Tuesday, January 13, 2026
Homeರಾಷ್ಟ್ರೀಯಅಣ್ಣಾಮಲೈ ಅವರನ್ನು ರಸ್‌‍ಮಲೈಗೆ ಹೋಲಿಸಿದ ಠಾಕ್ರೆ ಬ್ರದರ್ಸ್

ಅಣ್ಣಾಮಲೈ ಅವರನ್ನು ರಸ್‌‍ಮಲೈಗೆ ಹೋಲಿಸಿದ ಠಾಕ್ರೆ ಬ್ರದರ್ಸ್

Thackeray Brothers Compare Annamalai to Rasmalai

ಮುಂಬೈ, ಜ. 13– ಬಿಜೆಪಿ ನಾಯಕ ಹಾಗೂ ಮಾಜಿ ಐಪಿಎಸ್‌‍ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ಠಾಕ್ರೆ ಸಹೋದರರು ಉರಿದುಬಿದ್ದಿದ್ದು ಅವರನ್ನು ರಸ್‌‍ಮಲೈ ಎಂದು ಟೀಕಿಸಿದ್ದಾರೆ. ವಾಣಿಜ್ಯ ರಾಜಧಾನಿ ಮುಂಬೈ ಮುನ್ಸಿಫಲ್‌ನಲ್ಲಿ ಉತ್ತಮ ಆಡಳಿತ ಬೇಕಾದರೆ ತ್ರಿವಳಿ ಎಂಜಿನ್‌ ಅಗತ್ಯವಿದೆ. ಹೀಗಾಗಿ ಮುಂಬೈಕರ್‌ಗಳು ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಮತ ನೀಡುವಂತೆ ಅಣ್ಣಾಮಲೈ ಕೇಳಿಕೊಂಡಿದ್ದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ದೇವೇಂದ್ರ ಫಡ್ನವೀಸ್‌‍ ಮತ್ತು ಬಿಎಂಸಿಯಲ್ಲಿ ಬಿಜೆಪಿ ಮೇಯರ್‌ ಇದ್ದರೆ ಉತ್ತಮ. ಮುಂಬೈ ಮಹಾರಾಷ್ಟ್ರ ನಗರವಲ್ಲ ಆದು ಅಂತರರಾಷ್ಟ್ರೀಯ ನಗರ. ಈ ನಗರದ ಬಜೆಟ್‌ 75,000 ಕೋಟಿ ರೂ. ಚೆನ್ನೈನ ಬಜೆಟ್‌ 8,000 ಕೋಟಿ ರೂ., ಆದರೆ ಬೆಂಗಳೂರಿನ ಬಜೆಟ್‌ 19,000 ಕೋಟಿ ರೂ. ಆದ್ದರಿಂದ ಹಣಕಾಸು ನಿರ್ವಹಿಸಲು ಮತ್ತು ಅಭಿವೃದ್ಧಿಯನ್ನು ನಿರ್ವಹಿಸಲು ಆಡಳಿತದಲ್ಲಿ ಉತ್ತಮ ಜನರು ಬೇಕು ಎಂದು ಅವರು ಹೇಳಿದ್ದರು.

ಬಿಎಂಸಿ ಚುನಾವಣೆಗೆ ಮತ್ತೆ ಒಂದಾಗಿರುವ ಠಾಕ್ರೆ ಸಹೋದರರಾದ ಉದ್ಧವ್‌ ಮತ್ತು ರಾಜ್‌‍ ಅವರುಗಳು ಅಣ್ಣಾಮಲೈ ಅವರ ಹೇಳಿಕೆಗಳನ್ನು ಟೀಕಿಸಿದರು. ಉದ್ಧವ್‌ ಅವರು ಬಿಜೆಪಿಯ ಗುಪ್ತ ಕಾರ್ಯಸೂಚಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದರೆ, ರಾಜ್‌ ಅಣ್ಣಾಮಲೈ ಅವರನ್ನು ರಸ್‌‍ಮಲೈ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಚೆನ್ನೈನಲ್ಲಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ ನನ್ನನ್ನು ಬೆದರಿಸಲು ರಾಜ್‌ ಠಾಕ್ರೆ ಯಾರು ಎಂದು ಕೇಳಿದರು. ನಾನು ರೈತನ ಮಗನಾಗಲು ಹೆಮ್ಮೆಪಡುತ್ತೇನೆ. ಅವರು ನನ್ನನ್ನು ನಿಂದಿಸಲು ಸಭೆಗಳನ್ನು ಆಯೋಜಿಸಿದ್ದಾರೆ. ನಾನು ಅಷ್ಟು ಮುಖ್ಯನಾಗಿದ್ದೇನೆಯೇ ಎಂದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ.

