Friday, March 14, 2025
Homeರಾಷ್ಟ್ರೀಯ | Nationalಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಇಡಿ ದುರ್ಬಳಕೆ ಮಾಡುತ್ತಿದೆ : ರಾಧಾಕೃಷ್ಣನ್

ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಇಡಿ ದುರ್ಬಳಕೆ ಮಾಡುತ್ತಿದೆ : ರಾಧಾಕೃಷ್ಣನ್

Central agencies being used to subdue political opponents: CPI(M) MP Radhakrishnan

ತಿರುವನಂತಪುರಂ, ಮಾ.14: ಕೇರಳದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯದಂತಹ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಸಂಸದ ಕೆ.ರಾಧಾಕೃಷ್ಣನ್ ಆರೋಪಿಸಿದ್ದಾರೆ.

ಕರುವನೂರ್‌ ಸಹಕಾರಿ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಏಜೆನ್ಸಿ ಯ ಮುಂದೆ ಹಾಜರಾಗುವಂತೆ ಇಡಿ ನೋಟಿಸ್ ಪಡೆದ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವಾಗ ರಾಧಾಕೃಷ್ಣನ್ ಈ ಆರೋಪ ಮಾಡಿದ್ದಾರೆ.

ನೋಟಿಸ್ನಲ್ಲಿ ಕರುವನೂರ್ ಪ್ರಕರಣವನ್ನು ಉಲ್ಲೇಖಿಸಿಲ್ಲ ಮತ್ತು ಬದಲಿಗೆ ಬ್ಯಾಂಕ್ ಖಾತೆಗಳು ಮತ್ತು ಭೂ ದಾಖಲೆಗಳು ಸೇರಿದಂತೆ ಅವರ ಆಸ್ತಿಗಳ ವಿವರಗಳನ್ನು ಹಾಜರುಪಡಿಸುವಂತೆ ಕೇಳಲಾಗಿದೆ ಎಂದು ಸಂಸದರು ಹೇಳಿದರು.

ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ನಾನು ಈಗ ಏಜೆನ್ಸಿ ಯ ಮುಂದೆ ಹಾಜರಾಗಲು ಸಾಧ್ಯವಿಲ್ಲ ಎಂದು ಪತ್ರ ಕಳುಹಿಸಿದ್ದೇನೆ. ಅಧಿವೇಶನ ಮುಗಿದ ನಂತರ ನಾನು ಅದರ ಮುಂದೆ ಹಾಜರಾಗುತ್ತೇನೆ ಎಂದು ಅವರು ಹೇಳಿದರು.

ಕೇರಳದ ಅಲತೂರ್ ಲೋಕಸಭಾ ಕ್ಷೇತ್ರದ ಸಂಸದ ರಾಧಾಕೃಷ್ಣನ್ ಅವರು ಯಾವುದೇ ತನಿಖೆಯನ್ನು ಎದುರಿಸಲು ಸಿದ್ದ ಎಂದು ಹೇಳಿದ್ದಾರೆ. ನಾನು ಸಂಪಾದಿಸಿದ ಆಸ್ತಿಗಳನ್ನು ಅವರು ಹುಡುಕುತ್ತಿದ್ದಾರೆ. ಅವರು ತನಿಖೆ ನಡೆಸಿ ಕಂಡುಹಿಡಿಯಲಿ ಎಂದು ಅವರು ಹೇಳಿದರು.

RELATED ARTICLES

Latest News