Home Blog Page 91

ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ : ಮಗು, ಮಹಿಳೆ ಸೇರಿ ನಾಲ್ವರ ಸಜೀವ ದಹನ

ಅಲೆಗಢ ಸೆ. 23 (ಪಿಟಿಐ) ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವಾಹನಗಳಿಗೆ ಬೆಂಕಿ ಹೊತ್ತುಕೊಂಡ ಪರಿಣಾಮ ಮಹಿಳೆ, ಮಗು ಸೇರಿದಂತೆ ನಾಲ್ವರು ಸುಟ್ಟು ಕರಕಲಾಗಿರುವ ಘಟನೆ ಅಲಿಘಡದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ-34 ರಲ್ಲಿ ಕಾರು ಮತ್ತು ಕ್ಯಾಂಟರ್ ಡಿಕ್ಕಿ ಹೊಡೆದು ಮಹಿಳೆ ಮತ್ತು ಮಗು ಸೇರಿದಂತೆ ನಾಲ್ವರು ಜೀವಂತ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಿ ಸೇತುವೆ ಬಳಿ ಅಲಿಗಢ ಕಡೆಗೆ ಹೋಗುತ್ತಿದ್ದ ಕಾರು ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.ವಾಹನವು ರಸ್ತೆ ವಿಭಜಕವನ್ನು ಭೇದಿಸಿ ಮುಂದೆ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಮೃಕ್ ಜೈನ್ ವರದಿಗಾರರಿಗೆ ತಿಳಿಸಿದ್ದಾರೆ.

ಘರ್ಷಣೆಯ ನಂತರ ಎರಡೂ ವಾಹನಗಳು ಬೆಂಕಿಗೆ ಆಹುತಿಯಾಗಿ ನಾಲ್ವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಜೈನ್ ಹೇಳಿದರು. ವಾಹನದಲ್ಲಿ ನಿಲುಕಿದ್ದ ಒಬ್ಬ ವ್ಯಕ್ತಿಯನ್ನು ಬಾರಿಹೋಕರ ಸಹಾಯದಿಂದ ಹೊರತೆಗೆದು ಪೊಲೀಸರು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಮತ್ತು ಬಲಿಪಶುಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2025)

ನಿತ್ಯ ನೀತಿ : ಮಾನವನು ನಿಜವಾದ ಜ್ಞಾನದಿಂದ ವಂಚಿತನಾಗಿರುವುದು ಸಹಜ. ಏಕೆಂದರೆ, ಅವನನ್ನು ಅಜ್ಞಾನವು ಸದಾ ಕಾಲ ಸುತ್ತುವರಿದಿರುತ್ತದೆ.

ಪಂಚಾಂಗ : ಬುಧವಾರ, 24-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಚಿತ್ರಾ / ಯೋಗ: ಐಂದ್ರ / ಕರಣ: ತೈತಿಲ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.15
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಕಲಿಯಬೇಕಾಗುತ್ತದೆ.
ವೃಷಭ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು. ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.
ಮಿಥುನ:ಹಿತವಾದ ಮಾತುಗಳಿಂದ ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ.

ಕಟಕ: ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನವಶ್ಯಕ ವಾದ ಮಾಡದಿರಿ.
ಸಿಂಹ: ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.
ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.

ತುಲಾ: ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರರು ಸಿಗುವರು.
ವೃಶ್ಚಿಕ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಧನುಸ್ಸು: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.

ಮಕರ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಮದ ಕೆಲಸ ಸರಾಗವಾಗಿ ಸಾಗಲಿದೆ.
ಕುಂಭ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
ಮೀನ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-09-2025)

ನಿತ್ಯ ನೀತಿ : ಪ್ರಾಜ್ಞನಾದವನು ಸುಖ ಬಂದಾಗ ಬೀಗುವುದಿಲ್ಲ. ದುಃಖ ಬಂದಾಗ ಕುಗ್ಗು ವುದೂ ಇಲ್ಲ. ಎರಡನ್ನೂ ಸಮನಾಗಿ ಬರಮಾಡಿ ಕೊಳ್ಳುತ್ತಾನೆ. ಇದರಿಂದ ಆತ್ಮಶಕ್ತಿ ಜಾಗೃತವಾಗಿ ಸದಾ ಆನಂದ ಸ್ವರೂಪನಾಗಿಯೇ ಇರುತ್ತಾನೆ.

ಪಂಚಾಂಗ : ಮಂಗಳವಾರ, 23-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ /ಮಾಸ: ಆಶ್ವಯುಜ /ಪಕ್ಷ:ಶುಕ್ಲ / ತಿಥಿ: ದ್ವಿತೀಯ / ನಕ್ಷತ್ರ: ಹಸ್ತ /ಯೋಗ: ಬ್ರಹ್ಮಾ /ಕರಣ: ಬಾಲವ

ಸೂರ್ಯೋದಯ ; ಬೆ.06.09
ಸೂರ್ಯಾಸ್ತ : 06.15
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಚರ ಮತ್ತು ಸ್ಥಿರ ಆಸ್ತಿಯಲ್ಲಿ ಹೆಚ್ಚಳ ಕಂಡು ಬರಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.
ವೃಷಭ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಮಿಥುನ: ತಾಯಿ ಮತ್ತು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದ ಪಡೆಯಿರಿ.
ಕಟಕ: ವೈದ್ಯವೃತ್ತಿಯಲ್ಲಿರುವವರು ಅಧಿ ಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಸಿಂಹ: ಎಲ್ಲ ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕನ್ಯಾ: ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ ಉಂಟಾಗಲಿದೆ.
ತುಲಾ: ಉದ್ಯೋಗ ಬದಲಾ ಯಿಸಲು ಯೋಚಿಸುವಿರಿ.
ವೃಶ್ಚಿಕ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.
ಧನುಸ್ಸು: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.
ಮಕರ: ಸಮಾಜದಲ್ಲಿ ವಿಶೇಷವಾದ ಗೌರವ ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಕುಂಭ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಹಳೆ ಸ್ನೇಹಿತರ ಭೇಟಿ ಸಂತಸ ತರಲಿದೆ.
ಮೀನ: ಸ್ವಯಂ ಉದ್ಯೋಗಿಗಳಿಗೆ ಶುಭಕರವಾದ ದಿನ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಸೈಬರ್‌ ವಂಚನೆ : ಕ್ಷಿಪ್ರ ಕಾರ್ಯಾಚರಣೆ ನಡೆಸಿ 14 ಲಕ್ಷ ರೂ. ವಾಪಸ್‌‍

