಂಚಕರಿಗೂ ಆಗಿದೆ. ಸಾವಿರಾರೂ ಕಿಲೋಮೀಟರ್‌ ದೂರದ ವಿದೇಶಗಳಲ್ಲಿ ಕುಳಿತು ನಿಮಗೆ ಯಾಮಾರಿಸಿ ಲಕ್ಷಾಂತರ ರೂ. ಹಣವನ್ನು ಲಪಟಾಯಿಸುತ್ತಾರೆ.
ಮಾನಸಿಕವಾಗಿ ಬೆದರಿಸುತ್ತಾರೆ..!

ಈ ಸೈಬರ್‌ ವಂಚಕರು ಪೊಲೀಸ್‌‍, ಸಿಬಿಐ, ಇಡಿ… ಮುಂತಾದ ಘಟಕಗಳ ಅಧಿಕಾರಿಗಳೆಂದು ನಿಮ ಮೊಬೈಲ್‌ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸುತ್ತಾರೆ. ನೀವು ನಂಬುವಂತೆ ಸುಳ್ಳು ಹೇಳಿ ಮಾನಸಿಕ ಒತ್ತಡಕ್ಕೆ ಸಿಲುಕಿಸಿ ಬೆದರಿಸುತ್ತಾರೆ.

ಉದಾಹರಣೆಗೆ ನಿಮ ಮೊಬೈಲ್‌ಗೆ ಕರೆ ಮಾಡುವ ಅಪರಿಚಿತ ವ್ಯಕ್ತಿ ನಾನು ಸಿಬಿಐ, ಇಡಿ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮ ಹೆಸರು ಮಾದಕ ವಸ್ತು ಸಾಗಾಣಿಕೆ ಅಥವಾ ಅಕ್ರಮ ಹಣ ವರ್ಗಾವಣೆ…. ಹೀಗೆ ಮುಂತಾದ ಪ್ರಕರಣ ಒಂದರಲ್ಲಿ ಕಂಡುಬಂದಿದೆ. ನೀವು ಇರುವ ಜಾಗದಲ್ಲೇ ನಿಮನ್ನು ಬಂಧಿಸುತ್ತೇವೆ ಎಂದು ಹೇಳುತ್ತಾನೆ. ನಂತರ ಒಂದು ಇಂಚು ಜಾಗ ಕದಲಬಾರದು, ಕರೆಯನ್ನು ಸ್ಥಗಿತಗೊಳಿಸಬಾರದು, ಯಾರ ಜೊತೆಯಲ್ಲೂ ಮಾತನಾಡಬಾರದು, ನಾನು ಹೇಳಿದ ರೀತಿ ಕೇಳಬೇಕು ಇಲ್ಲದಿದ್ದರೆ ನಿಮ ಮಾನ, ಮರ್ಯಾದೆ ಹರಾಜಾಗುತ್ತದೆ ಎಂದು ಗಡುಸು ಧ್ವನಿಯಲ್ಲಿ ಬೆದರಿಸುತ್ತಾನೆ.

ಆಗ ನೀವು ಆತನ ದರ್ಪದಿಂದ ದಿಕ್ಕುತೋ ದಂತಾಗಿ ಅಸಹಾಯಕರ ರೀತಿ ಈಗ ನಾನು ಬಿಡುಗಡೆಯಾಗಬೇಕಾದರೆ ಏನು ಮಾಡಬೇಕೆಂದು ಕೇಳಿದ ತಕ್ಷಣ ನೀಚ ಬಹಳ ಉಪಕಾರ ಮಾಡುವ ರೀತಿ ಈ ಪ್ರಕರಣದಿಂದ ನಿಮನ್ನು ಕೈಬಿಡುತ್ತೇವೆ, ನಾವು ಹೇಳಿದ ರೀತಿ ಕೇಳಬೇಕು ಎಂದು ತಾಕೀತು ಮಾಡುತ್ತಾನೆ.

ನಿಮ ಬ್ಯಾಂಕ್‌ ಖಾತೆಗಳ ವಿವರ ನೀಡಿ ಇಲ್ಲವೇ ನಾವು ಹೇಳಿದ ಬ್ಯಾಂಕ್‌ ಖಾತೆಗಳಿಗೆ ಇಂತಿಷ್ಟು ಹಣ ಹಾಕಿ ಎಂದು ಹೇಳಿ ತನ್ನ ನಕಲಿ ಖಾತೆಗಳಿಗೆ ಹಣ ಹಾಕಿಸಿಕೊಂಡು ಯಾರಿಗೂ ಈ ವಿಷಯ ತಿಳಿಸಬೇಡಿ. ಬೇರೆಯವರಿಗೆ ಇದು ಗೊತ್ತಾದರೆ ನಿಮಗೇ ತೊಂದರೆ ಎಂದು ಹೇಳಿ ವಂಚಕ ಕರೆ ಸ್ಥಗಿತಗೊಳಿಸು ತ್ತಾನೆ.

ವಂಚಕನ ಸಿಮ್‌ ಕಾರ್ಡ್‌ ಸ್ಥಗಿತ:
ಆಘಾತದಿಂದ ಹೊರಬಂದು ನೀವು ಕುಟುಂಬದವರಿಗೆ ವಿಷಯ ತಿಳಿಸಿ ವಂಚಕ ಮಾಡಿದ್ದ ಮೊಬೈಲ್‌ ನಂಬರಿಗೆ ಕರೆ ಮಾಡಿದಾಗಲೇ ನೀವು ಮೋಸಕ್ಕೆ ಒಳಗಾಗಿದ್ದೀರಿ ಎಂಬುದು ಗೊತ್ತಾಗುತ್ತದೆ. ಆ ವೇಳೆಗಾಗಲೇ ವಂಚಕ ಆತನ ಮೊಬೈಲ್‌ನಿಂದ ಸಿಮ್‌ ತೆಗೆದು ಬಿಸಾಕಿ ಜಾಗ ಖಾಲಿ ಮಾಡಿರುತ್ತಾನೆ. ಹೀಗೆ ಈ ಸೈಬರ್‌ ಖದೀಮರು ಇತ್ತೀಚೆಗೆ ಬೇರೆ ಬೇರೆ ವಿಷಯಗಳಲ್ಲಿ ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಾ ಲಕ್ಷಾಂತರ ರೂ. ಹಣವನ್ನು ದೋಚಿ ನಿಮ ಹಣದಲ್ಲಿ ಮೋಜು, ಮಸ್ತಿ ಮಾಡುತ್ತಾರೆ.

