Friday, September 20, 2024
Homeಜಿಲ್ಲಾ ಸುದ್ದಿಗಳು | District Newsಮಲೈ ಮಹದೇಶ್ವರಸ್ವಾಮಿ ದೇಗುಲದ ಹುಂಡಿ 2.28 ಕೋಟಿ ರೂ. ಕಾಣಿಕೆ ಸಂಗ್ರಹ

ಮಲೈ ಮಹದೇಶ್ವರಸ್ವಾಮಿ ದೇಗುಲದ ಹುಂಡಿ 2.28 ಕೋಟಿ ರೂ. ಕಾಣಿಕೆ ಸಂಗ್ರಹ

ಹನೂರು, ಜು.31- ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸಾಲೂರು ಬೃಹನಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕಾರ್ಯದರ್ಶಿ ರಘು ಎ.ಈ. ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 32 ದಿನದಲ್ಲಿ 2.28, 03,803 ಕೋಟಿ ರೂ. ನಗದು ರೂಪದಲ್ಲಿ ಸಂಗ್ರಹವಾಗಿದೆ. ಮತ್ತು 59 ಗ್ರಾಂ. ಚಿನ್ನ 1500 ಕೆಜಿ ಬೆಳ್ಳಿ ಸಂಗ್ರಹವಾಗಿದೆ.

ಅಲ್ಲದೆ 2000ರೂ. ನೋಟುಗಳು 21 ಹಾಗೂ ಹಿಂದಿನಂತೆ ಈ ಬಾರಿಯೂ ಶ್ರೀಲಂಕಾ. ಥೈಲ್ಯಾಂಡ್‌ ಸೇರಿದಂತೆ 06 ವಿದೇಶಿ ಹಣ ಸಂಗ್ರಹವಾಗಿದೆ.ಭಕ್ತಾದಿಗಳು ಹರಕೆ ರೂಪದಲ್ಲಿ ಸಲ್ಲಿಸಿದ ಕಾಣಿಕೆ 32 ದಿನದಲ್ಲಿ ಸಂಗ್ರಹವಾಗಿರುವ ಮಾದಪ್ಪನ ಹುಂಡಿಯಲ್ಲಿ 2.28,03,803 ಕೋಟಿ ರೂ. ನಗದು, 59 ಗ್ರಾಂ. ಚಿನ್ನ ಮತ್ತು 1500 ಕೆಜಿ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿದೆ.

ಮಹದೇಶ್ವರ ಬೆಟ್ಟದ ಖಾಸಗಿ ಬಸ್‌‍ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮತ್ತು ಮ.ಬೆಟ್ಟ ಪೊಲೀಸರ ಬಂದೋಬ್ತ್‌‍ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿ ಕಾರದ ಕಾರ್ಯದರ್ಶಿ ರಘ ಎ.ಈ., ಉಪ ಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್‌., ಸರಗೂರು ಮಹದೇವಸ್ವಾಮಿ, ಹಣಕಾಸು ಲೆಕ್ಕ ಪತ್ರ ಸಲಹೆಗಾರ ನಾಗೇಶ್‌, ಜಿಲ್ಲಾಡಳಿತ ಕಚೇರಿಯ ಮಧುಶ್ರೀ, ಪ್ರಾಽ ಕಾರದ ಸಿಬ್ಬಂದಿ, ಪೊಲೀಸ್‌‍ ಅಽ ಕಾರಿಗಳು, ಬ್ಯಾಂಕ್‌ ಅಫ್‌ ಬರೋಡಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

RELATED ARTICLES

Latest News