ಬೆಂಗಳೂರು,ಜು.24-ನಗರದ ಬಸ್ ನಿಲ್ದಾಣದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತರು, ಅವುಗಳ ಮೂಲ ಪತ್ತೆಯ ತನಿಖೆಗಾಗಿ 6 ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಜಿಲೆಟಿನ್ ಮತ್ತು ಡಿಟೋನೇಟರ್ಗಳನ್ನು ಯಾವ ಸ್ಥಳಗಳಿಂದ ತಂದು ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಇಡಲಾಗಿದೆ ಎಂಬ ಬಗ್ಗೆ ಸಿಸಿಬಿ, ಇಂಟೆಲಿಜೆನ್ಸ್ , ಎಟಿಸಿ ತಂಡಗಳು ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಮೇಲ್ನೋಟಕ್ಕೆ ಈ ಸ್ಪೋಟಕ ವಸ್ತುಗಳು ತಿರುಪುರದಲ್ಲಿ ತಯಾರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಸ್ಪೋಟಕ ವಸ್ತುಗಳು ತಯಾರಾದ ಜಾಗ ಮತ್ತು ಖರೀದಿಸಿದ ವ್ಯಕ್ತಿಯ ಬಗ್ಗೆ ಈ ತಂಡಗಳು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಜಿಲೆಟಿನ್ ಕಡ್ಡಿಗಳು ದೊರೆತ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೇರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಬಸ್ ನಿಲ್ದಾಣದ ಬಳಿ 6 ಜಿಲೆಟಿನ್ ಕಡ್ಡಿಗಳು ಮತ್ತು 1 ಡಿಟೋನೇಟರ್ ಪತ್ತೆಯಾಗಿತ್ತು. ಈ ವಸ್ತುಗಳನ್ನು ಈ ಜಾಗಕ್ಕೆ ತಂದ ವ್ಯಕ್ತಿ ಭಯದಿಂದ ಇಟ್ಟು ಹೋಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಜಿಲೆಟಿನ್ ಮೇಲಿದ್ದ ವಿಳಾಸದ ಆಧಾರದ ಮೇಲೆ ತನಿಖೆ ತೀವ್ರಗೊಳಿಸಿದ್ದಾರೆ.
ಚಲನವಲನ ಸೆರೆ: ಬಸ್ ನಿಲ್ದಾಣದಲ್ಲಿರುವ ಸಿಸಿ ಕ್ಯಾಮೇರಾದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಸಂಪೂರ್ಣ ಚಲನವಲನ ಸೆರೆಯಾಗಿದೆ.ಆ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
- ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ, ರೈತರು ಆತಂಕ ಪಡಬೇಕಾಗಿಲ್ಲ : ಸಚಿವ ಚಲುವರಾಯಸ್ವಾಮಿ
- ಕ್ಷುಲ್ಲಕ ವಿಚಾರಕ್ಕೆ ಕಿರಿಕ್ : ಹಲ್ಲೆಗೊಳಗಾಗಿದ್ದ ಫುಡ್ ಡೆಲಿವರಿ ಬಾಯ್ ಸಾವು
- ಇತಿಹಾಸದಲ್ಲೇ ಇದೇ ಮೊದಲು : ಮಹಿಳಾ ಚೆಸ್ ವಿಶ್ವಕಪ್ ಫಿನಾಲೆಯಲ್ಲಿ ಭಾರತೀಯರು ಮುಖಾಮುಖಿ
- ರಾಜ್ಯಸಭಾ ಸದಸ್ಯರಾಗಿ ನಟ ಕಮಲಹಾಸನ್ ಪ್ರಮಾಣ ವಚನ ಸ್ವೀಕಾರ
- ಚುನಾವಣಾ ಆಯೋಗದ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