ಬೆಂಗಳೂರು,ಸೆ.22- ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಸೈಬರ್‌ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳೆಗೆ 14 ಲಕ್ಷ ರೂ. ಹಣವನ್ನು ಕೇವಲ ಒಂದು ವಾರದೊಳಗೆ ವಾಪಸ್‌‍ ಕೊಡಿಸುವಲ್ಲಿ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವೇಶ್ವರ ನಗರದ ಪ್ರೀತಿ (44) ಎಂಬುವವರಿಗೆ ಸೈಬರ್‌ ವಂಚಕರು ವಾಟ್‌್ಸಆಪ್‌ ಕರೆಮಾಡಿ ತಾವು ಮುಂಬೈ ಸೈಬರ್‌ ಕ್ರೈಂ ಎಂದು ಪರಿಚಯಿಸಿಕೊಂಡು ನಿಮ ಬ್ಯಾಂಕ್‌ ಖಾತೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂದು ಹೆದರಿಸಿದ್ದಾರೆ.

ನಿಮ ಹಣವನ್ನು ಆರ್‌ಬಿಐಗೆ ವೆರಿಫಿಕೇಷನ್‌ಗೆ ಕಳುಹಿಸಿ ಪುನಃ 45 ನಿಮಿಷದಲ್ಲಿ ನಿಮ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ, ಒಂದು ವೇಳೆ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡದಿದ್ದಲ್ಲಿ ನಿಮನ್ನು ಬಂಧಿಸಲಾಗುವುದೆಂದು ಬೆದರಿಸಿದ್ದಾರೆ. ತದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ 14 ಲಕ್ಷ ರೂ. ಹಣವನ್ನು ಯೆಸ್‌‍ ಬ್ಯಾಂಕ್‌ ಖಾತೆಗೆ ಕರೆ ಮಾಡಿದ ವ್ಯಕ್ತಿ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಕೆಲ ಗಂಟೆಗಳಾದರೂ ತಮ ಖಾತೆಗೆ ವಾಪಸ್‌‍ ಹಣ ವರ್ಗಾವಣೆಯಾಗದಿದ್ದಾಗ ಮೋಸ ಹೋಗಿರುವುದನ್ನು ಅರಿತ ಪ್ರೀತಿಯವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಇಎನ್‌ ಠಾಣೆ ಪೊಲೀಸರು, ಕೂಡಲೇ ಪ್ರೀತಿಯವರಿಂದಲೇ ರಾಷ್ಟ್ರೀಯ ಸೈಬರ್‌ ಸಹಾಯವಾಣಿ ನಂಬರ್‌1930ಗೆ ಕರೆ ಮಾಡಿಸಿ ದೂರು ದಾಖಲಿಸಿ, ಹಣ ವರ್ಗಾವಣೆಯಾದ ಆರೋಪಿತನ ಬ್ಯಾಂಕ್‌ ಖಾತೆಯಲ್ಲಿ ಹಣ ಫ್ರೀಜ್‌ ಮಾಡಿಸಲಾಗಿದೆ. ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಯ ಬ್ಯಾಂಕ್‌ ಖಾತೆಯಲ್ಲಿ ಫ್ರೀಜ್‌ ಆಗಿದ್ದ ಹಣವನ್ನು ವಾಪಸ್‌‍ ದೂರುದಾರರಾದ ಪ್ರೀತಿಯವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸುವ ಸಂಬಂಧ ಯೆಸ್‌‍ ಬ್ಯಾಂಕ್‌ನ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ 47 ನೇ ಎಸಿಜೆಎಂ ನ್ಯಾಯಾಲಯದಿಂದ ಆದೇಶವನ್ನು ಪಡೆದಿದ್ದಾರೆ.
ಅದರಂತೆ ಕೇವಲ ಒಂದು ವಾರದೊಳಗೆ ತ್ವರಿತಗತಿಯಲ್ಲಿ ಸಂಪೂರ್ಣ 14 ಲಕ್ಷ ರೂ. ಹಣವನ್ನು ದೂರುದಾರರಾದ ಪ್ರೀತಿ ಅವರಿಗೆ ವಾಪಸ್‌‍ ಕೊಡಿಸುವಲ್ಲಿ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪ ಪೊಲೀಸ್‌‍ ಆಯುಕ್ತ ಗಿರೀಶ್‌ ಅವರ ಮಾರ್ಗದರ್ಶನದಲ್ಲಿ , ಸಹಾಯಕ ಪೊಲೀಸ್‌‍ ಆಯುಕ್ತರಾದ ಉಮಾಮಣಿ ಅವರ ನೇತೃತ್ವದ ತನಿಖಾ ತಂಡವು ಯಶಸ್ವಿಯಾಗಿದೆ.

ಸಾರ್ವಜನಿಕರಿಗೆ ಸೂಚನೆ: ಸೈಬರ್‌ ವಂಚನೆಗೆ ಒಳಗಾಗಿ ಹಣವನ್ನು ಕಳೆದುಕೊಂಡವರು ಗಾಬರಿಗೊಳ್ಳದೆ ಸಮಯವನ್ನು ವ್ಯರ್ಥ ಮಾಡದೇ ಕೂಡಲೇ ರಾಷ್ಟ್ರೀಯ ಸೈಬರ್‌ ಸಹಾಯವಾಣಿ (1930) ಗೆ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಕೂಡಲೇ ಸಮೀಪದ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಲ್ಲಿ ತ್ವರಿತವಾಗಿ ಕ್ರಮಕೈಗೊಂಡು ತಮಗಾಗುವ ನಷ್ಟವನ್ನು ತಪ್ಪಿಸಬಹುದಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ಸಲಹೆ ಮಾಡಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ವೈಭವ

