ಪನ್ನಾ, ಜು. 9 (ಪಿಟಿಐ) ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಕಾರ್ಮಿಕನೊಬ್ಬನಿಗೆ ಅಂದಾಜು 40 ಲಕ್ಷ ರೂ. ಮೌಲ್ಯದ ವಜ್ರ ಸಿಕ್ಕಿದೆ. ಕಾರ್ಮಿಕ ಮಾಧವ್ ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಆಳವಿಲ್ಲದ ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಇತ್ತೀಚೆಗೆ 11.95 ಕ್ಯಾರೆಟ್ ಅಮೂಲ್ಯ ವಜ್ರವನ್ನು ಹೊರತೆಗೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಜ್ರವು ತುಂಬಾ ಸ್ವಚ್ಛ ಮತ್ತು ಅಮೂಲ್ಯವಾಗಿದೆ. ಇದರ ಮೌಲ್ಯ 40 ಲಕ್ಷ ರೂ.ಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ ಎಂದು ಪನ್ನಾ ವಜ್ರ ಕಚೇರಿಯ ಅಧಿಕಾರಿ ರವಿ ಪಟೇಲ್ ತಿಳಿಸಿದ್ದಾರೆ.
ನಿಯಮಗಳ ಪ್ರಕಾರ ಕಾರ್ಮಿಕನು ಪನ್ನಾದಲ್ಲಿರುವ ವಜ್ರ ಕಚೇರಿಯಲ್ಲಿ ಅಮೂಲ್ಯ ಕಲ್ಲನ್ನು ರೇವಣಿ ಇಟ್ಟಿದ್ದಾನೆ.ವಜ್ರವನ್ನು ಶೀಘ್ರದಲ್ಲೇ ಹರಾಜು ಮಾಡಲಾಗುವುದು ಮತ್ತು ಶೇ.12.5 ರಷ್ಟು ರಾಯಧನವನ್ನು ಕಡಿತಗೊಳಿಸಿದ ನಂತರ ಆದಾಯವನ್ನು ಕಾರ್ಮಿಕರಿಗೆ ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದಲ್ಲಿರುವ ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್ಗಳ ವಜ್ರದ ನಿಕ್ಷೇಪಗಳಿವೆ ಎಂದು ಅಂದಾಜಿಸಲಾಗಿದೆ.
- ಡಿಡಿಓಗಳ ಹಂತದಲ್ಲೆ ಆರು ತಿಂಗಳ ಒಳಗಿನ ಮುದ್ರಾಂಕ ಶುಲ್ಕ ಮರುಪಾವತಿ
- ಆನ್ಲೈನ್ ಗೇಮಿಂಗ್ ನಿಯಂತ್ರಣ ಮಸೂದೆ : ನೆಮ್ಮದಿಯ ನಿಟ್ಟುಸಿರುಬಿಟ್ಟ ಕುಟುಂಬಗಳು, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 2 ಲಕ್ಷ ಮಂದಿ
- ದರ್ಶನ್ ಅನುಪಸ್ಥಿತಿಯಲ್ಲಿ ಡಿ.12ಕ್ಕೆ ತೆರೆಗೆ ಬರಲಿದೆ ‘ದಿ ಡೆವಿಲ್’ ಚಿತ್ರ
- ಧರ್ಮಸ್ಥಳದ ವಿರುದ್ಧ ಕಟ್ಟುಕತೆ ಕಟ್ಟಿದ ಸೂತ್ರಧಾರಿಗಳಿಗೆ ನೋಟಿಸ್ ನೀಡಲು ಮುಂದಾದ ಎಸ್ಐಟಿ
- ರಾಹುಲ್ ಮಾತಿನಿಂದ ಕಾಂಗ್ರೆಸಿಗರು ಮುಜುಗರಕ್ಕೊಳಗಾಗುತ್ತಾರೆ ; ರಿಜಿಜು