Wednesday, February 26, 2025
Homeರಾಷ್ಟ್ರೀಯ | Nationalದೆಹಲಿ ಗದ್ದುಗೆ ಗೆದ್ದಾಯ್ತು, ಕೇಸರಿ ಪಡೆ ಚಿತ್ತ ಈಗ ಬಿಹಾರದತ್ತ

ದೆಹಲಿ ಗದ್ದುಗೆ ಗೆದ್ದಾಯ್ತು, ಕೇಸರಿ ಪಡೆ ಚಿತ್ತ ಈಗ ಬಿಹಾರದತ್ತ

Delhi election results boost BJP’s confidence in Bihar

ನವದೆಹಲಿ,ಫೆ.9- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಬಿಜೆಪಿ ಬಿಹಾರದತ್ತ ದೃಷ್ಟಿ ನೆಟ್ಟಿದೆ. ಅಕ್ಟೋಬರ್-ನವೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್ಡಿಎ 225ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.

ರಾಜ್ಯದಲ್ಲಿ ಎನ್ಡಿಎ ಅಧಿಕಾರವನ್ನು ಉಳಿಸಿಕೊಳ್ಳಲಿದೆ. 2005ರಿಂದ ಎನ್ಡಿಎ ಸರ್ಕಾರವು ಬಿಹಾರದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 2025ರಲ್ಲಿ, ಮತ್ತೆ ಅಧಿಕಾರಕ್ಕೆ ಬರುತ್ತದೆ ಮತ್ತು ಬಿಹಾರದ ಅಭಿವೃದ್ಧಿಯನ್ನು ಮುಂದುವರಿಸುತ್ತದೆ ಎಂದು ಬಿಜೆಪಿಯ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಭರವಸೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ) ನಾಯಕ ಜಿತನ್ ರಾಮ್ ಮಾಂಝಿ, ಪ್ರಮುಖ ಎನ್ಡಿಎ ಮಿತ್ರಪಕ್ಷ, ದೆಹಲಿ ಚುನಾವಣೆಯನ್ನು ಬಿಹಾರದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಮುನ್ನೋಟ ಎಂದು ಬಣ್ಣಿಸಿದ್ದಾರೆ.

ದಿಲ್ಲಿ ತೋ ಜಾಂಕಿ ಹೈ, ಬಿಹಾರ ಅಭಿ ಬಾಕಿ ಹೈ… ಜೈ ಎನ್ಡಿಎ (ದೆಹಲಿ ಕೇವಲ ಒಂದು ನೋಟ, ಬಿಹಾರ ಇನ್ನೂ ಬರಬೇಕಿದೆ. ಜೈ ಎನ್ಡಿಎ) ಎಂದು ಮಾಂಝಿ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ರಾಷ್ಟ್ರೀಯ ಜನತಾದಳ (ಆರ್ಜೆಡಿ) ಬಿಜೆಪಿಯ ಹೇಳಿಕೆಗಳನ್ನು ತಳ್ಳಿಹಾಕಿದೆ.

ದೆಹಲಿಯ ಫಲಿತಾಂಶಗಳು ಬಿಹಾರ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿದೆ. ಪಕ್ಷದ ವಕ್ತಾರ ಮೃತುಂಜಯ್ ತಿವಾರಿ, ಬಿಹಾರದ ಜನರು ಬದಲಾವಣೆಗಾಗಿ ಮತ ಹಾಕುತ್ತಾರೆ. ಜಾರ್ಖಂಡ್ ಫಲಿತಾಂಶಗಳು ಇಲ್ಲಿ ಪ್ರಭಾವ ಬೀರುತ್ತವೆ. ದೆಹಲಿ ಚುನಾವಣೆ ಬಿಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಸಂಸತ್ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ವಿರೋಧ ಪಕ್ಷದ ಮೈತ್ರಿಯನ್ನು ತೊರೆದು ಎನ್ಡಿಎ ಬಣಕ್ಕೆ ಮರು ಸೇರ್ಪಡೆಗೊಂಡರು. ಬಿಹಾರದ 40 ಲೋಕಸಭಾ ಸ್ಥಾನಗಳ ಪೈಕಿ 30 ಕ್ಷೇತ್ರಗಳಲ್ಲಿ ಮೈತ್ರಿಕೂಟ ಗೆಲುವು ಸಾಧಿಸಿದೆ.ಎನ್ಡಿಎಗೆ ಕುಮಾರ್ ಮರಳುವುದು ಮತ್ತು ದೆಹಲಿ ಚುನಾವಣಾ ಫಲಿತಾಂಶಗಳು ಬಿಹಾರದಲ್ಲಿ ತಮ ಸ್ಥಾನವನ್ನು ಬಲಪಡಿಸುತ್ತದೆ ಎಂದು ಬಿಜೆಪಿ ನಾಯಕರು ನಂಬಿದ್ದಾರೆ.

ಬಿಹಾರಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಬೊನಾಂಜಾ ಸೃಷ್ಟಿಸಿದ ಆವೇಗದ ಮೇಲೆ ಎನ್ಡಿಎ ಸವಾರಿ ಮಾಡಲು ಸಾಧ್ಯವಾಗುತ್ತದೆಯೇ? ಪೂರ್ವ ರಾಜ್ಯವು ಮುಂಬರುವ ಚುನಾವಣೆಗೆ ಸಜ್ಜಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ಮೈಕೊಡವಿ ನಿಂತಿವೆ.

RELATED ARTICLES

Latest News