Monday, October 7, 2024
Homeಬೆಂಗಳೂರುಮನೆಗಳ ಬೀಗ ಮುರಿದು ದೋಚುತ್ತಿದ್ದವನ ಬಂಧನ : 30 ಲಕ್ಷ ಮೌಲ್ಯ ಚಿನ್ನಾಭರಣ ವಶ

ಮನೆಗಳ ಬೀಗ ಮುರಿದು ದೋಚುತ್ತಿದ್ದವನ ಬಂಧನ : 30 ಲಕ್ಷ ಮೌಲ್ಯ ಚಿನ್ನಾಭರಣ ವಶ

ಬೆಂಗಳೂರು, ಅ.7- ಮನೆಗಳ ಬೀಗ ಮುರಿದು ಹಣ- ಆಭರಣ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ರೂ. ಬೆಲೆಬಾಳುವ 475 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮಂಜುನಾಥ ಅಲಿಯಾಸ್‌‍ ಪಾರಿವಾಳ ಮಂಜ(38) ಬಂಧಿತ ಆರೋಪಿ. ಈತ ಈ ಹಿಂದೆ ನಗರದ ನಗರ್ತಪೇಟೆಯ, ತಿಗಳರಪೇಟೆಯಲ್ಲಿ ವಾಸವಾಗಿದ್ದನು. ಈಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಕುಂಡಪಲ್ಲಿ ಗ್ರಾಮದಲ್ಲಿ ನೆಲೆಸಿದ್ದಾನೆ. ಚಿಕ್ಕಪೇಟೆಯ ಆರ್‌ಟಿ ಸ್ಟ್ರೀಟ್‌್ಸ, ಮಾಣಿಕ್‌ ಮೇವಾ ಅಂಗಡಿ ಸಮೀಪದ ನಿವಾಸಿ ಉಪೇಶ್‌ ಭಂಡಾರಿ ಅವರ ಮನೆಯ ಬೀಗ ಮುರಿದು ಒಳನುಗ್ಗಿ 105 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದ ಬಗ್ಗೆ ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ಬಂಧನದಿಂದ ಸಿಟಿ ಮಾರ್ಕೆಟ್‌ ಪೊಲೀಸ್‌‍ ಠಾಣೆಯ ಮೂರು ಪ್ರಕರಣ, ಹಲಸೂರುಗೇಟ್‌ ಠಾಣೆಯ ಒಂದು ಪ್ರಕರಣ ಪತ್ತೆಯಾಗಿವೆ. ಇನ್‌ಸ್ಪೆಕ್ಟರ್‌ ಸಂದೀಪ್‌ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

RELATED ARTICLES

Latest News