ಮೋಸಕ್ಕೆ ಒಳಗಾಗಬೇಡಿ:
ವಂಚಕರು ಹೇಳುವ ರೀತಿಯ ಪ್ರಕರಣಗಳಲ್ಲಿ ನೀವು ಭಾಗಿಯಾಗಿಲ್ಲದಿದ್ದರೆ ಏಕೆ ಅಂಜುತ್ತೀರಿ, ಭಯಪಟ್ಟಷ್ಟೂ ಆತ ನಿಮನ್ನು ಹೆದರಿಸಿ, ಯಾಮಾರಿಸಿ ಹಣ ಹಾಕಿಸಿಕೊಂಡು ಕಣರೆಯಾಗುತ್ತಾನೆ. ಆಗ ನೀವು ಮೋಸಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತೀರಿ ಜೋಕೆ! ಯಾಮಾರಿ ಒಂದು ವೇಳೆ ವಂಚನೆಗೆ ಒಳಗಾದರೆ ಚಿಂತಿಸಬೇಡಿ. ಮೊದಲು ಸಹಾಯವಾಣಿ 1930ಗೆ ನೀವು ಕರೆ ಮಾಡಿ ದೂರು ದಾಖಲಿಸಿ ಅಥವಾ ನಿಮ ಸಮೀಪದ ಪೊಲೀಸ್‌‍ ಠಾಣೆಗೆ ತಕ್ಷಣ ತೆರಳಿ ದೂರು ನೀಡಿ. ಘಟನೆ ನಡೆದ 24 ಗಂಟೆ ಒಳಗಾಗಿ ದೂರು ನೀಡಿದರೆ ತುಂಬಾ ಒಳ್ಳೆಯದು. ಇಲ್ಲದಿದ್ದರೆ ನಿಮ ಹಣ ಖದೀಮನ ಜೇಬು ಸೇರುತ್ತದೆ. ಇದು ಎಐ ಯುಗ. ಏನು ಬೇಕಾದರೂ ಆಗಬಹುದು ಯಾವುದಕ್ಕೂ ಸದಾ ಜಾಗೃತರಾಗಿರಿ.

ಡಿಜಿಟಲ್‌ ಅರೆಸ್ಟ್‌ ಇಲ್ಲ:
ದೇಶದ ಯಾವುದೇ ಪೊಲೀಸ್‌‍ ಘಟಕಗಳ ಅಧಿಕಾರಿಗಳಾಗಲೀ ಅಥವಾ ಸ್ಥಳೀಯ ಠಾಣೆಯ ಪೊಲೀಸರಾಗಲಿ ನಿಮನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಡಿಜಿಟಲ್‌ ಅರೆಸ್ಟ್‌ ಅಥವಾ ಹೋಮ್‌ ಅರೆಸ್ಟ್‌ ಮಾಡುವುದಿಲ್ಲ. ಪ್ರತಿಯೊಬ್ಬ ನಾಗರಿಕರು ತಿಳಿಯಬೇಕಾದ ವಿಷಯ ಇದು. ನಿಮ ಮೇಲೆ ಪ್ರಕರಣ ದಾಖಲಾಗಿದ್ದರೆ ಮಾತ್ರ ನಿಮನ್ನು ಪೊಲೀಸರು ಮೊಬೈಲ್‌ನಲ್ಲಿ ಸಂಪರ್ಕಿಸಬಹುದು.

ಒಂದು ವೇಳೆ ಸಿಬಿಐ, ಇಡಿ ಮುಂತಾದ ಪೊಲೀಸ್‌‍ ಘಟಕಗಳ ಅಧಿಕಾರಿಗಳು ಎಂದು ಹೇಳಿಕೊಂಡು ವಿನಾಕಾರಣ ಕರೆ ಮಾಡಿದರೆ ತಕ್ಷಣ ಆ ಕರೆಯನ್ನು ಸ್ಥಗಿತಗೊಳಿಸಿ ಮತ್ತೆ ಮತ್ತೆ ಕರೆ ಮಾಡುತ್ತಿದ್ದರೆ ಮೊಬೈಲ್‌ ಸ್ವಿಚ್ಡ್ ಆಫ್‌ಮಾಡಿ ಇಲ್ಲವೇ ಕೂಡಲೇ ಸೈಬರ್‌ ಅಪರಾಧ ಸಹಾಯವಾಣಿ 1930ಗೆ ಕರೆ ಮಾಡಿ ಅಥವಾ ಪೊಲೀಸ್‌‍ ಕಂಟ್ರೋಲ್‌ ರೂಮ್‌ 112ಗೆ ತಿಳಿಸಿ.

ವಿದ್ಯಾವಂತರೇ ಇವರ ಟಾರ್ಗೆಟ್‌:
ವಿಜ್ಞಾನಿಗಳು, ವೈದ್ಯರು, ಸಾ್ಟ್‌ವೇರ್‌ ಎಂಜಿನಿಯರ್‌ಗಳು, ಸರ್ಕಾರಿ ಹಾಗೂ ನಿವೃತ್ತ ಅಽಕಾರಿಗಳೇ ಇತರರಿಗಿಂತ ಹೆಚ್ಚು ವಂಚನೆಗೆ ಒಳಗಾಗುತ್ತಿದ್ದಾರೆ. ತಿಳಿದವರೇ, ವಿದ್ಯಾವಂತರೇ, ಬುದ್ಧಿವಂತರೇ ಹೆಚ್ಚು ಹೆಚ್ಚು ಈ ಸೈಬರ್‌ ವಂಚಕರ ಜಾಲಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ.

ಈ ವಂಚಕರು ಹೇಳುವ ರೀತಿಯ ಪ್ರಕರಣಗಳಲ್ಲಿ ನಿಮ್ಮ ಹೆಸರು ಇದ್ದರೆ ಅಥವಾ ಎ್‌‍ಐಆರ್‌ ದಾಖಲಾಗಿದ್ದರೆ, ಪರಿಶೀಲಿಸಿ ಸಿಬಿಐ, ಇಡಿ.. ಇನ್ನು ಮುಂತಾದ ಘಟಕಗಳ ಅಽಕಾರಿಗಳು ತಮ್ಮ ಕಚೇರಿಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೊದಲು ನಿಮಗೆ ನೋಟೀಸ್‌ ನೀಡುತ್ತಾರೆ. ನಂತರ ವಿಚಾರಣೆ ನಡೆಸಿ ಪ್ರಕರಣದಲ್ಲಿ ನೀವು ಭಾಗಿಯಾಗಿರುವುದು ಕಂಡುಬಂದರೆ ಮಾತ್ರ ಬಂಧಿಸುತ್ತಾರೆ.ಒಂದು ವೇಳೆ ನಿಮ್ಮ ಮನೆಗೆ ನಿಮ್ಮನ್ನು ಬಂಧಿಸಲು ಬರುವ ಯಾವುದೇ ಪೊಲೀಸ್‌ ಅಧಿಕಾರಿ ಜೊತೆಯಲ್ಲಿ ವಾರೆಂಟ್‌ ತಂದಿರುತ್ತಾರೆ. ಬಂಽಸಿದ ನಂತರ ವಿಷಯವನ್ನು ನಿಮ್ಮ ಕುಟುಂಬದ ಸದಸ್ಯರಿಗೆ ತಿಳಿಸುತ್ತಾರೆ.

