Saturday, October 5, 2024
Homeಬೆಂಗಳೂರುವಿಡಿಯೋ ನೋಡಿ ಮಹಾಲಕ್ಷ್ಮಿಯ ದೇಹ ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ ಮುಕ್ತಿರಂಜನ್

ವಿಡಿಯೋ ನೋಡಿ ಮಹಾಲಕ್ಷ್ಮಿಯ ದೇಹ ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ ಮುಕ್ತಿರಂಜನ್

Prime Accused of the Bengaluru Mahalaxmi case

ಬೆಂಗಳೂರು, ಅ.5- ವೈಯಾಲಿಕಾವಲ್ನಲ್ಲಿ ನಡೆದಿದ್ದ ಮಹಾಲಕ್ಷ್ಮಿ ಕೊಲೆಯ ರಹಸ್ಯ ಒಂದೊಂದಾಗೇ ಹೊರಬರುತ್ತಿದ್ದು, ಆಕೆಯ ಮೃತದೇಹವನ್ನು ಹೊರಗೆ ಸಾಗಿಸುವುದು ಕಷ್ಟವೆಂದು ಅರಿತು, ಹೇಗೆ ವಿಲೇವಾರಿ ಮಾಡಬೇಕೆಂಬುದನ್ನು ಆರೋಪಿ ಇಂಟರ್ನೆಟ್ನಲ್ಲಿ ವಿಡಿಯೋ ನೋಡಿ ದೇಹವನ್ನು ತುಂಡರಿಸಿ ಫ್ರಿಜ್ನಲ್ಲಿಟ್ಟಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಆರೋಪಿ ಮುಕ್ತಿ ರಂಜನ್ರಾಯ್ ಹಲವು ವಿಡಿಯೋಗಳನ್ನು ನೋಡಿ ಕೊನೆಗೆ ಫ್ರಿಡ್್ಜನಲ್ಲಿ ಇಟ್ಟರೆ ವಾಸನೆ ಬರಲ್ಲವೆಂದು ಗೊತ್ತಾದ ತಕ್ಷಣ ಆಕೆಯ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ ಮಚ್ಚು ಖರೀದಿಸಿಕೊಂಡು ವಾಪಾಸ್ ಬಂದಿದ್ದಾನೆ.

ಮಹಾಲಕ್ಷ್ಮಿ ಮೃತದೇಹವನ್ನು ವಾಶ್ರೋಂಗೆ ಎಳೆದೊಯ್ದು ತುಂಡು-ತುಂಡಾಗಿ ಕತ್ತರಿಸಿ ಬರೋಬ್ಬರಿ 57 ತುಂಡುಗಳನ್ನಾಗಿ ಸೌದೆ ಕತ್ತರಿಸಿದಂತೆ ಕತ್ತರಿಸಿ ನಂತರ ಫ್ರಿಡ್್ಜನಲ್ಲಿ ತರಕಾರಿ ಜೋಡಿಸುವಂತೆ ಜೋಡಿಸಿದ್ದಾನೆ.ಬಳಿಕ ವಾಶ್ರೂಂನಲ್ಲಿದ್ದ ರಕ್ತದ ಕಲೆಗಳನ್ನು ಆಸಿಡ್ ಹಾಕಿ ಸ್ವಚ್ಛಮಾಡುವಷ್ಟರಲ್ಲಿ ಮಧ್ಯರಾತ್ರಿಯಾಗಿದೆ.

ಬೆಳಗಾಗುತ್ತಿದ್ದಂತೆ ಆಕೆಯ ಮನೆಗೆ ಬೀಗ ಹಾಕಿ ಹೆಬ್ಬಗೋಡಿಯಲ್ಲಿದ್ದ ತನ್ನ ರೂಮ್ಗೆ ಹೋಗಿ, ಜೊತೆಯಲ್ಲಿದ್ದ ತಮ್ಮನಿಗೆ ಮಹಾಲಕ್ಷ್ಮಿಯನ್ನು ಕೊಲೆಮಾಡಿರುವ ವಿಷಯ ತಿಳಿಸಿ, ನೀನು ರೂಮ್ ಖಾಲಿಮಾಡಿಕೊಂಡು ಬೇರೆಕಡೆ ಹೋಗು ಎಂದು ಹೇಳಿ ಆತನಿಂದಲೇ ಹಣ ಪಡೆದು ಬೈಕ್ನಲ್ಲಿ 1660 ಕಿ.ಮೀ ಊರಿಗೆ (ಒರಿಸ್ಸಾದ ಭದ್ರಕ್) ಪ್ರಯಾಣಿಸಿದ್ದನು. ಊರು ತಲುಪಿದ ಬಳಿಕ ನಡೆದ ವಿಷಯವನ್ನು ತನ್ನ ತಾಯಿಗೆ ಹೇಳಿದ್ದಾನೆ. ಆಗ ಗಂಜಂನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಹೋದರನ ಜೊತೆ ಹೋಗಿ ಇರುವಂತೆ ತಾಯಿ ಸಲಹೆ ನೀಡಿದ್ದಾರೆ.ತಾಯಿಯ ಸಲಹೆಯಂತೆ ಸಹೋದರನ ರೂಮ್ಗೆ ಹೋಗಿ ಸೇರಿಕೊಂಡಿದ್ದಾನೆ.

