Thursday, November 27, 2025
Homeರಾಜಕೀಯಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು : ನಿರ್ಮಲಾನಂದನಾಥ ಸ್ವಾಮೀಜಿ

ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು : ನಿರ್ಮಲಾನಂದನಾಥ ಸ್ವಾಮೀಜಿ

D.K. Shivakumar should become CM: Nirmalanandanath Swamiji

ಹಾಸನ,ನ.27-ಕಾಂಗ್ರೇಸ್‌‍ ನಾಯಕ ಡಿ.ಕೆ. ಶಿವಕುಮಾರ್‌ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಮತ್ತು ಸಮುದಾಯದೊಳಗಿನ ಭಾವನೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಶಿವಕುಮಾರ್‌ ಅವರ ನಿಷ್ಠೆ ಮತ್ತು ಪಕ್ಷಕ್ಕೆ ನೀಡಿದ ದೀರ್ಘ ಸೇವೆಯನ್ನು ಉಲ್ಲೇಖಿಸಿ, ಕಾಂಗ್ರೆಸ್‌‍ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಎಂದು ಶ್ರೀಗಳು ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ರಾಜ್ಯ ಸರ್ಕಾರ ತನ್ನ ಅಧಿಕಾರದ ಅರ್ಧದಾರಿ ದಾಟುತ್ತಿದ್ದಂತೆ ನಾಯಕತ್ವ ಬದಲಾವಣೆಯ ಮತುಗಳು ಮತ್ತು ಗೊಂದಲಮಯ ಪರಿಸ್ಥಿತಿ ನಡುವೆ ಶ್ರೀಗಳ ಈ ಮಾತು ಸಂಚಲನ ಸೃಷ್ಠಿಸಿದೆ.
ಶಿವಕುಮಾರ್‌ ಹಳೆಯ ಮೈಸೂರು ಪ್ರದೇಶದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿರುವ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ.

ಸರ್ಕಾರದಲ್ಲಿನ ಬೆಳವಣಿಗೆಗಳ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ ಮತ್ತು ಓದುತ್ತಿದ್ದೇನೆ. ಈ ಮಠವು ಒಕ್ಕಲಿಗ ಸಮುದಾಯದ ನಂಬಿಕೆಯ ಕೇಂದ್ರವಾಗಿದೆ ಮತ್ತು ಇತರ ಸಮುದಾಯಗಳಿಗೂ ಧ್ವನಿಯಾಗಿದೆ. ಮುಖ್ಯಮಂತ್ರಿ ವಿಷಯದ ಬಗ್ಗೆ, ಶಿವಕುಮಾರ್‌ ಇನ್ನೂ ನನ್ನೊಂದಿಗೆ ಮಾತನಾಡಿಲ್ಲ ಎಂದು ಶ್ರೀಗಳು ಸುದ್ದಿಗಾರರಿಗೆ ತಿಳಿಸಿದರು.

ಒಕ್ಕಲಿಗ ಸಮುದಾಯವು ಎಲ್ಲಾ ಪ್ರಮುಖ ಪಕ್ಷಗಳಾದ ಜೆಡಿ(ಎಸ್‌‍), ಬಿಜೆಪಿ ಮತ್ತು ಕಾಂಗ್ರೆಸ್‌‍ನಾದ್ಯಂತ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ನಾಯಕರನ್ನು ಕೊಡುಗೆಯಾಗಿ ನೀಡಿದೆ. ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ, ಸಮುದಾಯದ ಜನರು ನಮಲ್ಲಿ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ಭಾವಿಸಿ ಮತ ಚಲಾಯಿಸಿದರು. ಆಗ ಅದು ಆಗಲಿಲ್ಲ. 2.5 ವರ್ಷಗಳ ನಂತರ ಅದು ಸಂಭವಿಸುತ್ತದೆ ಎಂಬ ಭರವಸೆ ಇತ್ತು, ಆದರೆ ಈಗ ಅದು ಅಸಂಭವವೆಂದು ತೋರುತ್ತದೆ. ಅದು ಸಂಭವಿಸದಿದ್ದರೆ, ಮಠದ ಸಾವಿರಾರು ಭಕ್ತರನ್ನು ದುಃಖಿತರನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.

ನಾಯಕತ್ವದ ಕುರಿತಾದ ಪ್ರಸ್ತುತ ಗೊಂದಲ ರಾಜ್ಯಕ್ಕೆ ಅನಾರೋಗ್ಯಕರ ಎಂದು ಕರೆದ ಶ್ರೀಗಳು, ಸ್ಪಷ್ಟೀಕರಣವನ್ನು ನೀಡುವ ಜವಾಬ್ದಾರಿ ಕಾಂಗ್ರೆಸ್‌‍ ಹೈಕಮಾಂಡ್‌ನದ್ದಾಗಿದೆ ಎಂದು ಹೇಳಿದರು.
ಶಿವಕುಮಾರ್‌ 2.5 ವರ್ಷಗಳ ನಂತರ ಮುಖ್ಯಮಂತ್ರಿಯಾಗಬೇಕು ಇದು ನನ್ನ ಮತ್ತು ಭಕ್ತರ ಅಭಿಪ್ರಾಯ ಎಂದು ಅವರು ಹೇಳಿದರು.

ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ, ಕಾಂಗ್ರೆಸ್‌‍ ಹೈಕಮಾಂಡ್‌ ಅವರನ್ನು ರಾಜ್ಯದ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದರು.

RELATED ARTICLES

Latest News