ಚುನಾವಣೆಯ ಸಮಯದಲ್ಲಿ ನಕಲಿ ಗುರುತಿನ ಚೀಟಿ ಬಳಕೆ ಆರೋಪ : ಶಾಸಕನ ವಿರುದ್ಧ ತನಿಖೆ

ರಾಂಚಿ, ಸೆ.29- ಚುನಾವಣೆಯ ಸಮಯದಲ್ಲಿ ಜೆಎಂಎಂ ಶಾಸಕ ದಶರಥ್‌ ಗಗ್ರೈ ನಕಲಿ ಗುರುತಿನ ಚೀಟಿ ಬಳಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆಗೆ ಜಾರ್ಖಂಡ್‌ ಮುಖ್ಯ ಚುನಾವಣಾ ಅಧಿಕಾರಿ ಕೆ.ರವಿಕುಮಾರ್‌ ಆದೇಶಿಸಿದ್ದಾರೆ.ಖರ್ಸವಾನ್‌ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಗಗ್ರೈ ಅವರ ಗುರುತಿನ ಚೀಟಿ ಅಸಲಿಯತ್ತು ಪ್ರಶ್ನಿಸಿ ಲಾಲ್ಜಿ ರಾಮ್‌ ಟಿಯು ಎಂಬವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಇದರಿಂದಾಗಿ ಪ್ರಕರಣ ಬಗ್ಗೆ ಸೆರೈಕೆಲಾ-ಖಾರ್ಸವಾನ್‌ ಪ್ರದೇಶದ ಉಪ ಆಯುಕ್ತರಿಗೆ ತನಿಖೆ ನಡೆಸಿ ವರದಿ ನೀಡಲು ಸಿಇಒ ಸೂಚಿಸಿದ್ದಾರೆ.ದೂರುದಾರರು ಧಿಕಾರದಲ್ಲಿರುವವರ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಶಾಸಕರು ಟೕಕಿ ಆರೋಪವನ್ನು ತಳ್ಳಿಹಾಕಿದರು. ದೂರುದಾರರ ಅಫಿಡವಿಟ್‌ ದೂರನ್ನು ನಾನು ಸೆರೈಕೆಲಾ-ಖಾರ್ಸವಾನ್‌ ಉಪ ಆಯುಕ್ತ ನಿತೀಶ್‌ ಕುಮಾರ್‌ ಸಿಂಗ್‌ ಅವರಿಗೆ ಪರಿಶೀಲಿಸಲು ಕಳುಹಿಸಿದ್ದೇನೆ ಎಂದು ಸಿಇಒ ಹೇಳಿದರು.

ಚುನಾವಣೆಗಳು ಮುಗಿದು ಫಲಿತಾಂಶಗಳು ಘೋಷಣೆಯಾದ ನಂತರ ಶಾಸಕರನ್ನು ಒಳಗೊಂಡ ವಿವಾದಗಳನ್ನು ಸಂಬಂಧಪಟ್ಟ ರಾಜ್ಯಪಾಲರು ಪರಿಹರಿಸಬೇಕಾಗುತ್ತದೆ, ಆದರೆ ಸಂಸದರನ್ನು ಒಳಗೊಂಡ ವಿವಾದಗಳನ್ನು ರಾಷ್ಟ್ರಪತಿಗಳು ನಿಭಾಯಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಮಾಜಿ ಸೈನಿಕ ಎಂದು ಹೇಳಿಕೊಳ್ಳುವ ಲಾಲ್ಜಿ ರಾಮ್‌ ಟಿಯು, ದಶರಥ್‌ ಗಗ್ರೈ ಹೆಸರಿನಲ್ಲಿ ಪ್ರಸ್ತುತ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ವಾಸ್ತವವಾಗಿ, ನಿಜವಾದ ದಶರಥ್‌ ಗಗ್ರೈ ಅವರ ಹಿರಿಯ ಸಹೋದರ ರಾಮಕೃಷ್ಣ ಗಗ್ರೈ ಎಂದು ಆರೋಪಿಸಿದ್ದಾರೆ.

ಸಮೀಕ್ಷೆ ಕುರಿತು ಬಿಜೆಪಿ ಅಪಪ್ರಚಾರ ನಡೆಸುತ್ತಿದೆ : ಬಿ.ಕೆ.ಹರಿಪ್ರಸಾದ್‌ ಆರೋಪ

ಬೆಂಗಳೂರು, ಸೆ.29– ಸಾಮಾಜಿಕ, ಶೈಕ್ಷಣಿಕ ಸಮಿಕ್ಷೆ ನಡೆದು ವರದಿ ಜಾರಿಯಾದರೆ, ಅವಕಾಶ ವಂಚಿತರು, ತುಳಿತಕ್ಕೊಳಗಾದವರು ಮುನ್ನೆಲೆಗೆ ಬರುತ್ತಾರೆಂಬ ಆತಂಕದಿಂದ ಕೆಲವರು ಅಪಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌‍ನ ಹಿರಿಯ ನಾಯಕ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಸರ್ಕಾರ ಜಾತಿ ಜನಗಣತಿ ಮಾಡುತ್ತಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿದೆ. ಕೇಂದ್ರ ಸಚಿವರು, ಬಿಜೆಪಿಯ ಸಂಸದರು ಸೇರಿದಂತೆ ಆ ಪಕ್ಷದ ನಾಯಕರು ಅನಾರೋಗ್ಯದ ಮನಸ್ಸಿನಿಂದ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬಿಜೆಪಿಯ ಪಿತೃಪಕ್ಷ ಆರ್‌ಎಸ್‌‍ಎಸ್‌‍ ಹಿಂದುಳಿದ ವರ್ಗ, ಶೂದ್ರರು ಮತ್ತು ಪಂಚಮರ ಏಳಿಗೆಗೆ ಎಂದೂ ಶ್ರಮಿಸಿಲ್ಲ. ಶೋಷಿತರನ್ನು ಕಾಲಾಳುಗಳನ್ನಾಗಿ ಬಳಸಿಕೊಂಡಿದೆ. ಅವರಿಗೆ ಸೌಲಭ್ಯಗಳು ಸಿಕ್ಕಿ ಸ್ವಾವಲಂಬಿಗಳಾದರೆ, ಕೋಮುವಾದಿಗಳಿಗೆ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ. ಈ ಅನಾರೋಗ್ಯಕರ ಮನಸ್ಸಿನಿಂದ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು. ಇಡಬ್ಲ್ಯೂಎಸ್‌‍ ಜಾರಿಯಾಗಿ 7 ವರ್ಷವಾಗಿದೆ.

