Monday, April 20, 2026
Homeರಾಜ್ಯಬಿಟ್‌ ಕಾಯಿನ್‌ ವ್ಯವಹಾರದ ನಂಟು : ಶಾಸಕ ಹ್ಯಾರಿಸ್‌‍ ಮತ್ತು ಪುತ್ರ ಮಹಮ್ಮದ್ ಮನೆ-ಕಚೇರಿ ಮೇಲೆ...

ಬಿಟ್‌ ಕಾಯಿನ್‌ ವ್ಯವಹಾರದ ನಂಟು : ಶಾಸಕ ಹ್ಯಾರಿಸ್‌‍ ಮತ್ತು ಪುತ್ರ ಮಹಮ್ಮದ್ ಮನೆ-ಕಚೇರಿ ಮೇಲೆ ಇ.ಡಿ. ದಾಳಿ

ED raids Bengaluru sites linked to Congress MLA' sons in crypto theft case

ಬೆಂಗಳೂರು,ಏ.20- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ಶಾಸಕ ಎನ್‌.ಎ.ಹ್ಯಾರೀಸ್‌‍ ಮತ್ತು ಅವರ ಪುತ್ರ ಹಾಗೂ ಕೇಂದ್ರದ ಮಾಜಿ ಸಚಿವರೊಬ್ಬರ ಮೊಮ್ಮಗನ ಮನೆ ಮತ್ತು ಕಚೇರಿ ಸೇರಿದಂತೆ ಮತ್ತಿತರ ಕಡೆ ಜಾರಿ ನಿರ್ದೇಶನಾಲಯ(ಇ.ಡಿ)ದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ)ದ

ಅಧ್ಯಕ್ಷರಾಗಿರುವ ಎನ್‌.ಎ. ಹ್ಯಾರೀಸ್‌‍ರವರ ಪುತ್ರ ಮತ್ತು ಯುವ ಕಾಂಗ್ರೆಸ್‌‍ ಮಾಜಿ ಅಧ್ಯಕ್ಷ ಮಹಮದ್‌ ನಲ್ಪಾಡ್‌, ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌ ಅವರ ಮೊಮಗ ಹಕೀಬ್‌ ಖಾನ್‌, ಪ್ರಕರಣದ ಪ್ರಮುಖ ರೂವಾರಿ ಶ್ರೀಕಿಯ ಮನೆ, ಕಚೇರಿಗಳು ಸೇರಿದಂತೆ ಒಟ್ಟು 17 ಕಡೆ ದಾಳಿ ನಡೆಸಲಾಗಿದೆ.

ಬೆಳಗ್ಗೆ 6.30ಕ್ಕೆ ಸಿಆರ್‌ಪಿಎಫ್‌ ಭದ್ರತೆಯೊಂದಿಗೆ ಇ.ಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪ್ರಕರಣ ಸಂಬಂಧ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಪಿಎಂಎಲ್‌ಎ ಅಡಿ ದೂರು ದಾಖಲಿಸಿಕೊಂಡು ಇ.ಡಿ ಅಧಿಕಾರಿಗಳು ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರೀಸ್‌‍ ಅವರ ಪುತ್ರ ಮೊಹಮದ್‌ ನಲ್ಪಾಡ್‌ ಅವರ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

ಇದೇ ವೇಳೆ ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌ ಅವರ ಮೊಮಗ ಹಕೀಬ್‌ ಖಾನ್‌ ಅವರ ಎಂಎನ್‌ಕೆಆರ್‌ವಿ ಕಾಲೇಜು ಬಳಿ ಇರುವ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಮೊಹಮದ್‌ ನಲ್ಪಾಡ್‌, ಹಕೀಬ್‌ ಖಾನ್‌ನ ಖಾತೆ ಮೂಲಕ ಹಣದ ವರ್ಗಾವಣೆ ನಡೆಸಿದ್ದರು ಎಂಬ ಆರೋಪದ ಮೇಲೆ ದಾಳಿ ಮಾಡಲಾಗಿದೆ. ಇನ್ನು ಪ್ರಕರಣದ ಕಿಂಗ್‌ಪಿನ್‌ ಎಂದೇ ಹೇಳಾಗಿರುವ ಶ್ರೀಕಿಯ ಜಯನಗರದ ನಿವಾಸದ ಮೇಲೂ ಇ.ಡಿ. ದಾಳಿ ನಡೆಸಿದೆ.

