Thursday, March 6, 2025
Homeರಾಜಕೀಯ | Politicsಕೈಲಾಗದ ವಿರೋಧ ಪಕ್ಷಗಳು : ಚಲುವರಾಯಸ್ವಾಮಿ ಟೀಕೆ

ಕೈಲಾಗದ ವಿರೋಧ ಪಕ್ಷಗಳು : ಚಲುವರಾಯಸ್ವಾಮಿ ಟೀಕೆ

unable Opposition parties : Chaluvarayaswamy

ಬೆಂಗಳೂರು,ಮಾ.5- ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಆದರೆ ವಿರೋಧಪಕ್ಷದವರಿಂದ ಯಾವುದೂ ಆಗಲಿಲ್ಲ ಎಂದು ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ನೀಡುವ ಸಲಹೆಗಳಲ್ಲಿ ಒಳ್ಳೆಯದಿದ್ದರೆ ಸ್ವೀಕರಿಸುತ್ತೇವೆ ಎಂದರು.ಅಭಿವೃದ್ಧಿ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಮಾಡುತ್ತಿರುವ ಟೀಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ಏಕೆ ಗ್ಯಾರಂಟಿ ಘೋಷಣೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು.

ನಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಭವಿಗಳಿದ್ದಾರೆ. ಈ ಬಾರಿ ದಾಖಲೆ ಬಜೆಟ್‌ ಮಂಡಿಸಲಿದ್ದಾರೆ ಎಂದು ಹೇಳಿದರು. ಪಕ್ಷದಲ್ಲಿ ಸಣ್ಣಪುಟ್ಟ ಕಲಹಗಳು ಇದ್ದೇ ಇರುತ್ತವೆ. ಅವನ್ನೆಲ್ಲಾ ಪಕ್ಷದ ಹೈಕಮಾಂಡ್‌ ನೋಡಿಕೊಳ್ಳಲಿದೆ. ಸಚಿವರ ಸಭೆಯ ಬಗ್ಗೆಯೂ ಹೈಕಮಾಂಡ್‌ ಗಮನ ಹರಿಸಲಿದೆ ಎಂದು ಹೇಳಿದರು.

RELATED ARTICLES

Latest News