ಕರ್ನಾಟಕದಲ್ಲಿ ಮೇಲ್ಜಾತಿ ಎನಿಸಿಕೊಂಡಿರುವವರು ಮೀಸಲಾತಿಯ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಇಡಬ್ಲ್ಯೂಎಸ್‌‍ಗೆ ರಾಜ್ಯದಲ್ಲಿ ಅವಕಾಶವಿಲ್ಲ. ಅವಕಾಶ ವಂಚಿತ ಸಮುದಾಯಗಳು ಮುನ್ನೆಲೆಗೆ ಬರಬಹುದು ಎಂಬ ದುಗುಡದಿಂದ ನಾನಾ ರೀತಿಯ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾತಿ ಅಥವಾ ಜನಗಣತಿ ಮಾಡಲು ಕೇಂದ್ರ ಸರ್ಕಾರದ ರಿಜಿಸ್ಟಾರ್‌ ಆಫ್‌ ಸರ್ವೇಯವರಿಗೆ ಮಾತ್ರ ಅವಕಾಶವಿದೆ ಎಂಬುದು ಕೇಂದ್ರ ಸಚಿವರಿಗೆ, ಸಂಸದರಿಗೆ ಅರಿವಿಲ್ಲ. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ ಎಂದರು.
ಈ ಆಯೋಗ ಸುಪ್ರೀಂಕೋರ್ಟಿನ ಅದೇಶದ ಮೇರೆಗೆ ರಚನೆಯಾಗಿದೆ. ಅದರ ಜವಾಬ್ದಾರಿಗಳಲ್ಲಿ 10 ವರ್ಷಕ್ಕೊಮೆ ಸಮೀಕ್ಷೆ ನಡೆಸಿ, ಹಿಂದುಳಿದ ವರ್ಗಗಳ ಸ್ಥಿತಿಗತಿ ತಿಳಿದುಕೊಳ್ಳಬೇಕೆಂಬ ನಿಯಮವಿದೆ. ಮೂರ್ಖ ಶಿಖಾಮಣಿಗಳಿಗೆ ಇದು ತಿಳಿಯುತ್ತಿಲ್ಲ ಎಂದರು.

ಸಮೀಕ್ಷೆ ಹಂತದಲ್ಲಿನ ಲೋಪಗಳನ್ನು ಸರಿಪಡಿಸಲು ಈಗಾಗಲೇ ಸರ್ಕಾರ ಕ್ರಮಕೈಗೊಂಡಿದ್ದು, ತೀವ್ರಗತಿಯಲ್ಲಿ ಕಾರ್ಯಾಚರಿಸುತ್ತಿದೆ. ಅ. 7ರ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಯಾವ ಸಮುದಾಯವಾದರೂ ಮೀಸಲಾತಿ ಪಟ್ಟಿಗೆ ಸೇರಲು ಅವಕಾಶ ಇದೆ. ಆದರೆ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಕುರುಬ ಸಮುದಾಯವನ್ನು ಸೇರಿಸಲು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿರುವ ಪರಿಶಿಷ್ಟ ಪಂಗಡಗಳು ಪರಾಮರ್ಶೆ ನಡೆಸಬೇಕು. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಸಂಸತ್‌ನಲ್ಲಿ ಚರ್ಚೆ ಮಾಡಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಇದೆಲ್ಲಾ ಅಷ್ಟು ಸುಲಭದ ವಿಚಾರ ಅಲ್ಲ ಎಂದರು.

ವಿದೇಶದಿಂದ ಅಂಚೆ ಮೂಲಕ ಪಾರ್ಸಲ್‌ ಬಂದಿದ್ದ 9.93 ಕೋಟಿ ಮೌಲ್ಯದ ಡ್ರಗ್ಸ್ ವಶ : 7 ಮಂದಿ ಬಂಧನ

ಬೆಂಗಳೂರು,ಸೆ.29- ಅಂಚೆ ಕಚೇರಿಗೆ ವಿದೇಶದಿಂದ ಪಾರ್ಸಲ್‌ ಮೂಲಕ ಬಂದಿದ್ದ 1 ಕೋಟಿ ರೂ.ಮೌಲ್ಯದ ಹೈಡ್ರೋ ಗಾಂಜಾ ಸೇರಿದಂತೆ ಒಟ್ಟು 9.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು ಇಬ್ಬರು ವಿದೇಶಿ ಪ್ರಜೆಗಳು ಸೇರಿ ಏಳು ಡ್ರಗ್‌ ಪೆಡ್ಲರ್‌ ಗಳನ್ನು ಬಂಧಿಸಿದ್ದಾರೆ.ಕೆಜಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿಗೆ ವಿದೇಶದಿಂದ ಮಾದಕ ವಸ್ತು ಪಾರ್ಸಲ್‌ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪಾರ್ಸಲ್‌ನನ್ನು ತೆಗೆದು ನೋಡಿದಾಗ ಅದರಲ್ಲಿ ಮಾದಕ ವಸ್ತು 1.22 ಕೆಜಿ ಹೈಡ್ರೋ ಗಾಂಜಾ ಹಾಗೂ ಇನ್ನಿತರೆ ವಸ್ತುಗಳು ಕಂಡು ಬಂದಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು 1 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕೆಜಿನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಬಿ ಗೆ ವರ್ಗಾವಣೆ: ವಿದೇಶದಿಂದ ಅಂಚೆ ಕಚೇರಿಗೆ ಬಂದಿರುವ ಮಾದಕ ವಸ್ತುವಿನ ಬಗ್ಗೆ ಮುಂದಿನ ತನಿಖೆಗಾಗಿ ಸಿಸಿಬಿಗೆ ವರ್ಗಾಹಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯಾವ ದೇಶದಿಂದ ಈ ಪಾರ್ಸಲ್‌ ಬಂದಿದೆ. ಯಾರು ಈ ಮಾದಕ ವಸ್ತುವನ್ನು ಯಾರಿಗೆ ಅಂಚೆ ಮೂಲಕ ಕಳುಹಿಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಇಬ್ಬರು ವಿದೇಶಿ ಪ್ರಜೆಗಳ ಬಂಧನ:
ಮೆಡಿಕಲ್‌ ವೀಸಾ ಹಾಗೂ ಸ್ಟೂಡೆಂಡ್‌ ವೀಸಾ ಪಡೆದು ನೈಜೀರಿಯಾದಿಂದ ಭಾರತಕ್ಕೆ ಬಂದು ನಂತರ ನಗರದಲ್ಲಿ ವಾಸವಾಗಿದ್ದುಕೊಂಡು ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 7.80 ಕೋಟಿ ರೂ.ಮೌಲ್ಯದ 3 ಕೆಜಿ 852 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ 41 ಗ್ರಾಂ 82 ಮಿ. ಎಕ್ಸ್ ಟಸಿ ಪಿಲ್ಸ್ ಗಳು ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾ ದೇಶದ ಕೆವಿನ್‌ ರೋಜರ್‌ ಮತ್ತು ಥಾಮಸ್‌‍ ನವೀದ್‌ ಚೀಫ್‌ ಬಂಧಿತ ವಿದೇಶಿ ಪ್ರಜೆಗಳು. 2019 ರಲ್ಲಿ ಮೆಡಿಕಲ್‌ ವೀಸಾ ಪಡೆದು ಭಾರತಕ್ಕೆ ಬಂದಿದ್ದ ವ್ಯಕ್ತಿ ನಂತರದ ದಿನಗಳಲ್ಲಿ ದೆಹಲಿಯಲ್ಲಿ ವಾಸವಿರುವ ವಿದೇಶಿ ಪ್ರಜೆಗಳಿಂದ ಡ್ರಗ್ಸ್ ಗಳನ್ನು ಖರೀದಿಸಿ ಬೆಂಗಳೂರಿಗೆ ಬಂದು ಪರಿಚಯಿಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.
ಈತನ ವಿರುದ್ಧ 2023 ರಲ್ಲಿ ಎನ್‌ಸಿಬಿ ಘಟಕದಲ್ಲಿ ಎನ್‌ಡಿಪಿಎಸ್‌‍ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಮತ್ತೊಬ್ಬ ವಿದೇಶಿ ಪ್ರಜೆ 2019 ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾನೆ. ಈತ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಈತನ ವಿರುದ್ಧ ಗುಜರಾತ್‌ ರಾಜ್ಯದ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದನು.

