Monday, October 7, 2024
Homeರಾಷ್ಟ್ರೀಯ | Nationalರೈಲು ಹಳಿ ಮೇಲೆ ಮಣ್ಣು ರಾಶಿ, ತಪ್ಪಿದ ರೈಲು ಅನಾಹುತ

ರೈಲು ಹಳಿ ಮೇಲೆ ಮಣ್ಣು ರಾಶಿ, ತಪ್ಪಿದ ರೈಲು ಅನಾಹುತ

ಲಕ್ನೋ,ಅ.7- ರೈಲು ಹಳಿ ತಪ್ಪಿಸುವ ಯತ್ನಗಳು ದೇಶಾದ್ಯಂತ ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣಿನ ರಾಶಿ ಕಂಡುಬಂದಿದ್ದು, ಲೋಕೊಪೈಲಟ್‌ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಚಾಲಕ ಮತ್ತು ಸ್ಥಳೀಯ ನಿವಾಸಿಗಳ ಜಾಗರೂಕತೆಯಿಂದ ದೊಡ್ಡ ಅಪಘಾತವನ್ನು ತಪ್ಪಿಸಲಾಗಿದೆ. ಆದಾಗ್ಯೂ, ಘಟನೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆಯನ್ನು ಆರಂಭಿಸಲಾಗಿದೆ.

ನಿನ್ನೆ ಸಂಜೆ ಸುಮಾರು 7.55 ಗಂಟೆಗೆ ರಘುರಾಜ್‌ ಸಿಂಗ್‌ ಶಟಲ್‌ ರೈಲು ಹೋಗುತ್ತಿತ್ತು, ಲೋಕೊಪೈಲಟ್‌ ಕಣ್ಣಿಗೆ ಮಣ್ಣಿನ ರಾಶಿ ಕಾಣಿಸಿಕೊಂಡ ಕೂಡಲೇ ಬ್ರೇಕ್‌ ಹಾಕಿದ್ದಾರೆ. ಹಳಿಯಿಂದ ಮಣ್ಣು ತೆಗೆಯಲಾಗಿದ್ದು, ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿದೆ.
ನಿನ್ನೆ ಸಂಜೆ ಮಣ್ಣನ್ನು ಸಾಗಿಸುತ್ತಿದ್ದ ಡಂಪರ್‌ ಚಾಲಕನೊಬ್ಬ ಲೋಡ್‌ ಅನ್ನು ರೈಲ್ವೆ ಹಳಿ ಮೇಲೆ ಎಸೆದು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಹಿಂದೆ ಕಾನ್ಪುರದ ಎರಡು ಕಡೆ ರೈಲ್ವೇ ಹಳಿಗಳ ಮೇಲೆ ಗ್ಯಾಸ್‌‍ ಸಿಲಿಂಡರ್‌ ಹಾಗೂ ಪೆಟ್ರೋಲ್‌ ಬಾಟಲಿಗಳನ್ನು ಇಟ್ಟು ರೈಲು ಹಳಿ ತಪ್ಪಿಸುವ ಯತ್ನ ನಡೆದಿದ್ದವು.

RELATED ARTICLES

Latest News