Monday, October 7, 2024
Homeರಾಜ್ಯಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರನ ಆತಹತ್ಯೆ ಹಿಂದೆ ಹನಿಟ್ರ್ಯಾಪ್‌..!

ಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರನ ಆತಹತ್ಯೆ ಹಿಂದೆ ಹನಿಟ್ರ್ಯಾಪ್‌..!

ಬೆಂಗಳೂರು,ಅ.7- ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್‌ ಬಾವ ಅವರ ಸಹೋದರ ಮುಮ್ತಾಜ್‌ ಆಲಿ (52)ಆತಹತ್ಯೆ ಪ್ರಕರಣಕ್ಕೆ ರೋಚಕ ತಿರುವು ದೊರೆತಿದ್ದು, ಮಹಿಳೆಯೊಬ್ಬರನ್ನು ಬಳಸಿಕೊಂಡು ಗುಂಪೊಂದು ಹಣ ಸುಲಿಗೆ ಮಾಡಿದ್ದಲ್ಲದೆ, ಬ್ಲಾಕ್‌ಮೇಲ್‌ ಮಾಡಿದ ಕಾರಣಕ್ಕಾಗಿ ಹತಾಶಗೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ.

ಮಂಗಳೂರು ನಗರದ ಕಾವೂರು ಪೊಲೀಸ್‌‍ ಠಾಣೆಯಲ್ಲಿ ನಿನ್ನೆ ಹೆಚ್ಚುವರಿಯಾಗಿ ನೀಡಲಾದ ದೂರನ್ನು ದಾಖಲಿಸಲಾಗಿದ್ದು, ಅದರ ಪ್ರಕಾರ ರಹಮತ್‌, ಅಬ್ದುಲ್‌ ಸತ್ತಾರ್‌, ಶಫಿ, ಮುಸ್ತಫ, ಶೋಯೆಬ್‌, ಸಿರಾಜ್‌ ಅವರುಗಳು ಬ್ಲಾಕ್‌ಮೇಲ್‌ ಮಾಡಿದ್ದರಿಂದಾಗಿ ಮರ್ಯಾದೆಗೆ ಅಂಜಿ ಮುಮ್ತಾಜ್‌ ಆಲಿ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಮ್ತಾಜ್‌ ಆಲಿ ಅವರನ್ನು ಆರೋಪಿಗಳು ಬ್ಲಾಕ್‌ಮೇಲ್‌ ಮಾಡುತ್ತಿದ್ದು, ಕಳೆದ ಜುಲೈನಿಂದೀಚೆಗೆ 50 ಲಕ್ಷ ರೂ.ಗಳಿಗೂ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾರೆ. ಹೆಚ್ಚುವರಿಯಾಗಿ ಮತ್ತಷ್ಟು ಹಣ ನೀಡುವಂತೆ ಒತ್ತಡ ಹೇರಿದ್ದರು. ಇದರಿಂದ ಗಾಬರಿಯಾದ ಮುಮ್ತಾಜ್‌ ಆಲಿ ಆತಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ವಾಯ್‌್ಸ ರೆಕಾರ್ಡ್‌ ಸಂದೇಶವನ್ನು ತಮ ಸ್ನೇಹಿತರಿಗೆ ಹಾಗೂ ಕುಟುಂಬ ಸದಸ್ಯರಿಗೆ ಕಳುಹಿಸಿದ್ದು, ತಮ ಆತಹತ್ಯೆಗೆ ಯಾರು ಕಾರಣ ಎಂಬ ವಿವರಣೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಆರೋಪಿಗಳು ಈ ಮೊದಲು ಇದೇ ರೀತಿಯ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮುಮ್ತಾಜ್‌ ಆಲಿ ಅವರ ಶವ ಪತ್ತೆಯಾದ ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

RELATED ARTICLES

Latest News