Friday, September 20, 2024
Homeರಾಷ್ಟ್ರೀಯ | Nationalದೆಹಲಿ ಕಾಂಗ್ರೆಸ್‌‍ಗೆ ಶುಕ್ರದೆಸೆ

ದೆಹಲಿ ಕಾಂಗ್ರೆಸ್‌‍ಗೆ ಶುಕ್ರದೆಸೆ

ನವದೆಹಲಿ,ಆ.30- ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ದೆಹಲಿಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಶುಕ್ರದೆಸೆ ಆರಂಭವಾಗಿದೆ. ಆಡಳಿತಾರೂಢ ಎಎಪಿ ಹಾಗೂ ಬಿಜೆಪಿಯ ಹಲವಾರು ನಾಯಕರುಗಳು ಕಾಂಗ್ರೆಸ್‌‍ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಕಾಂಗ್ರೆಸ್‌‍ನ ದೆಹಲಿ ಘಟಕದ ಪ್ರಧಾನ ಕಛೇರಿ ರಾಜೀವ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ಆಮ್‌ ಆದಿ ಪಕ್ಷ (ಎಎಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕರು ಔಪಚಾರಿಕವಾಗಿ ಕಾಂಗ್ರೆಸ್‌‍ಗೆ ಸೇರ್ಪಡೆಗೊಂಡರು ಮತ್ತು ಅವರನ್ನು ದೆಹಲಿ ಕಾಂಗ್ರೆಸ್‌‍ ಮುಖ್ಯಸ್ಥ ದೇವೇಂದ್ರ ಯಾದವ್‌ ಸ್ವಾಗತಿಸಿದರು.

ಪಕ್ಷದ ಪ್ರಗತಿಪರ ನೀತಿಗಳು ಮತ್ತು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿಯವರ ಪ್ರಬಲ ನಾಯಕತ್ವದಿಂದ ಪ್ರೇರಿತರಾಗಿ ಬಿಜೆಪಿ ಮತ್ತು ಎಎಪಿ ಎರಡೂ ನಾಯಕರು ತಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌‍ಗೆ ಪರಿವರ್ತನೆಯಾಗುತ್ತಿದ್ದಾರೆ ಎಂದು ಯಾದವ್‌ ಹೇಳಿದರು.
ಯಾದವ್‌ ಅವರು ಮಾಜಿ ಕೌನ್ಸಿಲರ್‌ ಮತ್ತು ತಿಮಾರ್‌ಪುರದ ಶಾಸಕ ಅಭ್ಯರ್ಥಿ ಅಮರಲತಾ ಸಾಂಗ್ವಾನ್‌ ಅವರನ್ನು ವಿಶೇಷವಾಗಿ ಕಾಂಗ್ರೆಸ್‌‍ ಪಕ್ಷಕ್ಕೆ ಸ್ವಾಗತಿಸಿದರು.

ಮಾಜಿ ಶಾಸಕ ಅನಿಲ್‌ ಭಾರದ್ವಾಜ್‌‍, ಸಂವಹನ ವಿಭಾಗದ ಅಧ್ಯಕ್ಷ ಕುನ್ವರ್‌ ಕರಣ್‌ ಸಿಂಗ್‌ ಮತ್ತು ಇತರ ಹಿರಿಯ ದೆಹಲಿ ಕಾಂಗ್ರೆಸ್‌‍ ನಾಯಕರು ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್‌‍ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಮುಂ ಬರುವ ವಿಧಾನಸಭಾ ಚುನಾವಣೆಯನ್ನು ದಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌‍ ಎಎಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ತನ್ನ ಮತದಾರರ ನೆಲೆಯನ್ನು ಮರಳಿ ಪಡೆಯಲು ಶ್ರಮಿಸುತ್ತಿದೆ. ದೆಹಲಿಯಲ್ಲಿ ತನ್ನ 15 ವರ್ಷಗಳ ಆಡಳಿತವನ್ನು ಹೈಲೈಟ್‌ ಮಾಡುವ ಪ್ರಚಾರವನ್ನು ಶೀಘ್ರದಲ್ಲೇ ಪ್ರಾರಂಭಿಸಲು ಪಕ್ಷವು ಯೋಜಿಸಿದೆ.

RELATED ARTICLES

Latest News