ಮೈಸೂರು,ಸೆ.22- ವಿಶ್ವವಿಖ್ಯಾತ ಮೈಸೂರು ದಸರಾಗೆ ಬೂಕರ್‌ ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಬಾನು ಮುಷ್ತಾಕ್‌ ಅವರು ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಪ್ರದಾಯಬದ್ಧವಾಗಿ ವಿದ್ಯುಕ್ತ ಚಾಲನೆ ನೀಡಿದರು. ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಸೇರಿದಂತೆ ಮತ್ತಿತರ ಗಣ್ಯರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಾಲಯದ ಆವರಣದಲ್ಲಿರುವ ವಿಘ್ನ ನಿವಾರಕ ಗಣೇಶನಿಗೆ ನಮಿಸಿ ನಂತರ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

ಇದಕ್ಕೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಇಂದು ಬೆಳಿಗ್ಗಿನಿಂದಲೇ ದೇವೀ ಕೆರೆಯಿಂದ ಜಲವನ್ನು ತಂದು ಅಭಿಷೇಕವನ್ನು ಮಾಡಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿದರು. ದೇವಾಲಯವನ್ನು ವಿವಿಧ ಹೂ ಹಾಗೂ ಕಬ್ಬಿನ ಜಲ್ಲೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಗೆ ಇಂದು ಬ್ರಾಹಿ ಅಲಂಕಾರ ಮಾಡಲಾಗಿದ್ದು, ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್‌ರವರು ಸಂಕಲ್ಪವನ್ನು ಮಾಡಿ ಮಹಾಮಂಗಳಾರತಿ ನೆರವೇರಿಸಿದರು.

ಮಂಗಳಾರತಿ ಸ್ವೀಕರಿಸಿದ ವೇಳೆ ಬಾನು ಮುಷ್ತಾಕ್‌ರವರು ಭಾವುಕರಾದರು. ನಂತರ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಷ್ತಾಕ್‌ರವರು ಅರ್ಚಕರಿಂದ ಹೂವಿನ ಹಾರವನ್ನು ಸ್ವೀಕರಿಸಿದರು. ದೇವಿ ಪೂಜೆ ಹಾಗೂ ದಸರಾ ಉದ್ಘಾಟನೆಗೆ ಅರಿಶಿನ ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ರವಿಕೆ ತೊಟ್ಟು, ಹೂ ಮುಡಿದಿದ್ದು ವಿಶೇಷವಾಗಿತ್ತು. ನಂತರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಬೃಹತ್‌ ವೇದಿಕೆಯತ್ತ ಆಗಮಿಸಿದ ಬಾನು ಮುಷ್ತಾಕ್‌ರವರಿಗೆ ಮೈಸೂರು ಪೇಟ ಹಾಗೂ ಶಾಲು ಹೊದಿಸಿ ಹಾಗೂ ಮರದ ಅಂಬಾರಿಯ ಸರಣಿಕೆಯನ್ನು ನೀಡಿ ಸನಾನಿಸಲಾಯಿತು.

ಬೆಳಿಗ್ಗೆ 10.10 ರಿಂದ 10.40ರ ವೃಶ್ಚಿಕ ಲಗ್ನದಲ್ಲಿ ಬೆಳ್ಳಿರಥದಲ್ಲಿ ಅಲಂಕೃತಗೊಂಡಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಹಿತಿ ಬಾನು ಮುಷ್ತಾಕ್‌ ಅವರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು.

ದಸರಾ ವೇದಿಕೆಯಲ್ಲಿ ಸಿಟ್ಟಾದ ಸಿದ್ದರಾಮಯ್ಯ

ಮೈಸೂರು, ಸೆ.22- ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅರ್ಧಕ್ಕೆ ಎದ್ದು ಹೋಗುತ್ತಿದ್ದ ಜನರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗದರಿ ಕೂರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ದಸರಾ ಆಚರಣೆಯಲ್ಲಿ ಯಾವುದೇ ಲೋಪಗಳಾಗಬಾರದು ಎಂಬ ಕಾರಣಕ್ಕೆ ಸಾಕಷ್ಟು ಎಚ್ಚರಿಕೆಯಿಂದ ಕಾರ್ಯಕ್ರಮ ಅಯೋಜಿಸಲಾಗಿತ್ತು. ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಭಾಷಣ ಮಾಡುವಾಗಲೇ ಕೆಲವು ಮಹಿಳೆಯರು ಕಾರ್ಯಕ್ರಮದಿಂದ ನಿರ್ಗಮಿಸಲಾರಂಭಿಸಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಜಿ.ಟಿ.ದೇವೇಗೌಡ ಸ್ವಲ್ಪ ಹೊತ್ತು ಸಹನೆಯಿಂದಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.

ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಆರಂಭಿಸಿದ್ದರು. ಆಗಲೂ ಜನ ಎದ್ದು ಹೋಗಲಾರಂಭಿಸಿದಾಗ ಸಿಎಂ ಸಿಡಿಮಿಡಿಯಾಗಿ ಗದರಿದರು. ಒಂದು ಬಾರಿ ಹೇಳಿದರೆ ಗೊತ್ತಾಗುವುದಿಲ್ಲವೇ? ಏಕೆ ಬರುತ್ತೀರಿ ಇಲ್ಲಿಗೆ? ಮನೆಯಲ್ಲಿರಬೇಕಿತ್ತು. ಏ ಪೊಲೀಸ್‌ನವರೇ ಅವರನ್ನು ಹೊರಗೆ ಬಿಡಬೇಡಿ ಕರೆದು ಕೂರಿಸಿ ಎಂದು ತಾಕೀತು ಮಾಡಿದರು. ಅರ್ಧಗಂಟೆ, ಒಂದು ಗಂಟೆ ಕೂರಲಾಗದಿದ್ದರೆ ಕಾರ್ಯಕ್ರಮಕ್ಕೆ ಏಕೆ ಬರುತ್ತೀರಾ ಎಂದು ಸಿದ್ದರಾಮಯ್ಯ ಗರಂ ಆದರು.

