Friday, October 18, 2024
Homeರಾಷ್ಟ್ರೀಯ | Nationalರಾಹುಲ್‌ ಪರ ಶಂಕರಾಚಾರ್ಯ ಸ್ವಾಮಿ ಅಮುಕ್ತೇಶ್ವರಾನಂದ ಸರಸ್ವತಿ ಬ್ಯಾಟಿಂಗ್‌

ರಾಹುಲ್‌ ಪರ ಶಂಕರಾಚಾರ್ಯ ಸ್ವಾಮಿ ಅಮುಕ್ತೇಶ್ವರಾನಂದ ಸರಸ್ವತಿ ಬ್ಯಾಟಿಂಗ್‌

ನವದೆಹಲಿ,ಜು.8- ರಾಹುಲ್‌ಗಾಂಧಿಯವರು ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ ಎಂದು ಲೋಕಸಭಾ ವಿಪಕ್ಷ ನಾಯಕ ಶಂಕರಾಚಾರ್ಯ ಸ್ವಾಮಿ ಅಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುವ ವೇಳೆ ರಾಹುಲ್‌ಗಾಂಧಿಯವರು ಹಿಂದೂ ಧರ್ಮದ ಕುರಿತು ಪ್ರಸ್ತಾಪಿಸಿದ ವಿಷಯ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ರಾಹುಲ್‌ಗಾಂಧಿಯವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವೆಡೆ ಪ್ರತಿಭಟನೆಗಳು ಕೂಡ ನಡೆದಿದ್ದವು.

ಈಗ ರಾಹುಲ್‌ಗಾಂಧಿ ಪರ ಶಂಕರಾಚಾರ್ಯ ಸ್ವಾಮಿ ಅಮುಕ್ತೇಶ್ವರಾನಂದ ಸರಸ್ವತಿ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಸ್ವಾಮೀಜಿಯವರು ತಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ನಾನು ಅವರ ಭಾಷಣದ ಸಂಪೂರ್ಣ ವಿಡಿಯೋ ವೀಕ್ಷಿಸಿದ್ದೇನೆ. ಅವರು ಎಲ್ಲೂ ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ. ಹಿಂದೂ ಧರ್ಮದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಅವರು ಹೇಳಿರುವುದು ಸತ್ಯವಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ರಾಹುಲ್‌ಗಾಂಧಿಯವರ ಭಾಷಣದ ಆಯ್ದ ತುಣುಕುಗಳನ್ನಷ್ಟೇ ಹಂಚಿಕೊಳ್ಳುವ ಮೂಲಕ ಅಪಪ್ರಚಾರ ನಡೆಸುತ್ತಿರುವವರ ಕುರಿತು ತನಿಖೆ ನಡೆಸಬೇಕೆಂದು ಶ್ರೀಗಳು ಹೇಳಿದ್ದಾರೆ.ರಾಹುಲ್‌ಗಾಂಧಿಯವರು ಲೋಕಸಭೆಯಲ್ಲಿ ಮಾತನಾಡುವ ತಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವ ಕೆಲವರು 24 ಗಂಟೆ ಕಾಲವೂ ಹಿಂಸೆ, ದ್ವೇಷ ಹರಡುತ್ತಿದ್ದಾರೆ ಎಂದಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

RELATED ARTICLES

Latest News