Saturday, September 21, 2024
Homeಇದೀಗ ಬಂದ ಸುದ್ದಿಗಣೇಶ ಪ್ರತಿಷ್ಠಾಪನೆಗೆ ಬಲವಂತದ ಚಂದಾ ವಸೂಲಿಗೆ ಇಳಿದರೆ ಕಠಿಣ ಕ್ರಮ: ಪೊಲೀಸ್‌‍ ಆಯುಕ್ತರ ಎಚ್ಚರಿಕೆ

ಗಣೇಶ ಪ್ರತಿಷ್ಠಾಪನೆಗೆ ಬಲವಂತದ ಚಂದಾ ವಸೂಲಿಗೆ ಇಳಿದರೆ ಕಠಿಣ ಕ್ರಮ: ಪೊಲೀಸ್‌‍ ಆಯುಕ್ತರ ಎಚ್ಚರಿಕೆ

ಬೆಂಗಳೂರು,ಆ.30- ಗಣೇಶ ಹಬ್ಬಕ್ಕೆ ಬಲವಂತ ವಾಗಿ ಚಂದಾ ವಸೂಲಿ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.7ರಿಂದ ನಗರಾದ್ಯಂತ ಸಾರ್ವಜನಿಕರು ಗೌರಿ-ಗಣೇಶ ಹಬ್ಬವನ್ನು ಆಚರಿಸುವ ಸಮಯದಲ್ಲಿ ಶಾ2ಂತಿ ಮತ್ತು ಸುವ್ಯವಸ್ಧೆ ಕಾಪಾಡಲು ಸೂಚಿಸಿರುವ 30 ಅಂಶಗಳ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಿದ್ದಾರೆ.

ನಗರದ ಎಲ್ಲಾ ಪೊಲೀಸ್‌‍ ಠಾಣೆಗಳ ಠಾಣಾಧಿಕಾರಿಗಳು ತಮ ವ್ಯಾಪ್ತಿಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಅರ್ಜಿಗಳನ್ನು ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ವಿಗ್ರಹಗಳ ಆಧಾರದ ಮೇಲೆ ಯಾವ ಯಾವ ಸ್ಧಳಗಳಲ್ಲಿ ಪ್ರಸ್ತುತ ಸಾಲಿನಲ್ಲಿ ಪ್ರತಿಷ್ಠಾಪಿಸಬಹುದು ಎಂಬುದನ್ನು ಗುರುತಿಸಿಕೊಳ್ಳುವುದು. ಸಂಘ-ಸಂಸ್ಧೆಗಳು ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸುವ ಜಾಗ, ದಿನ, ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಮುಂಚಿತವಾಗಿ ಏಕಗವಾಕ್ಷಿ ಮೂಲಕ ಪರವಾನಗಿ ಪಡೆದುಕೊಳ್ಳುವಂತೆ ಸೂಚಿಸಲು ಕೋರಲಾಗಿದೆ.

ಧ್ವನಿವರ್ಧಕಗಳಿಗೆ ಪರವಾನಗಿ ನೀಡುವಾಗ ಉಚ್ಛ ನ್ಯಾಯಾಲಯವು ನೀಡರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ ಮತ್ತು ಸರ್ಕಾರವು ಕಾಲ-ಕಾಲಕ್ಕೆ ಹೊರಡಿಸಲಾಗಿರುವ ನಿಯಮಗಳು/ಮಾರ್ಗಸೂಚಿಗಳು ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡತಕ್ಕದ್ದು. ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6ರವರೆಗೆ ಯಾವುದೇ ಕಾರಣಕ್ಕೂ ಧ್ವನಿವರ್ಧಕಗಳನ್ನು ಬಳಸಲು ಅವಕಾಶ ನೀಡಬಾರದು.

ಕೆಲವು ವ್ಯಕ್ತಿಗಳು ಸಂಸ್ಧೆಗಳ ಹೆಸರಿನಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಂದ ಉತ್ಸವದ ಆಚರಣೆಗೆ ಬಲವಂತವಾಗಿ ಹಣ, ವಂತಿಕೆಯನ್ನು ವಸೂಲಿ ಮಾಡುವ ವ್ಯಕ್ತಿಗಳ ಮತ್ತು ಸಂಘ ಸಂಸ್ಧೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
ಗಣಪತಿ ಉತ್ಸವಕ್ಕೆಂದು ಹೇಳಿ, ಹಣ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಮನೆಯೊಳಕ್ಕೆ ಪ್ರವೇಶಿಸಿ, ದರೋಡೆ, ಸುಲಿಗೆಯಂತಹ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿರುವುದರಿಂದ, ಠಾಣಾಧಿಕಾರಿಗಳು ಈ ಬಗ್ಗೆ ಸೂಕ್ತ ತಿಳುವಳಿಕೆಯನ್ನು/ಮಾರ್ಗದರ್ಶನಗಳನ್ನು ಸಾರ್ವಜನಿಕರಿಗೆ ನೀಡಲು ಆಯುಕ್ತರು ಸೂಚಿಸಿದ್ದಾರೆ.