ದಾಳಿಯ ವೇಳೆ ಅಧಿಕಾರಿಗಳು ಹಣದ ವಹಿವಾಟು ನಡೆಸಿರುವ ದಾಖಲೆಗಳು, ಕಾಗದಪತ್ರಗಳು, ಬ್ಯಾಂಕ್‌ ವಾಹಿವಾಟುಗಳು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಪರಿಶೀಲಿಸಿ ತಮ ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿಯ ವೇಳೆ ಹ್ಯಾರೀಸ್‌‍ ಅವರ ಪುತ್ರ ನಲ್ಪಾಡ್‌ ಮತ್ತು ಕುಟುಂಬದ ಸದಸ್ಯರು ಇದ್ದರು. ಅವರ ಸಮುಖದಲ್ಲೇ ದಾಖಲೆಗಳನ್ನು ತೆಗೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರಿಗೆ ಯಾವುದೇ ಗುಟ್ಟು ಬಿಟ್ಟು ಕೊಡದ ಇ.ಡಿ ಅಧಿಕಾರಿಗಳು, ಸಿಆರ್‌ಪಿಎಫ್‌ ಭದ್ರತೆಯೊಂದಿಗೆ ಈ ದಾಳಿ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬಿಟ್‌ ಕಾಯಿನ್‌ ಪ್ರಕರಣದ ಪ್ರಮುಖ ರೂವಾರಿ ಶ್ರೀಕಿ ಅಲಿಯಾಸ್‌‍ ಶ್ರೀಕೃಷ್ಣ ಜೊತೆ ಮಹಮದ್‌ ನಲ್ಪಾಡ್‌ 4.5 ಕೋಟಿ ವ್ಯವಹಾರ ನಡೆಸಿದ್ದರ ಆರೋಪವಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌‍ಐಟಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿತ್ತು.
ಕಳೆದ ಆರು ವರ್ಷಗಳಿಂದ ನಲ್ಪಾಡ್‌, ಶ್ರೀಕಿ ಜೊತೆ ಸಂಪರ್ಕದಲ್ಲಿದ್ದು ಹಣದ ವಹಿವಾಟು ನಡೆಸಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಬೆಂಗಳೂರಿನ ನಿವಾಸಿಯಾಗಿರುವ ಶ್ರೀಕಿ 2014ರಿಂದ 2017ರವರೆಗೆ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್‌ ಕಂಪ್ಯೂಟರ್‌ ಸೈನ್‌್ಸನಲ್ಲಿ ಬಿಎಸ್ಸಿ ಪದವಿ ಪಡೆದ ಬಳಿಕ, ವೆಬ್‌ಸೈಟ್‌ ಹ್ಯಾಕ್‌ ಮಾಡಲು ಆರಂಭಿಸಿದ್ದ. ಪ್ರಾರಂಭದಲ್ಲಿ ಸಣ್ಣಪುಟ್ಟ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದ. ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ ಬಳಿಕ ಆತ ಬಿಟ್‌ ಕಾಯಿನ್‌ ಬಳಸಿ ಹಣ ಪಡೆಯುತ್ತಿದ್ದ.

2020ರಲ್ಲಿ ಕೆಂಪೇಗೌಡನಗರ ಸಮೀಪ ಡ್ರಗ್‌ ಮಾರಾಟಕ್ಕೆ ಯತ್ನಿಸಿದ್ದಾಗ ಶ್ರೀಕಿ ಹಾಗೂ ಆತನ ಸ್ನೇಹಿತರು ಸಿಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ವಿಚಾರಣೆ ವೇಳೆ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಸುಮಾರು 11 ಕೋಟಿ ಹಣವನ್ನು ದೋಚಿದ್ದ ಸಂಗತಿ ಬಯಲಾಗಿತ್ತು. ಹೀಗೆ ದೋಚಿದ್ದ ಹಣವನ್ನು ಬಿಟ್‌ ಕಾಯಿನ್‌ಗಳಾಗಿ ಪರಿವರ್ತಿಸಿ ಡ್ರಗ್‌್ಸ ದಂಧೆಗೆ ಶ್ರೀಕಿ ಬಳಸಿದ್ದ ಎನ್ನಲಾಗಿತ್ತು.

