Friday, October 3, 2025
Homeರಾಷ್ಟ್ರೀಯ | National125ನೇ ಮನ್‌ ಕೀ ಬಾತ್‌ ಹೈಲೈಟ್ಸ್ : ಆರ್‌ಎಸ್‌‍ಎಸ್‌‍, ಎಸ್‌‍.ಎಲ್‌.ಭೈರಪ್ಪ ಕುರಿತು ಪ್ರಧಾನಿ ಮೋದಿ ಮಾತು

125ನೇ ಮನ್‌ ಕೀ ಬಾತ್‌ ಹೈಲೈಟ್ಸ್ : ಆರ್‌ಎಸ್‌‍ಎಸ್‌‍, ಎಸ್‌‍.ಎಲ್‌.ಭೈರಪ್ಪ ಕುರಿತು ಪ್ರಧಾನಿ ಮೋದಿ ಮಾತು

125th Mann Ki Baat Highlights

ನವದೆಹಲಿ,ಸೆ.28- ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಪದಭೂಷಣ ಪ್ರಶಸ್ತಿ ಪುರಸ್ಕೃತ ಕನ್ನಡದ ಹೆಸರಾಂತ ಸಾಹಿತಿ ಎಸ್‌‍. ಎಲ್‌.ಭೈರಪ್ಪ ಅವರ ನಿಧನದಿಂದ ದೇಶವು ಮಹಾನ್‌ ಚಿಂತಕನನ್ನು ಕಳೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರಮೋದಿ ಕಂಬನಿ ಮಿಡಿದರು.

ತಮ್ಮ ಬಹುನೆಚ್ಚಿನ 125ನೇ ಮನ್‌ ಕೀ ಬಾತ್‌ ರೇಡಿಯೋ ಪ್ರಸಾರದಲ್ಲಿ ಮೊದಲು ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸಿ, ನಾನು ಬೈರಪ್ಪನವರ ಜೊತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಹಲವು ವಿಚಾರ ಗಳ ಮಂಥನ ನಡೆಸಿದ್ದೇವೆ.
ಅವರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರ ಅನೇಕ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ. ನಮ ಮೂಲ ಸಂಸ್ಕೃತಿ ಬಗ್ಗೆ ಹೆಮೆಪಡಬೇಕು, ಗೌರವ ತೋರಿಸಬೇಕು ಎಂಬುದನ್ನು ಭೈರಪ್ಪನವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ತಿಳಿಸುತ್ತೇನೆ ಎಂದು ಭಾವುಕರಾದರು.

ಭೈರಪ್ಪ ಅವರ ಜೊತೆಗಿನ ಒಡನಾಟ ಪ್ರೇರಣಾದಾಯಕ, ಅವರ ಪುಸ್ತಕಗಳು ಯುವಕರಿಗೆ ಪ್ರೇರಣೆ, ಅವ್ರ ಕೃತಿಗಳನ್ನು ಯುವಕರು ಹೆಚ್ಚು ಹೆಚ್ಚು ಓದಬೇಕು ಎಂದು ಕರೆ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್‌ಎಸ್‌‍ಎಸ್‌‍)ದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ನಿಸ್ವಾರ್ಥ ಸೇವೆಯ ಮನೋಭಾವ ಮತ್ತು ಶಿಸ್ತಿನ ಪಾಠವು ಸಂಘದ ನಿಜವಾದ ಶಕ್ತಿಯಾಗಿದೆ. ಅದರ ಅಸಂಖ್ಯಾತ ಸ್ವಯಂಸೇವಕರ ಪ್ರತಿಯೊಂದು ಕಾರ್ಯದಲ್ಲೂ ರಾಷ್ಟ್ರ ಮೊದಲ ಆದ್ಯತೆಯಾಗಿದೆ ಎಂದರು.
ಆರ್‌ಎಸ್‌‍ಎಸ್‌‍ ಸ್ಥಾಪನೆಯಾಗಿ 100 ವರ್ಷ ಪೂರೈಸಲು ಕೆಲವೇ ದಿನಗಳು ಬಾಕಿ ಇರುವಾಗ ಸಂಘದ ದೇಶ ಸೇವೆಯನ್ನು ಸರಿಸಿಕೊಂಡರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು, ರಾಷ್ಟ್ರಪಿತ ಮಹಾತ ಗಾಂಧೀಜಿಯವರ ಜನ ದಿನವಾದ ಅ.2ರಂದು ದೇಶದ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ಖರೀದಿ ಮಾಡುವಂತೆ ಕರೆ ಕೊಟ್ಟರು. ತಮ ಮಾತಿನಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳನ್ನು ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡಬೇಕೆಂದು ಮನವಿ ಮಾಡಿದ ಮೋದಿಯವರು, ಖಾದಿ ಖರೀದಿಗೆ ಮುಂದಾಗುವಂತೆ ಸಲಹೆ ಮಾಡಿದರು.