ಜಾತಿಗಣತಿ ಪ್ರಶ್ನಿಸಿದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಬೆಂಗಳೂರು,ಸೆ.22- ರಾಜ್ಯಸರ್ಕಾರದ ಜಾತಿ ಗಣತಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ. ಬ್ರಾಹಣ ಮಹಾಸಭಾ ಒಕ್ಕಲಿಗರ ಸಂಘ ಹಿರಿಯ ವಕೀಲ ಸುಬ್ಬಾರೆಡ್ಡಿ ಅವರು ಜಾತಿಗಣತಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಬೂಬಖ್ರು, ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ ರಾಜ್ಯಸರ್ಕಾರ ಜಾತಿಗಣತಿಗೆ ಆದೇಶಿಸಿದೆ. ಇದು ಸಂವಿಧಾನದ ಆರ್ಟಿಕಲ್‌ 342 ಎ (3ಎ)ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಈ ಹಿಂದಿನ ವರದಿ ಪರಿಗಣಿಸದೆ ಹೊಸ ಪ್ರಕ್ರಿಯೆಯನ್ನು ಆರಂಭಿಸಿದೆ. ಜಾತಿಗಣತಿಯ ಅಂಕಿ ಅಂಶಗಳನ್ನು ಆಧಾರ್‌ಗೆ ಲಿಂಕ್‌ ಮಾಡುತ್ತಿದ್ದಾರೆ. ಜಿಯೋ ಟ್ಯಾಗಿಂಗ್‌ ಮಾಡಿ ಆಧಾರ್‌ ಲಿಂಕ್‌ ಮಾಡುತ್ತಿರುವ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ ಎಂದು ಪ್ರಬಲ ವಾದ ಮಂಡಿಸಿದರು.

ಜನಗಣತಿಯನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬೇಕು. ರಾಜ್ಯಸರ್ಕಾರ ಮಾಡುತ್ತಿರುವ ಸರ್ವೆ ಜನಗಣತಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್‌ ಎಸ್‌‍.ಪಾಟೀಲ್‌ ವಾದ ಮಂಡಿಸಿದರು. ಸರ್ಕಾರ ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿದೆ. ಒಕ್ಕಲಿಗ ಕ್ರಿಶ್ಚಿಯನ್‌, ಬ್ರಾಹಣ ಕ್ರಿಶ್ಚಿಯನ್‌ ಎಂದು ವಿಂಗಡಿಸಿ ಯಾವುದೇ ಅಂಕಿ ಅಂಶದ ವಿಶ್ಲೇಷಣೆ ಇಲ್ಲದೆಯೇ ಜನಗಣತಿ ಮಾಡಲು ರಾಜ್ಯಸರ್ಕಾರ ಯಾವುದೇ ಅಧಿಕಾರವಿಲ್ಲವೆಂದು ಹಿರಿಯ ವಕೀಲರಾದ ಅಶೋಕ್‌ ಹಾರನಹಳ್ಳಿಯವರು ಹೇಳಿದರು.

ಅರ್ಜಿದಾರರ ಪರ ವಿವೇಕ್‌ರೆಡ್ಡಿ ವಾದ ಮಂಡಿಸಿ, ರಾಜಕೀಯ ಉದ್ದೇಶದಿಂದ ರಾಜ್ಯಸರ್ಕಾರ ಈ ಗಣತಿ ಮಾಡುತ್ತಿದೆ. ರಾಜ್ಯದ ಜನರ ಸ್ಥಿತಿಗತಿ ಪರಿಶೀಲನೆ, ಹಿಂದುಳಿದ ವರ್ಗಗಳ ಕರ್ತವ್ಯವಲ್ಲ. ಹಾಗಾಗಿ ತಡೆ ನೀಡಬೇಕೆಂದು ಮನವಿ ಮಾಡಿದರು. ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ ಅವರು, ನಾವು ಜನಗಣತಿ ಮಾಡುತ್ತಿಲ್ಲ. ಕೇವಲ ಸಮೀಕ್ಷೆ ಮಾಡುತ್ತಿದ್ದೇವೆ. ಇದೇ ರೀತಿಯ ಪ್ರಕರಣದಲ್ಲಿ ಈ ಹಿಂದೆಯೂ ಮಧ್ಯಂತರ ತಡೆ ನೀಡಿಲ್ಲ. ಹೀಗಾಗಿ ಯಾವುದೇ ರೀತಿ ತಡೆ ನೀಡಬಾರದು ಎಂದು ಮನವಿ ಮಾಡಿದರು.

ಅಂಕಿ ಅಂಶ ಸಂಗ್ರಹಿಸಲು ರಾಜ್ಯಸರ್ಕಾರಕ್ಕೆ ಅಧಿಕಾರವಿದೆ. ಸಮೀಕ್ಷೆ ಮೂಲಕ ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. 2014 ರ ಸರ್ವೆಯ ಅಂಕಿ ಅಂಶಗಳ ಮಾಹಿತಿಯನ್ನೂ ಕೂಡ ಅಪ್ಡೇಟ್‌ ಮಾಡುತ್ತಿದ್ದೇವೆ. ಹಳೆಯ ಸರ್ವೆಯನ್ನು ಕೈಬಿಟ್ಟಿಲ್ಲವೆಂದು ಹೇಳಿದರು. ಶಿಕ್ಷಕರು, ಆಶಾ ಕಾರ್ಯಕರ್ತೆಯರ ಮೂಲಕ 420 ಕೋಟಿ ರೂ. ವೆಚ್ಚದಲ್ಲಿ ಸರ್ವೆ ಮಾಡಲಾಗುತ್ತಿದೆ. ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲು ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ. ಹಾಗಾಗಿ ಮಧ್ಯಂತರ ತಡೆ ನೀಡಬಾರದು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಮಧ್ಯಂತರ ತಡೆಯಾಜ್ಞೆ ಬಗ್ಗೆ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿದರು.

ನ.5 ರಿಂದ 15ರೊಳಗೆ ಬಿಹಾರ ಚುನಾವಣೆ?

