ಬೆಳಗಾವಿ,ಡಿ.8- ರಾಜ್ಯದ ಸಮಸ್ಯೆಗಳನ್ನು ಪರಿಹರಿಸಿ, ಇಲ್ಲವೇ ರಾಜೀನಾಮೆ ಕೊಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಸುವರ್ಣ ಸೌಧದ ಆವರಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈತರು, ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳು, ರೈತರಿಗೆ ಅತಿವೃಷ್ಟಿ- ಅನಾವೃಷ್ಟಿ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಸರ್ಕಾರದ ದ್ವಂದ್ವ ನೀತಿಯಿಂದ ಮೆಕ್ಕೆಜೋಳ ಖರೀದಿ ವಿಚಾರ, ಕಬ್ಬು ಬೆಳೆಗಾರರ ಸಮಸ್ಯೆಗಳು- ಹೀಗೆ ಅನೇಕ ಸಮಸ್ಯೆಗಳಿಗೆ ಸರ್ಕಾರ ಕಾರಣವಾಗಿದೆ. ಇವೆಲ್ಲವನ್ನು ತೆಗೆದುಕೊಂಡು ನಮ ಹೋರಾಟವನ್ನು ಮುಂದುವರೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಇಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಸಮಸ್ಯೆಗಳು ಸೇರಿ ಉತ್ತರ ಭಾಗದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರಥಮ ಆದ್ಯತೆ ಇರಬೇಕೆಂದು ಸಭಾಪತಿಯವರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಬೆಂಗಳೂರಿನ ಎಲ್ಲ ಸಮಸ್ಯೆಗಳನ್ನು ಇಲ್ಲಿಗೆ ಹೊತ್ತು ತಂದಿದ್ದಾರೆ ಎಂದು ಆಕ್ಷೇಪಿಸಿದರು. ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತಿದೆ ಸರ್ಕಾರದ ನೀತಿ ಎಂದು ಅವರು ಟೀಕಿಸಿದರು. ತಕ್ಕ ಪಾಠ ಕಲಿಸಲು ನಾವು ಸಜ್ಜಾಗಿದ್ದೇವೆ ಎಂದು ಅವರು ಹೇಳಿದರು.ನಾ ಕೊಡೆ, ನೀ ಬಿಡೆ ನೀತಿ ರಾಜ್ಯದ ಜನರಿಗೆ ಇದು ಬೇಕಿಲ್ಲ. ನಿಮ ಅಧಿಕಾರ ಹಂಚಿಕೆ ನಿಮ ಪಾಡು. ನಮಗದು ಬೇಡ. ಸಮಸ್ಯೆ ಇದೆ. ಪರಿಹಾರ ಕೊಡಿ. ಇಲ್ಲವೇ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.
ಕಳೆದ ಸದನದಲ್ಲೂ ಇಲ್ಲಿ ಉತ್ತರ ಕರ್ನಾಟಕದ ವಿಚಾರ ಪ್ರಸ್ತಾಪಿಸಿದ್ದೆವು. ಉತ್ತರ ಕರ್ನಾಟಕದ ವಿಚಾರ ಚರ್ಚೆ ನಡೆಯಲಿಲ್ಲ; ದಿಢೀರ್ ಸದನ ಮುಂದೂಡಿದ್ದರು ಎಂದು ಆಕ್ಷೇಪಿಸಿದರು. ಪ್ರಥಮದಿಂದಲೇ ಉತ್ತರ ಕರ್ನಾಟಕದ ವಿಚಾರ ಚರ್ಚಿಸಿ ಎಂದು ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುದಾನ; ವಿಪಕ್ಷದ ಶಾಸಕರಿಗೆ ಕಡಿಮೆ ಅನುದಾನ ಕೊಡುವ ಇದು ತಾರತಮ್ಯದ ಸರಕಾರ ಎಂದು ಟೀಕಿಸಿದರು. ಇದು ಕಾಲಹರಣದ ಅಧಿವೇಶನ ಆಗಬಾರದು ಎಂಬುದು ನಮ ವಾದ ಎಂದು ಅವರು ನುಡಿದರು.
