Sunday, September 29, 2024
Homeರಾಷ್ಟ್ರೀಯ | Nationalಬಂಡಾಯದ ಮುನ್ಸೂಚನೆ ನೀಡಿದ ವಸುಂಧರಾ ರಾಜೆ

ಬಂಡಾಯದ ಮುನ್ಸೂಚನೆ ನೀಡಿದ ವಸುಂಧರಾ ರಾಜೆ

ಜೈಪುರ,ಜೂ.24– ಬಿಜೆಪಿಯ ಹಿರಿಯ ನಾಯಕಿ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತೆ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದಾರೆ.ಉದಯಪುರದ ಸುಂದರ್‌ ಸಿಂಗ್‌ ಭಂಡಾರಿ ಚಾರಿಟೇಬಲ್‌ ಟ್ರಸ್ಟ್‌ ಹಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿಷ್ಠೆ ಮತ್ತು ರಾಜಕೀಯ ಬೆಳವಣಿಗೆ ಕುರಿತು ಅವರು ನೀಡಿರುವ ಹೇಳಿಕೆ ಅಲ್ಲೊಲ್ಲ ಕಲ್ಲೊಲ ಸೃಷ್ಟಿಸಿದೆ.

ರಾಜಕೀಯದಲ್ಲಿ ಬಡ್ತಿ ಕೊಡುವ ವ್ಯಕ್ತಿಯನ್ನು ಗೌರವಿಸುತ್ತಿದ್ದ ನಿಷ್ಠೆಯ ಕಾಲವೇ ಬೇರೆ. ಆದರೆ, ಈಗಿನ ಕಾಲದಲ್ಲಿ ಹಾಗಲ್ಲ.ಇಂದು ಜನರು ಮೊದಲು ನಡೆಯಲು ಕಲಿಸಿದವರ ಬೆರಳನ್ನೇ ಕಡಿಯಲು ಬಯಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯಪಾಲ ಹಾಗೂ ಮಾಜಿ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಟಾರಿಯಾ ಅವರು ವೇದಿಕೆಯಲ್ಲಿದ್ದ ಕೆಲವರೊಂದಿಗೆ ವಾಗ್ವಾದ ನಡೆಸಿದರು.

ಜನಸಂಘದ ಸಂಸ್ಥಾಪಕ ಸದಸ್ಯ ಸುಂದರ್‌ ಸಿಂಗ್‌ ಭಂಡಾರಿಯವರ ಪುಣ್ಯತಿಥಿ ಮತ್ತು ಸಂಸ್ಥಾಪಕ ಡಾ.ಶ್ಯಾಮ ಪ್ರಸಾದ್‌ ಮುಖರ್ಜಿಯವರ ಹುತಾತ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

RELATED ARTICLES

Latest News