ಪಾಟ್ನಾ, ಸೆ.22- ಮುಂದಿನ ನವಂಬರ್‌ 5 ರಿಂದ 15ರ ನಡುವೆ ಬಿಹಾರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಅಕ್ಟೋಬರ್‌ 28 ರಂದು ಛಾತ್‌ ಪೂಜೆ ನಡೆಯುವ ನಂತರ ನವೆಂಬರ್‌ 5 ರಿಂದ 15 ರ ನಡುವೆ ಬಿಹಾರ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್‌ 22, 2025 ರಂದು ಕೊನೆಗೊಳ್ಳಲಿದ್ದು, ಆ ದಿನಾಂಕಕ್ಕೂ ಮುನ್ನ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಗತ್ಯವಿದೆ.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಮುಂದಿನ ವಾರ ಚುನಾವಣೆಗೆ ಬಿಹಾರಕ್ಕೆ ಭೇಟಿ ನೀಡಿ ಚುನಾವಣಾ ಸಿದ್ಧತೆಗಳು ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಲಿದ್ದಾರೆ, ಇದನ್ನು ಸೆಪ್ಟೆಂಬರ್‌ 30 ರಂದು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗವು ಇತ್ತೀಚೆಗೆ ಮುಕ್ತಾಯಗೊಳಿಸಿದ ವಿಶೇಷ ತೀವ್ರ ಪರಿಷ್ಕರಣಾ ವ್ಯಾಯಾಮದ ಬಗ್ಗೆ ರಾಜಕೀಯ ಕೋಪ ಭುಗಿಲೆದ್ದಿತು, ಇದು ಕರಡು ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರುಗಳನ್ನು ಅಳಿಸಿಹಾಕಿತು.ನಿಜವಾದ ಮತದಾರರನ್ನು ತೆಗೆದುಹಾಕಲು ಈ ಪ್ರಕ್ರಿಯೆಯನ್ನು ಮರೆಮಾಚಲು ಬಳಸಲಾಗುತ್ತಿದೆ ಎಂದು ಇಂಡಿಯಾ ಒಕ್ಕೂಟ ಚುನಾವಣಾ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿದೆ. ಏತನ್ಮಧ್ಯೆ, ಸೆಪ್ಟೆಂಬರ್‌ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರವೂ ಯಾವುದೇ ಅಕ್ರಮ ಕಂಡುಬಂದರೆ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ.

ಹಿಂದಿನ ಪದ್ಧತಿಗೆ ಅನುಗುಣವಾಗಿ, ಬಿಹಾರದಲ್ಲಿ ಮತ್ತೆ ಬಹು-ಹಂತದ ಮತದಾನಕ್ಕೆ ಸಜ್ಜಾಗಿದೆ. 2020 ರ ಚುನಾವಣೆಗಳನ್ನು ಮೂರು ಹಂತಗಳಲ್ಲಿ ನಡೆಸಲಾಯಿತು – 71 ಸ್ಥಾನಗಳಿಗೆ ಅಕ್ಟೋಬರ್‌ 28 ರಂದು, 94 ಸ್ಥಾನಗಳಿಗೆ ನವೆಂಬರ್‌ 3 ರಂದು ಮತ್ತು 78 ಸ್ಥಾನಗಳಿಗೆ ನವೆಂಬರ್‌ 7 ರಂದು ಮತದಾನ ನಡೆದಿತ್ತು. ಮತ್ತೊಮ್ಮೆ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ವಿರೋಧ ಪಕ್ಷದ ಇಂಡಿಯಾ ಒಕ್ಕೂಟಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಬಿಜೆಪಿ, ಜನತಾದಳ (ಯುನೈಟೆಡ್‌‍) ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್‌ವಿಲಾಸ್‌‍) ಒಳಗೊಂಡ ಎನ್‌ಡಿಎ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಮತ್ತೊಂದು ಅವಧಿಯನ್ನು ಗುರಿಯಾಗಿಸಿಕೊಂಡಿದೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ವಿರೋಧ ಪಕ್ಷಗಳು, ಕಾಂಗ್ರೆಸ್‌‍ ಮತ್ತು ಎಡ ಪಕ್ಷಗಳೊಂದಿಗೆ ಸೇರಿ, ಅವರನ್ನು ಪದಚ್ಯುತಗೊಳಿಸಲು ಆಶಿಸುತ್ತಿವೆ.

243 ಸದಸ್ಯರ ಸದನದಲ್ಲಿ, ಎನ್‌ಡಿಎ ಪ್ರಸ್ತುತ 131 ಸದಸ್ಯರೊಂದಿಗೆ ಬಹುಮತವನ್ನು ಹೊಂದಿದೆ – ಬಿಜೆಪಿ 80, ಜೆಡಿ (ಯು) 45, ಹಿಂದೂಸ್ತಾನಿ ಅವಾಮ್‌ ಮೋರ್ಚಾ (ಜಾತ್ಯತೀತ) 4, ಮತ್ತು 2 ಸ್ವತಂತ್ರ ಶಾಸಕರ ಬೆಂಬಲವಿದೆ. ಇಂಡಿಯಾ ಬ್ಲಾಕ್‌ 111 ಶಾಸಕರನ್ನು ಹೊಂದಿದ್ದು, ಆರ್‌ಜೆಡಿ 77, ಕಾಂಗ್ರೆಸ್‌‍ 19, ಸಿಪಿಐ (ಎಂಎಲ್‌‍) 11, ಸಿಪಿಐ (ಎಂ) 2 ಮತ್ತು ಸಿಪಿಐ 2 ಶಾಸಕರನ್ನು ಹೊಂದಿದೆ.

ಇಂದಿನಿಂದ ಜಿಎಸ್‌‍ಟಿ ಸುಂಕ ಇಳಿಕೆ : ಯಾವುದು ಅಗ್ಗ, ಯಾವುದು ದುಬಾರಿ?:

ನವದೆಹಲಿ,ಸೆ.22- ಬಹುನಿರೀಕ್ಷಿತ ಸರಕು ಸೇವಾ ತೆರಿಗೆ(ಜಿಎಸ್‌‍ಟಿ) ಪರಿಷ್ಕರಣೆ ಮಾಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದಿನಿಂದಲೇ ಅನ್ವಯವಾಗುವಂತೆ ಅಗತ್ಯ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳ ಬೆಲೆ ಇಳಿಕೆಯಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ದೇಶದ ಜನತೆಗೆ ಹೊರೆ ಭಾರವನ್ನು ಇಳಿಸುವ ಏಕೈಕ ಗುರಿಯೊಂದಿಗೆ ಇತ್ತೀಚೆಗೆ ನಡೆದ ಜಿಎಸ್‌‍ಟಿ ಸಭೆಯಲ್ಲಿ ಪರಿಷ್ಕರಣೆ ಮಾಡಲು ನಿರ್ಧರಿಸಲಾಯಿತು.
ಈವರೆಗೂ ಇದ್ದ ಜಿಎಸ್‌‍ಟಿ ನಾಲ್ಕು ಸ್ಲ್ಯಾಬ್‌ಗಳನ್ನು ಇನ್ನು ಮುಂದೆ ಕೇವಲ 2 ಸ್ಲ್ಯಾಬ್‌ಗಳಿಗೆ ಇಳಿಕೆ ಮಾಡಲಾಗಿದೆ. ದೇಶದಲ್ಲಿ ಜಿಎಸ್‌‍ಟಿ ಜಾರಿಯಾದ ನಂತರ ಶೇ.5 , ಶೇ.18, ಶೇ.22 ಮತ್ತು ಶೇ.28 ಸೇರಿದಂತೆ ಒಟ್ಟು ನಾಲ್ಕು ರೀತಿಯ ಸ್ಲ್ಯಾಬ್‌ಗಳನ್ನು ವಿಧಿಸಲಾಗುತ್ತಿತ್ತು.

ಇದರ ಬಗ್ಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಶೇ.5 ಹಾಗೂ ಶೇ.18ರಷ್ಟು ಸ್ಲ್ಯಾಬ್‌ ಚಾಲ್ತಿಯಲ್ಲಿರುತ್ತದೆ. ಲಕ್ಸುರಿ ವಸ್ತುಗಳು ಹಾಗೂ ಪಾಪದ ತೆರಿಗೆ ಎಂದೇ ವಿಧಿಸಲಾಗುತ್ತಿರುವ ಶೇ.40ರಷ್ಟು ತೆರಿಗೆ ಮುಂದುವರೆಯಲಿದೆ. ಸೋಮವಾರದಿಂದಲೇ ದೇಶಾದ್ಯಂತ ನೂತನ ಜಿಎಸ್‌‍ಟಿ ಪರಿಷ್ಕರಣೆ ಜಾರಿಯಾಗಿರುವುದರಿಂದ ಜನರ ಕೊಳ್ಳುವಿಕೆಯ ಪ್ರಮಾಣ ಹೆಚ್ಚಾಗುವ ಸಂಭವವಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಔಷಧಗಳು, ಆಟೋಮೊಬೈಲ್‌ ಮತ್ತು ಉಪಕರಣಗಳು ಸೇರಿದಂತೆ ಸುಮಾರು 375 ವಸ್ತುಗಳ ಮೇಲೆ ಹೊಸ ಜಿಎಸ್ಟಿ ದರ ಇಂದಿನಿಂದ ಜಾರಿಗೆ ಬಂದಿದೆ.

ತುಪ್ಪ, ಪನೀರ್‌, ಬೆಣ್ಣೆ, ನಮ್ಕೀನ್‌, ಕೆಚಪ್‌, ಜಾಮ್‌, ಡ್ರೈ ಫೂಟ್‌್ಸ, ಕಾಫಿ ಮತ್ತು ಐಸ್ಕ್ರೀಮ್‌, ಟಿವಿ, ಎಸಿ, ವಾಷಿಂಗ್‌ ಮಷಿನ್‌ ಸೇರಿದಂತೆ ಇತರ ವಸ್ತುಗಳು ಅಗ್ಗವಾಗಲಿವೆ. ಹೊಸ ಜಿಎಸ್ಟಿ ಸ್ಲ್ಯಾಬ್‌ ಜಾರಿ ಆಗುತ್ತಿರುವುದರಿಂದ ವಿವಿಧ ಎಫ್‌ಎಂಸಿಜಿ ಕಂಪನಿಗಳು ಈಗಾಗಲೇ ವಸ್ತು ಮತ್ತು ಸೇವೆಗಳ ಮೇಲೆ ದರ ಕಡಿತವಾಗಿದೆ. ಸೇವೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ಕ್ಲಬ್‌ಗಳು, ಸಲೂನ್‌ಗಳು, ಫಿಟ್ನೆಸ್‌‍ ಸೆಂಟರ್‌ಗಳು ಸೇರಿದಂತೆ ಸೌಂದರ್ಯ ಮತ್ತು ದೈಹಿಕ ಯೋಗಕ್ಷೇಮ ಸೇವೆಗಳ ಮೇಲಿನ ಜಿಎಸ್‌‍ಟಿಯನ್ನು ಇನ್ಪುಟ್‌ ಟ್ಯಾಕ್‌್ಸ ಕ್ರೆಡಿಟ್‌ (ಐಟಿಸಿ) ಹೊಂದಿರುವ ಶೇ.18ರಿಂದ ತೆರಿಗೆ ಕ್ರೆಡಿಟ್‌ ಇಲ್ಲದೇ ಶೇ.5ಕ್ಕೆ ಇಳಿಸಲಾಗಿದೆ. ಅಲ್ಲದೇ ಹೇರ್‌ ಆಯಿಲ್‌, ಟಾಯ್ಲೆಟ್‌ ಸೋಪ್‌ ಬಾರ್‌ಗಳು, ಶಾಂಪೂಗಳು, ಟೂತ್‌ ಬ್ರಷ್‌, ಟೂತ್ಪೇಸ್ಟ್ನಂತಹ ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆಯನ್ನು ಪ್ರಸ್ತುತ ಶೇ.12/18 ರಿಂದ ಶೇ.5ಕ್ಕೆ ಇಳಿಸಲಾಗಿರುವುದರಿಂದ ಅವು ಅಗ್ಗವಾಗುವ ಸಾಧ್ಯತೆಯಿದೆ.

ಟಾಲ್ಕಮ್‌ ಪೌಡರ್‌, ಫೇಸ್‌‍ ಪೌಡರ್‌, ಶೇವಿಂಗ್‌ ಕ್ರೀಮ್‌, ಆಫ್ಟರ್‌ – ಶೇವ್‌ ಲೋಷನ್ನಂತಹ ಇತರ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ಕಡಿಮೆಯಾಗಿದೆ. ಅಲ್ಟ್ರಾ ಐಷಾರಾಮಿ ವಸ್ತುಗಳ ಮೇಲೆ ಶೇ.40ರಷ್ಟು ತೆರಿಗೆ ವಿಧಿಸಲಾಗುತ್ತದೆ ಮತ್ತು ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಶೇ.28 ರಷ್ಟು ಪ್ಲಸ್‌‍ ಸೆಸ್‌‍ ವಿಭಾಗದಲ್ಲಿ ಮುಂದುವರಿಯುತ್ತವೆ.