ಕಳೆದ 11 ವರ್ಷಗಳಿಂದ ಖಾದಿಯ ಮೇಲಿನ ಆಕರ್ಷಣೆ ಗಮನಾರ್ಹವಾಗಿ ಬೆಳೆದಿದ್ದು, ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಗಾಂಧಿ ಜಯಂತಿಯಾದ ಅಕ್ಟೋಬರ್‌ 2ರಂದು ಖಾದಿ ಉತ್ಪನ್ನಗಳನ್ನು ಖರೀದಿಸಲು ನಾನು ನಿಮನ್ನು ಒತ್ತಾಯಿಸುತ್ತೇನೆ. ಹೆಮೆಯಿಂದ ಹೇಳು, ಇದು ಸ್ವದೇಶಿ ಎಂದು ಕರೆ ನೀಡಿದರು.
ಇನ್ನು ಕೆಲವೇ ದಿನಗಳಲ್ಲಿ ನಾವು ವಿಜಯದಶಮಿಯನ್ನು ಆಚರಿಸಲಿದ್ದೇವೆ. ಈ ಬಾರಿಯ ವಿಜಯದಶಮಿ ಇನ್ನಷ್ಟು ವಿಶೇಷವಾಗಿದೆ. ಕಾರಣ ಈ ದಿನದಂದು ಆರ್‌ಎಸ್‌‍ಎಸ್‌‍ ಸ್ಥಾಪನೆಯಾಗಿ 100 ವರ್ಷಗಳಾಗುತ್ತಿದೆ ಎಂದು ಹೇಳಿದರು.

ಶತಮಾನದಷ್ಟು ಹಳೆಯದಾದ ಈ ಪ್ರಯಾಣವು ಕೇವಲ ಗಮನಾರ್ಹವಲ್ಲ ಆದರೆ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಿ ಹೇಳಿದರು.ನೂರು ವರ್ಷಗಳ ಹಿಂದೆ, ಆರ್‌ಎಸ್‌‍ಎಸ್‌‍ ಸ್ಥಾಪನೆಯಾದಾಗ, ನಮ ದೇಶವನ್ನು ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಸಲಾಗಿತ್ತು. ಈ ಶತಮಾನಗಳ ಹಿಂದಿನ ಗುಲಾಮಗಿರಿಯು ನಮ ಆತವಿಶ್ವಾಸ ಮತ್ತು ಆತಗೌರವದ ಮೇಲೆ ಆಳವಾದ ಗಾಯ ಉಂಟುಮಾಡಿದೆ. ಹಾಗಾಗಿ ದೇಶದ ಸ್ವಾತಂತ್ರ್ಯದ ಜೊತೆಗೆ ದೇಶವನ್ನು ಸೈದ್ಧಾಂತಿಕ ಗುಲಾಮಗಿರಿಯಿಂದ ಮುಕ್ತಗೊಳಿಸುವುದು ಅಗತ್ಯವಾಗಿದೆ ಎಂದು ಮೋದಿ ತಿಳಿಸಿದರು.

1925ರಲ್ಲಿ ಈ ಉದ್ದೇಶಕ್ಕಾಗಿ ಕೆಬಿ ಹೆಡ್ಗೆವಾರ್‌ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌‍ಎಸ್‌‍) ರಚಿಸಿದರು. ಅವರ ನಂತರ, ಗುರು ಗೋಲ್ವಾಲ್ಕರ್‌ ಜೀ ರಾಷ್ಟ್ರದ ಸೇವೆಯ ಈ ಮಹಾ ಯಜ್ಞವನ್ನು ಮುಂದಕ್ಕೆ ಕೊಂಡೊಯ್ದರು.ನಿಸ್ವಾರ್ಥ ಸೇವಾ ಮನೋಭಾವ ಮತ್ತು ಶಿಸ್ತಿನ ಪಾಠ ಸಂಘದ ನಿಜವಾದ ಶಕ್ತಿಗಳಾಗಿವೆ ಎಂದರು.

ಇಂದು, ಆರ್‌ಎಸ್‌‍ಎಸ್‌‍ ಕಳೆದ 100 ವರ್ಷಗಳಿಂದ ವಿರಾಮ ಅಥವಾ ವಿಶ್ರಾಂತಿ ಇಲ್ಲದೆ ದಣಿವರಿಯಿಲ್ಲದೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅದಕ್ಕಾಗಿಯೇ ನಾವು ಪ್ರಕೃತಿ ವಿಕೋಪ ಸಂಭವಿಸಿದಾಗ ಆರ್‌ಎಸ್‌‍ಎಸ್‌‍ ಸ್ವಯಂಸೇವಕರು ಮೊದಲು ಅಲ್ಲಿಗೆ ತಲುಪುವುದನ್ನು ನಾವು ನೋಡುತ್ತೇವೆ. ಆರ್‌ಎಸ್‌‍ಎಸ್‌‍ನ ಅಸಂಖ್ಯಾತ ಸ್ವಯಂಸೇವಕರ ಪ್ರತಿಕ್ರಿಯೆಯಲ್ಲಿ ನೇಷನ್‌ ಫಸ್ಟ್‌ ಎಂಬ ಮನೋಭಾವವು ಯಾವಾಗಲೂ ಸರ್ವೋಚ್ಚವಾಗಿದೆ ಎಂದು ಅವರು ಕೊಂಡಾಡಿದರು.

ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ೞಛತ್‌ ಮಹಾಪರ್ವ್‌ ಅನ್ನು ಸೇರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.
ತಮ ಮನ್‌ ಕೀ ಬಾತ್‌ನಲ್ಲಿ ಮೋದಿಯವರು, ಮಹಿಳಾ ನೌಕಾಪಡೆಯ ಲೆಫ್ಟಿನೆಂಟ್‌ ಕಮಾಂಡರ್‌ ದಿಲ್ನಾ ಮತ್ತು ಲೆಫ್ಟಿನೆಂಟ್‌ ಕಮಾಂಡರ್‌ ರೂಪ ನಾವಿಕ ಸಾಗರ್‌ ಅವರೊಂದಿಗೆ ಮಾತನಾಡಿದರು. ನಿಮ ಸಾಹಸಮಯ ಎಲ್ಲರಿಗೂ ಪ್ರೇರಣೆ ಪ್ರಶಂಸಿದರು.

RELATED ARTICLES

Latest News