Friday, September 20, 2024
Homeರಾಜ್ಯಕೊಲೆ ಆರೋಪಿ, ಕುಖ್ಯಾತ ರೌಡಿಯ ಕಾಲಿಗೆ ಪೊಲೀಸರ ಗುಂಡೇಟು

ಕೊಲೆ ಆರೋಪಿ, ಕುಖ್ಯಾತ ರೌಡಿಯ ಕಾಲಿಗೆ ಪೊಲೀಸರ ಗುಂಡೇಟು

ಆನೇಕಲ್‌,ಆ.4- ನಟೋರಿಯಸ್‌‍ ಕೊಲೆ ಆರೋಪಿಯ ಮೇಲೆ ಜಿಗಣಿ ಪೊಲೀಸರು ಶೂಟ್‌ ಔಟ್‌ ಮಾಡಿ ಬಂಧಿಸಿರುವ ಘಟನೆ ಜಿಗಣಿ ಪೋಲಿಸ್‌‍ ಠಾಣೆ ವ್ಯಾಪ್ತಿಯ ರಾಗಿಹಳ್ಳಿ ಸಮೀಪ ಕಳೆದ ರಾತ್ರಿಯಲ್ಲಿ ನಡೆದಿದೆ.ಆನೇಕಲ್‌ ಪಟ್ಟಣದ ತುಕುಡಿ ಅಲಿಯಾಸ್‌‍ ವೆಂಕಟರಾಜು ಗುಂಡೇಟು ತಿಂದ ಆರೋಪಿ.

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಹಳ್ಳಿ ಸಮೀಪ ವೆಂಕಟರಾಜು ಎಂಬಾತನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ರಕ್ಷಣೆಗಾಗಿ ಜಿಗಣಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ.

ಅತ್ತಿಬೆಲೆ ಪೊಲೀಸ್‌‍ ಠಾಣೆ ವ್ಯಾಪ್ತಿಯ ಶೆಟ್ಟಹಳ್ಳಿ ಸಮೀಪ ಕೊಲೆ ಯತ್ನ ನಡೆಸಿದ್ದ. ಈ ವಿಚಾರವಾಗಿ ಅತ್ತಿಬೆಲೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈತನ ಮೇಲೆ ಸುಮಾರು 9 ಕೇಸ್‌‍ ಗಳು ದಾಖಲಾಗಿದ್ದವು. ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿ ಸಮೀಪ ತಲೆಮ ರೆಸಿಕೊಂಡಿದ್ದ

ಖಚಿತ ಮಾಹಿತಿ ಮೇರೆಗೆ ಜಿಗಿಣಿ ಪೊಲೀಸರು ಬಂಧಿಸಲು ಹೋಗಿದ್ದಾಗ ಕ್ರೈಂ ಪಿಸಿ ವಿನಯ್‌ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇನ್‌್ಸಪೆಕ್ಟರ್‌ ಮಂಜುನಾಥ್‌ ಆರೋಪಿಗೆ ಶರಣಾಗುವಂತೆ ತಿಳಿಸಿದರು. ಆದರೂ ಕೂಡ ಶರಣಾಗದೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ರಕ್ಷಣೆಗಾಗಿ ಪೊಲೀಸರು ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ.

ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಅಡಿಶಿನಲ್‌ ಎಸ್ಪಿ ನಾಗರಾಜ್‌, ಡಿವೈಎಸ್ಪಿ ಮೋಹನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಾರ್ಯಾಚರಣೆಯಲ್ಲಿ ಸೂರ್ಯ ನಗರ ಇನ್ಸ್ ಪೆಕ್ಟರ್‌ ಮಹಾಜನ್‌, ಜಿಗಿಣಿ ಇನ್ಸ್ ಪೆಕ್ಟರ್‌ ಮಂಜುನಾಥ್‌, ಬನ್ನೇಘಟ್ಟ ಇನ್ಸ್ ಪೆಕ್ಟರ್‌ ಕೃಷ್ಣಕುಮಾರ್‌ ಹಾಗೂ ಕ್ರೈ ಸಿಬ್ಬಂದಿ ಭಾಗಿಯಾಗಿದ್ದರು.
ಈ ಸಂಬಂಧ ಜಿಗಿಣಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News