ಯಾವುದು ಅಗ್ಗ, ಯಾವುದು ದುಬಾರಿ?:
ದೈನಂದಿನ ಅಗತ್ಯ ವಸ್ತುಗಳು: ಹಾಲು, ಪನೀರ್‌, ಪರಾಠಾ, ಪಿಜ್ಜಾ ಬ್ರೆಡ್‌, ಖಾಖ್ರಾಗೆ ಜಿಎಸ್‌‍ಟಿಯಿಂದ ವಿನಾಯಿತಿ ನೀಡಲಾಗಿದೆ. ಬೆಣ್ಣೆ, ತುಪ್ಪ, ಚೀಸ್‌‍, ಜಾಮ್‌ಗಳು, ಸಾಸ್‌‍ಗಳು, ಸೂಪ್‌ಗಳು, ಪಾಸ್ತಾ, ನಮ್ಕೀನ್‌ ಮತ್ತು ಮಿಠಾಯಿಗಳು ಶೇ.12-18 ತೆರಿಗೆಯಿಂದ ಶೇ.5% ಕ್ಕೆ ಇಳಿಕೆಯಾಗಿದೆ. ಒಣ ಹಣ್ಣುಗಳು, ಖರ್ಜೂರ ಮತ್ತು ಸಿಟ್ರಸ್‌‍ ಹಣ್ಣುಗಳು ಸಹ ಶೇ.5 ತೆರಿಗೆ ವ್ಯಾಪ್ತಿಗೆ ಬಂದಿವೆ. ಔಷಧಿ ಮತ್ತು ವೈದ್ಯಕೀಯ ಉಪಕರಣಗಳು: ಜೀವರಕ್ಷಕ ಔಷಧಿಗಳಾದ ಅಗಲ್ಸಿಡೇಸ್‌‍ ಬೀಟಾ, ಒನಾಸೆಮ್ನೋಜೀನ್‌, ಡರಟುಮುಮಾಬ್‌ ಮತ್ತು ಅಲೆಕ್ಟಿನಿಬ್ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಬಹುತೇಕ ಔಷಧಿಗಳು, ವೈದ್ಯಕೀಯ ಸಾಧನಗಳು, ರೋಗನಿರ್ಣಯ ಕಿಟ್ಗಳು, ಬ್ಯಾಂಡೇಜ್‌ಗಳು, ಥರ್ಮಾಮೀಟರ್‌ಗಳು ಮತ್ತು ಆಮ್ಲಜನಕದ ಮೇಲೆ ಶೇ.12-18% ರಷ್ಟಿದ್ದ ತೆರಿಗೆ ಶೇ.5% ಕ್‌ ಇಳಿಕೆಯಾಗಿದೆ. ಎಲ್ಲಾ ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳನ್ನು ಹೆಚ್ಚು ಜನರಿಗೆ ವಿಸ್ತರಿಸಲು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ದಿನ ಬಳಕೆ ವಸ್ತುಗಳು: ಹೇರ್‌ ಆಯಿಲ್‌, ಶಾಂಪೂಗಳು, ಟೂತ್ಪೇಸ್ಟ್‌, ಸೋಪ್ಗಳು, ಶೇವಿಂಗ್‌ ಉತ್ಪನ್ನಗಳು, ಟಾಲ್ಕಮ್‌ ಪೌಡರ್‌, ಟೂತ್‌ ಬ್ರಷ್ಗಳು, ಮೇಣದಬತ್ತಿಗಳು ಮತ್ತು ಬೆಂಕಿ ಪೊಟ್ಟಣ ಈಗ ಶೇ. 5% ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಬಂದಿವೆ. ನೋಟ್ಬುಕ್ಗಳು, ಪೆನ್ಸಿಲ್ಗಳು, ಶಾರ್ಪನರ್ಗಳು ಮತ್ತು ಎರೇಸರ್ಗಳಂತಹ ಸ್ಟೇಷನರಿ ವಸ್ತುಗಳು ಸಹ ಅಗ್ಗವಾಗಲಿವೆ. ವಾಹನಗಳು ಮತ್ತು ಕಟ್ಟಡ ಸಾಮಗ್ರಿಗಳು: ಸಿಮೆಂಟ್‌ ಮೇಲಿನ ತೆರಿಗೆ ಶೇ.28% ರಿಂದ 18% ಕ್ಕೆ ಇಳಿಕೆಯಾಗಿದೆ. ಟ್ರ್ಯಾಕ್ಟರ್ಗಳು, ಸೈಕಲ್ಗಳು, 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ ಗಳು, ಸಣ್ಣ ಕಾರುಗಳು, ಎಲೆಕ್ಟ್ರಿಕ್‌ ಮತ್ತು ಹೈಬ್ರಿಡ್‌ ವಾಹನಗಳು ಮತ್ತು ಆಂಬ್ಯುಲೆನ್‌್ಸಗಳ ಮೇಲಿನ ತೆರಿಗೆ ಕಡಿಮೆಯಾಗಲಿವೆ. ಅಮೃತಶಿಲೆ, ಗ್ರಾನೈಟ್‌ ಬ್ಲಾಕ್ಗಳು ಮತ್ತು ಪರಿಸರ ಸ್ನೇಹಿ ಕಟ್ಟಡ ಸಾಮಗ್ರಿಗಳು ಸಹ ಶೇ.5% ರಷ್ಟು ತೆರಿಗೆ ವ್ಯಾಪ್ತಿಗೆ ಬಂದಿವೆ.

