Tuesday, September 17, 2024
Homeರಾಜಕೀಯ | Politics"ಸಿಎಂ ಸಿದ್ದರಾಮಯ್ಯ ಬಾಲಕ ಬುದ್ದಿಯ ರಾಹುಲ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ"

“ಸಿಎಂ ಸಿದ್ದರಾಮಯ್ಯ ಬಾಲಕ ಬುದ್ದಿಯ ರಾಹುಲ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ”

ಬೆಂಗಳೂರು,ಜು.26- ದಿನೇ ದಿನೇ ಭ್ರಷ್ಟಾಚಾರದ ಕಳಂಕಿತ ಸಿಎಂ ಸಿದ್ದರಾಮಯ್ಯ ದುರ್ಬಲರಾಗುತ್ತಿದ್ದು, ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಾಲಕ ಬುದ್ದಿಯ ರಾಹುಲ್ ಗಾಂಧಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಆಶೋಕ್ ವಾಗ್ದಳಿ ನಡೆಸಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ಸನಲ್ಲಿ ಪೋಸ್ಟ್ ಮಾಡಿರುವ ಅವರು, 2016ರಲ್ಲಿ ಏಕಕಾಲದ ಚುನಾವಣೆಯ ಪರಿಕಲ್ಪನೆಯನ್ನು ಸ್ವಾಗತಿಸಿ ಬೆಂಬಲಿಸಿದ್ದ ಅದೇ ಸಿದ್ದರಾಮಯ್ಯ ಈಗ ಕರ್ನಾಟಕ ವಿಧಾನಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವಿರುದ್ಧ ನಿರ್ಣಯ ಅಂಗೀಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ ಈ ಚೇಷ್ಟೆಗಳಿಂದ ಯಾರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೀರಿ? ನಿಮ ಆತಸಾಕ್ಷಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೀರಾ? ಅಧಿಕಾರಕ್ಕಾಗಿ ಆತವನ್ನು ಮಾರಿಕೊಂಡಿದ್ದೀರಾ? ಉತ್ತರ ಮಾಡಿ ಎಂದು ಅಶೋಕ್ ಸವಾಲು ಎಸೆದಿದ್ದಾರೆ.

RELATED ARTICLES

Latest News