ದಲಿತರ ಹೆಸರು ಹೇಳಿ ಗೆದ್ದು ಅವರ ಹಣವನ್ನೇ ಲೂಟಿ ಮಾಡಿದ ಕಾಂಗ್ರೆಸ್‌‍ ಸರ್ಕಾರ : ಅಶೋಕ್‌ ಕಿಡಿ

ಬೆಂಗಳೂರು,ಜು.15- ರಾಜ್ಯದ ಇತಿಹಾಸದಲ್ಲಿ 187 ಕೋಟಿ ದಲಿತರ ಹಣ ಲೂಟಿಯಾಗಿದೆ. ದಲಿತರ ಪರ ಹೇಳುತ್ತಾ ಮತ ಪಡೆದ ಕಾಂಗ್ರೆಸ್‌‍ ಅವರ ಹಣವನ್ನೇ ಲೂಟಿ ಹೊಡೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದರು. ಈ ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರ್ಯಾದೆ ಇದ್ದರೆ ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ಕೋಡಬೇಕು ಎಂದು ಆಗ್ರಹಿಸಿದರು. 187 ಕೋಟಿ ಲೂಟಿ ಮಾಡಿರುವ ಕಾಂಗ್ರೆಸ್‌‍ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸದನದ ಒಳಗೆ … Continue reading ದಲಿತರ ಹೆಸರು ಹೇಳಿ ಗೆದ್ದು ಅವರ ಹಣವನ್ನೇ ಲೂಟಿ ಮಾಡಿದ ಕಾಂಗ್ರೆಸ್‌‍ ಸರ್ಕಾರ : ಅಶೋಕ್‌ ಕಿಡಿ