ಭದ್ರತೆಗೆ ಕ್ರಮ: ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸುವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಜಾಗಗಳಲ್ಲಿ ವ್ಯವಸ್ಥಾಪಕರಿಂದ ಮುಂಚಿತವಾಗಿ ಕಾರ್ಯಕ್ರಮದ ಬಗ್ಗೆ ಲಿಖಿತ ಕೋರಿಕೆಯನ್ನು ಸ್ವೀಕರಿಸಿ, ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಧೆ ಏರ್ಪಡಿಸುವುದು.
ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಕಿರುವ ಪೆಂಡಾಲ್‌ / ಚಪ್ಪರಗಳಲ್ಲಿ ಕಡ್ಡಾಯವಾಗಿ ಅಗ್ನಿಶಾಮಕ ವಾಹನವನ್ನು ಅಳವಡಿಸಿಕೊಳ್ಳುವಂತೆ ಆಯೋಜಕರಿಗೆ ಸೂಚಿಸಲಾಗಿದೆ.

ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಕನಿಷ್ಠ 5 ಸಿ.ಸಿ. ಟಿ.ವಿಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಆಯೋಜಕರಿಗೆ ಸೂಚಿಸುವಂತೆ ಹಾಗೂ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡುವ ದಿನದಿಂದ ವಿಗ್ರಹಗಳ ವಿಸರ್ಜನೆ ಮುಗಿಯುವವರೆಗೂ ಸ್ಧಳೀಯ ಪೊಲೀಸರನ್ನು ಸಂಬಂಧಪಟ್ಟ ಸ್ಧಳಗಳಲ್ಲಿ ತಪ್ಪದೇ ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ವಿಭಾಗೀಯ ಉಪ ಪೊಲೀಸ್‌‍ ಆಯುಕ್ತರುಗಳಿಗೆ ಸೂಚಿಸಲಾಗಿದೆ.

ಮೆರವಣಿಗೆ, ವಿಸರ್ಜನೆ ಹಾಗೂ ಆನಂತರವೂ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳತಕ್ಕದ್ದು. ಯಾವುದೇ ಕಾರಣಕ್ಕೂ ಇಂತಹ ವಿಸರ್ಜನಾ ಮೆರವಣಿಗೆಗಳು ರಾತ್ರಿ 10 ಗಂಟೆಯ ನಂತರ ನಡೆಯಲು ಅವಕಾಶ ಕೊಡಬಾರದು. ಮುಖ್ಯ ಉತ್ಸವಗಳಲ್ಲಿ ಹಿರಿಯ ಅಧಿಕಾರಿಗಳು ಖುದ್ದಾಗಿ ಹಾಜರಿದ್ದು, ಸೂಕ್ತ ಪೊಲೀಸ್‌‍ ಬಂದೋಬಸ್ತ್‌ ಮತ್ತು ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಿ, ಉತ್ಸವದ ಬಂದೋಬಸ್ತ್‌ ಮೇಲ್ವಿಚಾರಣೆ ನೋಡಿಕೊಳ್ಳಲು ಸೂಚಿಸಲಾಗಿದೆ.

ವಾಕಿಟಾಕಿ: ವಿಸರ್ಜನಾ ಮಾರ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ಕೃ-ಸೆಂಟ್ರಿಗಳನ್ನು ನೇಮಿಸಿ ಅವರುಗಳಿಂದ ಅಕ್ಕಪಕ್ಕದ ರಸ್ತೆಯಲ್ಲಿ ನಡೆಯುವ ವಿಶೇಷಬೆಳವಣಿಗೆಗಳ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಿಸುವುದು ಹಾಗೂ ಸ್ಕೃ-ಸೆಂಟ್ರಿ ರವರಿಗೆ ತಿಳುವಳಿಕೆ ನೀಡುವುದು ಹಾಗೂ ಕಡ್ಡಾಯವಾಗಿ ವಾಕಿಟಾಕಿ ನೀಡುವುದು. ಸಾಕಷ್ಟುಸಂಖ್ಯೆಯಲ್ಲಿ ಟಾಚ್‌ಲೈಟ್‌, ಸರ್ಚ್‌ ಲೈಟ್‌ ಮತ್ತು ಆಸ್ಕಾ ಲೈಟ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು, ಅಗ್ನಿಶಾಮಕ, ಆಂಬುಲೆನ್‌್ಸ ಗಳನ್ನು ಸನ್ನದ್ದ ಸ್ಥಿತಿಯಲ್ಲಿರಿಸಿಕೊಳ್ಳುವುದು, ವಿಸರ್ಜನಾ ಸ್ಥಳದಲ್ಲಿ ಕಡಿತವಿಲ್ಲದೇ ವಿದ್ಯುತ್‌ ಪೂರೈಕೆ ಬಗ್ಗೆ ಬೆಸ್ಕಾಂ ಉಸ್ತುವಾರಿ ಅಧಿಕಾರಿಗಳಿಗೆ ಲಿಖಿತವಾಗಿ ಕೋರಿಕೆ ಸಲ್ಲಿಸುವುದು.

ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಇರುವಂತಹ ಫ್ಲೆಕ್‌್ಸ, ಬ್ಯಾನರ್ಸ್‌ , ಬಂಟಿಂಗ್‌್ಸಗಳನ್ನು ತಪಾಸಣೆ ಮಾಡುವುದರ ಜೊತೆಗೆ, ಕಾನೂನು ಸುವ್ಯವಸ್ಥೆಗೆ ಭಂಗವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವುದು. ನಗರದ ಎಲ್ಲಾ ವಿಭಾಗಗಳ ಉಪ ಪೊಲೀಸ್‌‍ ಕಮೀಷನರ್‌ಎಲ್ಲಾ ಪೊಲೀಸ್‌‍ ಠಾಣೆಗಳಿಂದ ಮಾಹಿತಿಯನ್ನು ಪಡೆದು, ಕ್ರೂಢೀಕೃತ ವರದಿಯೊಂದಿಗೆ ಭದ್ರತಾ ವ್ಯವಸ್ಧೆಯ ಯೋಜನೆಯನ್ನು ನುಡಿ ತಂತ್ರಾಂಶದಲ್ಲಿ ತಯಾರಿಸಿ, ಈ-ಮೇಲ್‌ಗೆ ಹಾಗೂ ಉಪಪೊಲೀಸ್‌‍ ಆಯುಕ್ತರು, ಗುಪ್ತವಾರ್ತೆ, ಬೆಂಗಳೂರು ನಗರ ರವರ ಹೆಸರಿನ ಲಕೋಟೆಯಲ್ಲಿ ಒಂದು ಪ್ರತಿಯನ್ನು ತಲುಪಿಸಲು ಕೋರಲಾಗಿದೆ.

ವಿವಾದದ ಸ್ಥಳ ಗುರುತಿಸಿ: ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಸ್ಧಳದಲ್ಲಿ ಯಾವುದೇ ವಿವಾದಗಳಿದ್ದಲ್ಲಿ ಅಥವಾ ಈ ಹಿಂದೆ ಯಾವುದಾದರೂ ವಿವಾದಕ್ಕೆ ಸಂಬಂಧಪಟ್ಟಂತೆ ಗಲಭೆ, ಅಸಮಾಧಾನ ಉಂಟಾಗಿದ್ದರೆ ಇಂತಹ ಸ್ಥಳಗಳನ್ನು ಗುರುತಿಸಲು ಸೂಚಿಸಲಾಗಿದೆ.
ಮುಖಂಡರ ಸಭೆ ನಡೆಸಿ: ನಗರದ ಎಲ್ಲಾ ವಿಭಾಗಗಳ ಉಪ ಪೊಲೀಸ್‌‍ ಆಯುಕ್ತರು ಈ ಎಲ್ಲಾ ಸೂಚನೆಗಳನ್ನು ಎಲ್ಲಾ ಠಾಣಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು, ನಾಗರೀಕ ಸಮಿತಿ, ಮೊಹಲ್ಲಾ ಸಮಿತಿ, ನೆರೆಹೊರೆ ಕಾವಲು ಸಮಿತಿ ಹಾಗೂ ಇನ್ನಿತರ ಎಲ್ಲಾ ಕೋಮಿನ ಸಂಘ ಸಂಸ್ಧೆಗಳ ಮುಖಂಡರ ಮುಖ್ಯ ಸಭೆ ಏರ್ಪಡಿಸಿ, ಶಾಂತಿ -ಸುವ್ಯವಸ್ಧೆ ಕಾಪಾಡುವ ಸಲುವಾಗಿ ಸಲಹೆ ಸೂಚನೆಗಳನ್ನು ನೀಡತಕ್ಕದ್ದು. ಸಭೆಯನ್ನು ನಡೆಸಿದ ಬಗ್ಗೆ ಪಾಲನಾ ವರದಿಯನ್ನು ಕಛೇರಿಗೆ ಸಲ್ಲಿಸಲು ಕೋರಲಾಗಿದೆ.

RELATED ARTICLES

Latest News