Thursday, September 19, 2024
Homeರಾಜ್ಯಕೆಂಪೇಗೌಡರ 515ನೇ ಜಯಂತಿ : ನಾಡಪ್ರಭುಗೆ ಕೇಂದ್ರ ಸಚಿವರಿಂದ ಗೌರವ ಸಮರ್ಪಣೆ

ಕೆಂಪೇಗೌಡರ 515ನೇ ಜಯಂತಿ : ನಾಡಪ್ರಭುಗೆ ಕೇಂದ್ರ ಸಚಿವರಿಂದ ಗೌರವ ಸಮರ್ಪಣೆ

ಬೆಂಗಳೂರು, ಜೂ.27- ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಕರ್ನಾಟಕ ಭವನದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆಯನ್ನು ಕೇಂದ್ರ ಭಾರಿ ಮತ್ತು ಉಕ್ಕು ಕೈಗಾರಿಕ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ರೈಲ್ವೆ, ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಮತ್ತು ಸಂಸದ ಮಲ್ಲೇಶ್‌ಬಾಬು ನೆರವೇರಿಸಿದರು.

ನ್ಯಾಯ, ನೀತಿ, ನಿಷ್ಠೆ ಮತ್ತು ದೂರದೃಷ್ಟಿ ಈ ನಾಲ್ಕು ಆಧಾರಸ್ತಂಭಗಳ ಮೇಲೆ ಆಡಳಿತ ನಡೆಸಿದ ನಾಡಪ್ರಭುಗಳು ಅಮರ ಅಜರಾಮರ ಎಂದು ಕುಮಾರಸ್ವಾಮಿ ಬಣ್ಣಿಸಿದ್ದಾರೆ. ಎಲ್ಲರಿಗೂ ಕೆಂಪೇಗೌಡರ 515ನೇ ಜಯಂತಿಯ ಶುಭಾಶಯಗಳನ್ನು ಎಕ್ಸ್ ಮೂಲಕ ಕೋರಿರುವ ಅವರು, ಕನ್ನಡಿಗರ ಸ್ವಾಭಿಮಾನ, ಶೌರ್ಯ ಹಾಗೂ ಸಹಿಷ್ಣತೆಯ ಪ್ರತೀಕವಾಗಿದ್ದರು.

ಕೆಂಪೇಗೌಡರು ನಮೆಲ್ಲರ ಪಾಲಿನ ಪ್ರಾತಃ ಸರಣೀಯರು. ಇಡೀ ಜಗತ್ತೇ ನಿಬ್ಬೆರಗಾಗಿ ಇಂದು ಬೆಂಗಳೂರನ್ನು ನೋಡುತ್ತಿದೆ ಎಂದರೆ ಅದಕ್ಕೆ ನಾಡಪ್ರಭುಗಳು ಹಾಕಿಕೊಟ್ಟಿರುವ ಹೆಜ್ಜೆ ಗುರುತುಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News