ಈತ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿಕೊಂಡಿದ್ದನು.ಈ ಇಬ್ಬರ ವಿರುದ್ಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಟೆಕ್ಕಿ ಬಂಧನ:
ಕೇರಳದಿಂದ ಕಡಿಮೆಬೆಲೆಗೆ ಹೈಡ್ರೋ ಗಾಂಜಾವನ್ನು ಖರೀದಿಸಿ ನಗರದಲ್ಲಿ ಹೆಚ್ಚಿನ ಬೆಲೆಗೆ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಸಾಫ್‌್ಟವೇರ್‌ಎಂಜಿನಿಯರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ 75 ಲಕ್ಷ ರೂ.ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಡ್ರಗ್‌ಪೆಡ್ಲರ್‌ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿರುವ ಟೆಕ್ಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೋಜಿನ ಜೀವನಕ್ಕಾಗಿ ಅಧಿಕ ಹಣ ಸಂಪಾದಿಸಲು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗಿ ತಿಳಿಸಿದ್ದಾನೆ.

ಆರೋಪಿಯಿಂದ 75 ಲಕ್ಷ ಮೌಲ್ಯದ 500 ಗ್ರಾಂ ಹೈಡ್ರೋ ಗಾಂಜಾ 1 ಕಾರು, ಬೈಕ್‌ ಹಾಗೂ ಮೊಬೈಲ್‌ ವಶಪಡಿಸಿಕೊಂಡಿದ್ದು ಈ ಬಗ್ಗೆ ಮಹದೇವಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಡೆಂಟಲ್‌ ವಿದ್ಯಾರ್ಥಿ ಸೆರೆ:
ಮೋಜಿನ ಜೀವನ ನಡೆಸಲು ಅಧಿಕ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾವನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 32ಲಕ್ಷ ರೂ. ಮೌಲ್ಯದ 300 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಆಡುಗೋಡಿ ವ್ಯಾಪ್ತಿಯಲ್ಲಿ ಡ್ರಗ್‌ಪೆಡ್ಲರ್‌ಬಗ್ಗೆ ಮಾಹಿತಿಯನ್ನು ಕಲೆಹಾಕಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಸ್ಥಳದ ಮೇಲೆ ದಾಳಿ ಮಾಡಿ ಡ್ರಗ್‌ಪೆಡ್ಲರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿ ಎಂಬುವುದು ಗೊತ್ತಾಗಿದೆ.

ಮೂವರ ಡ್ರಗ್‌ಪೆಡ್ಲರ್‌ಗಳ ಸೆರೆ:
ಅಧಿಕ ಹಣ ಸಂಪಾದನೆಗಾಗಿ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಮೂವರು ಡ್ರಗ್‌ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 6 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಪರಿಚಯಿಸ್ಥರಿಗೆ ಅಧಿಕ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದುದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿತರೆ ವ್ಯಕ್ತಿಗಳ ವಿರುದ್ಧ ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡು ಡ್ರಗ್‌ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಂತ್ರಸ್ತರ ನೆರವಿಗೆ ಸರ್ಕಾರ ಅವಿರತ ಪ್ರಯತ್ನ ನಡೆಯುತ್ತಿದೆ : ಪ್ರಿಯಾಂಕ ಖರ್ಗೆ

ಬೆಂಗಳೂರು, ಸೆ.29- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಯ ಭೀಮಾನದಿ ಭಾಗದ ಹಲವು ಪ್ರದೇಶಗಳು ಮುಳು ಗಡೆಯಾಗಿದ್ದು, ಜನರ ಪುನರ್‌ ವಸತಿಗೆ ಸರ್ಕಾರ ಅವಿರತ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ತಮ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ಥ ಪ್ರದೇಶಗಳ ಡ್ರೋನ್‌ ವಿಡಿಯೋಗಳನ್ನು ಹಂಚಿಕೊಂಡಿರುವ ಅವರು, ಕರ್ನಾಟಕದ ಭೀಮಾ ಜಲಾಶಯ ಪ್ರದೇಶಗಳಲ್ಲಿನ ಜಿಲ್ಲೆಗಳ ಪರಿಸ್ಥಿತಿ ಸವಾಲಿನದ್ದಾಗಿದೆ. ನಿರಂತರ ಮಳೆ ಹಾಗೂ ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ, ರಸ್ತೆ ಸಂಪರ್ಕ ಕಡಿತಗೊಂಡಿವೆ ಎಂದು ತಿಳಿಸಿದ್ದಾರೆ.

ಜೀವಗಳ ರಕ್ಷಣೆ ಸರ್ಕಾರದ ಮೊದಲ ಆದ್ಯತೆ. ಸುಮಾರು 8 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಆಹಾರ, ನೀರು, ವೈದ್ಯಕೀಯ ಆರೈಕೆ ಒದಗಿಸಲಾಗುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಅವರು ರಕ್ಷಣೆ ಪಡೆದಿದ್ದಾರೆ.

ಜಾನುವಾರುಗಳನ್ನು ರಕ್ಷಿಸಲು ಮತ್ತು ಜೀವನೋಪಾಯಕ್ಕೆ ಹಾನಿ ಕಡಿಮೆ ಮಾಡಲು ಎಸ್‌‍ಡಿಆರ್‌ಎಫ್‌ ಹಾಗೂ ಎಲ್ಲಾ ಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.
ಜನ ಜೀವನ ಸಹಜ ಸ್ಥಿತಿಗೆ ಬರುವವರೆಗೂ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿ ಅಗತ್ಯ ಸಂಪನೂಲಗಳನ್ನು ಒದಗಿಸಲಾಗುವುದು. ತೊಂದರೆಗೊಳಗಾದ ಜನರಜೊತೆ ಸರ್ಕಾರ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ಹಂಚಿಕೊಳ್ಳಲಾದ ದೃಶ್ಯಗಳಲ್ಲಿ ಭೀಮಾನದಿ ತೀರದ ಭಾಗಗಳಲ್ಲಿ ಕಂಡು ಬರುತ್ತಿರುವ ದೃಶ್ಯಗಳು ಮಳೆಯ ಹಾನಿಯ ತೀವ್ರತೆಯನ್ನು ಅನಾವರಣ ಗೊಳಿಸುತ್ತಿವೆ. ಊರಿಗೆ ಊರೇ ಮುಳುಗಡೆಯಾಗಿದೆ. ರಸ್ತೆ, ಸೇತುವೆ ಹಾಗೂ ಮೂಲ ಸೌಕರ್ಯಗಳು ಕೊಚ್ಚಿಹೋಗಿವೆ.

