Thursday, September 19, 2024
Homeಇದೀಗ ಬಂದ ಸುದ್ದಿಪ್ರೇಯಸಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ಭಗ್ನ ಪ್ರೇಮಿ

ಪ್ರೇಯಸಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ಭಗ್ನ ಪ್ರೇಮಿ

ಕೊರಟಗೆರೆ, ಜು.28- ಪ್ರೇಮಿಯೋರ್ವ ಪ್ರಿಯತಮೆ ಪ್ರೀತಿ- ಪ್ರೇಮ ಪ್ರಣಯಕ್ಕೆ ನಿರಾಕರಿಸಿದ್ದಕ್ಕೆ ರಾತ್ರಿ 9 ಗಂಟೆಗೆ ಮನೆಗೆ ನುಗ್ಗಿ ತಂದೆ ತಾಯಿ ಎದುರಲ್ಲಿಯೇ ಮಹಿಳೆಯ ಕುತ್ತಿಗೆ, ಹೊಟ್ಟೆ ತಲೆಭಾಗಕ್ಕೆ ಚಾಕುವಿನಿಂದ ಹಿರಿದು ಕೊಲೆ ಮಾಡಲು ಯತ್ನಿಸಿದ್ದಲ್ಲದೆ ತಾನು ವಿಷ ಸೇವಿಸಿ ಕೈ ಕೊಯ್ದುಕೊಂಡು ಆತಹತ್ಯೆಗೆ ಯತ್ನಿಸಿದ ಘಟನೆ ಕೊರಟಗೆರೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಡ್ಡೇನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಮಹಿಳೆ ಭವ್ಯ ತನ್ನ ಮನೆಯಲ್ಲಿ ಪೋಷಕರಿಗೆ ಅಡುಗೆ ಬಡಿಸಿ ನಾನು ಊಟ ಮಾಡಿ ಕುಳಿತ್ತಿದ್ದಂತ ಸಂದರ್ಭದಲ್ಲಿ ಹಳೆ ಪ್ರಿಯಕರ ರಾಮಾಚಾರಿ ಎಂಬುವ ಯುವಕ ಏಕಾಏಕಿ ಮನೆಗೆ ನುಗ್ಗಿ ತಂದೆ, ತಾಯಿ ಎದುರಿನಲ್ಲಿಯೇ ಭವ್ಯಳ ಮೇಲೆ ಚಾಕುವಿನಿಂದ ತಲೆ ಭಾಗಕ್ಕೆ ಕುತ್ತಿಗೆ ಹೊಟ್ಟೆ ಭಾಗಕ್ಕೆ ಚುಚ್ಚಿದ್ದು ತೀವ್ರ ರಕ್ತಸ್ರಾವದಿಂದ ಮಹಿಳೆ ಒದ್ದಾಡುತ್ತಿದ್ದಾಗ ಪೋಷಕರು ಹಾಗೂ ಸಾರ್ವಜನಿಕರು ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದೊಡ್ಡಬಳ್ಳಾಪುರ ಗಾರ್ಮೆಟ್ಸ್ ವೊಂದರಲ್ಲಿ ಕಳೆದ 5 ವರ್ಷಗಳ ಹಿಂದೆ ಪರಿಚಯವಾದ ರಾಮಾಚಾರಿ ಹಾಗೂ ಭವ್ಯ ನಡುವಿನ ಸಂಬಂಧ ಕ್ರಮೇಣ ಪ್ರೀತಿಗೆ ತಿರುಗಿ ಸಲಿಗೆ ಬೆರೆತು ಪ್ರಣಯಕ್ಕೂ ಕಾಲಿಟ್ಟು 5 ವರ್ಷಗಳ ಕಾಲ ಬಹಳ ಅನ್ಯೂನ್ಯವಾಗಿದ್ದ ಈ ಪ್ರೇಮಿಗಳು ಇತ್ತೀಚಿಗೆ ಭವ್ಯ ಪ್ರೀತಿ ಪ್ರೇಮ ಪ್ರಣಯಕ್ಕೆ ಅಂತ್ಯ ಹಾಡಿ ನಮ ಮನೆಯವರಿಗೆ ನಮ ವಿಚಾರ ಗೊತ್ತಾಗಿದೆ.

ಹಾಗಾಗಿ ನಮ ನಿಮ ಸಂಬಂಧ ಬೇಡ ಎಂದು ತಿರಸ್ಕರಿಸಿದಾಗ ಭಗ್ನ ಪ್ರೇಮಿ ರಾಮಾಚಾರಿ ಬೇಸರಗೊಂಡು ಆಕೆಯನ್ನು ಹತ್ಯೆ ಮಾಡಲು ಮನೆಗೆ ನುಗ್ಗಿ ಕೊಲೆ ಮಾಡಲು ಮೂರ್ನಾಲ್ಕು ಕಡೆ ಚಾಕುವಿನಿಂದ ಇರಿದು ತಾನು ವಿಷ ಕುಡಿದು ಕೈ ಕುಯ್ದುಕೊಂಡು ಆತಹತ್ಯೆಗೆ ಯತ್ನಿಸಿದ್ದಾನೆ.

ತೀವ್ರವಾಗಿ ಗಾಯಗೊಂಡ ಭವ್ಯ ಕೋಮಾ ಸ್ಟೇಜ್‌ನಲ್ಲಿದ್ದು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೆಣಗಾಡುತ್ತಿದ್ದಾಳೆ.ಈ ಸಂಬಂಧ ಕೊರಟಗೆರೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಹಿತಿ ತಿಳಿದ ತಕ್ಷಣ ಘಟನಾಸ್ಥಳಕ್ಕೆ ಕೊರಟಗೆರೆ ಪಿಎಸ್‌‍ಐ ಚೇತನ್‌ ಕುಮಾರ್‌ ಧಾವಿಸಿ ಮಹಿಳೆಗೆ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಸಾಗಿಸಿದ್ದಾರೆ.

ಆರೋಪಿ ರಾಮಾಚಾರಿಯನ್ನ ಘಟನೆ ನಡೆದ ಎರಡೇ ಗಂಟೆಯಲ್ಲಿ ಕೊರಟಗೆರೆ ಪಿಎಸ್‌‍ಐ ಚೇತನ್‌ ಗೌಡ ಎಡೆಮುರಿ ಕಟ್ಟಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.

RELATED ARTICLES

Latest News