ಬಿಟ್‌ಕಾಯಿನ್‌ಗೆ ಕನ್ನ:
ಶ್ರೀಕಿ ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್‌ ಮಾಡಿ ಅವುಗಳಿಂದ ಸಾವಿರಾರು ಬಿಟ್‌ಕಾಯಿನ್‌ಗಳನ್ನು ಎಗರಿಸಿದ್ದ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.

ಶ್ರೀಕಿಯನ್ನು ಬಳಸಿಕೊಂಡು ರಾಜಕಾರಣಿಗಳು ಬಿಟ್‌ಕಾಯಿನ್‌ ಹಗರಣಗಳನ್ನು ಎಸಗಿದ ಆರೋಪವಿದೆ. ವಿವಿಧ ಸೈಬರ್‌ ಕ್ರೃಂಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ಹಾಗೂ ಇತರರ ನಾಲ್ವರ ವಿರುದ್ಧ 2021ರ ಫೆಬ್ರವರಿ 22ರಂದು ಮೊದಲ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಶ್ರೀಕಿ ಯಾವುದೇ ಬ್ಯಾಂಕ್‌ ಖಾತೆಗಳನ್ನು ಹೊಂದಿರಲಿಲ್ಲ.

ಆತನ ಎಲ್ಲ ಬಿಟ್‌ಕಾಯಿನ್‌ ವ್ಯವಹಾರ ಮತ್ತು ಹ್ಯಾಕಿಂಗ್‌ನಿಂದ ಬಂದ ಹಣ ಸಂಪಾದನೆಯನ್ನು ಮತ್ತೊಬ್ಬ ಆರೋಪಿ ರಾಬಿನ್‌ ಖಂಡೇವಾಲನ ಮೂಲಕ ಮಾಡುತ್ತಿದ್ದ. ಎಂಟು ಕೋಟಿ ರೂಪಾಯಿಗೂ ಅಧಿಕ ಹಣವನ್ನು ರಾಬಿನ್‌ಗೆ ನೀಡಿದ್ದಾಗಿ, ಅವನು ಕದ್ದ ಬಿಟ್‌ಕಾಯಿನ್‌ಗಳನ್ನು ತನ್ನ ಕ್ಲೌಡ್‌ ಖಾತೆಯಲ್ಲಿ ಪ್ರೃವೇಟ್‌ ಕೀಗಳನ್ನು ಬಳಸಿ ಇರಿಸಿದ್ದ.

ಹಲ್ಲೆ ಪ್ರಕರಣದಲ್ಲಿ ಬಂಧನ :
2018ರಲ್ಲಿ ಯುಬಿ ಸಿಟಿಯಲ್ಲಿ ವಿದ್ವತ್‌ ಎಂಬಾತನ ಮೇಲೆ ಶಾಸಕರೊಬ್ಬರ ಮಗ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶ್ರೀಕಿ ಸಹ ಆರೋಪಿಯಾಗಿದ್ದ. ಆರೋಪಿಗಳ ಪಟ್ಟಿಯಲ್ಲಿ ಶ್ರೀಕಿ ಹೆಸರಿದ್ದರೂ ಆತನನ್ನು ಬಂಧಿಸಿರಲಿಲ್ಲ. ಬಂಧನಕ್ಕೂ ಮುನ್ನ ಆತ ಬಸ್‌‍ನಲ್ಲಿ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಹಿಮಾಲಯಕ್ಕೆ ತೆರಳಿದ್ದ. ಮುಖ್ಯ ಆರೋಪಿ ಜಾಮೀನಿನ ಮೇಲೆ ಹೊರಬಂದಾಗ ಶ್ರೀಕಿಗೂ ಜಾಮೀನು ಸಿಕ್ಕಿತ್ತು.

ರಾಯಲ್‌ ಆರ್ಕಿಡ್‌ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜತೆ ಜಗಳವಾಡಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹ್ಯಾಕರ್‌ ಶ್ರೀಕಿ ಮತ್ತು ಆತನ ಗೆಳೆಯ ವಿಷ್ಣು ಭಟ್‌ನನ್ನು ಪೊಲೀಸರು ಬಂಧಿಸಿದ್ದರು.

RELATED ARTICLES

Latest News