Saturday, October 5, 2024
Homeರಾಷ್ಟ್ರೀಯ | Nationalಏಡಿ ಹಿಡಿಯಲು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡಿದ್ದ 5 ಬಾಲಕರ ರಕ್ಷಣೆ

ಏಡಿ ಹಿಡಿಯಲು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡಿದ್ದ 5 ಬಾಲಕರ ರಕ್ಷಣೆ

ಥಾಣೆ, ಜು.6-ಮಹಾರಾಷ್ಟ್ರದ ಥಾಣೆ ನಗರದ ಬೆಟ್ಟವೊಂದರ ಮೇಲೆ ಏಡಿ ಹಿಡಿಯಲು ಹೋಗಿ ದಾರಿ ತಪ್ಪಿದ ಐವರು ಬಾಲಕರನ್ನು ಹಲವು ತಂಡಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ಐವರು ಹುಡುಗರಲ್ಲಿ ಹೆಚ್ಚಿನವರು 12 ವರ್ಷ ವಯಸ್ಸಿನವರು, ಮೂವರು ಒಡಹುಟ್ಟಿದವರು ಏಳು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಅಪಾಯದಿಂದ ಪಾರು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಜಾದ್‌ ನಗರ ಪ್ರದೇಶದ ದರ್ಗಾ ಗಲ್ಲಿಯ ಐವರು ಬಾಲಕರು ಏಡಿ ಹಿಡಿಯುವ ಸಲುವಾಗಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮುಂಬ್ರಾ ಬೆಟ್ಟದ ಪ್ರದೇಶಕ್ಕೆ ತೆರಳಿದ್ದರು.ಆದರೆ ದಾರಿ ತಪ್ಪಿ ಕೂಗಿಕೋಡಿದ್ದಾರೆ ಅದೃಷ್ಟವಶಾತ್‌ ಆ ವೇಳೆ ಆ ಮಾರ್ಗವಾಗಿ ಹೋಗುತ್ತಿದ್ದ ಕೆಲವರಿಗೆ ಕೇಳಿಸಿ ಕೂಡಲೆ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು ಎಂದು ಥಾಣೆ ಮುನ್ಸಿಪಲ್‌ ಕಾರ್ಪೊರೇಷನ್‌ (ಟಿಎಂಸಿ) ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್‌ಡಿಎಂಸಿ) ಮುಖ್ಯಸ್ಥ ಯಾಸಿನ್‌ ತದ್ವಿ ಹೇಳಿದರು.

ಮಾಹಿತಿ ನೀಡಿದ ನಂತರ, ಆರ್‌ಡಿಎಂಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ಅಗ್ನಿಶಾಮಕ ದಳ ಮತ್ತು ಇತರರನ್ನು ಒಳಗೊಂಡ ಬಹು-ಏಜೆನ್ಸಿ ಶೋಧ ಕಾರ್ಯಾಚರಣೆಯನ್ನು ರಾತ್ರಿಯಲ್ಲಿ ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.

ಕತ್ತಲೆಯಲ್ಲಿ ಮತ್ತು ಮಳೆಯ ನಡುವೆ ಅನಿಶ್ಚಿತ ಗುಡ್ಡಗಾಡು ಪ್ರದೇಶವನ್ನು ಎದುರಿಸಬೇಕಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಯು ಸವಾಲಿನದಾಗಿತ್ತು. ಅಂತಿಮವಾಗಿ ಮುಂಜಾನೆ 3 ಗಂಟೆಯ ಸುಮಾರಿಗೆ ಬಾಲಕರನ್ನು ರಕ್ಷಿಸಿ ಅವರ ಪೋಷಕರಿಗೆ ಒಪ್ಪಿಸಲಾಯಿತು ಎಂದು ತಾದ್ವಿ ಹೇಳಿದರು

RELATED ARTICLES

Latest News