ಬೆಂಗಳೂರು,ಜು.30– ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಪೀಣ್ಯದ ನಿವಾಸಿ ದೇವೇಂದ್ರಪ್ಪ (21) ಮೃತಪಟ್ಟ ಬೈಕ್ ಸವಾರ.
ರಾತ್ರಿ 7.30 ರ ಸುಮಾರಿನಲ್ಲಿ ದೇವೇಂದ್ರಪ್ಪ ಅವರು ಬೈಕ್ನಲ್ಲಿ ಹೋಗುತ್ತಿದ್ದಾಗ ಪೀಣ್ಯದ ಟಿವಿಎಸ್ ಕ್ರಾಸ್ ಬಳಿಯ ಅರವಿಂದ ಮೋಟಾರ್ರಸ ಮುಂಭಾಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ಗಂಭೀರ ಗಾಯಗೊಂಡಿದ್ದ ದೇವೇಂದ್ರಪ್ಪ ಅವರನ್ನು ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.ಸುದ್ದಿ ತಿಳಿದು ಪೀಣ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ,ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಜಯಪ್ರಕಾಶ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
- ಭಾರತ, ರಷ್ಯಾ ವಿರುದ್ಧ ಕಿಡಿಕಾರಿದ ಟ್ರಂಪ್
- ಗುಜರಾತ್ : ಕಳೆದ ಮೂರು ದಿನಗಳಲ್ಲಿ ಮೂರು ಸಿಂಹದ ಮರಿಗಳ ಸಾವು
- ಪತ್ನಿಯೊಂದಿಗೆ ಜಗಳವಾಡಿ ಯಮುನಾ ನದಿಗೆ ಹಾರಿದ ಪತಿ
- BREAKING : 2008ರ ಮಾಲೆಗಾಂವ್ ಸ್ಫೋಟ ಪ್ರಕರಣ : ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಸೇರಿ ಏಳು ಆರೋಪಿಗಳು ಖುಲಾಸೆ
- ಚಿಕ್ಕಮಗಳೂರು : ಇಬ್ಬರ ಮೇಲೆ ಚಿರತೆ ದಾಳಿ