Homeಮನರಂಜನೆತಮಿಳುನಾಡು ಸಿಎಂ ವಿಜಯ್‌ ಸಾಧನೆಯನ್ನು ಕೊಂಡಾಡಿದ ಸೂಪರ್‌ಸ್ಟಾರ್‌ ರಜನಿಕಾಂತ್‌

ತಮಿಳುನಾಡು ಸಿಎಂ ವಿಜಯ್‌ ಸಾಧನೆಯನ್ನು ಕೊಂಡಾಡಿದ ಸೂಪರ್‌ಸ್ಟಾರ್‌ ರಜನಿಕಾಂತ್‌

Rajinikanth's First Reaction To Vijay Becoming Tamil Nadu's CM Goes Viral

ಚನೈ,ಮೇ 17- ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರ ಸಾಧನೆಯನ್ನು ಸೂಪರ್‌ಸ್ಟಾರ್‌ ರಜನಿಕಾಂತ್‌ ಮನಬಿಚ್ಚಿ ಹೊಗಳಿದ್ದಾರೆ. ಚನ್ನೈನ ಪೋಯಸ್‌‍ ಗಾರ್ಡನ್‌ನಲ್ಲಿರುವ ತಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಟ, ವಿಜಯ್‌ ಮುಖ್ಯಮಂತ್ರಿಯಾಗುವುದರ ಬಗ್ಗೆ ತಮಗೆ ಅಸೂಯೆ ಇಲ್ಲ, ಏಕೆಂದರೆ ಅವರು ರಾಜಕೀಯದಲ್ಲಿಲ್ಲ ಎಂದು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ವಿಜಯ್‌ ಅವರು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಅದ್ವಿತೀಯ ಸಾಧನೆ ಮಾಡಿದ್ದಾರೆ. ಅವರು ಏಕಾಂಗಿಯಾಗಿ ಗೆಲುವು ಸಾಧಿಸಿದ್ದಾರೆ. ಇದು ನನಗೆ ಅಚ್ಚರಿ ಮತ್ತು ಖುಷಿ ಎರಡೂ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಎಂಜಿಆರ್‌ ಮತ್ತು ಎನ್‌ ಟಿಆರ್‌ ಅವರ ಸಾಧನೆಯನ್ನೂ ವಿಜಯ್‌ ಮೀರಿಸಿದ್ದಾರೆ. ಎಂಜಿಆರ್‌ ಮತ್ತು ಎನ್‌ಟಿಆರ್‌ ಅವರು ತಮ ಕಾಲದಲ್ಲಿ ದೊಡ್ಡ ನಾಯಕರಾಗಿದ್ದರು. ಆದರೆ ವಿಜಯ್‌ ಅವರು ಅವರನ್ನೂ ಮೀರಿಸಿದಂತಹ ಸಾಧನೆ ಮಾಡಿದ್ದಾರೆ. ಇದು ತಮಿಳುನಾಡಿನ ರಾಜಕೀಯಕ್ಕೆ ಹೊಸ ಇತಿಹಾಸ ಎಂದು ಹಾಡಿ ಹೊಗಳಿದರು.

ವಿಜಯ್‌ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ದಿಗ್ವಿಜಯ ಸಾಧಿಸಿದ್ದಾರೆ. ತಮಿಳುನಾಡಿನ ಎರಡು ದಿಗ್ಗಜ ದ್ರಾವಿಡ ಪಕ್ಷಗಳ ವಿರುದ್ಧ ಸ್ಪರ್ಧಿಸಿ, ಅವರನ್ನೂ ಸೋಲಿಸಿದ್ದಾರೆ. ಅಷ್ಟೇ ಅಲ್ಲ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ಅವರು ತಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲಾ ವಿರೋಧಗಳ ನಡುವೆಯೂ ಅವರು ಸ್ವತಂತ್ರವಾಗಿ, ಏಕಾಂಗಿಯಾಗಿ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರ ಈ ಗೆಲುವನ್ನು ರಜನಿಕಾಂತ್‌ ದಿಗ್ವಿಜಯ ಎಂದೇ ಕರೆದಿದ್ದಾರೆ. ಯಾರ ಸಹಾಯವೂ ಇಲ್ಲದೆ, ಯಾವ ಒಕ್ಕೂಟವೂ ಇಲ್ಲದೆ, ಕೇವಲ ತಮ ಪಕ್ಷದ ಶಕ್ತಿಯಿಂದಲೇ ಅವರು ಇಷ್ಟು ದೊಡ್ಡ ಗೆಲುವು ಸಾಧಿಸಿದ್ದಾರೆ. ಇದು ನಿಜಕ್ಕೂ ಅಭೂತಪೂರ್ವ ಸಾಧನೆ ಎಂದರು.ವಿಜಯ್‌ ಅವರ ಅಭಿಮಾನಿಗಳು ಮತ್ತು ಟಿವಿಕೆ ಕಾರ್ಯಕರ್ತರು ರಜನಿಕಾಂತ್‌ ಅವರ ಮಾತಿಗೆ ಸಂಭ್ರಮ ವ್ಯಕ್ತಪಡಿಸಿದರು.

ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ವಿಜಯ್‌ ಅವರ ಸಾಧನೆ ಚರಿತ್ರಾರ್ಹವಾದುದು. ಅವರಿಗೆ ನನ್ನ ಶುಭಾಶಯಗಳುನ್ನು ಕೋರಿದರು.ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಸೋಲಿನ ನಂತರ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರೊಂದಿಗಿನ ಭೇಟಿಯ ಸುತ್ತಲಿನ ವಾತಾವರಣವನ್ನು ಸ್ಪಷ್ಟಪಡಿಸಿದರು.

ಮಾಜಿ ಸಿಎಂ ಅವರನ್ನು ಸ್ನೇಹಿತನಂತೆ ಭೇಟಿಯಾಗಿದ್ದೆ. ಆದರೆ ವಿಜಯ್‌ ಮುಂದಿನ ಮುಖ್ಯಮಂತ್ರಿಯಾಗುವುದನ್ನು ಅಸಮತಿ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.
ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮಿ ಸಣ್ಣ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ನಂತರ ರಜನಿಕಾಂತ್‌ ಅವರ ಸ್ಪಷ್ಟೀಕರಣ ಬಂದಿದೆ.

ನಾನು ವಿಜಯ್‌ ಬಗ್ಗೆ ಏಕೆ ಅಸೂಯೆ ಪಡಬೇಕು? :
ಬಹುಶಃ ಕಮಲ್‌ (ಹಾಸನ್‌) ಮುಖ್ಯಮಂತ್ರಿಯಾದರೆ, ನಾನು ಅಸೂಯೆ ಪಡಬಹುದು ಎಂದು ಅವರು ತಮಾಷೆಯಾಗಿ ಹೇಳಿದರು. ಚುನಾವಣಾ ಫಲಿತಾಂಶಗಳು ತಮ್ಮ ಪಕ್ಷವು ಚುನಾವಣೆಯಲ್ಲಿ ಗೆದ್ದಿರುವುದನ್ನು ತೋರಿಸಿದ ತಕ್ಷಣ ವಿಜಯ್‌ ಅವರನ್ನು ಅಭಿನಂದಿಸಿದ್ದೆ. ಆದರೆ ವಿಜಯ್‌ ತಮ ಮೊದಲ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ನೋಡಿ ಆಶ್ಚರ್ಯವಾಯಿತು ಎಂದು ಒಪ್ಪಿಕೊಂಡರು.

RELATED ARTICLES

Latest News