Thursday, February 6, 2025
Homeಅಂತಾರಾಷ್ಟ್ರೀಯ | Internationalಭಾರತದೊಂದಿಗಿನ ಸಮಸ್ಯೆಗೆಳನ್ನು ಮಾತುಕತೆ ಮೂಲಕ ಬಗೆಹರಿಸಲು ಪಾಕ್ ಬಯಸುತ್ತದೆ : ಶೆಹಬಾಜ್‌ ಷರೀಫ್‌

ಭಾರತದೊಂದಿಗಿನ ಸಮಸ್ಯೆಗೆಳನ್ನು ಮಾತುಕತೆ ಮೂಲಕ ಬಗೆಹರಿಸಲು ಪಾಕ್ ಬಯಸುತ್ತದೆ : ಶೆಹಬಾಜ್‌ ಷರೀಫ್‌

Pakistan PM's fresh peace overture to India: Want to resolve Kashmir Issue

ಇಸ್ಲಮಾಬಾದ್‌, ಫೆ.6– ಕಾಶ್ಮೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಭಾರತದೊಂದಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಬಯಸಿದೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಕಾಶೀರಿಗಳಿಗೆ ಬೆಂಬಲವನ್ನು ತೋರಿಸಲು ಪಾಕಿಸ್ತಾನದ ವಾರ್ಷಿಕ ಕಾರ್ಯಕ್ರಮವಾದ ಕಾಶೀರ ಒಗ್ಗಟ್ಟಿನ ದಿನ ದಂದು ಮುಜಫರಾಬಾದ್‌ನಲ್ಲಿ ಪಾಕ್‌ ಆಕ್ರಮಿತ ಕಾಶೀರ (ಪಿಒಕೆ) ಅಸೆಂಬ್ಲಿಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಷರೀಫ್‌ ಅವರು ಈ ಹೇಳಿಕೆ ನೀಡಿದ್ದಾರೆ.

ಕಾಶೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.ಭಾರತವು ಆಗಸ್ಟ್‌ 5, 2019 ರ ಚಿಂತನೆಯಿಂದ ಹೊರಬರಬೇಕು ಮತ್ತು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಮತ್ತು ಸಂವಾದವನ್ನು ಪ್ರಾರಂಭಿಸಬೇಕು ಎಂದು ಷರೀಫ್‌ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಜಮು ಮತ್ತು ಕಾಶೀರ ಮತ್ತು ಲಡಾಖ್‌ ದೇಶದ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ ಎಂದು ಇಸ್ಲಾಮಾಬಾದ್‌ಗೆ ಪದೇ ಪದೇ ಹೇಳುತ್ತಿದೆ. ಭಾರತವು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಈಗಾಗಲೇ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧಗಳು ಮುರಿದುಬಿದ್ದಿವೆ.

ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಸಹಿ ಮಾಡಿದ 1999 ರ ಲಾಹೋರ್‌ ಘೋಷಣೆಯಲ್ಲಿ ಉಲ್ಲೇಖಿಸಿದಂತೆ ಭಾರತ ಮತ್ತು ಪಾಕಿಸ್ತಾನದ ತಮ ಹದಗೆಟ್ಟ ಸಂಬಂಧವನ್ನು ಸರಿಪಡಿಸಲು ಮಾತುಕತೆಯೇ ಏಕೈಕ ಮಾರ್ಗವಾಗಿದೆ ಎಂದು ಷರೀಫ್‌ ಹೇಳಿದರು.

ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುವುದಾಗಿ ಭಾರತ ಸ್ಪಷ್ಟಪಡಿಸಿದೆ.ಭಾರತವು ಶಸಾ್ತ್ರಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂದು ಷರೀಫ್‌ ಆರೋಪಿಸಿದರು ಮತ್ತು ಇದು ಈ ಪ್ರದೇಶದಲ್ಲಿ ಶಾಂತಿಯನ್ನು ತರುವುದಿಲ್ಲ ಎಂದು ಪ್ರತಿಪಾದಿಸಿದರು. ಭಾರತವು ಬುದ್ಧಿವಂತ ಆಗಿರಬೇಕು ಮತ್ತು ಮುಂದುವರಿಯಲು ಏಕೈಕ ಮಾರ್ಗವೆಂದರೆ ಶಾಂತಿ ಎಂದು ಅವರು ಹೇಳಿದರು.

RELATED ARTICLES

Latest News