ಯಾವುದು ದುಬಾರಿ?
ಪಾನ್‌ ಮಸಾಲ, ಗುಟ್ಕಾ, ಜಗಿಯುವ ತಂಬಾಕು ಮತ್ತು ಸಿಗರೇಟ್‌, ಕಾರ್ಬೊನೇಟೆಡ್‌/ಏರೇಟೆಡ್‌ ತಂಪು ಪಾನೀಯಗಳು, ಕೆಫೀನ್‌ ನಿಂದ ತಯಾರಿಸಿದ ಪಾನೀಯಗಳು ಮತ್ತು ಹಣ್ಣು ಆಧಾರಿತ ಫಿಜ್ಜಿ ಪಾನೀಯಗಳ ಮೇಲೆಯೂ ಶೇ.40% ಜಿಎಸ್ಟಿ ವಿಧಿಸಲಾಗುತ್ತದೆ. ಐಷಾರಾಮಿ ಸರಕುಗಳು: 1200 ಸಿಸಿ/1500 ಸಿಸಿಗಿಂತ ಹೆಚ್ಚಿನ ಎಂಜಿನ್‌ ಹೊಂದಿರುವ ಎಸ್ಯುವಿಗಳು ಮತ್ತು ದೊಡ್ಡ ಕಾರುಗಳು. 350 ಸಿಸಿಗಿಂತ ಹೆಚ್ಚಿನ ಎಂಜಿನ್‌ ಹೊಂದಿರುವ ಬೈಕ್‌ ಗಳು, ಪ್ರವಾಸಿ ಹಡಗುಗಳು, ಖಾಸಗಿ ವಿಮಾನಗಳು, ರಿವಾಲ್ವರ್ಗಳು ಮತ್ತು ಪಿಸ್ತೂಲ್‌ಗಳು ಶೇ. 40% ತೆರಿಗೆ ವ್ಯಾಪ್ತಿಗೆ ಬರಲಿವೆ.

ಇವುಗಳೂ ದುಬಾರಿ:
ಕಲ್ಲಿದ್ದಲು, ಲಿಗ್ನೈಟ್‌ ಮತ್ತು ಪೀಟ್‌ ಮೇಲೆ ಶೇ. 18% ತೆರಿಗೆ ವಿಧಿಸಲಾಗುತ್ತದೆ. ಡೀಸೆಲ್‌ ಬೆರೆಸದ ಬಯೋಡೀಸೆಲ್‌ ಶೇ. 12% ರಿಂದ 18% ಕ್ಕೆ ಏರಿಕೆಯಾಗಿವೆ, 2,500 ರೂ.ಗಿಂತ ಹೆಚ್ಚಿನ ಬೆಲೆಯ ಪ್ರೀಮಿಯಂ ಉಡುಪುಗಳು, ಜವಳಿ ಸಹ 18% ಕ್ಕೆ ಏರಿಕೆಯಾಗಿದೆ. ಕ್ರಾಫ್‌್ಟ ಪೇಪರ್‌ ಸೇರಿದಂತೆ ಕೆಲವು ಕಾಗದದ ಉತ್ಪನ್ನಗಳಿಗೆ ಶೇ. 18% ಜಿಎಸ್‌‍ಟಿ ತೆರಿಗೆ ವಿಧಿಸಲಾಗಿದೆ.

ತಿರುಪತಿ ದೇವಸ್ಥಾನದ ಹುಂಡಿಯಲ್ಲಿ 100 ಕೋಟಿ ಹಣ ಕಳ್ಳತನ

ತಿರುಪತಿ,ಸೆ.22- ಮಾಜಿ ಮುಖ್ಯಮಂತ್ರಿ ವೈ.ಎಸ್‌‍.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌‍ಆರ್‌ಪಿ ಕಾಂಗ್ರೆಸ್‌‍ ಆಡಳಿತದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಪರಕಾಮಣಿ (ಹುಂಡಿಯಲ್ಲಿ ಭಕ್ತರು ಹಾಕಿದ್ದ) 100 ಕೋಟಿಗೂ ಅಧಿಕ ಹಣ ಕಳ್ಳತನವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ತಾನಂ(ಟಿಟಿಡಿ) ಸದಸ್ಯರೂ ಆಗಿರುವ ಬಜೆಪಿ ಮುಖಂಡ ಭಾನುಪ್ರಕಾಶ್‌ ರೆಡ್ಡಿ, ದೇವಸ್ಥಾನದ ಸಿಬ್ಬಂದಿ ರವಿಕುಮಾರ್‌ ಕಾಣಿಕೆ ಪೆಟ್ಟಿಗೆಯಿಂದ ಹಣ ಕದ್ದಿದ್ದಾರೆ ಎಂದು ಆರೋಪಿಸಿದ್ದು, ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಲೂಟಿ ಮಾಡಿದ ಹಣವನ್ನು ಬಳಸಿಕೊಂಡು ರಿಯಲ್‌ ಎಸ್ಟೇಟ್‌ಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಲಾಗಿದೆ. ಅಕ್ರಮ ಹಣವನ್ನು ಜಗನ್‌ರೆಡ್ಡಿ ಅವರ ಮನೆ, ತಾಡೆಪಲ್ಲಿ ಪ್ಯಾಲೇಸ್‌‍ಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. 2019ರಿಂದ 2024ರವರೆಗೆ ವೈಎಸ್‌‍ಆರ್‌ಪಿ ಆಡಳಿತದಲ್ಲಿ ಟಿಟಿಡಿಯ ಇತಿಹಾಸದಲ್ಲಿ ಅತ್ಯಧಿಕ 100 ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರಿರುವ ಟಿಡಿಪಿ ನಾಯಕ ನಾರಾ ಲೋಕೇಶ್‌ ತಮ ಎಕ್‌್ಸ ಖಾತೆಯಲ್ಲಿ ಲೂಟಿ ತೋರಿಸುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ವೈಎಸ್‌‍ಆರ್‌ಪಿ ಆಡಳಿತದಲ್ಲಿ ಭಕ್ತರು ಕಾಣಿಕೆಯಾಗಿ ಹುಂಡಿಗೆ ಹಾಕಿದ್ದ ಹಣವನ್ನು ಲೂಟಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಹೈಕೋರ್ಟ್‌ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದು, ಒಂದು ತಿಂಗಳೊಳಗೆ ತನಿಖೆ ಮತ್ತು ಮುಚ್ಚಿದ ಕವರ್‌ ವರದಿಯನ್ನು ಆದೇಶಿಸಿದೆ. ಮಂಡಳಿಯ ನಿರ್ಧಾರಗಳು ಮತ್ತು ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.