Friday, October 18, 2024
Homeಬೆಂಗಳೂರುಕೌಟುಂಬಿಕ ಕಲಹ : ಮಗನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ

ಕೌಟುಂಬಿಕ ಕಲಹ : ಮಗನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ

wife killed husband in Bengaluru

ಬೆಂಗಳೂರು,ಅ.9– ಕೌಟುಂಬಿಕ ಕಲಹದಿಂದ ನೊಂದ ಪತ್ನಿ ತನ್ನ ಮಗ ನೊಂದಿಗೆ ಸೇರಿಕೊಂಡು ಪತಿ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ.

ತೋಟದಗುಡ್ಡದಹಳ್ಳಿಯ ಪ್ರಕೃತಿ ಬಡಾವಣೆ ನಿವಾಸಿ ಮುನಿರಾಜು (45) ಮೃತಪಟ್ಟವರು.ಮುನಿರಾಜು ಅವರು ಕುಡಿತದ ಚಟ ಹೊಂದಿದ್ದರು. ಹಾಗಾಗಿ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮೊನ್ನೆ ರಾತ್ರಿ ಸಹ ಜಗಳ ವಿಕೋಪಕ್ಕೆ ಹೋದಾಗ ಮಗನೊಂದಿಗೆ ಸೇರಿಕೊಂಡು ಮುನಿರಾಜು ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ಮನನೊಂದು ಮನೆಯಿಂದ ಹೊರಬಂದು ಊರಿನ ದೇವಸ್ಥಾನದ ಬಳಿ ಮುನಿರಾಜು ಮಲಗಿದ್ದಾರೆ. ಮುಂಜಾನೆ ಸಾರ್ವಜನಿಕರು ಹಾಗೂ ಪೇಪರ್ ಹಾಕುವವರು ಗಮನಿಸಿ ಅಸ್ವಸ್ಥಗೊಂಡಿದ್ದ ಮುನಿರಾಜು ಅವರನ್ನು ಬಗಲಗುಂಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ – ಫಲಿಸದೆ ರಾತ್ರಿ ಮೃತಪಟ್ಟಿದ್ದಾರೆ.ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News