Homeರಾಷ್ಟ್ರೀಯನೇಣಿಗೆ ಶರಣಾದ ಮಗನನ್ನು ಕಂಡು 3ನೇ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ

ನೇಣಿಗೆ ಶರಣಾದ ಮಗನನ್ನು ಕಂಡು 3ನೇ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ

ಹರ್ದೋಯಿ, ಜುಲೈ 29-ಮಗ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡ ತಾಯಿ ಆಘಾತದಿಂದ ಮನೆಯ ಮೂರನೇ ಮಹಡಿಯಿಂದ ಹಾರಿ ಆತಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದೆ.

ಹರ್ದೋಯಿ ಜಿಲ್ಲೆಯ ಪಿಹಾನಿ ಚುಂಗಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರ ವೃತ್ತಾಧಿಕಾರಿ ಅಜಿತ್‌ ಸಿಂಗ್‌ ಚೌಹಾಣ್‌‍ ಅವರ ಪ್ರಕಾರ, ಆಸ್ತಿ ವ್ಯಾಪಾರಿ ರಾಮ್‌ ಪ್ರಕಾಶ್‌ ಗುಪ್ತಾ ಅವರ 16 ವರ್ಷದ ಪುತ್ರ ಹಿಮಾಂಶು ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಹಿಮಾಂಶು ನೇಣು ಬಿಗಿದುಕೊಂಡಿರುವುದನ್ನು ಕಂಡ ಆತನ ತಾಯಿ ಗೀತಾ (46) ಮನೆಯ ಮೂರನೇ ಮಹಡಿಯಿಂದ ಕೆಳಗೆ ಹಾರಿದಾರೆ ಎಂದು ಚೌಹಾಣ್‌ ತಿಳಿಸಿದ್ದಾರೆ.ಗಂಭೀರವಾಗಿ ಗಾಯಗೊಂಡ ತಾಯಿ ಮತ್ತು ಮಗನನ್ನು ಕೂಡಲೇ ಹರ್ದೋಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಇಬ್ಬರನ್ನೂ ಮೃತಪಟ್ಟಿರುವುದಾಗಿ ಘೋಷಿಸಿದರು. ಹದಿಹರೆಯದ ಬಾಲಕ ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News