ನಾನು ಮುಂಬೈಗೆ ಬಂದರೆ ನನ್ನ ಕಾಲುಗಳನ್ನು ಕತ್ತರಿಸುತ್ತೇನೆ ಎಂದು ಕೆಲವರು ಬರೆದಿದ್ದಾರೆ. ನಾನು ಮುಂಬೈಗೆ ಬರುತ್ತೇನೆ – ನನ್ನ ಕಾಲುಗಳನ್ನು ಕತ್ತರಿಸಲು ಪ್ರಯತ್ನಿಸಿ. ಅಂತಹ ಬೆದರಿಕೆಗಳಿಗೆ ನಾನು ಹೆದರಿದ್ದರೆ, ನಾನು ನನ್ನ ಹಳ್ಳಿಯಲ್ಲಿಯೇ ಇರುತ್ತಿದ್ದೆ ಎಂದು ಅವರು ಹೇಳಿದರು.

ಕಾಮರಾಜ್‌ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ನಾನು ಹೇಳಿದರೆ, ಅವರು ಇನ್ನು ಮುಂದೆ ತಮಿಳರಲ್ಲವೇ? ಮುಂಬೈ ವಿಶ್ವ ದರ್ಜೆಯ ನಗರ ಎಂದು ನಾನು ಹೇಳಿದರೆ, ಮಹಾರಾಷ್ಟ್ರೀಯರು ಅದನ್ನು ನಿರ್ಮಿಸಲಿಲ್ಲವೇ? ಈ ಜನರು ಕೇವಲ ಅಜ್ಞಾನಿಗಳು ಎಂದು ಅಣ್ಣಾಮಲೈ ಹೇಳಿದ್ದಾರೆ.

ಶಿವಸೇನೆ (ಯುಬಿಟಿ)ಯ ಮುಖವಾಣಿ ಸಾಮ್ನಾ ಈಗ ಅಣ್ಣಾಮಲೈ ತಮಿಳರಿಗೂ ದೇಶದ್ರೋಹಿ ಎಂದು ಸಂಪಾದಕೀಯ ಬರೆದಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಹಿಂದಿ ಹೇರಿಕೆಯ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿವೆ ಎಂದು ಸಂಪಾದಕೀಯವೊಂದು ಹೇಳಿದೆ.ಮಹಾರಾಷ್ಟ್ರದ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು, ಬಿಜೆಪಿ ಅಣ್ಣಾಮಲೈ ಮತ್ತು ಕೃಪಾಶಂಕರ್‌ ಸಿಂಗ್‌ ಅವರ ಹೇಳಿಕೆಗಳನ್ನು ಖಂಡಿಸಲು ಸಾಧ್ಯವಾಗದಿದ್ದರೆ, ಅವರನ್ನು ಏಕೆ ದುರ್ಬಲರೆಂದು ಕರೆಯಬಾರದು? ಎಂದು ಕೇಳಿದೆ. ಮುಂಬೈನ ಮುಂದಿನ ಮೇಯರ್‌ ಹಿಂದಿ ಭಾಷಿಕರಾಗಿರುತ್ತಾರೆ ಎಂದು ಬಿಜೆಪಿ ನಾಯಕ ಕೃಪಾಶಂಕರ್‌ ಸಿಂಗ್‌ ಈ ಹಿಂದೆ ಹೇಳಿದ್ದರು, ಇದು ವಿವಾದಕ್ಕೆ ಕಾರಣವಾಗಿತ್ತು.

RELATED ARTICLES

Latest News