ಬೆಂಗಳೂರು : ಪತ್ನಿಗೆ 15 ಬಾರಿ ಇರಿದು ಕೊಂದು ಪತಿ ಆತ್ಮಹತ್ಯೆ

ಬೆಂಗಳೂರು, ಸೆ.29- ಪತ್ನಿಗೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ನಗರದ ಜ್ಞಾನಭಾರತಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಲ್ಲಾಳ ಮುಖ್ಯರಸ್ತೆಯ ಪ್ರೆಸ್‌‍ಲೇಔಟ್‌ನಲ್ಲಿ ವಾಸವಾಗಿದ್ದ ಮಂಜು(27) ಕೊಲೆಯಾದ ಮಹಿಳೆ. ಧರ್ಮಶೀಲನ್‌ (29) ಎಂಬಾತನೇ ಪತ್ನಿ ಕೊಲೆ ಮಾಡಿ ಫ್ಯಾನಿಗೆ ನೇಣು ಹಾಕಿಕೊಂಡು ಆತಹತ್ಯೆಗೆ ಶರಣಾದ ಪತಿ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಮಧ್ಯೆ ಕಳೆದ ರಾತ್ರಿ ಜಗಳವಾಗಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಧರ್ಮಶೀಲನ್‌ ದುಬೈನಲ್ಲಿ ಪೆಂಟರ್‌ರಾಗಿ ಕೆಲಸಮಾಡುತ್ತಿದ್ದು, ಮಂಜು ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಒಂದು ತಿಂಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದು ಪ್ರೆಸ್‌‍ಲೇಔಟ್‌ನಲ್ಲಿ ದಂಪತಿ ವಾಸವಾಗಿದ್ದರು. ತಮಿಳುನಾಡು ಮೂಲದ ಧರ್ಮಶೀಲನ್‌ ವೃತ್ತಿಯಲ್ಲಿ ಪೆಂಟರ್‌ ಕೆಲಸ ಮಾಡುತ್ತಿದ್ದು, ಮದ್ಯವೆಸನಿಯಾಗಿದ್ದ. ಪದೆಪದೇ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಪತ್ನಿಗೆ ಮನಬಂದಂತೆ ಅನೇಕ ಬಾರಿ ಇರಿದು, ಕೊಲೆ ಮಾಡಿದ್ದಾನೆ. ನಂತರ ಆತನೂ ಸಹ ಅದೇ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾನೆ.ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಜ್ಞಾನಭಾರತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೆರೆ ಸಂತ್ರಸ್ತರ ನಿರ್ಲಕ್ಷ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು,ಸೆ.29– ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.

ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಸೇರಿದಂತೆ ಮಳೆ ಪೀಡಿತ ಪ್ರದೇಶಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದ ಎರಡು ತಂಡ ಮಳೆ ಪೀಡಿತ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿ ಸರ್ಕಾರದ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದರು.

ಒಂದು ಕಡೆ ಮುಂಗಾರು ಅವಧಿ ಪೂರ್ಣಗೊಳ್ಳುತ್ತಿದ್ದು, ಇನ್ನೊಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಆದರೂ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅನೇಕ ಕಡೆ ಸಾವುನೋವು ಉಂಟಾಗಿದೆ. ಕೆಲವು ಕಡೆ ಮನೆಗಳು ಕುಸಿದು ಬಿದ್ದಿದ್ದು ನೂರಾರು ಜನ ನಿರಾಶ್ರಿತರಾಗಿದ್ದಾರೆ. ಶಾಲೆಗಳು, ಅಂಗನವಾಡಿ ಕೇಂದ್ರಗಳು ಸಹ ಕುಸಿದು ಬಿದ್ದಿವೆ.

ಕನಿಷ್ಟಪಕ್ಷ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸಂತ್ರಸ್ತರನ್ನು ಭೇಟಿ ಮಾಡಿ ಕಷ್ಟಸುಖ ವಿಚಾರಿಸಿಲ್ಲ. ಸರ್ಕಾರ ಗಾಢ ನಿದ್ರೆಯಲ್ಲಿದ್ದು, ಎಚ್ಚೆತ್ತುಕೊಳ್ಳುವ ಕೆಲಸವನ್ನು ಪ್ರತಿಪಕ್ಷ ಮಾಡುತ್ತದೆ ಎಂದು ಬಿಜೆಪಿ ಹೇಳಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸರ್ಕಾರ ಮಳೆ ಪೀಡಿತ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಿದೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಜಿಲ್ಲಾಧಿಕಾರಿಗಳ ಖಜಾನೆಯಲ್ಲಿರುವ ಹಣವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ಕೊಡಬೇಕು. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಕೇಂದ್ರದ ಕಡೆ ಬೆರಳು ತೋರಿದರೆ ಸರ್ಕಾರ ದಿವಾಳಿಯಾಗಿದೆಯೇ ಎಂದು ಪ್ರಶ್ನೆ ಮಾಡಿದರು.

ಪ್ರವಾಸ ತಂಡಗಳು
ತಂಡ-1: ಬಿ.ವೈ.ವಿಜಯೇಂದ್ರ, ಮೇಲನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಸಂಸದ ಉಮೇಶ್‌ ಜಾಧವ್‌, ಮೇಲನೆ ಸದಸ್ಯೆ ಭಾರತಿ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ಎ.ಎಸ್‌‍. ಪಾಟೀಲ್‌ ನಡಹಳ್ಳಿ ಅವರು ಒಂದು ತಂಡವಾಗಿ ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್‌ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ತಂಡ-2: ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌, ಶಾಸಕರಾದ ಅರವಿಂದ ಬೆಲ್ಲದ್‌, ಸಿ.ಟಿ.ರವಿ, ಶಶಿಕಲಾ ಜೊಲ್ಲೆ, ಸಿದ್ದು ಸವದಿ, ಅಭಯ್‌ ಪಾಟೀಲ್‌, ಸಂಸದರಾದ ರಮೇಶ್‌ ಜಿಗಜಿಣಗಿ, ರಮೇಶ್‌ ಗದ್ದಿಗೌಡರ್‌ ಅವರ ತಂಡವು ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ, ವಿಜಯಪುರ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದೆ. ಮೇಲನೆ ವಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಸಂಯೋಜಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕನ್ನಡದ ಹೆಸರಾಂತ ನಾಟಕಕಾರ, ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ

