Sunday, November 2, 2025
Homeರಾಜ್ಯಕೃಷಿ ಹೊಂಡದಲ್ಲಿ ಕೆಮಿಕಲ್‌ ಸ್ಫೋಟ : ಡೋಣ್‌ ಪ್ರತಾಪ್‌ ಪೊಲೀಸ್‌‍ ಕಸ್ಟಡಿಗೆ

ಕೃಷಿ ಹೊಂಡದಲ್ಲಿ ಕೆಮಿಕಲ್‌ ಸ್ಫೋಟ : ಡೋಣ್‌ ಪ್ರತಾಪ್‌ ಪೊಲೀಸ್‌‍ ಕಸ್ಟಡಿಗೆ

Drone Prathap arrested for illegal use of explosives

ತುಮಕೂರು, ಡಿ.14- ಕೃಷಿ ಹೊಂಡದಲ್ಲಿ ಸೋಡಿಯಂ ಕೆಮಿಕಲ್‌ ಎಸೆದು ಸ್ಫೋಟಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್‌‍ ಖ್ಯಾತಿಯ ಡೋಣ್‌ ಪ್ರತಾಪ್‌ನನ್ನು ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯ ಈತನನ್ನು ಮೂರು ದಿನಗಳ ಕಾಲ ಪೊಲೀಸ್‌‍ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣ ಸಂಬಂಧ ಡ್ರೋಣ್‌ ಪ್ರತಾಪ್‌, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಮಿಡಿಗೇಶಿ ಠಾಣೆ ಪೊಲೀಸರು ಸುಮೋಟೊ ಕೇಸ್‌‍ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಪ್ರತಾಪ್‌ನನ್ನು ಪೊಲೀಸರು ಕೃಷಿ ಹೊಂಡದ ಸ್ಥಳಕ್ಕೆ ಕರೆತಂದು ಸ್ಫೋಟಿಸಿದ ಸ್ಥಳ ಮಹಜರು ನಡೆಸಿ ಮಾಹಿತಿಗಳನ್ನು ಪಡೆದಿದ್ದಾರೆ.

- Advertisement -

ತಾಲೂಕಿನ ಹೋಬಳಿಯ ಐಡಿ ಹಳ್ಳಿ ಜನಕಲೋಟಿ ಗ್ರಾಮದ ರೈತರ ಕೃಷಿ ಹೊಂಡದಲ್ಲಿ ಇತ್ತೀಚೆಗೆ ಸೋಡಿಯಂ ಎಸೆದು ಸ್ಫೋಟಿಸಿ ಅದನ್ನು ಯು ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ.
ಈ ವಿಡಿಯೋ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ಡೋಣ್‌ ಪ್ರತಾಪ್‌ನನ್ನು ಬೆಂಗಳೂರಿನಲ್ಲಿ ಬಿಎನ್‌ಎಸ್‌‍ ಕಾಯ್ದೆ ಸೆಕ್ಷನ್‌ 288 ಮತ್ತು ಸ್ಫೋಟಕ ವಸ್ತುಗಳ ನಿಷೇಧ ಕಾಯ್ದೆಯಡಿ ಸುಮೊಟೋ ಕೇಸು ದಾಖಲಿಸಿಕೊಂಡು ಬಂಧಿಸಿದ್ದು, ಮೂರು ದಿನ ಪೊಲೀಸ್‌‍ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಈ ರೀತಿಯ ವಿಡಿಯೋ ಮಾಡುವುದು ಕಾನೂನು ಬಾಹಿರ. ಯಾವ ಕೆಮಿಕಲ್‌ಗಳನ್ನು ಬಳಸಿದರೆ ಅದು ನೀರಿನಲ್ಲಿ ಸ್ಫೋಟವಾಗುತ್ತದೆ ಎಂಬುದನ್ನು ಪ್ರತಾಪ್‌ ವಿಡಿಯೋ ಮಾಡಿ ಹೇಳಿರುವುದು ಕಿಡಿಗೇಡಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಈ ರೀತಿಯ ಪ್ರಯೋಗ ಮಾಡುವುದು ಅಪಾಯಕಾರಿ ಹಾಗೂ ಕಾನೂನು ಬಾಹಿರ. ಈ ಪ್ರಯೋಗ ಮಾಡುವ ಮುನ್ನ ಪ್ರತಾಪ್‌ ಯೋಚನೆ ಮಾಡಬೇಕಿತ್ತು. ಇದೀಗ ತಾನು ಮಾಡಿದ ತಪ್ಪಿನಿಂದಾಗಿ ಜೈಲು ಸೇರುವಂತಾಗಿದೆ.

- Advertisement -
RELATED ARTICLES

Latest News