ಪ್ರತಿದಿನ ನ್ಯೂಸ್ ವೀಕ್ಷಿಸುತ್ತಿದ್ದ:
ಸಹೋದರನ ಮೊಬೈಲ್ನಲ್ಲಿ ಆರೋಪಿ ಮುಕ್ತಿ ರಂಜನ್ರಾಯ್ ಪ್ರತಿದಿನ ಕನ್ನಡ ನ್ಯೂಸ್ ಚಾನಲ್ ವೀಕ್ಷಿಸುತ್ತಿದ್ದಾಗ ಮಹಾಲಕ್ಷ್ಮಿ ಕೊಲೆ ವಿಚಾರ ಚಾನಲ್ಗಳಲ್ಲಿ ಭಿತ್ತರವಾಗುತ್ತಿದ್ದಂತೆ, ನನ್ನನ್ನು ಬೆಂಗಳೂರು ಪೊಲೀಸರು ಆಂಧ್ರ, ಪಶ್ಚಿಮ ಬಂಗಾಳ ಮೊದಲಾದ ಕಡೆ ಹುಡುಕಾಟ ನಡೆಸುತ್ತಿರುವ ವಿಚಾರ ಗೊತ್ತಾಗಿ, ತಾನು ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುತ್ತೇನೆಂದು ಹೆದರಿದ್ದಾನೆ.

ಮುಂದೇನು ಮಾಡುವುದೆಂದು ತೋಚದೆ ಗಂಜಂನಿಂದ ದ್ವಿಚಕ್ರವಾಹನವದಲ್ಲಿ ವಾಪಾಸ್ (ಭದ್ರಕ್) ಬಂದು, ಊರಿನ ಹೊರವಲಯದಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಅಂತರ ಕಾಯ್ದುಕೊಂಡಿದ್ದ:
ಮಹಾಲಕ್ಷ್ಮಿಯನ್ನು ಪ್ರೀತಿಸುತ್ತಿದ್ದ ಮುಕ್ತಿರಂಜನ್ಗೆ ಆಕೆಯ ವರ್ತನೆಯಿಂದ ಅನುಮಾನ ಮೂಡಿತ್ತು. ಹಾಗಾಗಿ ಒಂದು ದಿನ ಆಕೆಯ ಮೊಬೈಲ್ನ್ನು ಪರಿಶೀಲಿಸಿದಾಗ ಆಕೆಗೆ ಮದುವೆಯಾಗಿ ಮಗು ಇರುವ ವಿಚಾರ ಗೊತ್ತಾಗಿ ಆಂತರ ಕಾಯ್ದುಕೊಂಡಿದ್ದ.ಕೆಲಸದ ಜಾಗದಲ್ಲಿ ಮುಕ್ತಿರಂಜನ್ ಬೇರೆ ಯುವತಿ ಜೊತೆ ಸ್ನೇಹ ಬೆಳೆಸಿದ್ದನ್ನು ಗಮನಿಸಿದ ಮಹಾಲಕ್ಷ್ಮಿ ಆಕೆಯೊಂದಿಗೆ ಜಗಳವಾಡಿದ್ದಳು.

ಬೆದರಿಕೆ ಹಾಕಿದ್ದಳು:

ನಿನಗೆ ಮದುವೆಯಾಗಿ ಮಗು ಇದ್ದರೂ ಆ ವಿಷಯ ನನ್ನಿಂದ ಮುಚ್ಚಿಟ್ಟಿದ್ದೀಯ ನಿನ್ನನ್ನು ನಾನು ಮದುವೆ ಆಗಲ್ಲ ಎಂದು ಮುಕ್ತಿರಂಜನ್ ಹೇಳಿದಾಗ ನಾನು ಪತಿಗೆ ವಿಚ್ಚೇದನ ನೀಡುತ್ತೇನೆ, ನೀನು ನನ್ನನ್ನು ಮದುವೆಯಾಗದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಳು. ನಂತರ ಇವರಿಬ್ಬರೂ ಕಾಂಪ್ರಮೈಸ್ ಆಗಿ ಮತ್ತೆ ಒಂದಾಗಿದ್ದರು. ಈ ನಡುವೆ ವೈಯಾಲಿಕಾವಲ್ನ ಮಹಾಲಕ್ಷ್ಮಿ ಮನೆಗೆ ಮುಕ್ತಿರಂಜನ್ರಾಯ್ ವಾರದ ರಜೆ ದಿನ ಹೋಗಿದ್ದಾಗ ಅಂದು ರಾತ್ರಿ ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಕೋಪದಲ್ಲಿ ಮಹಾಲಕ್ಷ್ಮಿ ಆತನಿಗೆ ಹೊಡೆದಿದ್ದಾಳೆ.

ಇದರಿಂದ ಸಿಟ್ಟಾದ ಆತನೂ ಸಹ ಆಕೆಯ ಕಪಾಳಕ್ಕೆ ಹೊಡೆದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೆ, ದಿಂಬಿನಿಂದ ಉಸಿರು ಗಟ್ಟಿಸಿ ಕೊಲೆ ಮಾಡಿ ಬಳಿಕ ಅದರಿಂದ ಪಾರಾಗುವುದು ಹೇಗೆ ಎಂಬುದನ್ನು ಯೋಚಿಸಿ ವಿಡಿಯೋ ನೋಡಿ ಅದರಲ್ಲಿದ್ದಂತೆ ಭೀಭತ್ಸ ಕೃತ್ಯವೆಸಗಿ ಕೊನೆಗೆ ತನ್ನ ಜೀವನವನ್ನೇ ಮುಕ್ತಿಗೊಳಿಸಿಕೊಂಡಿದ್ದಾನೆ.

RELATED ARTICLES

Latest News