ಬೆಂಗಳೂರು,ಸೆ.29- ಕನ್ನಡದ ಹೆಸರಾಂತ ನಾಟಕಕಾರ, ರಂಗಭೂಮಿ ಕಲಾವಿದ, ನಿದೇರ್ಶಕ ಹಾಗೂ ಉತ್ತರಕನ್ನಡದ ಆಡು ಭಾಷೆಯ ಮೂಲಕ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಯಶವಂತ ಸರದೇಶಪಾಂಡೆ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ಮನೆಯಲ್ಲಿದ್ದ ಅವರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು ತಕ್ಷಣವೇ ಕುಟುಂಬದ ಸದಸ್ಯರು ಪೋರ್ಟೀಸ್‌‍ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಮಾಲತಿ, ಪುತ್ರಿ ದೋಸ್ತಿಯನ್ನು ಅಗಲಿದ್ದಾರೆ. ಅವರಿಗೆ 61ವರ್ಷ ವಯಸ್ಸಾಗಿತ್ತು.

ಸರದೇಶಪಾಂಡೆ ಅವರ ನಿಧನದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆಲ್‌ ದಿ ಬೆಸ್ಟ್‌ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾತ್ರವಹಿಸುತ್ತಿದ್ದರು ಎಂದು ಅವರು ಬರೆದುಕೊಂಡಿದ್ದಾರೆ.

ರಂಗ ಕಲಾವಿದ ಯಶವಂತ ಸರದೇಶಪಾಂಡೆ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. 1965 ಜೂನ್‌ 13ರಂದು ಶ್ರೀಧರರಾವ್‌ ಸೆರದೇಶಪಾಂಡೆ, ಕಲ್ಪನಾದೇವಿ ಅವರ ತಂದೆತಾಯಿಗಳು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೀಕಿನ ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವಿ ಹಾಗೂ ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದರು.

ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್‌, ಮಿಡ್‌ಸಮರ್‌ ನೈಟ್‌್ಸಡ್ರೀಮ್‌, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದಾರೆ. ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಇವರಿಗೆ ಸೇರುತ್ತದೆ.

ರೇಡಿಯೋ, ದೂರದರ್ಶನ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ನಾಟಕಗಳ ನಿರ್ದೇಶಕ, ನಟ, ಆಲ್‌ ದಿ ಬೆಸ್ಟ್‌, ರಾಶಿ ಚಕ್ರ, ಸಹಿ ರೀ ಸಹಿ, ದಿಲ್‌ ಮಾಂಗೆ ಮೋರ್‌ ನಗೆ ನಾಟಕಗಳನ್ನು ತಿಳಿಹಾಸ್ಯದ ಜೊತೆಗೆ ಎಂ.ಟಿ.ಆರ್‌ ಸಹಯೋಗದೊಡನೆ ರಂಗ ಸಂಭ್ರಮದ ಕಾರ್ಯಕ್ರಮಗಳನ್ನು ಯೋಜಿಸಿದ್ದಾರೆ.

ರಾಶಿ ಚಕ್ರ ನಗೆ ನಾಟಕದಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ, ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್‌, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು.

ಸಿನಿಮಾದಲ್ಲೂ ಛಾಪು ಮೂಡಿಸಿದ್ದ ದೇಶಪಾಂಡೆ
ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್‌, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸಹಿ ರೀ ಸಹಿ (ಮೂಲ:ಮರಾಠಿ) ಕಾಲಚಕ್ರ ಐಡಿಯಾ ಮಾಡ್ಯಾರ ಎಂಬ ಚಲನಚಿತ್ರ ನಿರ್ಮಾಣ, ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕಮಲಹಾಸನ್‌ ರ ಪಾತ್ರದಲ್ಲಿ ಉತ್ತರಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದಾರೆ.

ವಿದ್ಯಾಭ್ಯಾಸ:
ಹೆಗ್ಗೋಡು ನಿನಾಸಂ ರಂಗಭೂಮಿ ಸಂಸ್ಥೆಯಲ್ಲಿ ರಂಗಭೂಮಿ ಕಲೆಗಳಲ್ಲಿ ಡಿಪ್ಲೊಮಾ 1985-86 ನ್ಯೂಯಾರ್ಕ್‌ ವಿಶ್ವವಿದ್ಯಾಲಯ, 1996ರಲ್ಲಿ ಸಿನಿಮಾ ಮತ್ತು ನಾಟಕ ಬರವಣಿಗೆಯಲ್ಲಿ ಪ್ರಮಾಣಪತ್ರ ಕೋರ್ಸ್‌ ಪಡೆದಿದ್ದರು.

ಪ್ರಶಸ್ತಿಗಳು
ರಾಜ್ಯೋತ್ಸವ ಪ್ರಶಸ್ತಿ 2010 ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ, ಸನ್‌ಫೀಸ್ಟ್‌-ಉದಯ ಪ್ರಶಸ್ತಿ 2006 ಅತ್ಯುತ್ತಮ ಸಂಭಾಷಣೆಗಾಗಿ – ರಾಮ ಶಾಮ ಭಾಮ ಚಿತ್ರ, 2003 ರಲ್ಲಿ ಆರ್ಯಭಟ್ಟ ಪ್ರಶಸ್ತಿ, 2005 ರಲ್ಲಿ ಮಯೂರ್‌ ಪ್ರಶಸ್ತಿ, 2008 ರಲ್ಲಿ ಅಭಿನಯ ಭಾರತಿ ಪ್ರಶಸ್ತಿ, 2008 ರಲ್ಲಿ ರಂಗಧ್ರುವ ಪ್ರಶಸ್ತಿ, 2008 ರಲ್ಲಿ ಗ್ಲೋಬಲನ್‌ ಪ್ರಶಸ್ತಿಗಳು ಬಂದಿದ್ದವು.
ನಾಟಕಗಳು: ಜನಪ್ರಿಯ ರಂಗಕರ್ಮಿ, ಸಿರ್ದೇಶಪಾಂಡೆಯವರ ಬಹುತೇಕ ನಾಟಕಗಳು 500 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ ಮತ್ತು ಆಲ್‌ ದಿ ಬೆಸ್ಟ್‌ , ರಾಶಿಚಕ್ರ , ಒಲವೇ ಜೀವನ ಶಾಕ್ಷಾತ್ಕಾರ , ನೀನಾನಾದ್ರೆ ನಾನೀನೇನಾ , ಸಹಿ ರಿ ಸಹಿ , ಒಂದಾತ ಭಟ್ರು , ಅಂಧಾಯುಗ , ಸಾಹೇಬರು ಮಂದೆ ಡೋರ್‌ ಮಿಸ್ಸಿಂಗ್‌ , ಮಿಸ್ಸಿಂಗ್‌ ಮಂಡ್ರೆಡ್‌ ಡು ಹೆಚ್‌, ಮಿಸ್ಸಿಂಗ್‌ ಮಂಡ್ರೆಡ್‌ ಡೋರ್‌ ಕನ್ನಡ ನಾಟಕಗಳನ್ನು ಒಳಗೊಂಡಿದೆ.

2008 ರ ರಾಜ್ಯ ಚುನಾವಣೆಗಳ ಸಮಯದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆಯನ್ನು ಪ್ರಚಾರ ಮಾಡಲು ಸಿರ್ದೇಶ್‌ಪಾಂಡೆ ತಮ ನಾಟಕಗಳನ್ನು ಬಳಸಿದ್ದರು.

ಸಿನಿಮಾಗಳು:
ಸಿರ್ದೇಶಪಾಂಡೆ ಅವರು ಐಡಿಯಾ ಮಾಡ್ಯಾರ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದ್ದರು. ರಾಮ ಶಾಮ ಭಾಮ , ಮಠ , ಜೂಟಾಟಟ , ಧಿಮಾಕು , ಶ್ರೀ ದಾನಮದೇವಿ , ಸ್ಟೂಡೆಂಟ್‌ , ತುತ್ತೂರಿ ಮತ್ತು ಅತಿಥಿ ಚಿತ್ರಗಳಿಗೆ ತಮ ಚಿತ್ರಕಥೆಗಳನ್ನು ಬರೆಯುವ ಮೂಲಕ ಕೊಡುಗೆ ನೀಡಿದ್ದರು. ಅತಿಥಿ ಚಿತ್ರದ ಸಹ ನಿರ್ದೇಶಕರೂ ಆಗಿದ್ದರು. ಅವರು ಹಿಂದಿಯಲ್ಲಿ ಶಾದಿ ಕೆ ಆಫ್ಟರ್‌ ಎಫೆಕ್ಟ್‌್ಸ ಮತ್ತು ಮರಾಠಿಯಲ್ಲಿ ಆನ್‌ ಡ್ಯೂಟಿ ಚೋವಿಸ್ತಾಸ್‌‍ನಂತಹ ವಿವಿಧ ಭಾಷೆಗಳಲ್ಲಿ ಸಿನಿಮಾಗಳಿಗಾಗಿ ಕೆಲಸ ಮಾಡಿದ್ದರು. ತಮ ಹೊಸ ಯೋಜನೆಯಾದ ಹಾಡು ಹಕ್ಕಿ ಹಾಡು ಎಂಬ ಕನ್ನಡ ಚಲನಚಿತ್ರ ನಿರ್ಮಾಣದಲ್ಲಿ ನಿರತರಾಗಿದ್ದಾರೆ . ಅವರು ಪ್ರಸ್ತುತ ಮಕ್ಕಳ ಆಧಾರಿತ ಚಲನಚಿತ್ರ ವೆರಿ ಗುಡ್‌ ಚಿತ್ರೀಕರಣದಲ್ಲಿದ್ದರು.

ಅಡ್ಡ ಹೆಸರುಗಳು:
ಶಿವಮೊಗ್ಗ ರಂಗಭೂಮಿ ಪ್ರಿಯರಿಂದ ನಗೇಯ ಸರ್ದಾರ್‌, ಉಡುಪಿ ಮಣಿಪಾಲದ ಜನರಿಂದ ೞನಗೇ ನಾಟಕಗಳ ಬಾದ್‌ಶಾ, ಬಳ್ಳಾರಿ ಕಲಾ ಪ್ರಿಯರಿಂದ ೞನಗೇಗಡಲ ನಾವಿಕ ಕರ್ನಾಟಕ ಪತ್ರಿಕಾ ಮಾಧ್ಯಮದಿಂದ ರಂಗಭೂಮಿಯ ಸೂಪರ್‌ ಸ್ಟಾರ್‌ ಒಲಿತು ಬಂದಿತ್ತು.ಉತ್ತಮ ಸಂಭಾಷಣೆ ರಚನೆಗಾಗಿ ಸನ್‌ಫೀಸ್ಟ್‌ ಉದಯ ಟಿವಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಯೂರ ಪ್ರಶಸ್ತಿ, ನಗೆ ಸರದಾರ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.

ಏಷ್ಯಾ ಕಪ್‌ ವಿಜೇತ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ರೂ. ಬಹುಮಾನ

ನವದೆಹಲಿ, ಸೆ.30- ಏಷ್ಯಾ ಕಪ್‌ ವಿಜೇತ ಭಾರತೀಯ ಕ್ರಿಕೆಟ್‌ ತಂಡ ಮತ್ತು ಅದರ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ರೂ. 21 ಕೋಟಿ ಬಹುಮಾನ ಮೊತ್ತವನ್ನು ನೀಡಲಿದೆ.
ಕಳೆದ ದುಬೈನಲ್ಲಿ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ನಂತರ ಮಂಡಳಿಯು ತನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಈ ಘೋಷಣೆ ಮಾಡಿದೆ.

ಮೂರು ಹೊಡೆತಗಳು. 0 ಉಡುಗೊರೆ .ಏಷ್ಯಾ ಕಪ್‌ ಚಾಂಪಿಯನ್‌್ಸ ಸಂದೇಶ ರವಾನಿಸಲಾಗಿದೆ. ) ತಂಡ ಮತ್ತು ಸಹಾಯಕ ಸಿಬ್ಬಂದಿಗೆ 21 ಕೋಟಿ ಬಹುಮಾನ ಎಂದು ಮಂಡಳಿಯು ಪಾಕಿಸ್ತಾನ ವಿರುದ್ಧ ಭಾರತದ ಅಜೇಯ ಸರಣಿಯನ್ನು ಉಲ್ಲೇಖಿಸಿ ಪೋಸ್ಟ್‌ ಮಾಡಿದೆ.

ಆದಾಗ್ಯೂ, ನಿಧಿಯ ಹಂಚಿಕೆ ನಿಖರವಾದ ವಿವರಗಳನ್ನು ಸಂಸ್ಥೆ ನೀಡಿಲ್ಲ.ಅಜೇಯ ಚಾಂಪಿಯನ್‌ಗಳು. ಪಾಕ್‌ ವಿರುದ್ಧ 3-0 ಅಂತರದ ಪ್ರಾಬಲ್ಯ ಸಾಧಿಸಿದ ಟೀಮ್‌ ಇಂಡಿಯಾಗೆ ಅಭಿನಂದನೆಗಳು. ತಿಲಕ್‌ ವರ್ಮಾ ಮತ್ತು ಇತರ ತಂಡದ 18 ಆಟಗಾರರು ಅದ್ಭುತ ಪ್ರದರ್ಶನ. ಒತ್ತಡದ ನಡುವೆಯೂ ಉತ್ತಮ ಪ್ರದರ್ಶನ, ಎಂದು ಮಂಡಳಿಯ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಪೋಸ್ಟ್‌ ಮಾಡಿದ್ದಾರೆ.